ಕೊರೊನಾ ಪರಿಹಾರ ನಿಧಿಗೆ ರತ್ನಮ್ಮ ನಾರಾಯಣ್‍ರಾವ್‍ರಿಂದ 1.17 ಲಕ್ಷ ರೂ. ದೇಣಿಗೆ
ಮೈಸೂರು ಗ್ರಾಮಾಂತರ

ಕೊರೊನಾ ಪರಿಹಾರ ನಿಧಿಗೆ ರತ್ನಮ್ಮ ನಾರಾಯಣ್‍ರಾವ್‍ರಿಂದ 1.17 ಲಕ್ಷ ರೂ. ದೇಣಿಗೆ

May 1, 2020

ನಂಜನಗೂಡು, ಏ.30- ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ತೊಂದರೆಯೊ ಳಗಾಗಿರುವÀರಿಗೆ ಬಡವರಿಗೆ ನೆರವಾಗುವ ದೃಷ್ಟಿಯಿಂದ ನಗರದ ರತ್ನಮ್ಮ ನಾರಾ ಯಣ್‍ರಾವ್ ತಮ್ಮ ಅಂಚೆ ಕಚೇರಿಯಲ್ಲಿ ಟ್ಟಿದ ಎನ್.ಎಸ್.ಸಿ. ಉಳಿತಾಯ ನಿಧಿ ಯಲ್ಲಿ 40 ಸಾವಿರ ರೂ. ಪ್ರಧಾನಮಂತ್ರಿ ನಿಧಿಗೆ ಹಾಗೂ ಮುಖ್ಯಮಂತ್ರಿಗಳ ಕೊರೊನಾ ನಿಧಿಗೆ 77 ಸಾವಿರ ರೂ. ಡಿಡಿಯನ್ನು ತಹಸೀಲ್ದಾರ್ ಕೆ.ಎಂ. ಮಹೇಶ್‍ಕುಮಾರ್ ರವರಿಗೆ ನೀಡಿದರು. ಈ ಸಂದರ್ಭದಲ್ಲಿ ತಾಪಂ ಅಧಿಕಾರಿ ಶ್ರೀಕಂಠರಾಜೇ ಅರಸ್, ಸಮಾಜ ಸೇವಕ ಯು.ಎನ್. ಪದ್ಮನಾಭರಾವ್, ಹಾಗೂ ಯು.ಎನ್. ಬಾಲಕೃಷ್ಣರಾವ್ ರವರು ಇದ್ದರು.

Translate »