ನವದೆಹಲಿ, ಏ.18- ದೇಶದಲ್ಲಿ ದೃಢಪಟ್ಟಿರುವ ಒಟ್ಟು ಕೊರೊನಾ ವೈರಸ್ ಸೋಂಕು ಪ್ರಕರಣಗಳ ಪೈಕಿ 4,291 (ಶೇ.29.8) ದೆಹಲಿಯ ನಿಜಾ ಮುದ್ದೀನ್ನ ತಬ್ಲಿಘಿ ಜಮಾತ್ ಸಭೆಯಿಂದ ಹರ ಡಿರುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಈ ಪ್ರಕರಣಗಳು 23 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದ್ದಾಗಿವೆ.
ಅತೀ ಹೆಚ್ಚು ಕೊರೊನಾ ಪ್ರಕರಣಗಳು ದಾಖ ಲಾಗಿರುವ ತಮಿಳುನಾಡು (ಶೇ.84), ತೆಲಂಗಾಣ (ಶೇ.79), ದೆಹಲಿ (ಶೇ.63), ಉತ್ತರ ಪ್ರದೇಶ (ಶೇ.59) ಮತ್ತು ಆಂಧ್ರಪ್ರದೇಶದಂತಹ (ಶೇ. 61) ರಾಜ್ಯಗಳಲ್ಲೇ ತಬ್ಲಿಘಿ ಜಮಾತ್ ನಂಟಿನಿಂದ ಸೋಂಕು ಹರಡಿರುವವರ ಸಂಖ್ಯೆ ಹೆಚ್ಚಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ತಿಳಿಸಿದ್ದಾರೆ.
ಕಡಿಮೆ ಪ್ರಕರಣಗಳು ದಾಖಲಾಗಿರುವ ಕೆಲವು ರಾಜ್ಯಗಳಲ್ಲಿಯೂ ತಬ್ಲಿಘಿ ಜಮಾತ್ ಸಭೆಯಿಂದ ಸೋಂಕು ಹರಡಿರುವುದು ಕಂಡುಬಂದಿದೆ ಎಂದು ಹೇಳಿದ್ದಾರೆ. ಉದಾಹರಣೆಗೆ, ಅರುಣಾಚಲ ಪ್ರದೇಶದಲ್ಲಿ ಈವರೆಗೆ ದಾಖಲಾಗಿರುವ ಒಂದೇ ಒಂದು ಕೊರೊನಾ ಪ್ರಕರಣ ತಬ್ಲಿಘಿ ಜಮಾತ್ ಸಭೆಗೆ ಸಂಬಂಧಿಸಿದ್ದಾಗಿದೆ. ಅಸ್ಸಾಂನ 35ರ ಪೈಕಿ 32, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಗಳ 12ರಲ್ಲಿ 10 ಪ್ರಕರಣಗಳು ತಬ್ಲಿಘಿ ಜಮಾತ್ ಸಭೆಗೆ ಸಂಬಂಧಿಸಿದ್ದು ಎಂದು ಅಗರ್ವಾಲ್ ಅವರು ಮಾಹಿತಿ ನೀಡಿದ್ದಾರೆ.