ಯಳಂದೂರು: ತಾಲೂಕಿನ ಬಿಳಿಗಿರಿ ರಂಗನ ಬೆಟ್ಟದಲ್ಲಿ ಮೂರನೇ ಶ್ರಾವಣ ಶನಿವಾರದ ಅಂಗ ವಾಗಿ ಬಿಳಿಗಿರಿ ರಂಗನಾಥಸ್ವಾಮಿ ಮತ್ತು ಅಲಮೇಲು ಮಂಗಮ್ಮ ಅವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಾವಿರಾರು ಭಕ್ತರು ಬಂದು ಸ್ವಾಮಿಯ ದರ್ಶನ ಪಡೆದರು. ಸ್ವಾಮಿಗೆ ಪ್ರಿಯವಾದ ತುಳಸಿ ಮಾಲೆ ಅರ್ಪಿಸಿ ಇಷ್ಟರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು. ಬೆಳಿಗ್ಗೆಯಿಂದಲ್ಲೆ ಬೆಟ್ಟಕ್ಕೆ ಆಗಮಿಸಿದ ಭಕ್ತರು ಬಿಳಿಗಿರಿ ರಂಗನಾಥಸ್ವಾಮಿ, ಅಲ ಮೇಲು ಮಂಗಮ್ಮ ಅವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಸಂಸದ ಆರ್.ಧ್ರುವ ನಾರಾಯಣ ಬೆಟ್ಟಕ್ಕೆ ಬಂದು ಸ್ವಾಮಿಯ ದರ್ಶನ…
ಪರಿಶಿಷ್ಟ ಜಾತಿ ಪ್ರಗತಿ ಪತ್ತಿನ ಸಹಕಾರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ
September 2, 2018ಗುಂಡ್ಲುಪೇಟೆ: ತಾಲೂಕು ಪರಿಶಿಷ್ಟ ಜಾತಿ ಪ್ರಗತಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪಿ.ಪುಟ್ಟಸ್ವಾಮಿ ಮತ್ತು ಉಪಾಧ್ಯಕ್ಷರಾಗಿ ಅಣ್ಣಯ್ಯಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಖಾಲಿ ಇದ್ದ ಒಂದು ಮಹಿಳಾ ಮೀಸಲು ಸ್ಥಾನವನ್ನು ಹೊರತುಪಡಿಸಿ ಉಳಿದ ಸ್ಥಾನಗಳಿಗೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಪಡಗೂರು ಪಿ.ಪುಟ್ಟಸ್ವಾಮಿ, ಉಪಾ ಧ್ಯಕ್ಷರಾಗಿ ಪಟ್ಟಣದ ಅಣ್ಣಯ್ಯಸ್ವಾಮಿ ಮತ್ತು ನಿರ್ದೇಶಕರಾಗಿ ಟಿ.ಆಂಜನೇಯ, ಎಂ.ಸುರೇಶ್, ಬಿ.ಕೆ.ಬೊಮ್ಮಯ್ಯ, ಎ.ಸಿದ್ದರಾಜು, ಕೆ.ಸಿ.ಸಿದ್ದರಾಜು, ಮಲಿದಾಸಯ್ಯ, ಎ.ಸೋಮಶೇಖರಮೂರ್ತಿ, ವಿಷಕಂಠಮೂರ್ತಿ, ಎಂ.ಯಶವಂತ್, ಆರ್.ಶ್ರೀನಿವಾಸ್,…
ಅಂಚೆ ಪಾವತಿ ಬ್ಯಾಂಕ್ ಸೌಲಭ್ಯ ಸದ್ಬಳಕೆಗೆ ಸಲಹೆ
September 2, 2018ಬದನಗುಪ್ಪೆ: ‘ಭಾರತೀಯ ಅಂಚೆ ಪಾವತಿ ಬ್ಯಾಂಕ್ ಸೌಕರ್ಯವನ್ನು ಗ್ರಾಮಾಂತರ ಪ್ರದೇಶದ ಜನರು ಉಪಯೋಗಿಸಿಕೊಳ್ಳುವ ಮೂಲಕ ಆರ್ಥಿಕ ಅಭಿವೃದ್ಧಿ ಹೊಂದಬೇಕು’ ಎಂದು ತಿ.ನರಸೀಪುರ ಅಂಚೆ ನಿರೀಕ್ಷಕ ಎಂ.ಮನುಕುಮಾರ್ ಸಲಹೆ ನೀಡಿದರು. ಚಾಮರಾಜನಗರ ತಾಲೂಕಿನ ಬದನಗುಪ್ಪೆ ಅಂಚೆ ಕಚೇರಿ ಆವರಣದಲ್ಲಿ ಕೇಂದ್ರ ಸರ್ಕಾರ ನೂತನವಾಗಿ ಜಾರಿ ಮಾಡಿರುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕಿಂಗ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಕ್ಯೂಆರ್ ಕಾರ್ಡ್ ವಿತರಣೆ ಮಾಡಿ ಅವರು ಮಾತನಾಡಿದರು. ಕೇಂದ್ರ ಸರ್ಕಾರದ 164 ವರ್ಷಗಳ ಇತಿಹಾಸ ಹೊಂದಿರುವ ಭಾರತೀಯ ಅಂಚೆ ಇಲಾಖೆಯು ದೇಶಾ ದ್ಯಂತ…
ಚಾಮರಾಜನಗರ, ಕೊಳ್ಳೇಗಾಲ ನಗರಸಭೆ ಚುನಾವಣೆ: ಶಾಂತಿಯುತ ಮತದಾನ ಚಾಮರಾಜನಗರ ಶೇ. 72.03, ಕೊಳ್ಳೇಗಾಲ ಶೇ. 73.71
September 1, 2018ಚಾಮರಾಜನಗರ: ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆಯ 62 ಸದಸ್ಯ ಸ್ಥಾನಗಳ ಪೈಕಿ 60 ಸ್ಥಾನಕ್ಕೆ ಶುಕ್ರವಾರ ಬಹುತೇಕ ಶಾಂತಿ ಯುತ ಮತದಾನ ನಡೆಯಿತು. ಚಾಮರಾಜನಗರ ನಗರಸಭೆಯ ವ್ಯಾಪ್ತಿ ಯಲ್ಲಿ 4 ಸೇವಾ ಮತದಾರರು ಸೇರಿ ಒಟ್ಟು 53,714 ಮತದಾರರು ಇದ್ದರು. ಇವರಲ್ಲಿ 38,692 ಮತದಾರರು ಮತದಾನ ಮಾಡಿ ದರು. ಶೇ72.03ರಷ್ಟು ಮತದಾನ ನಡೆಯಿತು. ಕೊಳ್ಳೇಗಾಲ ನಗರಸಭೆಯ ವ್ಯಾಪ್ತಿಯಲ್ಲಿ 41,892 ಮತದಾರರು ಮತದಾನಕ್ಕೆ ಅರ್ಹರಾಗಿದ್ದರು. ಈ ಪೈಕಿ 30,871 ಮತ ದಾರರು ಹಕ್ಕು ಚಲಾಯಿಸಿದರು. ಶೇ.73.71ರಷ್ಟು ಮತದಾನ ನಡೆಯಿತು….
ಚುನಾವಣಾ ಬಹಿಷ್ಕಾರ ಕೈಬಿಟ್ಟ ನಿವಾಸಿಗಳು
September 1, 2018ಕೊಳ್ಳೇಗಾಲ: ರಸ್ತೆ ವ್ಯವಸ್ಥೆ ಕಲ್ಪಿಸುವ ನಿಮ್ಮ ಮನವಿಗೆ ನಾವು ಸ್ಪಂದಿಸುತ್ತೇವೆ. ನೀವೆಲ್ಲರೂ ಚುನಾವಣಾ ಬಹಿಷ್ಕಾರ ನಿರ್ಣಯ ಕೈಬಿಟ್ಟು ಪ್ರತಿಯೊಬ್ಬರು ಮತದಾನಕ್ಕೆ ಮುಂದಾಗಬೇಕು ಎಂದು ಚುನಾವಣಾ ರಿಟರ್ನಿಂಗ್ ಅಧಿಕಾರಿ ಪಾಂಡೆ ಹೇಳಿಕೆ ಸ್ಪಂದಿಸಿ ಇಲ್ಲಿನ ರಾಜೀವನಗರ ನಿವಾಸಿಗಳು ನಗರಸಭಾ ಚುನಾವಣಾ ಬಹಿಷ್ಕಾರ ಕೈಬಿಟ್ಟಿತು. ಇಲ್ಲಿನ ರಾಜೀವ್ ನಗರದ(ಬಸವೇಶ್ವರನಗರ) 5ನೇ ಕ್ರಾಸ್ ನಿವಾಸಿಗಳು ಇತ್ತೀಚೆಗೆ ಚುನಾವಣಾ ಅಯೋಗಕ್ಕೆ ತಮಗೆ ರಸ್ತೆ ವ್ಯವಸ್ಥೆ ಇಲ್ಲ. ಹಾಗಾಗಿ ರಸ್ತೆ ವ್ಯವಸ್ಥೆಗೆ ಸರ್ಕಾರ ಹಾಗೂ ಚುನಾವಣಾ ಅಯೋಗ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಆ.31ರಂದು ನಡೆಯುವ ನಗರಸಭೆ…
ಚಾಮರಾಜನಗರ 4ನೇ ವಾರ್ಡ್ನಲ್ಲಿ ಗಲಾಟೆ
September 1, 2018ಚಾಮರಾಜನಗರ: ಚಾಮರಾಜನಗರ ನಗರಸಭೆಯ 4ನೇ ವಾರ್ಡ್ನಲ್ಲಿ ಮತದಾನದ ಸಂದರ್ಭದಲ್ಲಿ ಸಣ್ಣ ಗಲಾಟೆ ನಡೆದ ಬಗ್ಗೆ ವರದಿ ಆಗಿದೆ. 4ನೇ ವಾರ್ಡ್ನ ವ್ಯಾಪ್ತಿಗೆ ಬರುವ ಗಾಳೀಪುರ ಬಡಾವಣೆಯಲ್ಲಿ ಇರುವ ಸರ್ಕಾರಿ ಉರ್ದು ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ಗಲಾಟೆ ನಡೆದು ನಾಲ್ವರು ಗಾಯಗೊಂಡಿದ್ದರು. ಬಡಾವಣೆಯ ಸುಬೇರ್, ಆಶಿಕ್, ಅಕ್ರಂ ಪಾಷ, ಸುಹೇಬ್ ಗಾಯಗೊಂಡವ ರಾಗಿದ್ದು, ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಾರ್ಡ್ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದವರ ಪರ…
ನಗರಸಭೆ ಚುನಾವಣೆ ಮತ ಎಣಿಕೆ ಹಿನ್ನಲೆ: ಸೆಪ್ಟೆಂಬರ್ 3ರಂದು ನಿಷೇಧಾಜ್ಞೆ
September 1, 2018ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆ ಚುನಾವಣೆ ಮತ ಎಣಿಕೆ ಕಾರ್ಯವು ಸೆಪ್ಟಂಬರ್ 3ರಂದು ನಡೆಯಲಿರುವ ಹಿನ್ನಲೆಯಲ್ಲಿ ಕೊಳ್ಳೇಗಾಲ ಮತ್ತು ಚಾಮರಾಜನಗರ ಟೌನ್ ವ್ಯಾಪ್ತಿಯಲ್ಲಿ ಸೆಪ್ಟಂಬರ್ 3ರಂದು ಬೆಳಿಗ್ಗೆ 6ರಿಂದ ಮಧ್ಯರಾತ್ರಿ 12ಗಂಟೆಯವರೆಗೆ (ಮತ ಎಣಿಕೆ ಕೇಂದ್ರದ ಸಮೀಪ ಮತ ಎಣಿಕೆ ಮುಕ್ತಾಯದವರೆಗೆ ಹೊರತುಪಡಿಸಿ) ಮೆರೆವಣಿಗೆ, ಸಭೆ, ಸಮಾರಂಭ, ಪಟಾಕಿ ಸಿಡಿಸುವುದು, ಗುಂಪುಗೂಡುವುದು ಹಾಗೂ ವಿಜಯೋತ್ಸವ ಆಚರಣೆ ಇತ್ಯಾದಿಗಳನ್ನು ಸಿ.ಆರ್.ಪಿ.ಸಿ ಕಲಂ144ರ ಅನ್ವಯ ನಿಷೇಧಿಸಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಆದೇಶ ಹೊರಡಿಸಿದ್ದಾರೆ. ಚಾಮರಾಜನಗರದ ಸರ್ಕಾರಿ ಪಾಲಿಟೆಕ್ನಿಕ್…
ಪೊಲೀಸ್ ಕರ್ತವ್ಯಕ್ಕೆ ಅಡ್ಡಿ: ಪತ್ರಕರ್ತನ ಬಂಧನ
September 1, 2018ಗುಂಡ್ಲುಪೇಟೆ: ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಪತ್ರಕರ್ತರಿಬ್ಬರ ಮೇಲೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾ ಗಿದ್ದು, ಓರ್ವನನ್ನು ಬಂಧಿಸಲಾಗಿದೆ. ಪಟ್ಟಣದ ಖಾಸಗಿ ಸುದ್ದಿ ವಾಹಿನಿಯ ವರದಿಗಾರರಾದ ಮಹಾದೇವಪ್ರಸಾದ್ ಅಲಿಯಾಸ್ ಸತೀಶ್ ಮತ್ತು ವೀರೇಂದ್ರ ಎಂಬುವರ ಮೇಲೆ ಪೆÇಲೀಸರ ಕರ್ತ ವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ. ತಾಲೂಕಿನ ಬಂಡೀಪುರ ಪೊಲೀಸ್ ಉಪ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೆÇಲೀಸ್ ಕಾನ್ಸ್ಟೇಬಲ್ ಕೇಶವನಾಯಕ್ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಕೇಶವನಾಯಕ್ ನೀಡಿದ ದೂರಿನನ್ವಯ ಪಟ್ಟಣ ಠಾಣೆ…
ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ: ಶಾಸಕ ನಿರಂಜನಕುಮಾರ್
September 1, 2018ಗುಂಡ್ಲುಪೇಟೆ: ಕ್ಷೇತ್ರದ ಅಭಿವೃದ್ಧಿ ಬಗ್ಗೆ ನನ್ನಲ್ಲಿ ಅನೇಕ ಕಲ್ಪನೆಗಳಿದ್ದು, ನೂತನ ಸರ್ಕಾರ ಅಧಿ ಕಾರಕ್ಕೆ ಬಂದ ನಂತರ ಮಳೆಯಿಂದ ಹಾನಿ ಗೊಳಗಾದ ಕೊಡಗು ಜಿಲ್ಲೆಯ ಪರಿಸ್ಥಿತಿ ಸುಧಾರಿಸಲು ಗಮನಹರಿಸಿದ್ದರಿಂದ ಇನ್ನೂ ಶಾಸಕರಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಅದು ಬಂದ ನಂತರ ಅಭಿವೃದ್ಧಿ ಪರ್ವ ಶುರುವಾಗಲಿದೆ ಎಂದು ಶಾಸಕ ಸಿ.ಎಸ್. ನಿರಂಜನಕುಮಾರ್ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆ ದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.24ರಂದು ಕಾಂಗ್ರೆಸ್ ಮುಖಂ ಡರು ಶಾಸಕರು ಆಯ್ಕೆಯಾಗಿ 100 ದಿನ ಕಳೆದರೂ ಯಾವುದೇ…
ಚಾಮರಾಜನಗರ, ಕೊಳ್ಳೇಗಾಲ ನಗರಸಭೆ ಚುನಾವಣೆ: ಇಂದು 233 ಅಭ್ಯರ್ಥಿಗಳ ಭವಿಷ್ಯಕ್ಕೆ ಮುದ್ರೆ
August 31, 2018ಚಾಮರಾಜನಗರ: ಚಾಮ ರಾಜನಗರ ಮತ್ತು ಕೊಳ್ಳೇಗಾಲ ನಗರಸಭೆಯ ಒಟ್ಟು 62 ಸದಸ್ಯ ಸ್ಥಾನಗಳ ಪೈಕಿ 60 ಸ್ಥಾನಗಳಿಗೆ ನಾಳೆ (ಆ.31) ಬೆಳಿಗ್ಗೆ 7 ಗಂಟೆಯಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಚಾಮರಾಜನಗರ ನಗರಸಭೆಯ 31 ಸ್ಥಾನ ಗಳಿಗೆ ಆಯ್ಕೆ ಬಯಸಿ ನಗರಸಭೆಯ ಹಾಲಿ ಅಧ್ಯಕ್ಷರು, ಇಬ್ಬರು ಮಾಜಿ ಮಾಜಿ ಅಧ್ಯಕ್ಷರು, ಹಾಲಿ ಉಪಾಧ್ಯಕ್ಷರು ಸೇರಿದಂತೆ ಒಟ್ಟು 132 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. 4 ಸೇವಾ ಮತದಾ ರರು ಸೇರಿದಂತೆ ಒಟ್ಟು 53,767 ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದು, ಅಭ್ಯರ್ಥಿಗಳ…










