ಮೈಸೂರು: ಮೈಸೂರಿನ ಉದಯಗಿರಿ ಸರಹದ್ದಿನಲ್ಲಿ ಗುರುವಾರ ಸಂಚಾರಿ ಪೊಲೀಸರು ನಡೆ ಸಿದ ವಾಹನ ತಪಾಸಣಾ ವಿಶೇಷ ಕಾರ್ಯಾ ಚರಣೆಯಲ್ಲಿ 66 ದಾಖಲೆಯಿಲ್ಲದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರಿನ ಐದು ಸಂಚಾರಿ ಪೊಲೀಸ್ ಠಾಣೆಗಳ ಇನ್ಸ್ಪೆಕ್ಟರ್, 10 ಸಬ್ ಇನ್ಸ್ ಪೆಕ್ಟರ್, 20ಕ್ಕೂ ಹೆಚ್ಚು ಎಎಸ್ಐ ಹಾಗೂ ಮುಖ್ಯಪೇದೆಗಳು ಏಕಕಾಲಕ್ಕೆ ಉದಯ ಗಿರಿಯ 13 ಪಾಯಿಂಟ್ಗಳಲ್ಲಿ ಗುರು ವಾರ ಬೆಳಿಗ್ಗೆ ವಾಹನ ತಪಾಸಣಾ ಕಾರ್ಯಾಚರಣೆ ನಡೆಸಿದರು. ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಡಿಸಿಪಿ ಮುತ್ತುರಾಜ್ ಮಾರ್ಗದರ್ಶನ ದಲ್ಲಿ ಸಂಚಾರ ವಿಭಾಗದ ಎಸಿಪಿ…
ಜೂ.17ರಿಂದ ಸಂಸತ್ತಿನ ಮುಂಗಾರು ಅಧಿವೇಶನ
June 14, 2019ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಇದೇ 17ರಿಂದ ಆರಂಭವಾಗುತ್ತಿದ್ದು, ಅದಕ್ಕಿಂತ ಒಂದು ದಿನ ಮೊದಲು ಅಂದರೆ 16ರಂದು ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದಿದೆ. ಹೊಸ ಸರ್ಕಾರದ ಮೊದಲ ಅಧಿವೇಶನ ಜೂನ್ 17ರಿಂದ ಜುಲೈ 26ರವರೆಗೆ ನಡೆಯಲಿದೆ. ಮೊದಲ ಬಜೆಟ್ ಜುಲೈ 5ರಂದು ಮಂಡನೆಯಾಗಲಿದೆ. ಜೂ.16ರಂದು ಭಾನುವಾರ ದೆಹಲಿ ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯ ಕ್ಷತೆಯಲ್ಲಿ ಬೆಳಿಗ್ಗೆ 11 ಗಂಟೆಗೆ ಸಭೆ ಕರೆಯ ಲಾಗಿದೆ ಎಂದು ಸಂಸದೀಯ ವ್ಯವ ಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿ…
ರಾಜ್ಯದಲ್ಲಿ ಇನ್ನೂ ಸೂರಿಲ್ಲದ ಕುಟುಂಬಗಳು ಇವೆಯೇ?
June 14, 2019ಡಿಸಿಎಂ ಡಾ.ಪರಮೇಶ್ವರ್ ಅಚ್ಚರಿ ಪ್ರಶ್ನೆ ಬೆಂಗಳೂರು: ಪ್ರತಿ ವರ್ಷ ಸಾವಿರಾರು ಕೋಟಿ ರೂ. ವೆಚ್ಚ ಮಾಡಿದರೂ ರಾಜ್ಯ ದಲ್ಲಿ ಇನ್ನೂ ಸೂರಿಲ್ಲದ ಕುಟುಂಬ ಗಳು ಇವೆಯೇ ಎಂದು ಉಪಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ವಿಧಾನ ಸೌಧದಲ್ಲಿ ಜಿಲ್ಲಾಡಳಿತದೊಂದಿಗೆ ಎರಡನೇ ದಿನವಾದ ಇಂದು ಕೂಡ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ನಡೆದ ಚರ್ಚೆ ಸಮಯದಲ್ಲಿ ಮಾತನಾಡಿದ ಅವರು, ಇನ್ನು ಎಷ್ಟು ವರ್ಷ ಗಳ ಕಾಲ ಮನೆಗಳನ್ನು ನಿರ್ಮಿಸುತ್ತಾ ಹೋಗುತ್ತೀರಿ ಎಂದು ಪ್ರಶ್ನಿಸಿದರು. ಪರಿಶಿಷ್ಟ ಜಾತಿ,…
ಐಎಂಎ ಕಚೇರಿಗೆ ಅಧಿಕೃತ ಬೀಗಮುದ್ರೆ: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮನ್ಸೂರ್ ಕಾರು ಪತ್ತೆ
June 14, 2019ಬೆಂಗಳೂರು: ಐಎಂಎ ಹಗ ರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೆತ್ತಿ ಕೊಂಡಿರುವ ಎಸ್ಐಟಿ ತಂಡ ಅಧಿಕೃತ ವಾಗಿ ಐಎಂಎ ಕಚೇರಿ ಸೀಜ್ ಮಾಡಿದೆ. ಶಿವಾಜಿನಗರದಲ್ಲಿರುವ ಐಎಂಎ ಜ್ಯುವೆ ಲರ್ಸ್ ಕಚೇರಿಗೆ ಅಧಿಕೃತವಾಗಿ ಬೀಗ ಮುದ್ರೆ ಹಾಕಿದ್ದಾರೆ. ಐಎಂಎ ವಂಚನೆ ಪ್ರಕರಣ ತನಿಖಾ ಹಂತದಲ್ಲಿರುವ ಹಿನ್ನೆಲೆ ಎಸ್ಐಟಿ ಮಳಿಗೆಯನ್ನು ಸೀಜ್ ಮಾಡಿದೆ. ಇತ್ತ ಮನ್ಸೂರ್ಖಾನ್ ಕಾರು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಸಿಸಿಬಿ ಪೆÇಲೀಸರು ಕೆಐ ಎಎಲ್ನಲ್ಲಿ ಕಾರು ವಶಕ್ಕೆ ಪಡೆದಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಮನ್ಸೂರ್ ಕಾರು…
ಆ.13ಕ್ಕೆ ವಿಚಾರಣೆ: ವಿಶೇಷ ಸರ್ಕಾರಿ ಅಭಿಯೋಜಕರಾಗಿ ರಾಮಮೂರ್ತಿ, ಗಿರಿಜೇಶ್ ನೇಮಕ
June 14, 2019ಮೈಸೂರು: ಮೈಸೂರು ಜಿಲ್ಲಾಧಿಕಾರಿ ಯಾಗಿದ್ದ ಸಿ.ಶಿಖಾ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಪ್ರಕರಣದ ವಿಚಾರಣೆಯನ್ನು ಆ.13ಕ್ಕೆ ಮುಂದೂಡಿ ಮೈಸೂರಿನ 3ನೇ ಕಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶರು ಆದೇಶಿಸಿದ್ದಾರೆ. ಜಿಪಂ ಮಾಜಿ ಅಧ್ಯಕ್ಷ ಕೆ.ಮರೀ ಗೌಡ, ಮಂಜುನಾಥ್ ಹಾಗೂ ಇತರರ ವಿರುದ್ಧದ ಪ್ರಕರಣ ಇಂದು ವಿಚಾರಣೆಗೆ ಬಂದಿತ್ತು. ಈ ಸಂದರ್ಭದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕ ರಾಗಿ ಜಿ.ವಿ.ರಾಮಮೂರ್ತಿ ಹಾಗೂ ಆರ್.ಗಿರಿಜೇಶ್ ಅವರನ್ನು ನೇಮಕ ಮಾಡಿಕೊಳ್ಳುವ ಸಂಬಂಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಇದನ್ನು ಪುರಸ್ಕರಿಸಿದ ನ್ಯಾಯಾಧೀಶರು, ವಿಶೇಷ…
ಮೈಸೂರಿನ 9 ಯೋಗಪಟುಗಳು ಆಯ್ಕೆ
June 14, 2019ಮೈಸೂರು:ಉತ್ತರಪ್ರದೇಶ ಮತ್ತು ಹಿಮಾಚಲ ಪ್ರದೇಶ ದಲ್ಲಿ 2019ರ ಸೆಪ್ಟೆಂಬರ್ನಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಯೋಗ ಚಾಂಪಿ ಯನ್ ಶಿಪ್ಗೆ ಮೈಸೂರಿನ 9 ಮಂದಿ ಯೋಗಪಟುಗಳು ಆಯ್ಕೆಯಾಗಿದ್ದಾರೆ. ವಿಜಯನಗರದಲ್ಲಿನ ಮೈಸೂರು ವಿವೇಕಾ ನಂದ ಯೋಗ ಎಜುಕೇಷನ್ ಅಂಡ್ ರಿಸರ್ಚ್ ಟ್ರಸ್ಟ್ನ 9 ಮಂದಿ ಆಯ್ಕೆಯಾಗಿದ್ದು, ಈ ಸ್ಪರ್ಧೆಯು ಕಿರಿಯರು ಮತ್ತು ಹಿರಿ ಯರು 2 ವಿಭಾಗದಲ್ಲಿ ನಡೆಯಲಿದೆ. ಹಿಮಾಚಲ ಪ್ರದೇಶದಲ್ಲಿ ನಡೆಯುವ ಕಿರಿಯ ವಿಭಾಗದ ಸ್ಪರ್ಧೆಗೆ ಅಂಕಿತ, ಶ್ರೇಷ್ಠ, ವನ್ಷಿಕ, ಶ್ರೀಜನರಾವ್, ಬ್ರಿತಿ ಅಶೋಕ್ ಆಯ್ಕೆಯಾದರೆ, ಉತ್ತರ ಪ್ರದೇಶದಲ್ಲಿ…
ಸರ್ಕಾರಿ ನೌಕರರ ಸಂಘಕ್ಕೆ 62 ನಿರ್ದೇಶಕರ ಆಯ್ಕೆ
June 14, 2019ಮೈಸೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ 62 ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಈ ಪೈಕಿ 31 ಮಂದಿ ಅವಿರೋಧವಾಗಿ ಆಯ್ಕೆ ಯಾಗಿದ್ದು, ಉಳಿದ 31 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಹೆಚ್ಚು ಮತ ಪಡೆದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಮೈಸೂರಿನ ಧನ್ವಂತರಿ ರಸ್ತೆಯ ಕರ್ನಾ ಟಕ ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ 9, ಮಹಾರಾಣಿ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜಿನಲ್ಲಿ 9, ನಾರಾಯಣ ಶಾಸ್ತ್ರಿ ರಸ್ತೆಯ ಎನ್ಟಿಎಂಎಸ್ ಶಾಲೆಯಲ್ಲಿ 1 ಇಲಾಖೆ ಹಾಗೂ ನಜರ್ಬಾದಿನ…
ಕಾನೂನು ರಕ್ಷಕರು ಮಾತ್ರವಲ್ಲ ಈ ಆರಕ್ಷಕರು ಕೃಷಿಕರು!
June 14, 2019ಮೈಸೂರು: ಪಾಳು ಬಿದ್ದ ಭೂಮಿಯನ್ನು ಸ್ವಚ್ಛಗೊಳಿಸಿ, ಕೃಷಿ ಮಾಡಿರುವ ಪೊಲೀಸ್ ಪೇದೆಗಳು ರೈತರು ನಾಚುವಂತÀ ಕಾರ್ಯವನ್ನು ಮಾಡಿದ್ದಾರೆ. ಹೌದು! ಕಸದ ರಾಶಿ, ಮುಳ್ಳಿನ ಪೊದೆ ಗಳಿಂದ ಕೂಡಿದ್ದ ಬಿಳಿಕೆರೆ ಪೊಲೀಸ್ ಠಾಣೆ ಆವರಣ ಇಂದು ಸಂಪೂರ್ಣ ಹಸಿರೀಕರಣವಾಗಿದೆ. ಕಳೆದ ಮೂರು ತಿಂಗಳ ಹಿಂದೆ ಬಂಜರು ಭೂಮಿಯಂತೆ ಕಾಣುತ್ತಿದ್ದ ಬಿಳಿಕೆರೆ ಠಾಣೆ ಆವರಣವಿಂದು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಮಳೆ-ಬೆಳೆ ಇಲ್ಲ ಎಂದು ಪರಿತಪಿಸುವ ಕಾಲದಲ್ಲಿ ಹಲಸಂದೆ ಕಾಳುಗಳ ಜತೆಗೆ ತೆಂಗು ಸೇರಿದಂತೆ ವಿವಿಧ ಬಗೆಯ 40ಕ್ಕೂ ಹೆಚ್ಚು ಹಣ್ಣಿನ…
ಫೇಸ್ಬುಕ್ನಲ್ಲಿ ಕಾರ್ನಾಡ್, ಸಿದ್ದರಾಮಯ್ಯ ಕುರಿತು ವಿಕೃತ ಪೋಸ್ಟ್ ಮಾಡಿದವನ ವಿರುದ್ಧ ದೂರು
June 14, 2019ಮೈಸೂರು: ಜ್ಞಾನ ಪೀಠ ಪುರಸ್ಕøತರಾದ ದಿವಂಗತ ಗಿರೀಶ್ ಕಾರ್ನಾಡ್ ಹಾಗೂ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಕುರಿತು ನಿರಂಜನ್ಗೌಡ ಹಿಂದು ಎಂಬುವರು ವಿಕೃತ ರೀತಿಯಲ್ಲಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳು ವಂತೆ ಕರ್ನಾಟಕ ರಾಜ್ಯ ಸಿದ್ದರಾಮಯ್ಯ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಹಿನಕಲ್ ಪ್ರಕಾಶ್ ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ಫೇಸ್ಬುಕ್ನಲ್ಲಿ ಸಮಾಜದ ಸ್ವಾಸ್ಥ್ಯ ವನ್ನು ಹಾಳು ಮಾಡುವಂತಹ ಪೋಸ್ಟ್ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳ ಬೇಕು. ಈ…
ತಂತ್ರಜ್ಞಾನ ಮನುಷ್ಯನ ಅಭಿವೃದ್ಧಿಗೆ ಬಳಕೆಯಾಗಬೇಕು
June 14, 2019ಮೈಸೂರು: ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿ ಯಾಗಿದ್ದು, ಮನುಷ್ಯನ ಅಭಿವೃದ್ಧಿಗೆ ಬಳಕೆಯಾಗಬೇಕು ಎಂದು ಬೆಂಗ ಳೂರಿನ ನಿವೃತ್ತ ಇಸ್ರೋ ವಿಜ್ಞಾನಿ ವಿ. ಜಗನ್ನಾಥ ಅಭಿಪ್ರಾಯಪಟ್ಟರು. ಮೈಸೂರಿನ ಇಂಜಿನಿಯರುಗಳ ಸಭಾಂ ಗಣದಲ್ಲಿ ಆಯೋಜಿಸಿದ್ದ ವಿಪತ್ತು ನಿರ್ವ ಹಣೆಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಪಾತ್ರ ಕುರಿತು ಮಾತನಾಡಿದ ಅವರು, ವಿಜ್ಞಾನ 300 ವರ್ಷವಷ್ಟೇ ಹಳೆಯದು. ಅದಕ್ಕಿಂತ ಹಿಂದೆ ವೇದ-ಉಪನಿಷತ್ ನಮ್ಮಲ್ಲಿದ್ದು, ಅದನ್ನು ಪುನಃ ಓದುವ ಕೆಲಸವಾಗ ಬೇಕು ಎಂದು ಹೇಳಿದರು. ಬಾಹ್ಯಾಕಾಶ ವಿಜ್ಞಾನ ಅಪರೂಪ ವಾಗಿದ್ದು, ಇದರಿಂದ ಎಲ್ಲದಕ್ಕೂ ಪರಿ ಹಾರ ರೂಪಿಸುವ…










