ಮೈಸೂರು,ಜೂ.16(ವೈಡಿಎಸ್)- ಮೈಸೂರು ವಿವಿ ಹಾಕಿ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಪತ್ರಕರ್ತರ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಭಾನುವಾರ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಶಾಸಕ ಎಲ್.ನಾಗೇಂದ್ರ ಬಹು ಮಾನ ವಿತರಿಸಿದರು. ನಂತರ ಮಾತನಾಡಿದ ಅವರು, ವರ್ಷದ 365 ದಿನಗಳು ಪೊಲೀ ಸರಂತೆ ಹಗಲು-ರಾತ್ರಿ ಕಾರ್ಯನಿರ್ವಹಿ ಸುವ ಪತ್ರಕರ್ತರು ಹಾಗೂ ಅವರ ಕುಟುಂಬದವರಿಗೆ ವಿವಿಧ ಕ್ರೀಡೆ ಆಯೋ ಜಿಸಿರುವುದು ಸಂತಸ ತಂದಿದೆ ಎಂದರು. ಮಕ್ಕಳು ಶಿಕ್ಷಣದ ಜತೆಗೆ ಕ್ರೀಡೆಯಲ್ಲೂ ಭಾಗವಹಿಸುವಂತೆ ಪೋಷಕರು…
ಮೈಸೂರಲ್ಲಿ 5 ಸಾವಿರ ಯೋಗಪಟುಗಳಿಂದ ಅಂತಿಮ ಯೋಗ ತಾಲೀಮು
June 17, 2019ಮೈಸೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂತಿಮ ತಾಲೀಮು ಭಾನುವಾರ ಮೈಸೂ ರಿನ ರೇಸ್ ಕೋರ್ಸ್ನಲ್ಲಿ (ಎಂಆರ್ಸಿ) ನಡೆಯಿತು. ಐದು ಸಾವಿರಕ್ಕೂ ಹೆಚ್ಚಿನ ಯೋಗ ಪಟುಗಳು ಸಾಮೂಹಿಕವಾಗಿ ಈ ತಾಲೀಮಿನಲ್ಲಿ ಭಾಗವಹಿಸಿ, ವಿವಿಧ ಆಸನಗಳನ್ನು ಪ್ರದರ್ಶಿಸಿದರು. ಜಿಲ್ಲಾಡಳಿತ, ಯೋಗ ಫೆಡರೇಷನ್ ಆಫ್ ಮೈಸೂರು ಆಶ್ರಯದಲ್ಲಿ ಮೈಸೂರಿನ ವಿವಿಧ ಯೋಗ ಸಂಘಟನೆಗಳ ಸಹಯೋಗ ದಲ್ಲಿ ನಡೆದ ಅಂತಿಮ ತಾಲೀಮಿಗೆ ಉನ್ನತ ಶಿಕ್ಷಣ ಸಚಿವರೂ ಆದ ಜಿಲ್ಲಾ ಉಸ್ತು ವಾರಿ ಸಚಿವ ಜಿ.ಟಿ.ದೇವೇಗೌಡ ದೀಪ ಬೆಳಗಿಸಿ ಚಾಲನೆ ನೀಡಿದರು. ಈ ವೇಳೆ…
ವಿದ್ಯಾರಣ್ಯಪುರಂನಲ್ಲಿ 4 ಕೋಟಿ ವೆಚ್ಚದ ಚರಂಡಿ ಕಾಮಗಾರಿಗೆ ಶಾಸಕ ರಾಮದಾಸ್ ಚಾಲನೆ
June 17, 2019ಮೈಸೂರು, ಜೂ.16(ಪಿಎಂ)- ಮೈಸೂರು ಮಹಾನಗರ ಪಾಲಿಕೆ ಒಳ ಚರಂಡಿ ವಿಭಾಗದಿಂದ ಕೈಗೆತ್ತಿಕೊಂಡಿ ರುವ 4 ಕೋಟಿ ರೂ. ವೆಚ್ಚದ ಒಳ ಚರಂಡಿ ಕಾಮಗಾರಿಗೆ ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ಭಾನುವಾರ ಚಾಲನೆ ನೀಡಿದರು. ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ರುವ ನಗರಪಾಲಿಕೆ ತ್ಯಾಜ್ಯ ನೀರು ಸಂಸ್ಕ ರಣಾ ಘಟಕದ (ಎಸ್ಟಿಪಿ-ಬಿ ಆವ ರಣ) ಆವರಣದಲ್ಲಿ 2017-18ನೇ ಸಾಲಿನ ಎಸ್ಎಫ್ಸಿ ಅನುದಾನದಲ್ಲಿ ಕೈಗೆತ್ತಿಕೊಳ್ಳು ತ್ತಿರುವ ಒಳಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಮೈಸೂರು ನಗರದ ಹೆಚ್ಡಿ ಕೋಟೆ ರಸ್ತೆಯಿಂದ ಶಾರದ…
ಸಿಎಂ ಗೃಹ ಕಚೇರಿಗೆ ಮುತ್ತಿಗೆ ಯತ್ನ: ಬಿಎಸ್ವೈ ಸೇರಿ ಹಲವು ಬಿಜೆಪಿ ನಾಯಕರ ಬಂಧನ, ಬಿಡುಗಡೆ
June 17, 2019ಬೆಂಗಳೂರು: ರಾಜ್ಯ ಸರ್ಕಾರ ಜಿಂದಾಲ್ ಕಂಪನಿಗೆ ಸರ್ಕಾರಿ ಭೂಮಿ ಪರಭಾರೆ ಮಾಡುತ್ತಿರುವುದನ್ನು ವಿರೋಧಿಸಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಬಿಜೆಪಿ ನಾಯಕರನ್ನು ಪೊಲೀಸರು ಇಂದು ಬಂಧಿಸಿ, ನಂತರ ಬಿಡುಗಡೆ ಮಾಡಿದರು. ಸಿಎಂ ಗೃಹಕಚೇರಿ ಕೃಷ್ಣಾಗೆ ಮುತ್ತಿಗೆ ಹಾಕಲು ತೆರಳುತ್ತಿದ್ದ ಬಿಜೆಪಿ ಮುಖಂಡರನ್ನು ಚಿತ್ರಕಲಾ ಪರಿಷತ್ ಬಳಿ ಬ್ಯಾರಿಕೇಡ್ ಹಾಕಿ ವಶಕ್ಕೆ ಪಡೆಯಲಾಗಿದೆ. ಬಿ.ಎಸ್. ಯಡಿಯೂರಪ್ಪ, ಆರ್.ಅಶೋಕ್, ಸಿ.ಟಿ.ರವಿ, ಅರವಿಂದ್ ಲಿಂಬಾವಳಿ, ರೇಣುಕಾಚಾರ್ಯ, ಸುರೇಶ್ಕುಮಾರ್ ಸೇರಿದಂತೆ ಹಲವು ನಾಯಕರನ್ನು ಬಂಧಿಸಿ, ಬಸ್ಗಳಲ್ಲಿ ಕಬ್ಬನ್ ಪಾರ್ಕ್ ಠಾಣೆಗೆ ಕರೆತಂದಿದ್ದರು. ಈ ವೇಳೆ…
‘ವಿದ್ಯೆಗಿಂತ ಮಿಗಿಲಾದ ಆಸ್ತಿ ಮತ್ತೊಂದಿಲ್ಲ’
June 17, 2019ಮೈಸೂರು, ಜೂ.16- ಮೈಸೂರಿನ ಸಮ ರ್ಪಣಾ ಶೈಕ್ಷಣಿಕ ಮತ್ತು ದಾನದತ್ತಿ ಸಂಸ್ಥೆ ವತಿಯಿಂದ ಕೆಆರ್ಎಸ್ ರಸ್ತೆಯಲ್ಲಿರುವ ಸಾದನಹಳ್ಳಿ ಸಪ್ತರ್ಷಿ ಗುರುಕುಲ ಸೇವಾ ಆಶ್ರಮದ ಮಕ್ಕಳಿಗೆ ಉಚಿತವಾಗಿ ಪುಸ್ತಕ, ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರು ವಿ.ವಿ. ಮಹಾರಾಜ ಸಂಜೆ ಕಾಲೇ ಜಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಹಾಗೂ ವಿದ್ವಾಂಸರಾದ ಡಾ.ಕೆ.ಅನಂತರಾಮು ಆಶ್ರಮದ ಮಕ್ಕಳಿಗೆ ಲೇಖನ ಸಾಮಗ್ರಿ ಗಳನ್ನು ವಿತರಿಸಿ ಮಾತನಾಡುತ್ತಾ, ವಿದ್ಯೆ ಗಿಂತ ಮಿಗಿಲಾದ ಆಸ್ತಿ ಈ ಸಮಾಜದಲ್ಲಿ ಬೇರೊಂದಿಲ್ಲ. ಏಕೆಂದರೆ ವಿದ್ಯೆಯನ್ನು ಯಾರೂ…
ಸಬ್ಸಿಡಿ ಹಸುಗಳಿಗೆ ಚಿಪ್ ಅಳವಡಿಕೆ
June 16, 2019ಬೆಂಗಳೂರು: ಪಶು ಸಂಗೋಪನಾ ಇಲಾಖೆಯಿಂದ ವಿವಿಧ ಯೋಜನೆಗಳಡಿ ನೀಡಲಾಗುವ ಹಸುಗಳನ್ನು ಫಲಾನುಭವಿ ಆರು ವರ್ಷ ಗಳವರೆಗೂ ಮಾರಾಟ ಮಾಡುವಂತಿಲ್ಲ. ಸರ್ಕಾರದ ಸಬ್ಸಿಡಿ ಪಡೆದ ಫಲಾನು ಭವಿಗಳು ಮತ್ತು ಬ್ಯಾಂಕ್ ಅಧಿಕಾರಿಗಳು ಯೋಜನೆಯನ್ನು ಭಾರೀ ಪ್ರಮಾಣದಲ್ಲಿ ದುರುಪಯೋಗ ಮಾಡಿಕೊಳ್ಳುತ್ತಿದ್ದು, ಇದನ್ನು ತಪ್ಪಿಸಲು ಇನ್ನು ಮುಂದೆ ಇಲಾಖಾ ವತಿಯಿಂದ ಪಡೆದ ಪ್ರಾಣಿಗಳಿಗೆ ಚಿಪ್ ಅಳವಡಿಸುವುದಾಗಿ ಪಶು ಸಂಗೋಪನಾ ಸಚಿವ ವೆಂಕಟ ರಾವ್ ನಾಡಗೌಡ ಇಂದಿಲ್ಲಿ ತಿಳಿ ಸಿದರು. ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಸಾಮಾನ್ಯ ವರ್ಗಕ್ಕೆ ಶೇಕಡ 25ರಷ್ಟು ಸಬ್ಸಿಡಿ…
ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಅನುಮತಿ ನೀಡಲು ಕೇಂದ್ರಕ್ಕೆ ಸಿಎಂ ಕುಮಾರಸ್ವಾಮಿ ಮನವಿ
June 16, 2019ಬೆಂಗಳೂರು: ಕುಡಿಯುವ ನೀರು ಹಾಗೂ ವಿದ್ಯುತ್ ಉತ್ಪಾದನೆ ಉದ್ದೇಶದಿಂದ ಕೃಷ್ಣರಾಜ ಸಾಗರ ಅಣೆಕಟ್ಟೆಗೆ ಸಮಾನಾಂತರವಾಗಿ ಮೇಕೆದಾಟುವಿನಲ್ಲಿ ನಿರ್ಮಿಸಲಿರುವ ಜಲಾ ಶಯಕ್ಕೆ ತಕ್ಷಣವೇ ಅನುಮತಿ ನೀಡ ಬೇಕೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ದೆಹಲಿಯಲ್ಲಿಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ನಡೆ ಸಿದ ಸಮಾಲೋಚನೆ ಸಂದರ್ಭದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿ ಸುತ್ತಿರುವ ಈ ಅಣೆಕಟ್ಟೆಯ ಮಹತ್ವ ವನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಕರ್ನಾಟಕ…
ಜೂ.18ಕ್ಕೆ ಅರಸೀಕೆರೆ ತಾಲೂಕು ಜೆ.ಸಿ.ಪುರದಲ್ಲಿ ಸಿಎಂ ಗ್ರಾಮ ವಾಸ್ತವ್ಯ
June 16, 2019ಹಾಸನ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಜೂ.18ರಂದು ಜಿಲ್ಲೆಯ ಅರಸೀ ಕೆರೆ ತಾಲೂಕಿನ ಕಣಕಟ್ಟೆ ಹೋಬಳಿಯ ಜೆ.ಸಿ. ಪುರದಲ್ಲಿ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ. ಮುಖ್ಯಮಂತ್ರಿಗಳು ಜೂ.18ರ ಸಂಜೆ 5ಕ್ಕೆ ಗಂಡಸಿಗೆ ಆಗಮಿಸಿ ಸಾರ್ವಜನಿಕರ ಅಹವಾಲು ಸ್ವೀಕರಿ ಸುವರು. ಬಳಿಕ ಸಂಜೆ 6 ಗಂಟೆಗೆ ಜೆ.ಸಿ.ಪುರ ತಲುಪಿ ಅಲ್ಲಿಯೇ ತಂಗುವರು. ಜಿಲ್ಲೆಯ ಹಲವು ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಅಕ್ರಂ ಪಾಷಾ, ಜಿಪಂ ಸಿಇಓ ಕೆ.ಎನ್.ವಿಜಯಪ್ರಕಾಶ್, ಎಸ್ಪಿ ಎ.ಎನ್.ಪ್ರಕಾಶ್ ಗೌಡ ಹಾಗೂ ವಿವಿಧ ಇಲಾಖೆ ಗಳ ಅಧಿಕಾರಿಗಳೂ ಅಂದು ಜೆಸಿ ಪುರದಲ್ಲಿಯೇ ತಂಗಲಿದ್ದಾರೆ….
ಮೈಸೂರು ರೈಲ್ವೆ ನಿಲ್ದಾಣದಿಂದ ಹಲವು ರೈಲು ಇಂದಿನಿಂದ ರದ್ದು
June 16, 2019ಮೈಸೂರು: ಮೈಸೂರಿನ ಕೇಂದ್ರ ರೈಲ್ವೆ ನಿಲ್ದಾಣ ಹಾಗೂ ಹಳಿಗಳಲ್ಲಿ ಆಧುನಿಕ ನಾನ್ ಇಂಟರ್ಲಾಕಿಂಗ್ ವ್ಯವಸ್ಥೆ ಅಳವಡಿಸುತ್ತಿರುವ ಹಿನ್ನೆಲೆಯಲ್ಲಿ ನಾಳೆ(ಜೂ.16) ಯಿಂದ 23ರವರೆಗೆ ಮೈಸೂರಿನಿಂದ ವಿವಿಧೆಡೆಗೆ ಸಂಚರಿಸುತ್ತಿದ್ದ ಸುಮಾರು 30 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾ ಗಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆ ಬೆಂಗಳೂ ರಿಗೆ 45ಕ್ಕೂ ಹೆಚ್ಚುವರಿ ಬಸ್ ಸಂಚಾರಕ್ಕೆ ಕ್ರಮ ಕೈಗೊಂಡಿದೆ. ರೈಲ್ವೆ ನಿಲ್ದಾಣದಲ್ಲಿ ಆಧುನೀಕರಣದ ಕಾಮಗಾರಿ ತ್ವರಿತಗತಿ ಯಲ್ಲಿ ಸಾಗುತ್ತಿದ್ದು, ರೈಲು ಸಂಚಾರ ಮಾರ್ಗದಲ್ಲಿ ಆಧುನಿಕ ವ್ಯವಸ್ಥೆ ನಾನ್ ಇಂಟರ್ಲಾಕಿಂಗ್ ವ್ಯವಸ್ಥೆ ಅಳವಡಿಸುವ ಕಾಮಗಾರಿ ಆರಂಭಿಸುತ್ತಿದೆ….
ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕ ರಣ: ಆಘಾತದಿಂದ ಮೈಸೂರಲ್ಲಿ ಸಂತ್ರಸ್ತ ಮಹಿಳೆ ಸಾವು
June 16, 2019ಮೈಸೂರು: ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕ ರಣದ ಸಂತ್ರಸ್ತೆಯೊಬ್ಬರು ಆಘಾತದಿಂದ ಹೃದಯಾಘಾತಕ್ಕೊಳಗಾಗಿ ಸಾವನ್ನ ಪ್ಪಿರುವ ಘಟನೆ ಮೈಸೂರಿನ ಶಾಂತಿನಗರ ದಲ್ಲಿ ಗುರುವಾರ ಸಂಭವಿಸಿದೆ. ಮೈಸೂರಿನ ಶಾಂತಿನಗರ ನಿವಾಸಿ ವೈ. ರೆಹಮಾನ್ ಷರೀಫ್ ಅವರ ಪತ್ನಿ ಸಫು ರಭಿ(60) ತೀವ್ರ ಹೃದಯಾಘಾತದಿಂದ ಮೃತಪಟ್ಟವರು. ಅಧಿಕ ಲಾಭ ಬರುತ್ತದೆ ಎಂಬ ಆಸೆಯಿಂದ ತಾವು ದುಡಿದು ಸಂಪಾ ದಿಸಿದ್ದ ಹಣವನ್ನು ಬೆಂಗಳೂರು ಮೂಲದ ಐಎಂಎ ಜುವೆಲ್ಸ್ ಸಂಸ್ಥೆಗೆ ಪರಿಚಯಸ್ಥರ ಮೂಲಕ ಹೂಡಿಕೆ ಮಾಡಿದ್ದ ಸಫುರಭಿ, ವಂಚನೆ ವಿಷಯ ಬಯಲಾಗುತ್ತಿದ್ದಂತೆ ಆಘಾತಕ್ಕೊಳಗಾಗಿದ್ದಾರೆ….