2020ರ ಮೊದಲ 3 ತಿಂಗಳಲ್ಲಿ ಮೈತ್ರಿ ಸರ್ಕಾರ ಉರುಳಲಿದೆ
ಮೈಸೂರು

2020ರ ಮೊದಲ 3 ತಿಂಗಳಲ್ಲಿ ಮೈತ್ರಿ ಸರ್ಕಾರ ಉರುಳಲಿದೆ

June 14, 2019

ಬೆಂಗಳೂರು: ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಉಳಿಯುವುದು ಡೌಟು. 2020ರ ಮೊದಲ ಮೂರು ತಿಂಗಳಲ್ಲಿ ಮೈತ್ರಿ ಸರ್ಕಾರ ಉರುಳಲಿದೆ. ಖಂಡಿತವಾಗಿ ಮಧ್ಯಂತರ ಚುನಾವಣೆ ಎದುರಾಗಲಿದೆ ಎಂದು ಮಾಜಿ ಸ್ಪೀಕರ್ ಕೋಳಿವಾಡ ಸಮ್ಮಿಶ್ರ ಸರ್ಕಾರದ ಬಗ್ಗೆ ಮಾತನಾಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಕೋಳಿವಾಡ, ಕಳೆದ 40 ವರ್ಷದಿಂದ ಕ್ಷೇತ್ರದಲ್ಲಿ ಪಕ್ಷ ಕಟ್ಟಿದ್ದು ನಾನು. ಈಗ ಬಂದವರಿಗೆ ಮಣೆ ಹಾಕಿ ದರೆ, ನನ್ನ ಅಸ್ತಿತ್ವದ ಪ್ರಶ್ನೆ ಶುರುವಾಗುತ್ತೆ. ಪಕ್ಷವನ್ನು ಉಳಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಚರ್ಚೆ ಮಾಡಿ ಅನಿವಾರ್ಯವಾಗಿ ಸ್ವತಂತ್ರ ಅಭ್ಯರ್ಥಿ ಗಳನ್ನು ಮಂತ್ರಿ ಮಾಡಿಕೊಳ್ಳೋಣ ಎಂದು ನಿರ್ಧರಿಸಿದೆ. ಹೀಗಾಗಿ ಇಲ್ಲಿನ ನಾಯ ಕರು ಒಪ್ಪಿ ನಾಳೆ ಸಚಿವ ಸಂಪುಟ ವಿಸ್ತ ರಣೆ ಮಾಡುವ ನಿರ್ಧಾರ ಮಾಡಿದ್ದಾರೆ. ಆದರೆ ಸಮ್ಮಿಶ್ರ ಸರ್ಕಾರಕ್ಕೆ ನನ್ನ ಒಲವು ಇರಲಿಲ್ಲ ಎಂದು ಹೇಳಿದ್ದಾರೆ.

ಹಿಂದೆ ನಾನು ಧರಂಸಿಂಗ್ ಅವಧಿ ಯಲ್ಲಿ ಹೇಳಿದ್ದೆ. ಈಗಲೂ ನಾನು ಇದನ್ನೇ ಹೇಳುತ್ತೇನೆ. ಜೆಡಿಎಸ್ ಜೊತೆ ಮೈತ್ರಿ ಸರಿಯಲ್ಲ. ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ರಬೇಕಿತ್ತು. ಆಗ ನಮ್ಮ ಪಕ್ಷ ಮತ್ತಷ್ಟು ಬೆಳೆ ಯುತ್ತಿತ್ತು. ಜೆಡಿಎಸ್ ಜೊತೆ ಮೈತ್ರಿ ನಮಗೆ ಹೊಂದಿಕೆಯಾಗಲ್ಲ. ವಿರೋಧ ಪಕ್ಷದಲ್ಲಿ ಕುಳಿತಿದ್ದರೂ ನಮ್ಮ ಪಕ್ಷ ಇನ್ನೂ ಚೆನ್ನಾಗಿ ಬೆಳೆಯುತ್ತಿತ್ತು. ಮೈತ್ರಿಯಿಂದಾಗಿಯೇ ನಾವು ಲೋಕ ಚುನಾವu Éಯಲ್ಲಿ ಸೋಲ ಬೇಕಾಯಿತು. ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಉಳಿಯುವುದು ಡೌಟು ಎಂದಿದ್ದಾರೆ.

2020ರ ಮೊದಲ ಮೂರು ತಿಂಗಳಲ್ಲಿ ಮೈತ್ರಿ ಸರ್ಕಾರ ಉರುಳಲಿದೆ. ಖಂಡಿತ ವಾಗಿ ಮಧ್ಯಂತರ ಚುನಾವಣೆ ಎದುರಾಗ ಲಿದೆ. ಸಮ್ಮಿಶ್ರ ಸರ್ಕಾರದ ಕಲ್ಪನೆಯೇ ಬೇಡ. ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಇದರಿಂದ ಸಾಕಷ್ಟು ಹಿನ್ನಡೆಯಾಗಿದೆ. ಹೈಕಮಾಂಡ್ ಸೂಚನೆ ಯಿಂದ ಮೈತ್ರಿ ಮಾಡಿಕೊಂಡಿದ್ದೇವೆ. ಈಗಲೂ ಸರ್ಕಾರ ಉಳಿಸಿಕೊಳ್ಳುವ ಭಯ ವಿದೆ. ಹೀಗಾಗಿಯೇ ಮೈತ್ರಿ ಮುಂದುವರಿ ಸಿದ್ದಾರೆ. ಮೈತ್ರಿಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಕಿಡಿಕಾರಿದ್ದಾರೆ.

ಮಧ್ಯಂತರ ಚುನಾವಣೆಗೆ ಸಿದ್ದ ರಾಮಯ್ಯ ರೆಡಿಯಿದ್ದಾರೆ. ನಾಳೆ(ಶುಕ್ರವಾರ) ಚುನಾವಣೆ ನಡೆದರೆ ನಾನು ಫೈಟಿಗೆ ರೆಡಿ. ಪಕ್ಷೇತರ ಶಾಸಕ ಶಂಕರ್ ವಿರುದ್ಧ ಕ್ಷೇತ್ರ ದಲ್ಲಿ ಅಸಮಾಧಾನವಿದೆ. ಅವರ ಕಡೆಯ ವರೆಲ್ಲರೂ ನನ್ನ ಜೊತೆ ಬಂದಿದ್ದಾರೆ. ಹೈಕ ಮಾಂಡ್ ಜೊತೆಯೂ ಸಿದ್ದರಾಮಯ್ಯ ಮಧ್ಯಂತರ ಚುನಾವಣೆ ಬಗ್ಗೆ ಚರ್ಚಿಸಿ ದ್ದಾರೆ. ಆದರೆ ಕಾಲ ಬರಲಿ ಎಂದು ಕಾಯು ತ್ತಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾ ವಣೆಗೆ ಹೋಗಬೇಕೋ ಬೇಡವೋ ಎಂದು ಹೈಕಮಾಂಡ್ ಡಿಸೈಡ್ ಮಾಡುತ್ತದೆ ಎಂದರು. ಸಿದ್ದರಾಮಯ್ಯ ನಮ್ಮ ಸಮ ಕಾಲೀನರು. ಸಿದ್ದರಾಮಯ್ಯ ಜೊತೆಯೂ ಮಾತನಾಡಿದ್ದೇನೆ. ಹಿಂದೆ ಸಚಿವ ಸ್ಥಾನ ದಿಂದ ಶಂಕರ್ ತೆಗೆದಿದ್ದಕ್ಕೆ ಸಿದ್ದರಾ ಮಯ್ಯ ಕಾರಣರಾಗಿದ್ದರು. ಆದರೆ ಈಗ ಅವರೇ ಶಂಕರ್ ಅವರನ್ನ ತೆಗೆದುಕೊ ಳ್ಳುತ್ತಿದ್ದಾರೆ. ಸಿದ್ದರಾಮಯ್ಯ ವೆರಿ ಗುಡ್ ಲೀಡರ್ ಎಂದು ಮಾಜಿ ಸಿಎಂ ಬಗ್ಗೆ ಕೋಳಿವಾಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರ್.ಶಂಕರ್ ಒಬ್ಬ ಅವಕಾಶವಾದಿ. ಅವಕಾ ಶಕ್ಕಾಗಿ ಯಾವಾಗ ಬೇಕಾದರೂ ಬದ ಲಾಗುತ್ತಾರೆ. ಆರ್.ಶಂಕರ್ ವಿರುದ್ಧ ಕೋಳಿವಾಡ ಅಸಮಾಧಾನ ವ್ಯಕ್ತಪಡಿಸಿ ದ್ದಾರೆ. ಸಿದ್ದರಾಮಯ್ಯ ಕೆಪೇಬಲ್ ಇದಾರೆ ಇಲ್ಲ ಅಂತ ಹೇಳಲಾರೆ. ಕೆಲವೊಂದು ಬಾರಿ ಸತ್ಯ ಸಂಗತಿಯನ್ನು ಹೇಳಲೇ ಬೇಕಾಗುತ್ತದೆ. ಮಾನಸಿಕವಾಗಿ ಬಹು ತೇಕ ನಾಯಕರು ಮಧ್ಯಂತರ ಚುನಾ ವಣೆ ಎದುರಿಸೋಕೆ ಸಿದ್ಧರಾಗಿದ್ದರೆ. ಬಹಳಷ್ಟು ಕಾಂಗ್ರೆಸಿಗರಿಗೆ ಮಧ್ಯಂತರ ಚುನಾವಣೆಯ ಬಗ್ಗೆಯೇ ಹೆಚ್ಚಿನ ಒಲವಿದೆ. ಬಿಜೆಪಿ ಸರ್ಕಾರ ರಚನೆ ಮಾಡಿದರೆ ನಮಗೆ ಬಹಳ ಒಳ್ಳೆಯದು. ವಿರೋಧ ಪಕ್ಷದಲ್ಲಿ ಕುಳಿತೇ ಜನರ ಮುಂದೆ ಹೋಗುತ್ತೇವೆ.

Translate »