ರಾಜ್ಯದಲ್ಲಿ ಒಂದೇ ದಿನ 63 ಪಾಸಿಟಿವ್, ಸೋಂಕಿತರ ಸಂಖ್ಯೆ ಒಟ್ಟು 925ಕ್ಕೆ ಏರಿಕೆ
ಮೈಸೂರು

ರಾಜ್ಯದಲ್ಲಿ ಒಂದೇ ದಿನ 63 ಪಾಸಿಟಿವ್, ಸೋಂಕಿತರ ಸಂಖ್ಯೆ ಒಟ್ಟು 925ಕ್ಕೆ ಏರಿಕೆ

May 13, 2020

ಬೆಂಗಳೂರು, ಮೇ 12- ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಂಗಳವಾರ ಒಂದೇ ದಿನವೇ ಬರೋಬ್ಬರಿ 63 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 925ಕ್ಕೆ ಏರಿಕೆಯಾಗಿದೆ.

ಇನ್ನು ಲಾಕ್‍ಡೌನ್ ಸಡಿಲಗೊಳಿಸಿದ ಪರಿಣಾಮ ಮಹಾಮಾರಿ ಗ್ರೀನ್ ಝೋನ್ ಜಿಲ್ಲೆಗಳಿಗೂ ವ್ಯಾಪಿಸುತ್ತಿದ್ದು, ಇಂದು ಕೋಲಾರಕ್ಕೂ ವಕ್ಕರಿಸಿದೆ. ಇಂದು ಬಾಗಲಕೋಟೆಯಿಂದ 15, ದಾವಣಗೆರೆ 12, ಧಾರವಾಡ 9, ಹಾಸನ 5, ಕೋಲಾರದಲ್ಲಿ 5, ಬೆಂಗಳೂರು ನಗರದಲ್ಲಿ 4, ಗದಗದಲ್ಲಿ 3, ಯಾದಗಿರಿ 2, ಬೀದರ್ 2, ದಕ್ಷಿಣ ಕನ್ನಡ 2, ಕಲಬುರ್ಗಿ1, ಚಿಕ್ಕಬಳ್ಳಾಪುರ 1, ಬಳ್ಳಾರಿ1 ಹಾಗೂ ಮಂಡ್ಯದಲ್ಲಿ 1 ಪ್ರಕರಣ ವರದಿಯಾಗಿವೆ. ಯಾದಗಿರಿ, ಮಂಡ್ಯ, ಬಾಗಲಕೋಟೆ, ಧಾರವಾಡ, ಹಾಸನ, ಗದಗ, ಕೋಲಾರ , ದಾವಣ ಗೆರೆ ಜಿಲ್ಲೆಗಳಿಗೆ ಅಹಮದಾಬಾದ್, ಮುಂಬೈ, ಒಡಿಶಾ, ಚೆನ್ನೈಗೆ ಪ್ರಯಾಣ ಬೆಳೆಸಿದ ಹಿನ್ನೆಲೆಯುಳ್ಳವರಲ್ಲಿ ಸೋಂಕು ಪತ್ತೆಯಾಗಿದೆ.

ಯಾದಗಿರಿಗೆ ಅಹಮದಾಬಾದ್‍ನಿಂದ ಆಗಮಿಸಿದ 2, ಮಂಡ್ಯಕ್ಕೆ ಮುಂಬೈನಿಂದ ಆಗಮಿಸಿದ ಓರ್ವರು, ಬಾಗಲಕೋಟೆಯ ಅಹಮದಾ ಬಾದ್‍ಗೆ ಪ್ರಯಾಣ ಬೆಳೆಸಿದ ಹಿನ್ನೆಲೆಯುಳ್ಳ 15, ಧಾರವಾಡದ ಅಹಮದಾಬಾದ್‍ಗೆ ಪ್ರಯಾಣ ಬೆಳೆಸಿದ 12, ಹಾಸನದಲ್ಲಿ ಐವರು, ಗದಗದಲ್ಲಿ ಅಹಮ ದಾಬಾದ್‍ಗೆ ಪ್ರಯಾಣ ಬೆಳೆಸಿದ ಮೂವರು, ಕೋಲಾರಕ್ಕೆ ಚೆನ್ನೈ ಮತ್ತು ಒಡಿಶಾಗೆ ಪ್ರಯಾಣ ಬೆಳೆಸಿದ ಐವರು ಮತ್ತು ದಾವಣಗೆರೆಯಲ್ಲಿ ಅಹಮದಾಬಾದ್‍ಗೆ ಪ್ರಯಾಣ ಬೆಳೆಸಿದ 12 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 925 ತಲುಪಿದೆ. ಇವರ ಪೈಕಿ 433 ಜನರು ಗುಣಮುಖರಾಗಿದ್ದಾರೆ. 32 ಜನರು ಮೃತಪಟ್ಟಿದ್ದಾರೆ. ಉಳಿದ 460ರಲ್ಲಿ 449 ಜನರು ಚಿಕಿತ್ಸೆ ಪಡೆಯುತ್ತಿದ್ದು ಅವರ ಆರೋಗ್ಯ ಸ್ಥಿರವಾಗಿದೆ. 11 ಜನರನ್ನು ಐಸಿಯುನಲ್ಲಿ ಇರಿಸಲಾಗಿದೆ. ಮಂಗಳವಾರ 7 ಜನರು ಡಿಸ್ಚಾರ್ಜ್ ಆಗಿದ್ದಾರೆ. ಬಾಗಲಕೋಟೆಯಲ್ಲಿ 6, ವಿಜಯಪುರದಲ್ಲಿ ಒಬ್ಬರು ಬಿಡುಗಡೆ ಹೊಂದಿದ್ದಾರೆ. ಬೆಂಗಳೂರು ನಗರದಲ್ಲಿ 182 ಸೋಂಕಿತರಿದ್ದು, ಅತಿ ಹೆಚ್ಚು ಸೋಂಕಿತರಿರುವ ಜಿಲ್ಲೆಯಾಗಿದೆ. ಬೆಳಗಾವಿ 113 ಪ್ರಕರಣಗಳೊಂದಿಗೆ ಎರಡನೇ ಸ್ಥಾನ ದಲ್ಲಿದೆ. ಮೈಸೂರು 88 ಪ್ರಕರಣಗಳೊಂದಿಗೆ 3, ದಾವಣಗೆರೆ 83 ಪ್ರಕರಣಗಳೊಂದಿಗೆ ನಾಲ್ಕನೇ ಮತ್ತು ಕಲಬುರಗಿ 73 ಪ್ರಕರಣಗಳೊಂದಿಗೆ ಐದನೇ ಸ್ಥಾನದಲ್ಲಿದೆ.

Translate »