ಮೈಮುಲ್ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವ ಅವ್ಯವಹಾರವೂ ನಡೆದಿಲ್ಲ
ಮೈಸೂರು

ಮೈಮುಲ್ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವ ಅವ್ಯವಹಾರವೂ ನಡೆದಿಲ್ಲ

May 28, 2020

ಮೈಸೂರು, ಮೇ 27(ಪಿಎಂ)- ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘ ಗಳ ಒಕ್ಕೂಟದ (ಮೈಮುಲ್) ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಶಾಸಕ ಸಾ.ರಾ.ಮಹೇಶ್ ಆರೋಪ ಶುದ್ಧ ಸುಳ್ಳು ಎಂದು ಮೈಮುಲ್‍ನ ನಾಮನಿರ್ದೇಶಿತ ನಿರ್ದೇ ಶಕ ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿ ಯೂರಪ್ಪ ಸಂಬಂಧಿ ಸಿ.ಅಶೋಕ್ ತಿಳಿಸಿದರು.

ಮೈಸೂರಿನ ಮಳಲವಾಡಿಯ ಮರಳ ಸಿದ್ದೇಶ್ವರಸ್ವಾಮಿ ದೇವ ಸ್ಥಾನದಲ್ಲಿ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯ ದರ್ಶಿ ಹಾಗೂ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಯಡಿಯೂರಪ್ಪ ಅಭಿಮಾನಿ ಬಳಗದ ವತಿಯಿಂದ ಬುಧವಾರ ಏರ್ಪಡಿಸಿದ್ದ ಬಡ ಕುಟುಂಬದ ಎರಡು ಜೋಡಿಗಳ ಸರಳ ವಿವಾಹ ದಲ್ಲಿ ಪಾಲ್ಗೊಂಡು, ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ನಾಮನಿರ್ದೇಶಿತ ನಿರ್ದೇಶಕನಾಗಿ ಸರ್ಕಾರದ ಆದೇಶದ ಅನ್ವಯ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಮೈಮುಲ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸಾ.ರಾ.ಮಹೇಶ್ ಶಾಸಕ ರಾಗಿ ತಮ್ಮ ಬಳಿಯಿರುವ ಮಾಹಿತಿಗಳ ಆಧಾರದಲ್ಲಿ ಮಾತ ನಾಡುತ್ತಿದ್ದಾರೆ. ರಾಜಕಾರಣದಲ್ಲಿ ಆರೋಪ-ಪ್ರತ್ಯಾರೋಪಗಳು ಸಹಜ. ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ. ಅಕ್ರಮ ಆರೋಪ ಸಂಬಂಧ ಸರ್ಕಾರದ ಮಟ್ಟದಲ್ಲಿ ತನಿಖೆಯಾಗುತ್ತಿದ್ದು, ಹೀಗಾಗಿ ಈ ಬಗ್ಗೆ ಹೆಚ್ಚು ಮಾತನಾಡುವುದು ಸರಿಯಲ್ಲ. ಆದರೆ ಅವರು ಮಾಡಿರುವ ಆರೋಪ ಸುಳ್ಳು ಎಂದು ಹೇಳಿದರು.

ಮುಖ್ಯಮಂತ್ರಿಗಳ ಸಂಬಂಧಿಗಳು ರಾಜಕಾರಣದಲ್ಲಿ ಇರ ಬಾರದು ಎಂದೇನಿಲ್ಲ. ಆದಾಗ್ಯೂ ನಾನು ರಾಜಕಾರಣದಲ್ಲಿ ದಿಢೀರ್ ಎಂದು ಉದ್ಭವಿಸಿಲ್ಲ. ಹತ್ತಾರು ವರ್ಷಗಳಿಂದ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದೇನೆ. ಜೊತೆಗೆ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಇಂದಿನ ಸರ್ಕಾರ ಹೈನುಗಾರರಿಗೆ ಹಾಲಿನ ಬೆಂಬಲ ಬೆಲೆ ಕೊಡಬೇಕಾದರೆ ನನ್ನ ಪಾತ್ರವೂ ಇದೆ. ನನ್ನ ಕೆಲಸ ವನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ. ಸಾ.ರಾ.ಮಹೇಶ್ ಅವರ ಬಳಿ ಅಕ್ರಮ ಸಂಬಂಧ ಆಡಿಯೋಗಳಿದ್ದರೆ ಮುಚ್ಚಿಟ್ಟು ಕೊಳ್ಳುವುದು ಬೇಡ ಎಂದು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

Translate »