ಮಹಿಳೆ ಸೇರಿ ಇಬ್ಬರ ದುರ್ಮರಣ
ಮೈಸೂರು

ಮಹಿಳೆ ಸೇರಿ ಇಬ್ಬರ ದುರ್ಮರಣ

December 18, 2018

ಮೈಸೂರು: ಕೆಎಸ್‌ಆರ್‌ಟಿಸಿ ಬಸ್ಸೊಂದು ಆಟೋಗೆ ಹಿಂದಿ ನಿಂದ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸೇರಿ ಇಬ್ಬರು ಸಾವನ್ನಪ್ಪಿದ್ದು, ಇತರ 9 ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಹೆಬ್ಬಲಗುಪ್ಪೆ ಗ್ರಾಮದ ಬಳಿ ಇಂದು ಮಧ್ಯಾಹ್ನ ನಡೆದಿದೆ.

ಹೆಚ್.ಡಿ. ಕೋಟೆ ತಾಲೂಕು ಹೆಬ್ಬಲ ಗುಪ್ಪೆ ಗ್ರಾಮದ ವೆಂಕಟರಮಣಶೆಟ್ಟಿ ಅವರ ಪತ್ನಿ ಶ್ರೀಮತಿ ವಾಣಿ(40) ಹಾಗೂ ಅದೇ ಗ್ರಾಮದ ನಾಗಾನಾಯ್ಕ(42) ಸಾವನ್ನಪ್ಪಿದವರು. ವಾಣಿ ಅವರು ದುರಂತ ನಡೆದ ಸ್ಥಳದಲ್ಲೇ ಸಾವನ್ನಪ್ಪಿದರೆ, ನಾಗಾನಾಯ್ಕ ಅವರು ಮೈಸೂರಿಗೆ ಕರೆತರುವಾಗ ಮಾರ್ಗ ಮಧ್ಯೆ ಅಸುನೀಗಿದರು ಎಂದು ಹೆಚ್.ಡಿ. ಕೋಟೆ ಠಾಣೆ ಸಬ್‍ಇನ್ಸ್‍ಪೆಕ್ಟರ್ ಅಶೋಕ್ ತಿಳಿಸಿದ್ದಾರೆ.

ಗಾಯಗೊಂಡಿರುವ ಚಿನ್ನ ಸ್ವಾಮಿ, ಅನುಪಮ, ಮಹದೇವನಾಯ್ಕ, ಪ್ರಮೀ ಳಮ್ಮ, ಸುಮಾ, ದಾಸಶೆಟ್ಟಿ, ಮಂಜುಳಾ ಸೇರಿ ದಂತೆ 9 ಮಂದಿಯನ್ನು ಮೈಸೂರಿನ ಕೆ.ಆರ್. ಆಸ್ಪತ್ರೆ, ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹೆಚ್.ಡಿ.ಕೋಟೆ ಹ್ಯಾಂಡ್‍ಪೋಸ್ಟ್‍ನಿಂದ ಹೆಬ್ಬಲಗುಪ್ಪೆ ಕಡೆಗೆ ಹೋಗುತ್ತಿದ್ದ ಆಟೋ (ಕೆಎ 45-0082)ಗೆ ಹಿಂದಿನಿಂದ ಬಂದ ಕೆಎಸ್‍ಆರ್‍ಟಿಸಿ (ಕೆಎ 09-ಎಫ್ 4121) ಬಸ್ ಹೆಬ್ಬಲಗುಪ್ಪೆ ಸಮೀಪ ಇಂದು ಮಧ್ಯಾಹ್ನ 3 ಗಂಟೆ ವೇಳೆಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ಆಟೋ ಹಿಂದೆ ಕುಳಿತಿದ್ದ ವಾಣಿ ಅವರು ಸ್ಥಳದಲ್ಲೇ ಮೃತ ಪಟ್ಟರು. ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಧಾವಿಸಿದ ಹೆಚ್.ಡಿ. ಕೋಟೆ ಠಾಣೆ ಸಬ್‍ಇನ್ಸ್‍ಪೆಕ್ಟರ್ ಅಶೋಕ್ ಹಾಗೂ ಸಿಬ್ಬಂದಿ, ಗಾಯಾಳುಗಳನ್ನು ಆಸ್ಪತ್ರೆಗೆ ಕರೆ ದೊಯ್ದು ದಾಖಲಿಸಿದರು. ಪ್ರಕರಣ ದಾಖ ಲಿಸಿಕೊಂಡಿರುವ ಪೊಲೀಸರು, ಎರಡೂ ವಾಹನಗಳನ್ನು ವಶಕ್ಕೆ ಪಡೆದು ಬಸ್ ಚಾಲಕ ನನ್ನು ವಿಚಾರಣೆಗೊಳಪಡಿಸಿದ್ದಾರೆ.

Translate »