ಮೈಸೂರು: ಪಶ್ಚಿಮ ಬಂಗಾಳದ ಕೊಲ್ಕತ್ತಾ ಎನ್ಆರ್ಎಸ್ ವೈದ್ಯಕೀಯ ಮಹಾವಿದ್ಯಾಲಯದ ಕರ್ತವ್ಯನಿರತ ವೈದ್ಯರ ಮೇಲೆ ಗುಂಪೊಂದು ನಡೆಸಿದ ಹಲ್ಲೆ ಖಂಡಿಸಿ ಸೋಮ ವಾರ(ಜೂ 17)ದಂದು ಎಲ್ಲಾ ಖಾಸಗಿ ಆಸ್ಪತ್ರೆಗಳ ಹೊರ ರೋಗಿ ಚಿಕಿತ್ಸಾ ವಿಭಾಗದ ಸೇವೆ ಸ್ಥಗಿತಗೊಳಿಸಿ ಪ್ರತಿರೋಧ ವ್ಯಕ್ತಪಡಿಸಲು ವೈದ್ಯ ಸಮೂಹ ನಿರ್ಧರಿಸಿದೆ. ಭಾರತೀಯ ವೈದ್ಯಕೀಯ ಸಂಘ (ಐಎಂಎ)ವು ಮುಷ್ಕರಕ್ಕೆ ಕರೆ ನೀಡಿದ್ದು, ಅದರಂತೆ ಸೋಮ ವಾರ ಬೆಳಿಗ್ಗೆ 6 ರಿಂದ ಮಂಗಳವಾರ ಬೆಳಿಗ್ಗೆ 6 ಗಂಟೆವರೆಗೆ ಎಲ್ಲಾ ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್ಗಳಲ್ಲಿನ ಹೊರರೋಗಿ ವಿಭಾಗದ…
ಮೈಸೂರು ವಿವಿ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಚಿಕ್ಕವೆಂಕಟಪ್ಪ ನಿಧನ
June 16, 2019ಮೈಸೂರು: ಮೈಸೂರು ವಿಶ್ವ ವಿದ್ಯಾನಿಲಯದ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ವಿ. ಚಿಕ್ಕವೆಂಕಟಪ್ಪ (82) ಅವರು ಇಂದು ಸಂಜೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೈಸೂರಿನ ಜಯನಗರ 2ನೇ ಮುಖ್ಯ ರಸ್ತೆಯಲ್ಲಿ ವಾಸವಾಗಿದ್ದ ಅವರನ್ನು ವಯೋ ಸಹಜ ಖಾಯಿಲೆಯಿಂದಾಗಿ ಆಸ್ಪತ್ರೆಗೆ ದಾಖ ಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸಂಜೆ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಚಿಕ್ಕ ವೆಂಕಟಪ್ಪ ಅವರು ಪತ್ನಿ ಶ್ರೀಮತಿ ಜಯ ಶೀಲ, ಪುತ್ರ ಡಾ.ಸಿ.ವೆಂಕಟೇಶ್, ಪುತ್ರಿಯ ರಾದ ಡಾ.ಶಶಿಕಲಾ, ಸುಶೀಲಾ, ಅಳಿ ಯಂದಿರು, ಸೊಸೆ,…
ಪ್ರಸ್ತುತ ರಾಜಕಾರಣ ನೆಮ್ಮದಿ ಹಾಳು ಮಾಡುತ್ತಿದೆ
June 16, 2019ಮೈಸೂರು: ಸಂಗೀತ, ಸಾಹಿತ್ಯ, ಚಿತ್ರಕಲೆಗಳು ಬಸ ವಳಿದವರ ಮನಸ್ಸು ಹಗುರ ಮಾಡುತ್ತವೆ. ಆದರೆ, ಪ್ರಸ್ತುತ ರಾಜಕಾರಣ ಮನಸ್ಸಿನ ನೆಮ್ಮದಿಯನ್ನೇ ಹಾಳು ಮಾಡುತ್ತಿದೆ ಎಂದು ಮಾಜಿ ಸಚಿವರೂ ಆದ ಶಾಸಕ ಎ.ಎಚ್.ವಿಶ್ವನಾಥ್ ಅಭಿಪ್ರಾಯಪಟ್ಟರು. ಮೈಸೂರು ಕೃಷ್ಣಮೂರ್ತಿಪುರಂ ಶಾರದಾವಿಲಾಸ ಕಾಲೇಜು ಶತಮಾನೋ ತ್ಸವ ಭವನದಲ್ಲಿ ಹಳೇಬೇರು ಹೊಸ ಚಿಗುರು ಕಲ್ಚರಲ್ ಟ್ರಸ್ಟ್, ಜಿ.ಆರ್.ಸ್ನೇಹ ಬಳಗದ ಸಹಯೋಗದೊಂದಿಗೆ ಚಲನ ಚಿತ್ರ ಹಿನ್ನೆಲೆಗಾಯಕ ರಾಜೇಶ್ಕೃಷ್ಣ ಸಾರಥ್ಯದಲ್ಲಿ ನಡೆದ `ಸಂಗೀತ ಸಂಜೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಕಲೆ, ಸಾಹಿತ್ಯ,…
ಚಾಮುಂಡಿಬೆಟ್ಟದ ನಂದಿ ರಸ್ತೆಯ ವ್ಯೂ ಪಾಯಿಂಟ್ನಲ್ಲಿಕೋತಿಗಳದ್ದೇ ಕಾರುಬಾರು
June 16, 2019ಮೈಸೂರು: ಚಾಮುಂಡಿಬೆಟ್ಟದ ನಂದಿ ರಸ್ತೆಯಲ್ಲಿ ರುವ ವ್ಯೂ ಪಾಯಿಂಟ್ ಬಳಿ ಕೋತಿ ಗಳ ಹಿಂಡೊಂದು ಪ್ರವಾಸಿಗರ ಮೇಲೆ ದಾಳಿ ನಡೆಸಿ ಭಯದ ವಾತಾವರಣ ಸೃಷ್ಟಿ ಸಿದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ನಂದಿ ರಸ್ತೆಯಲ್ಲಿ ನಿರ್ಮಿಸಿರುವ ವ್ಯೂ ಪಾಯಿಂಟ್ ಬಳಿ ಇಂದು ಬೆಳಿಗ್ಗೆ 8ಗಂಟೆಯಲ್ಲಿ 30ಕ್ಕೂ ಹೆಚ್ಚು ಕೋತಿ ಗಳಿದ್ದ ಹಿಂಡೊಂದು ಪ್ರತ್ಯಕ್ಷವಾಗಿದೆ. ವಾಯುವಿಹಾರ ಹಾಗೂ ಬೆಟ್ಟಕ್ಕೆ ಬಂದಿದ್ದ ಪ್ರವಾಸಿಗರು ವ್ಯೂ ಪಾಯಿಂಟ್ನಲ್ಲಿ ನಿಂತು ಮೈಸೂರಿನ ಸೌಂದರ್ಯವನ್ನು ಸವಿಯಲು ಮುಂದಾಗುತ್ತಿದ್ದಂತೆ, ಅಲ್ಲಿಯೇ ರೇಲಿಂಗ್ಸ್ ಮೇಲೆ ಕುಳಿತಿದ್ದ ಕೋತಿಗಳು…
ಮೈತ್ರಿ ಸರ್ಕಾರದ ನಡೆ ಬಗ್ಗೆ ಚರ್ಚಿಸಲು ಸಮಾನ ಮನಸ್ಕರ ಸಭೆ: ಶಾಸಕ ತನ್ವೀರ್ ಸೇಠ್
June 16, 2019ಮೈಸೂರು: ಸಮ್ಮಿಶ್ರ ಸರ್ಕಾರ ನಡೆ, ಕಾಂಗ್ರೆಸ್ ಪಕ್ಷದ ಸಂಘಟನೆಯ ಬಗ್ಗೆ ಚರ್ಚಿ ಸಲು ಶೀಘ್ರದಲ್ಲಿಯೇ ಸಮಾನ ಮನಸ್ಕರೊಂದಿಗೆ ಸಭೆ ನಡೆಸುವುದಾಗಿ ಮಾಜಿ ಸಚಿವರೂ ಆದ ಎನ್.ಆರ್.ಕ್ಷೇತ್ರದ ಶಾಸಕ ತನ್ವೀರ್ ಸೇಠ್ ತಿಳಿಸಿದ್ದಾರೆ. ಮೈಸೂರಿನ ರಾಜೇಂದ್ರ ನಗರದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿರು ವುದನ್ನು ಗಮನಿಸಿದರೆ ಸಂಘಟನೆಗೆ ಕ್ರಮ ಕೈಗೊಳ್ಳು ವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ಹಿರಿಯರು, ಶಾಸಕರು ಹಾಗೂ ಸಮನ ಮನಸ್ಕರು ಸೇರಿ ಚರ್ಚಿಸಲು ನಿರ್ದರಿಸಿದ್ದೇವೆ. ಈ ಸಭೆಯಲ್ಲಿ ಸಚಿವರ…
ಶ್ರದ್ಧಾ ಸುಮನ್ ಶ್ರದ್ಧಾಂಜಲಿ ಕಳಸಕ್ಕೆ ಮೈಸೂರಲ್ಲಿ ಗೌರವ ನಮನ
June 16, 2019ಮೈಸೂರು: ಜನರಲ್ಲಿ ದೇಶಾಭಿಮಾನ ಮೂಡಿಸುವ ಉದ್ದೇಶದಿಂದ ದೇಶದ ವಿವಿಧ ನಗರದಲ್ಲಿ ಸಂಚರಿಸುತ್ತಿರುವ `ಶ್ರದ್ಧಾ ಸುಮನ್ ಶ್ರದ್ಧಾಂಜಲಿ ಕಳಸ’ ಶನಿವಾರ ಮೈಸೂರಿಗೆ ಆಗಮಿಸಿತು. ಬೆಂಗಳೂರಿನ ಸಿಟಿಜನ್ ಸೊಸೈಟಿ ಆಫ್ ಇಂಡಿಯಾ ಸಂಸ್ಥೆಯು ಕಾರ್ಗಿಲ್ ವಿಜಯೋತ್ಸವದ 20ನೇ ವರ್ಷಾಚರಣೆ ಅಂಗವಾಗಿ ಜನರಲ್ಲಿ ದೇಶಾಭಿಮಾನ ಮೂಡಿಸಲು ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿ, ಶನಿವಾರ ಸಂಜೆ ಮೈಸೂರಿಗೆ ಆಗಮಿಸಿದ ಶ್ರದ್ಧಾ ಕಳಸ ಯಾತ್ರೆಗೆ ಮೈಸೂರು ಮಹಾನಗರ ಪಾಲಿಕೆ ಆವರಣ ಮತ್ತು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು….
ಪತ್ರಕರ್ತರ ಎರಡು ದಿನಗಳ ಕ್ರೀಡಾಕೂಟಕ್ಕೆ ಮೇಯರ್ ಚಾಲನೆ
June 16, 2019ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಹಾಕಿ ಮೈದಾನದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿರುವ ಎರಡು ದಿನಗಳ `ಪತ್ರಕರ್ತರ ಕ್ರೀಡಾಕೂಟ’ಕ್ಕೆ ಶನಿವಾರ ಚಾಲನೆ ದೊರೆಯಿತು. ಬ್ಯಾಟ್ ಬೀಸುವ ಮೂಲಕ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದ ಮೇಯರ್ ಪುಷ್ಪಲತಾ ಜಗನ್ನಾಥ್, ನಂತರ ಮಾತ ನಾಡಿ, ದಿನನಿತ್ಯ ಪೆನ್ನು, ಕ್ಯಾಮರಾ ಗಳೊಂದಿಗೆ ಒತ್ತಡದಲ್ಲಿ ಕಾರ್ಯನಿರ್ವ ಹಿಸುವ ಪತ್ರಕರ್ತರು ಇಂದು ಮೈದಾನ ದಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಿರು ವುದು ಸಂತಸದ ಸಂಗತಿ. ಕರ್ತವ್ಯದ ಜಂಜಾ ಟದ ನಡುವೆ ಒಂದಿಷ್ಟು ಬಿಡುವು ಮಾಡಿ ಕೊಂಡು…
ಆಧಾರ್ ಭಾರೀ ಡಿಮ್ಯಾಂಡ್: ದಿನೇ ದಿನೆ ಹೆಚ್ಚುತ್ತಿದೆ ಜನದಟ್ಟಣೆ
June 16, 2019ಮೈಸೂರು: ಸರ್ಕಾರದ ಪ್ರತಿಯೊಂದು ಸೌಲಭ್ಯಕ್ಕೂ ಆಧಾರ್ ನೋಂದಣಿ ಮುಖ್ಯವಾಗಿದ್ದು, ಅದರಲ್ಲೂ ಪಡಿತರ ಚೀಟಿಗೆ ಆಧಾರ್ ಕಾರ್ಡ್ ಸಂಖ್ಯೆ ಲಿಂಕ್ ಮಾಡಿಸುವು ದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಈ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಆಧಾರ್ ಕೇಂದ್ರಗಳ ಬಳಿ ಜನದಟ್ಟಣೆ ಹೆಚ್ಚಾಗುತ್ತಿದೆ. ಜು.31ರೊಳಗೆ ಪಡಿತರ ಚೀಟಿಗೆ ಆಧಾರ್ಕಾರ್ಡ್ ಲಿಂಕ್ ಮಾಡಿಸ ಬೇಕೆಂದು ಸರ್ಕಾರ ಕಡ್ಡಾಯಗೊಳಿ ಸಿದೆ. ಜತೆಗೆ ಇತರೆ ಎಲ್ಲಾ ಸರ್ಕಾರಿ ಸೌಲಭ್ಯಗಳಿಗೂ ಆಧಾರ್ ನೋಂದಣಿ ಅವಶ್ಯವಾಗಿದೆ. ಹಾಗಾಗಿ ಸಾರ್ವಜನಿ ಕರು ಹೆಸರು ತಿದ್ದುಪಡಿ, ವಿಳಾಸ ಬದ ಲಾವಣೆ, ಜನ್ಮದಿನಾಂಕ ಬದಲಾವಣೆಗೆ…
ದೇವರಾಜ ಮಾರುಕಟ್ಟೆ ಕಟ್ಟಡ ನೆಲಸಮಕ್ಕೆ ಹೈಕೋರ್ಟ್ ಹೇಳಿಲ್ಲ
June 16, 2019ಮೈಸೂರು: ಮೈಸೂರಿನ ದೇವರಾಜ ಮಾರುಕಟ್ಟೆ ಪಾರಂಪರಿಕ ಕಟ್ಟಡವನ್ನು ನೆಲಸಮಗೊಳಿಸಬೇಕೆಂದು ಹೈಕೋರ್ಟ್ ತೀರ್ಪಿನಲ್ಲಿ ಹೇಳಿಲ್ಲ ಎಂದು ದೇವರಾಜ ಮಾರುಕಟ್ಟೆ ಬಾಡಿಗೆ ದಾರರ ಸಂಘದ ಅಧ್ಯಕ್ಷ ಪೈಲ್ವಾನ್ ಎಸ್. ಮಹದೇವು ತಿಳಿಸಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಿರುವ ಅವರು, ತಾವು ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿ ಸಂಬಂಧ ಏಪ್ರಿಲ್ 5 ರಂದು ನೀಡಿರುವ ತೀರ್ಪನ್ನು ತಪ್ಪಾಗಿ ಅರ್ಥೈಸಿ ಕೊಂಡಿರುವ ಮೈಸೂರು ಮಹಾನಗರ ಪಾಲಿಕೆಯು ಸಾರ್ವಜನಿಕರನ್ನು ತಪ್ಪು ದಾರಿಗೆಳೆಯುತ್ತಿದೆ ಎಂದಿದ್ದಾರೆ. ಆದೇಶವನ್ನು ಸರಿಯಾಗಿ ಅರ್ಥೈಸಿ ಕೊಳ್ಳದೇ ಮನಸ್ಸೋ ಇಚ್ಛೆ ಪತ್ರಿಕಾ ಹೇಳಿಕೆ…
ಕೇಂದ್ರೀಯ ವಿದ್ಯಾಲಯ ಮಾದರಿಸರ್ಕಾರಿ ಇಂಗ್ಲಿಷ್ ಶಾಲೆ ಅಭಿವೃದ್ಧಿ
June 15, 2019ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರಂಭಗೊಂಡಿರುವ ಸರ್ಕಾರಿ ಇಂಗ್ಲಿಷ್ ಶಾಲೆಗಳನ್ನು ಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಇಂದಿಲ್ಲಿ ಘೋಷಣೆ ಮಾಡಿದ್ದಾರೆ. ಅಷ್ಟೇ ಅಲ್ಲ ಮುಂದಿನ ಶೈಕ್ಷಣಿಕ ವರ್ಷಕ್ಕೆ ಪ್ರವೇಶಾವಕಾಶವನ್ನು 30 ರಿಂದ 60 ಇಲ್ಲವೆ 90ಕ್ಕೆ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಇದೇ ಸಂದರ್ಭದಲ್ಲಿ ಪ್ರಕಟಿಸಿದರು. ವಿಧಾನಸೌಧದ ಬ್ಯಾಂಕ್ವೇಟ್ ಹಾಲ್ನಲ್ಲಿ ಸರ್ಕಾರಿ ಇಂಗ್ಲಿಷ್ ಶಾಲೆಗಳ ಕಾರ್ಯಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಾಲೆಗಳನ್ನು ತೆರೆಯಲು ಕನ್ನಡ ಸಂಘ ಸಂಸ್ಥೆ ಹಾಗೂ ಸಾಹಿತಿಗಳಿಂದ…