ಪ್ರಚಾರಕ್ಕಾಗಿ ವಿಜಯೇಂದ್ರರ ಮೇಲೆ ಯತ್ನಾಳ್ ನಿರಂತರ ಆರೋಪ
ಮೈಸೂರು

ಪ್ರಚಾರಕ್ಕಾಗಿ ವಿಜಯೇಂದ್ರರ ಮೇಲೆ ಯತ್ನಾಳ್ ನಿರಂತರ ಆರೋಪ

February 19, 2021

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ಅಧ್ಯಕ್ಷ ಆರ್.ರಘು ಟ್ವೀಟ್
ಮೈಸೂರು,ಫೆ.18-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಹೆಸರು ಹೇಳಿದರೆ ಹೆಚ್ಚು ಪ್ರಚಾರ ದೊರೆಯುತ್ತದೆ ಎಂಬ ಭ್ರಮೆಯಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಪೋಲಕಲ್ಪಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ರಘು ಟ್ವೀಟ್ ಮಾಡಿದ್ದಾರೆ.

ಯತ್ನಾಳ್ ಅವರನ್ನುದ್ದೇಶಿಸಿ ಟ್ವೀಟ್ ಮಾಡಿರುವ ಅವರು, ಪಕ್ಷದಿಂದ ಉಚ್ಛಾಟಿಸಿಕೊಳ್ಳಲೇಬೇಕೆಂದು ನಿರ್ಧರಿಸಿದಂತೆ ವರ್ತಿಸುತ್ತಿರುವ ಯತ್ನಾಳ್ ಅವರೇ ಕಪೋಲಕಲ್ಪಿತ ಆರೋಪಗಳನ್ನು ಮಾಡುವುದು ಅತ್ಯಂತ ಸುಲಭ ಎಂದು ತಿಳಿದಿರುವಂತಿದೆ. ನಿಮ್ಮ ಮಾತುಗಳು ವ್ಯಕ್ತಿಗತ ತೇಜೋವಧೆಗೆ ಮೀಸಲಿ ಟ್ಟಂತಿದೆ. ಜನ ಮನದ ಹೃದಯ ಗೆದ್ದಿರುವ ಬಿ.ವೈ.ವಿಜಯೇಂದ್ರ ಅವರು ಹೆಸರು ಕೇಳುತ್ತಿದ್ದಂತೆಯೇ ದುಸ್ವಪ್ನ ಕಂಡಂತೆ ಬಡಬಡಿಸುತ್ತಿರುವಿರಲ್ಲಾ? ಎಂದು ಪ್ರಶ್ನಿಸಿದ್ದಾರೆ.

 

Translate »