ಕಲ್ಯಾಣಗಿರಿ ಕಲ್ಯಾಣ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಘಟನೆ ಮೈಸೂರು: ದೇವಾಲಯದ ಬಾಗಿಲು ಮೀಟಿ ಹುಂಡಿಯಲ್ಲಿದ್ದ ಕಾಣಿಕೆ ಹಣವನ್ನು ದೋಚಿರುವ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆ ದಿದೆ. ಡಾ.ರಾಜ್ಕುಮಾರ್ ರಸ್ತೆಯಲ್ಲಿರುವ ಶ್ರೀ ಕಲ್ಯಾಣ ವೆಂಕಟ ರಮಣಸ್ವಾಮಿ ದೇವಾಲಯದ ಬಾಗಿಲು ಮೀಟಿ ಒಳನುಗ್ಗಿರುವ ಖದೀಮರು, ಆವ ರಣದಲ್ಲಿದ್ದ ಎರಡು ಹುಂಡಿಯನ್ನು ಒಡೆದು ಅದ ರಲ್ಲಿದ್ದ ಕಾಣಿಕೆ ಹಣವನ್ನು ದೋಚಿಕೊಂಡು ಪರಾರಿ ಯಾಗಿದ್ದಾರೆ. ಗುರುವಾರ ರಾತ್ರಿ ಈ ಘಟನೆ ನಡೆ ದಿದ್ದು, ಶುಕ್ರವಾರ ಬೆಳಿಗ್ಗೆ ಅರ್ಚಕರು ದೇವಾ ಲಯಕ್ಕೆ…
ದುಷ್ಕರ್ಮಿಗಳಿಂದ ವ್ಯಾಪಾರಿ ಸುಲಿಗೆ
June 15, 2019ಮೈಸೂರು: ಅಪರಿಚಿತರಿಬ್ಬರು ನನ್ನನ್ನು ಬೆದರಿಸಿ ಚಿನ್ನಾಭರಣ ಹಾಗೂ ನಗದನ್ನು ದೋಚಿದರೆಂದು ವ್ಯಕ್ತಿಯೊಬ್ಬರು ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೈಸೂರಿನ ಕೆ.ಟಿ.ಸ್ಟ್ರೀಟ್-ಕೆ.ಆರ್.ಆಸ್ಪತ್ರೆ ರಸ್ತೆಯ ಬಟ್ಟೆ ವ್ಯಾಪಾರಿ ಸೋಹನ್ಲಾಲ್ ದೂರು ನೀಡಿದ್ದು, ಅಪರಿಚಿತರಿಬ್ಬರು ನನ್ನನ್ನು ಬೆದರಿಸಿ 25 ಗ್ರಾಂ ಚಿನ್ನದ ಸರ, 23 ಗ್ರಾಂ ಬ್ರಾಸ್ಲೇಟ್, 20 ಗ್ರಾಂ ಉಂಗುರ ಹಾಗೂ 1,500ರೂ. ಹಣವನ್ನು ಬಲವಂತವಾಗಿ ನನ್ನ ಕೈಯಿಂದಲೇ ಬ್ಯಾಗ್ನಲ್ಲಿ ತುಂಬಿಸಿಕೊಂಡು ಪರಾರಿ ಯಾದರೆಂದು ತಿಳಿಸಿದ್ದಾನೆ. ಕಳೆದ ಮೇ 31ರಂದು ಬೆಳಿಗ್ಗೆ ಕೆ.ಆರ್.ಹೆಚ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರಾದ…
ಮುಡಾ ಆಸ್ತಿ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ವಂಚನೆ: ಮೂವರ ವಿರುದ್ಧ ದೂರು ದಾಖಲು
June 15, 2019ಮೈಸೂರು: ಮುಡಾ ಸ್ವತ್ತಿನ ನಕಲಿ ದಾಖಲೆ ಸೃಷ್ಟಿಸಿ, ಲಕ್ಷಾಂತರ ರೂ. ಹಣ ಪಡೆದು ಮೋಸ ಮಾಡಿದ್ದ ಮೂವರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ವ್ಯಕ್ತಿಯೊಬ್ಬರು ಲಕ್ಷ್ಮೀಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೈಸೂರು ನಿವಾಸಿಗಳಾದ ಅನಿತಾ, ಅವರ ಪತಿ ದೇವೇಂದ್ರ, ಕೃಷ್ಣಮೂರ್ತಿ ನಕಲಿ ದಾಖಲೆ ಸೃಷ್ಟಿಸಿದ ಆರೋಪ ಎದುರಿಸುತ್ತಿ ರುವವರು. ಪ್ರಕರಣ ಕುರಿತು ಎಂಬುವವರು ಚಂದನ್ ದೂರು ದಾಖಲಿಸಿದ್ದಾರೆ. ಜೂ.13ರಂದು ಚಂದನ್ ಅವರ ಸಂಬಂಧಿ ಕೃಷ್ಣ ಮೂರ್ತಿ, ಒಂದೂವರೆ ವರ್ಷದ ಹಿಂದೆ ಅನಿತಾ ಅವರನ್ನು ಇವರು ಮುಡಾದಲ್ಲಿ ಕೆಲಸ…
ಮೈಸೂರಲ್ಲಿ ಗಗನಕ್ಕೇರುತ್ತಿರುವ ಅಕ್ಕಿ ಬೆಲೆ
June 14, 2019ಮೈಸೂರು: ಕಳೆದ ಒಂದು ತಿಂಗಳಿಂದ ಅಕ್ಕಿ ದರ ಏರಿಕೆಯಾಗುತ್ತಲೇ ಇದ್ದು, ಪ್ರಸ್ತುತ ಕೆಜಿ ಅಕ್ಕಿಗೆ 4 ರೂ.ನಿಂದ 13 ರೂ.ವರೆಗೆ ಹೆಚ್ಚಳವಾಗಿದೆ. ಮೈಸೂರು ಹಾಗೂ ಬೆಂಗಳೂರು ಭಾಗದಲ್ಲಿ ಹೆಚ್ಚು ಬಳಕೆಯಲ್ಲಿದೆ ಎನ್ನಲಾಗಿರುವ ಸೋನಾ ಮಸೂರಿ ರಾ ಅಕ್ಕಿ 44 ರೂ.ನಿಂದ 57 ರೂ.ಗೆ (ಕೆಜಿಗೆ) ಜಿಗಿದಿದ್ದರೆ, ಕೋಲಂ ಅಕ್ಕಿ 64 ರೂ.ನಿಂದ 72 ರೂ.ಗೆ ಏರಿಕೆ ಕಂಡಿದೆ. ನೀರಿನ ಅಭಾವದಿಂದ ಉತ್ಪಾದನೆಯಲ್ಲಿ ಕುಸಿತವಾಗಿರುವ ಹಿನ್ನೆಲೆ ಸೇರಿದಂತೆ ಅನೇಕ ಕಾರಣಗಳಿಂದ ಅಕ್ಕಿ ಬೆಲೆ ಗಗನಕ್ಕೇರುತ್ತಿದೆ ಎನ್ನ ಲಾಗಿದೆ. ಜೊತೆಗೆ…
ಆನ್ಲೈನ್ನಲ್ಲಿ ಕಟ್ಟಡಗಳ ನಕ್ಷೆ ಅನುಮೋದನೆ
June 14, 2019ಬೆಂಗಳೂರು: ನಗರದ ಅಭಿವೃದ್ಧಿಗೆ ಕಟ್ಟಡ,ನಕ್ಷೆ ಅನುಮೋದನೆ ಬಹಳ ಮುಖ್ಯವಾಗಿದ್ದು, ಕಟ್ಟಡದ ಪರವಾನಿಗೆ ಪಡೆಯಲು ಇಲಾಖೆಯಿಂದ ಇಲಾಖೆಗೆ ಅಲೆಯುವುದನ್ನು ತಪ್ಪಿಸಲು ತಂತ್ರಾಂಶ ಆಧಾರಿತ ಅಂತರ್ಜಾಲ ವ್ಯವಸ್ಥೆ ಜಾರಿಗೆ ಬಂದಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಆಧುನಿಕ ವ್ಯವಸ್ಥೆ ಅನುಷ್ಠಾನಗೊಂಡಿರುವುದು ಹೆಮ್ಮೆಯ ಸಂಗತಿ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಗರಾಭಿವೃದ್ಧಿ ಇಲಾಖೆಯಿಂದ `ಭೂಮಿ-ಕಟ್ಟಡ ನಕ್ಷೆಗಳ ಅನುಮೋದನೆಗೆ ತಂತ್ರಾಂಶ-ವೆಬ್ಸೈಟ್’ ಲೋಕಾರ್ಪಣೆ ಗೊಳಿಸಿ ಬಳಿಕ ಅವರು ಮಾತನಾಡಿದರು. ಭೂ ಉಪಯೋಗ, ಅನುಮೋದನೆ, ಕಟ್ಟಡದ ಯೋಜನೆ-ಅನುಮೋದನೆ ಸೇರಿ ದಂತೆ…
ಇಂದು ಸಂಪುಟ ವಿಸ್ತರಣೆ
June 14, 2019ಬೆಂಗಳೂರು: ಬಂಡಾಯ, ಪಕ್ಷಾಂತರ ಬೆದರಿಕೆಗೂ ಸೊಪ್ಪು ಹಾಕದ ಕಾಂಗ್ರೆಸ್ ತನ್ನ ಪಕ್ಷದ ಯಾವುದೇ ಶಾಸಕರಿಗೂ ಸಂಪುಟ ವಿಸ್ತರಣೆಯಲ್ಲಿ ಅವಕಾಶ ನೀಡುತ್ತಿಲ್ಲ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ನಾಳೆ ಮಧ್ಯಾಹ್ನ 1-30ಕ್ಕೆ ತಮ್ಮ ಸಂಪುಟ ವನ್ನು 3ನೇ ಬಾರಿಗೆ ವಿಸ್ತರಿಸಲಿದ್ದಾರೆ. ಖಾಲಿ ಇರುವ ಮೂರು ಸ್ಥಾನಗಳ ಪೈಕಿ ಇಬ್ಬರು, ಇಲ್ಲವೆ ಮೂವರನ್ನು ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿ ದ್ದಾರೆ. ಆಪರೇಷನ್ ಕಮಲದ ಮೂಲಕ ಕುಮಾರಸ್ವಾಮಿ ಸರ್ಕಾರವನ್ನು ಉರುಳಿ ಸುವ ಯತ್ನಕ್ಕೆ ಬಿಜೆಪಿ ವರಿಷ್ಠರು ತಿಲಾಂಜಲಿ ಹಾಕಿರುವ ಹಿನ್ನೆಲೆಯಲ್ಲಿ ಸ್ವಲ್ಪ ಧೈರ್ಯ…
ಎನ್ಆರ್ ವ್ಯಾಪ್ತಿಯ ನೂರಾರು ಮಂದಿ ದೂರು ಸಲ್ಲಿಕೆ
June 14, 2019ಮೈಸೂರು: ಐಎಂಎ ಸಂಸ್ಥೆಯ ಬಹು ಕೋಟಿ ವಂಚನೆಯಲ್ಲಿ ಮೈಸೂರಿಗರೂ ಸೇರಿದ್ದು, ವಂಚನೆಗೊಳಗಾದ ನೂರಾರು ಮಂದಿ ಗುರುವಾರ ಮೈಸೂರಿನ ಉದಯಗಿರಿಯಲ್ಲಿರುವ ಜಬ್ಬಾರ್ ಫಂಕ್ಷನ್ ಹಾಲ್ನಲ್ಲಿ ಪೊಲೀಸರಿಗೆ ತಮ್ಮ ದೂರು ಅರ್ಜಿಗಳನ್ನು ಸಲ್ಲಿಸಿದರು. ಐಎಂಎ ಸಂಸ್ಥೆಗೆ ಮೈಸೂರಿನಲ್ಲಿಯೂ ಸಾವಿ ರಾರು ಮಂದಿ ಲಕ್ಷಾಂತರ ಹಣ ಹೂಡಿದ್ದು, ಸಂಸ್ಥೆಯ ಇತ್ತೀಚಿನ ಬೆಳವಣಿಗೆಗಳಿಂದ ತೀರಾ ಕಂಗಾಲಾಗಿದ್ದಾರೆ. ಮೈಸೂರಿನವರಲ್ಲಿ 3 ಲಕ್ಷದಿಂದ 16 ಲಕ್ಷ ರೂ.ಗಳವರೆಗೂ ಕಳೆದುಕೊಂಡವರು ಸಾಕಷ್ಟಿದ್ದಾರೆ. ಬೆಂಗಳೂರಿಗೆ ಹೋಗಿ ದೂರು ಸಲ್ಲಿಸಲಾಗದವರಿಗಾಗಿ ಮೈಸೂರಿನಲ್ಲಿಯೇ ದೂರು ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದ್ದು, ಉದಯ ಗಿರಿ…
ತೆರಿಗೆ ಬಾಕಿ: ಪೊಲೀಸ್ ಭವನಕ್ಕೆ ಪಾಲಿಕೆ ಮತ್ತೆ ನೋಟಿಸ್ ಜಾರಿ
June 14, 2019ಮೈಸೂರು: ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಮೈಸೂರಿನ ಸುಂದರ ಕಲ್ಯಾಣ ಮಂಟಪಗಳಲ್ಲಿ ಒಂದಾಗಿರುವ ಪೊಲೀಸ್ ಭವನವನ್ನು ಜಪ್ತಿ ಮಾಡುವುದಾಗಿ ನಗರ ಪಾಲಿಕೆಯು ಪೊಲೀಸ್ ಕಮಾಂಡೆಂಟ್ಗೆ ನೊಟಿಸ್ ಜಾರಿ ಮಾಡಿದೆ. ಮೈಸೂರಿನ ಜಾಕಿ ಕ್ವಾರ್ಟಸ್ ನಲ್ಲಿರುವ ಪೊಲೀಸ್ ಭವನದ ತೆರಿಗೆಯನ್ನು ಪಾವತಿಸದೆ ಇರುವುದರಿಂದ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಮುಂದಾಗಿ ರುವ ಪಾಲಿಕೆ 15 ದಿನದಲ್ಲಿ ಬಾಕಿಯಿರುವ 1.65 ಕೋಟಿ ರೂ. ತೆರಿಗೆಯನ್ನು ಪಾವತಿಸದೇ ಇದ್ದರೆ, ಪೊಲೀಸ್ ಭವನ ವನ್ನು ಜಪ್ತಿ ಮಾಡಿ ಹರಾಜು ಪ್ರಕ್ರಿಯೆ ನಡೆಸುವ ಅಧಿ ಕಾರವೂ ಪಾಲಿಕೆಗೆ…
ರೈತರ ಕೃಷಿ ಸಾಲ ಮನ್ನಾಕ್ಕೆ ಅಗತ್ಯವಿರುವ ಹಣ ಕೇವಲ 19ರಿಂದ 21 ಸಾವಿರ ಕೋಟಿ
June 14, 2019ಬೆಂಗಳೂರು: ಸಹ ಕಾರಿ ಹಾಗೂ ವಾಣಿಜ್ಯ ಬ್ಯಾಂಕ್ಗಳಲ್ಲಿ ರೈತರು ಪಡೆದಿರುವ ಕೃಷಿ ಸಾಲಮನ್ನಾಕ್ಕೆ 43,000 ಕೋಟಿ ರೂ. ಅಗತ್ಯವಿಲ್ಲ, ಕೇವಲ 19ರಿಂದ 21,000 ಕೋಟಿ ರೂ. ಸಾಕು. ರೈತರ ಎರಡು ಲಕ್ಷ ರೂ. ವರೆಗಿನ ಕೃಷಿ ಸಾಲ ಮನ್ನಾ ಮಾಡುವುದಾಗಿ ವಾಗ್ದಾನ ಮಾಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ಇದಕ್ಕಾಗಿ 43,000 ಕೋಟಿ ರೂ. ಅಗತ್ಯವಿದೆ ಎಂದಿದ್ದರು. ವಾಣಿಜ್ಯ ಬ್ಯಾಂಕ್ಗಳು ನೀಡಿದ್ದ ಮಾಹಿತಿ ಆಧರಿಸಿ, ದೊಡ್ಡ ಪ್ರಮಾಣದಲ್ಲಿ ರೈತರ ಸಾಲ ಮನ್ನಾ ಮಾಡುತ್ತಿದ್ದೇವೆ ಎಂದು ಪ್ರಕಟಿಸಿದರು. ನಂತರದ ದಿನ ಗಳಲ್ಲಿ…
2020ರ ಮೊದಲ 3 ತಿಂಗಳಲ್ಲಿ ಮೈತ್ರಿ ಸರ್ಕಾರ ಉರುಳಲಿದೆ
June 14, 2019ಬೆಂಗಳೂರು: ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಉಳಿಯುವುದು ಡೌಟು. 2020ರ ಮೊದಲ ಮೂರು ತಿಂಗಳಲ್ಲಿ ಮೈತ್ರಿ ಸರ್ಕಾರ ಉರುಳಲಿದೆ. ಖಂಡಿತವಾಗಿ ಮಧ್ಯಂತರ ಚುನಾವಣೆ ಎದುರಾಗಲಿದೆ ಎಂದು ಮಾಜಿ ಸ್ಪೀಕರ್ ಕೋಳಿವಾಡ ಸಮ್ಮಿಶ್ರ ಸರ್ಕಾರದ ಬಗ್ಗೆ ಮಾತನಾಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಕೋಳಿವಾಡ, ಕಳೆದ 40 ವರ್ಷದಿಂದ ಕ್ಷೇತ್ರದಲ್ಲಿ ಪಕ್ಷ ಕಟ್ಟಿದ್ದು ನಾನು. ಈಗ ಬಂದವರಿಗೆ ಮಣೆ ಹಾಕಿ ದರೆ, ನನ್ನ ಅಸ್ತಿತ್ವದ ಪ್ರಶ್ನೆ ಶುರುವಾಗುತ್ತೆ. ಪಕ್ಷವನ್ನು ಉಳಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಚರ್ಚೆ ಮಾಡಿ ಅನಿವಾರ್ಯವಾಗಿ ಸ್ವತಂತ್ರ…