ಹನೂರು, ಮಾ.20- ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಹನೂರು ಪೊಲೀಸರು ಬಂಧಿಸಿದ್ದಾರೆ. ಹನೂರು ಪೊಲೀಸ್ ಠಾಣಾ ಸರಹದ್ದಿನ ಜೊರೇದೊಡ್ಡಿ ಗ್ರಾಮದ ನಿವಾಸಿಗಳಾದ ವೆಂಕಟೇಶ್ (30), ರವಿ(32) ಬಂಧಿತ ಆರೋಪಿಗಳು. ಇವರಿಂದ 10 ಕೆಜಿ ಶ್ರೀಗಂಧ ತುಂಡುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ವಿವರ: ಆರೋಪಿಗಳಾದ ವೆಂಕಟೇಶ್ ಹಾಗೂ ರವಿ ಗುರುವಾರ ಸಂಜೆ ಚೀಲದಲ್ಲಿ 10 ಕೆಜಿ ಶ್ರೀಗಂಧದ ಮರದ ತುಂಡುಗಳನ್ನು ತುಂಬಿಕೊಂಡು ಬೇರೆಡೆ ಸಾಗಿಸಲು ಜೊರೇ ದೊಡ್ಡಿ ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಈ ವೇಳೆ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿರುವ…
ಮಹದೇಶ್ವರಬೆಟ್ಟದ ಗುಡ್ಡಗಾಡು ಹಳ್ಳಿ ರಸ್ತೆಗಳ ರಿಪೇರಿಗೆ ನಿರ್ಬಂಧ
March 21, 2020 ಸಂದೇಶ್ಗೆ ಸಚಿವ ಈಶ್ವರಪ್ಪ ವಿವರಣೆ ನಂ.ಗೂಡು ಕಂತೆ ಮಹದೇಶ್ವರಬೆಟ್ಟ ಪ್ರವಾಸಿ ಕೇಂದ್ರವಾಗಿಸಲು 33 ಲಕ್ಷ ರೂ. ಮೊದಲ ಕಂತಲ್ಲಿ ಕಾಮಗಾರಿ: ಸಿ.ಟಿ.ರವಿ ಬೆಂಗಳೂರು,ಮಾ.20-ಚಾಮರಾಜನಗರ ಜಿಲ್ಲೆ ಮಲೆಮಹದೇಶ್ವರಬೆಟ್ಟ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಮಲೆ ಮಹದೇಶ್ವರ ಬೆಟ್ಟದಿಂದ, ಇಂಡಿಗನತ್ತ, ಪಡಸಲನತ್ತ, ನಾಗಮಲೆ ಮಾರ್ಗ ಮದ್ದೂರು ರಸ್ತೆ, ಹಳೆ ಯೂರು ರಸ್ತೆ, ತುಳಸೀಕೆರೆ ರಸ್ತೆ, ಮಲೆ ಮಹದೇಶ್ವರ ಬೆಟ್ಟದಿಂದ ಕೊಕ್ಕ ಬೋರೆ, ತೋಕೆರೆ, ದೊಡ್ಡಾಣಿ ರಸ್ತೆ, ಅಣಗಳ್ಳಿ ದೊಡ್ಡಿ ಯಿಂದ ಬಿ.ಎಂ.ಹಳ್ಳಿ (ಗೂಳ್ಯ) ಮಾರ್ಗ ಎಲ್ಲೆಮಾಳ ರಸ್ತೆಗಳು ಹಾಳಾಗಿದ್ದು, ಇವು…
ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ ಜೀರ್ಣೋದ್ಧಾರ ಇನ್ನೆರಡು ತಿಂಗಳಲ್ಲಿ ಪೂರ್ಣ
March 20, 2020ಸಂದೇಶ್ಗೆ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭರವಸೆ ಬೆಂಗಳೂರು, ಮಾ.19- ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾಮಗಾರಿಗಳ ಪೈಕಿ ದೇವಾ ಲಯದ ಸುತ್ತ ನೆಲಹಾಸು ಕಾಮಗಾರಿಯು ಬಾಕಿ ಇದ್ದು, ಈ ಕಾಮಗಾರಿಗೆ ಪ್ರವಾಸೋದ್ಯಮ ಇಲಾಖೆ ಯಿಂದ 100 ಲಕ್ಷ ರೂ. ಅನುದಾನ ಮಜೂರಾಗಿದೆ. ಕಾಮಗಾರಿಗಳ ಹಿನ್ನೆಲೆಯಲ್ಲಿ ದೇವಾಲಯದ ಸುತ್ತಮುತ್ತ ಸ್ಥಳಾವಕಾಶ ಇಲ್ಲದಿರುವುದರಿಂದ, ದೇವಾ ಲಯದ ಪುನರ್ ಪ್ರತಿಷ್ಠಾಪನೆ ಆಗುವವರೆಗೂ ತಾತ್ಕಾಲಿಕ ವಾಗಿ ಚಿಕ್ಕಜಾತ್ರೆ ಉತ್ಸವವನ್ನು ಸ್ಥಗಿತಗೊಳಿಸ ಲಾಗಿದೆ ಎಂದು ಮುಜರಾಯಿ ಸಚಿವ ಕೋಟಾ…
ತೆರಕಣಾಂಬಿಯಲ್ಲಿ ಮಾಂಗಲ್ಯ ಸರ ಕಳವು
March 20, 2020ಗುಂಡ್ಲುಪೇಟೆ, ಮಾ.19 (ಸೋಮ್.ಜಿ)- ವಿಳಾಸ ಕೇಳುವ ನೆಪದಲ್ಲಿ ದುಷ್ಕರ್ಮಿಗಳು ಗೃಹಿಣಿಯೋರ್ವರ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಟೀ ಕ್ಯಾಂಟೀನ್ ಪಾಪಣ್ಣ ಎಂಬುವರ ಪತ್ನಿ ಬಸಮ್ಮಣ್ಣಿ ಚಿನ್ನದ ಮಾಂಗಲ್ಯ ಸರ ಕಳೆದುಕೊಂಡವರು. ವಿವರ: ಗುರುವಾರ ಮುಂಜಾನೆ ಬಸಮ್ಮಣ್ಣಿ ಅವರು ಮನೆ ಮುಂದೆ ಕೆಲಸ ಮಾಡುತ್ತಿದ್ದಾಗ ಕಪ್ಪು ಬಣ್ಣದ ಪಲ್ಸರ್ ಬೈಕ್ನಲ್ಲಿ ಬಂದ ಮೂವರು ದುಷ್ಕರ್ಮಿಗಳು ವಿಳಾಸ ಕೇಳುವ ನೆಪದಲ್ಲಿ ಬಸಮ್ಮಣ್ಣಿಯವರ ಕುತ್ತಿಗೆಯಲ್ಲಿದ್ದ 40 ಗ್ರಾಂ ತೂಕದ 1.20 ಲಕ್ಷ…
ಟ್ರಾಕ್ಟರ್ ಹರಿದು ಮಹಿಳೆ ಸಾವು
March 20, 2020ಹನೂರು, ಮಾ.19- ಮಹಿಳೆ ತಲೆ ಮೇಲೆ ಟ್ರಾಕ್ಟರ್ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಲ್ಲಿನ ಕೆಂಪಯ್ಯನಹಟ್ಟಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ. ತಾಲೂಕಿನ ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪಯ್ಯನಹಟ್ಟಿ ಗ್ರಾಮದ ನಿವಾಸಿ ವರದಮ್ಮ(70) ಸಾವನ್ನಪ್ಪಿದವರು. ವಿವರ: ಬುಧವಾರ ಸಂಜೆ ತಮ್ಮ ಸಂಬಂಧಿಕರ ಜೊತೆ ಬೈಕ್ನಲ್ಲಿ ತೆರಳುತ್ತಿದ್ದ ವರದಮ್ಮ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಹಿಂದೆ ಬರುತ್ತಿದ್ದ ಟ್ರಾಕ್ಟರ್ ಚಕ್ರ ವರದಮ್ಮನ ತಲೆ ಮೇಲೆ ಹರಿದ ಪಪರಿಣಾಮ ಆಕೆ ಸೃಳದಲ್ಲೇ ಸಾವನ್ನಪ್ಪಿದ್ದಾರೆ. ಈ…
ಅಂಬೇಡ್ಕರ್ ಭವನದಲ್ಲಿ ವಿಶೇಷ ನಿಗಾ ಘಟಕ ಸ್ಥಾಪನೆ
March 16, 2020ಚಾಮರಾಜನಗರ, ಮಾ.15(ಎಸ್ಎಸ್)- ಕೊರೊನಾ ವೈರಸ್ ಜಿಲ್ಲೆಗೆ ಕಾಲಿಡದಂತೆ ತಡೆಯಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಎಲ್ಲಾ ರೀತಿಯ ಮುಂಜಾ ಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ನಗರದ ಅಂಬೇಡ್ಕರ್ ಭವನದಲ್ಲಿ ವಿಶೇಷ ನಿಗಾ ಘಟಕ ಸ್ಥಾಪಿಸಲಾಗಿದೆ. ಕೊರೊನಾ ವೈರಸ್ ಪೀಡಿತರಿಗಾಗಿ ಜಿಲ್ಲಾಡಳಿತ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ 20 ಹಾಸಿಗೆಯುಳ್ಳ ವಿಶೇಷ ನಿಗಾ ಘಟಕ ಸ್ಥಾಪಿಸಿದೆ. ಅಲ್ಲದೇ, ಜಿಲ್ಲಾಸ್ಪತ್ರೆ ಮತ್ತು ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಜಿಲ್ಲೆಯ ಪ್ರಮುಖ ಖಾಸಗಿ ಆಸ್ಪತ್ರೆ ಗಳಲ್ಲೂ ಸಹ ಪ್ರತ್ಯೇಕ ಕೊಠಡಿ ಕಾಯ್ದಿರಿಸಲಾಗಿದೆ ಎಂದು ಜಿಲ್ಲಾ…
ಕೊರೊನಾ: ಬಂಡೀಪುರದಲ್ಲಿ ಸಫಾರಿ, ರೆಸಾರ್ಟ್ ಬಂದ್
March 16, 2020ಗುಂಡ್ಲುಪೇಟೆ,ಮಾ.15(ಸೋಮ್.ಜಿ)-ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಬಂಡೀ ಪುರದಲ್ಲಿ ಸಫಾರಿ ಸ್ಥಗಿತಗೊಳಿಸಿ, ಸುತ್ತಮು ತ್ತಲಿನ ರೆಸಾರ್ಟ್ಗಳನ್ನು ಬಂದ್ ಮಾಡಲಾಗಿದೆ. ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮಾ.15ರಿಂದ 22ರವರೆಗೆ ಬಂಡೀಪುರಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಿ ಶನಿವಾರ ಸಂಜೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೊರಡಿ ಸಿದ ಆದೇಶದ ಮೇರೆಗೆ ಬಂಡೀಪುರ ಸುತ್ತಮುತ್ತಲಿನ ರೆಸಾರ್ಟ್ಗಳಿಗೆ ಭೇಟಿ ನೀಡಿದ ತಹಶೀಲ್ದಾರ್ ನಂಜುಂಡಯ್ಯ ಖುದ್ದಾಗಿ ಪರಿಶೀಲಿಸಿದರು. ಬಂಡೀಪುರ ಸುತ್ತಲಿನ ಕಂಟ್ರಿ ಕ್ಲಬ್, ಸರಾಯ್, ವಿಂಡ್ ಫ್ಲವರ್, ಜಂಗಲ್ ಲಾಡ್ಜ್ ಸೇರಿದಂತೆ ಪ್ರತಿಷ್ಠಿತ…
ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ
March 16, 2020ಗುಂಡ್ಲುಪೇಟೆ,ಮಾ.15-ಇಲ್ಲಿನ ಪುರ ಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಸರ್ಕಾರ ಮೀಸಲಾತಿ ಪ್ರಕಟಿಸುತ್ತಿದ್ದಂತೆಯೇ ಆಕಾಂಕ್ಷಿ ಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಗುಂಡ್ಲುಪೇಟೆ ಪುರಸಭೆಯ ಒಟ್ಟು 23 ಸ್ಥಾನಗಳ ಪೈಕಿ ಬಿಜೆಪಿ 13, ಕಾಂಗ್ರೆಸ್ 8, ಪಕ್ಷೇತರ ಹಾಗೂ ಎಸ್ಡಿಪಿಐ ತಲಾ ಒಂದು ಸದಸ್ಯರನ್ನು ಹೊಂದಿವೆ. ಮೀಸಲಾತಿ ಅನ್ವಯ ಅಧ್ಯಕ್ಷ ಸ್ಥಾನ ಬಿಸಿಎಂ ಬಿ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರಿಸಲಾಗಿದೆ. ಇದರಿಂದ ಚುನಾ ವಣೆಯಲ್ಲಿ ಗೆಲುವು ಸಾಧಿಸಿದ್ದರೂ, ಯಾವುದೇ ಅಧಿಕಾರವಿಲ್ಲದೆ ಕೈಕಟ್ಟಿ ಕುಳಿತಿದ್ದ ಸದಸ್ಯ ರಲ್ಲಿ ರಾಜಕೀಯ ಚಟುವಟಿಕೆಗಳು ಚುರು…
ಚಾಮರಾಜನಗರ ನಗರಸಭೆ: ಗರಿಗೆದರಿದ ರಾಜಕೀಯ ಚಟುವಟಿಕೆ
March 14, 2020ಅಧ್ಯಕ್ಷ ಸ್ಥಾನಕ್ಕೆ ಕಸರತ್ತು: ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯೇ ಇಲ್ಲ ಚಾಮರಾಜನಗರ,ಮಾ.13-ಚಾ.ನಗರ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಸರ್ಕಾರ ಮೀಸಲಾತಿ ಪ್ರಕಟಿಸುತ್ತಿದ್ದಂತೆ ಜಿಲ್ಲೆಯ ಸ್ಥಳೀಯ ಸಂಸ್ಥೆಯಲ್ಲಿ ರಾಜ ಕೀಯ ಚಟುವಟಿಕೆಗಳು ಗರಿಗೆದರಿವೆ. ಚಾ.ನಗರ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ `ಬಿ’ ಮಹಿಳೆಗೆ ಮೀಸ ಲಿರಿಸಲಾಗಿದೆ. ಆದರೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ನಿಗದಿಯಾಗಿರುವು ದರಿದ ಅಭ್ಯರ್ಥಿಗಳ ನಡುವೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಶುರುವಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಯಾವ ಅಭ್ಯರ್ಥಿಯೂ ಇಲ್ಲದಿರು ವುದರಿಂದ ಹೊಸದಾಗಿ…
ಆತ್ಮವಿಶ್ವಾಸದಿಂದ ಜನಗಣತಿ ಕಾರ್ಯ ನಿರ್ವಹಿಸಿ: ಡಿಸಿ ಡಾ.ಎಂ.ಆರ್.ರವಿ
March 11, 2020ಚಾಮರಾಜನಗರ, ಮಾ.10- ದೇಶದ ಅಭಿವೃದ್ಧಿ ನೀಲಿನಕ್ಷೆಯಾಗಿರುವ ಜನ ಗಣತಿ ಕಾರ್ಯವನ್ನು ನಿಖರ, ಆತ್ಮವಿಶ್ವಾಸ ಹಾಗೂ ಸಮರ್ಥವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು. ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಮಂಗಳವಾರ ಜನಗಣತಿ ಕಾರ್ಯಾಚರಣೆ ನಿರ್ದೇಶ ನಾಲಯ ವತಿಯಿಂದ ಭಾರತ ಜನ ಗಣತಿ-2021ರ ಕುರಿತು ಕ್ಷೇತ್ರ ತರಬೇತು ದಾರರಿಗೆ ಆಯೋಜಿಸಿರುವ 5 ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಜನಗಣತಿಯನ್ನು ರಾಷ್ಟ್ರದ ಪ್ರಗತಿಯ ಸೂಚಕವಾಗಿ ಪರಿಗಣಿಸಲಾಗುತ್ತದೆ. ಈ ಅಂಕಿ ಅಂಶದ ಆಧಾರದಲ್ಲೇ ಯೋಜನೆ ಗಳನ್ನು…