ಮರದಿಂದ ಬಿದ್ದು ಬಾಲಕ ಸಾವು
ಮೈಸೂರು ಗ್ರಾಮಾಂತರ

ಮರದಿಂದ ಬಿದ್ದು ಬಾಲಕ ಸಾವು

April 8, 2020

ಹುಣಸೂರು, ಏ.7(ಕೆಕೆ)- ತೆಂಗಿನ ಮರದಿಂದ ಬಿದ್ದು ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ.

ನಗರದ ಗೋಕುಲ ರಸ್ತೆಯಲ್ಲಿರುವ ರಾಜೇಂದ್ರ ಟ್ರೇಡರ್ಸ್ ಮಾಲೀಕ ಹೆಚ್.ಬಿ.ರಾಜೇಂದ್ರ ಪುತ್ರ ಆರ್.ಮೋಹಿತ್(17) ಮೃತಪಟ್ಟ ಬಾಲಕ. ಈತ ಶನಿವಾರ ಬೆಳಿಗ್ಗೆ ಅಜ್ಜಿ ಮನೆ ಸಮೀಪದÀ ತೆಂಗಿನ ಮರದ ಗರಿ ಕೀಳಲು ಹೋಗಿ ಮಹಡಿ ಮೇಲಿನಿಂದ ಆಯತಪ್ಪಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಮೈಸೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾನೆ. ಮೃತರ ಅಂತ್ಯಕ್ರಿಯೆಯು ತಾಲೂಕಿನ ಹೊಸೂರು ಗ್ರಾಮದ ಅವರ ತೋಟದಲ್ಲಿ ನೆರವೇರಲಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

Translate »