ಚಾಮರಾಜನಗರ: ತಾಲೂಕಿನ ಪ್ರಸಿದ್ಧ ಜೈನ ಕ್ಷೇತ್ರ ಕನಕಗಿರಿಯಲ್ಲಿ ನಿರ್ವಾಣ ಕಲ್ಯಾಣ ಮಹೋತ್ಸದ ಪ್ರಯಕ್ತ ಮುಕುಟ ಸಪ್ತಮೀ ಮಹೋತ್ಸವ ಹಾಗೂ ಮೋಕ್ಷ ಕಲ್ಯಾಣ ಪೂಜೆಯು ಕನಕಗಿರಿಯ ಪರಮಪೂಜ್ಯಾ ಭುವನಕೀರ್ತಿಭಟ್ಟಾರಕ ಸ್ವಾಮೀಜಿ ಸಾನಿಧ್ಯದಲ್ಲಿ ನಡೆಯಿತು. ಪ್ರಾತಃಕಾಲ ಆಗ್ರೋಧಕ ಆನಯನ ದಿಂದ ಪ್ರಾರಂಭವಾಗಿ ಭಗವಾನ್ ಪಾಶ್ರ್ವ ನಾಥ ತೀರ್ಥಂಕರ ಮೂಲ ಪ್ರತಿಮೆಗೆ ಅಭಿಷೇಕ, ಮಹಾಪೂಜೆ, ಅಷ್ಟ ವಿದಾರ್ಚನೆ ಪೂಜೆ. ಮಾತೆ ಶ್ರೀ ಪದ್ಮಾವತಿ ಅಮ್ಮನ ವರು, ಶ್ರೀ ಜ್ವಾಲಾಮಾಲಿನಿ ಅಮ್ಮನವರಿಗೆ ಹಾಗೂ ಕೂಷ್ಯಾಂಡಿನಿ ಅಮ್ಮನವರಿಗೆ ಮತ್ತು ಶ್ರೀ ಬ್ರಹ್ಮದೇವರಿಗೆ ವಿಶೇಷ ಆಲಂಕಾರ…
ಕೆಆರ್ಎಸ್, ಕಬಿನಿಯಿಂದ ನೀರು ಬಿಡುಗಡೆ ಪ್ರವಾಹದಿಂದ ಗ್ರಾಮ ತೊರೆಯುತ್ತಿರುವ ಜನರು
August 19, 2018ದಾಸನಪುರ ಪ್ರವೇಶ ನಿಷೇಧ, ಗಂಜಿ ಕೇಂದ್ರಗಳಿಗೆ ಸಂತ್ರಸ್ತರ ಸ್ಥಳಾಂತರ, ಜನರ ಸಂಕಷ್ಟ ಆಲಿಸಿದ ಜನಪ್ರತಿನಿಧಿಗಳು ಕೊಳ್ಳೇಗಾಲ: ಎತ್ತನೋಡಿದರು ನೀರು. ಜೀವ ರಕ್ಷಣೆಗಾಗಿ ಗ್ರಾಮಗಳನ್ನು ತೊರೆದು ನೀರಿನ ನಡುವೆಯೇ ಮನೆ ಸಾಮಗ್ರಿಗಳು, ಜಾನುವಾರುಗಳನ್ನು ಸಾಗಿಸುತ್ತಿರುವ ಗ್ರಾಮಸ್ಥರು. ವಯೋವೃದ್ಧರನ್ನು ಕರೆದ್ಯೊಯುತ್ತಿರುವ ರಕ್ಷಣಾ ಸಿಬ್ಬಂದಿ…. -ಇದು ತಾಲೂಕಿನ ದಾಸನಪುರ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಕಂಡು ಬಂದ ದೃಶ್ಯ. ನಿರಂತರ ಮಳೆಯಿಂದ ಕೆಆರ್ಎಸ್, ಕಬಿನಿ ಜಲಾಶಯಗಳಿಂದ 3ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಡುಗಡೆ ಮಾಡಿದ ಹಿನ್ನಲೆಯಲ್ಲಿ ತಾಲೂಕಿನ ಹಲವು ಗ್ರಾಮಗಳು ಮುಳುಗಡೆಯಾಗಿದ್ದು, ಜೀವ…
ಚಾಮರಾಜನಗರ-ಕೊಳ್ಳೇಗಾಲ ನಗರಸಭೆ ಚುನಾವಣೆ: 62 ಸದಸ್ಯ ಸ್ಥಾನಗಳಿಗೆ 280 ಮಂದಿ ನಾಮಪತ್ರ ಸಲ್ಲಿಕೆ
August 19, 2018ಚಾ.ನಗರ-163 ಮಂದಿ, ಕೊಳ್ಳೇಗಾಲ 117 ಮಂದು ಉಮೇದುವಾರಿಕೆ ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆಯ ಒಟ್ಟು 62 ಸದಸ್ಯ ಸ್ಥಾನಗಳಿಗೆ ಆಯ್ಕೆ ಬಯಸಿ ಒಟ್ಟು 280 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಚಾಮರಾಜನಗರ ನಗರಸಭೆಯ 31 ಸ್ಥಾನಗಳಿಗೆ 163 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಕೊಳ್ಳೇಗಾಲ ನಗರಸಭೆಯ 31 ಸದಸ್ಯ ಸ್ಥಾನಗಳಿಗೆ ಆಯ್ಕೆ ಬಯಸಿ 117 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಲು ಶನಿವಾರ ಕೊನೆಯ ದಿನವಾಗಿತ್ತು. ಹೀಗಾಗಿ ಬಹುತೇಕ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದರು. ಇದುವರೆವಿಗೆ ಬೆರಳೆಣಿಕೆಯಷ್ಟು ಮಂದಿ…
ಪ್ರವಾಹ ಬಾಧಿತ ಬೆಳೆ ವಸತಿ ಹಾನಿ ಪರಿಹಾರಕ್ಕೆ ಕ್ರಮ
August 18, 2018ಚಾಮರಾಜನಗರ: ಕಾವೇರಿ ನದಿ ಪ್ರವಾಹದಿಂದ ಕೊಳ್ಳೇಗಾಲ ಭಾಗ ದಲ್ಲಿ ಉಂಟಾಗಿರುವ ಮನೆ, ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ತಿಳಿಸಿದರು. ತುಂಬಿ ಹರಿಯುತ್ತಿರುವುದರಿಂದ ಕಾವೇರಿ ನದಿಯಿಂದ ತಲೆದೋರಿರುವ ಪ್ರವಾಹ ಪೀಡಿತ ಕೊಳ್ಳೇಗಾಲದ ವಿವಿಧ ಗ್ರಾಮಗಳಿಗೆ ಇಂದು ನೀಡಿದ ಭೇಟಿ ನೀಡಿದ ಸಚಿವರು ಜನರ ಅಹವಾಲುಗಳನ್ನು ಆಲಿಸಿ ಪರಿಹಾರ ನೀಡುವ ಭರವಸೆ ನೀಡಿದರು. ಪ್ರವಾಹದಿಂದ ಬಾಧಿತವಾಗಿರುವ ಕೊಳ್ಳೇಗಾಲ ತಾಲೂಕಿನ ಮುಳ್ಳೂರು, ಹಳೆ ಹಂಪಾಪುರ , ದಾಸನ ಪುರ, ಹರಳೆ ಗ್ರಾಮಗಳಿಗೆ…
ಸ್ವಾತಂತ್ರ್ಯ ನಂತರ ಭಾರತ ಜಗತ್ತಿಗೆ ಮಾದರಿ
August 18, 2018ಚಾಮರಾಜನಗರ: ಸ್ವಾತಂತ್ರ್ಯ ಗಳಿಸಿದ ನಂತರ ಭಾರತ ದೇಶ ವಿಜ್ಞಾನ, ತಂತ್ರಜ್ಞಾನ, ಕೈಗಾರಿಕೆ, ಬಾಹ್ಯಾಕಾಶ, ಅಣು ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಜೀವ ವಿಜ್ಞಾನ, ಆಹಾರ ಭದ್ರತೆ ಮುಂತಾದ ಕ್ಷೇತ್ರ ಗಳಲ್ಲಿ ಅತ್ಯುನ್ನತ ಸಾಧನೆ ಮಾಡಿ ಜಗತ್ತಿಗೆ ಮಾದರಿಯಾಗಿದೆ ಎಂದು ಹಿಂದುಳಿದ ವರ್ಗ ಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದರು. ನಗರದ ಡಾ.ಅಂಬೇಡ್ಕರ್ ಕ್ರೀಡಾಂಗಣ ದಲ್ಲಿ ಬುಧವಾರ ನಡೆದ 72ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾ ರೋಹಣ ಮಾಡಿ ಮಾತನಾಡಿದ ಅವರು, ಏಳು ದಶಕಗಳಲ್ಲಿ…
ಜವಹರ್ ಎಜುಕೇಷನ್ ಟ್ರಸ್ಟ್ನಿಂದ ಸ್ವಾತಂತ್ರೋತ್ಸವ
August 18, 2018ಗುಂಡ್ಲುಪೇಟೆ: ಪಟ್ಟಣದಲ್ಲಿರುವ ಜವಹರ್ ಎಜುಕೇಷನ್ ಟ್ರಸ್ಟ್ ವತಿಯಿಂದ 72ನೇ ಸ್ವಾತಂತ್ರ ದಿನಾಚರಣೆಯನ್ನು ಸಡಗರದಿಂದ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಪಟೇಲ್ ಶಾಂತಪ್ಪ ಧ್ವಜಾರೋಹಣ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ತ್ಯಾಗ ಬಲಿದಾನಗಳ ಮೂಲಕ ಹಿರಿ ಯರು ತಂದು ಕೊಟ್ಟ ಸ್ವಾತಂ್ರತ್ಯವನ್ನು ನೆನಪಿಸಿಕೊಳ್ಳಬೇಕು. ದೇಶದ ಏಳಿಗೆಗಾಗಿ ಸದಾ ಸಿದ್ಧರಾಗಿರುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ಪಿ.ಸುನಿಲ್ ಮಾತ ನಾಡಿ, ದೇಶಕ್ಕಾಗಿ ಹೋರಾಟ ನಡೆಸಿದ ಮಹನೀಯರನ್ನು ನೆನೆದುಕೊಂಡು ದೇಶದ ಅಭಿವೃದ್ಧಿ ಮತ್ತು ದೇಶದ…
ಅಟಲ್ ಬಿಹಾರಿ ವಾಜಪೇಯಿಗೆ ಭಾವಪೂರ್ಣ ಶ್ರದ್ಧಾಂಜಲಿ
August 18, 2018ಚಾಮರಾಜನಗರ: ಅಟಲ್ ಬಿಹಾರಿ ವಾಜಪೇಯಿ ಅವರು ನಮ್ಮ ದೇಶದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ ಮೊದಲ ಪ್ರಧಾನ ಮಂತ್ರಿಯಾಗಿದ್ದರು. ಅವರು ಎಲ್ಲಾ ಪಕ್ಷದ ಮುಖಂಡರ ಜೊತೆ ಸ್ನೇಹದಿಂದ ವರ್ತಿಸುತ್ತಿದ್ದರು. ಇಂತಹ ಮಹಾಪುರುಷ ಜನ ಮೆಚ್ಚಿನ ರಾಜಕಾರಣಿಯನ್ನು ಕಳೆದು ಕೊಂಡು ನಾವು ಅನಾಥರಾಗಿದ್ದೇವೆ ಎಂದು ನಗರಸಭಾ ಮಾಜಿ ಸದಸ್ಯ ಸುದರ್ಶನ್ಗೌಡ ತಿಳಿಸಿದರು. ನಗರದ ನೃಪತುಂಗ ವೃತ್ತದಲ್ಲಿ ಮಾಜಿ ಪ್ರಧಾನ ಮಾಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು. ನಾನು ರಾಜಕೀಯ ಪ್ರವೇಶಕ್ಕೆ ಅವರ ಮಾರ್ಗದರ್ಶನವೇ ಕಾರಣ…
ಬಂಡೀಪುರದಲ್ಲಿ ಆನೆ ಮರಿ ಸಾವು
August 18, 2018ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾ ನವನದ ಅರಣ್ಯ ಪ್ರದೇಶದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ ಆನೆಮರಿಯೊಂದು ಸಾವಿ ಗೀಡಾಗಿರುವ ಘಟನೆ ಬಂಡೀಪುರದಲ್ಲಿ ನಡೆದಿದೆ. ಆ.16ರಂದು ಕೆಕ್ಕನಹಳ್ಳ ಚೆಕ್ ಪೆÇೀಸ್ಟ್ ಸಮೀಪದಲ್ಲಿ ಕಾಡಾನೆಗಳ ಗುಂಪಿನಿಂದ ಹೊರ ಬಂದ ಸುಮಾರು 9 ತಿಂಗಳ ಗಂಡು ಮರಿಯಾನೆಯು ಘೀಳಿಡುತ್ತಿತ್ತು. ಇದನ್ನು ಕಂಡ ಪ್ರವಾಸಿಗರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದು, ಕೂಡಲೇ ಸ್ಥಳಕ್ಕೆ ತೆರಳಿದ ಅರಣ್ಯ ಸಿಬ್ಬಂದಿಗಳು ಸಮೀಪದಲ್ಲಿ ತಾಯಿ ಇಲ್ಲದಿರುವುದನ್ನು ಕಂಡು ಮರಿಯನ್ನು ಬಂಡೀಪುರದ ಸಾಕಾನೆ ಶಿಬಿರಕ್ಕೆ ತಂದು ಆಹಾರ, ನೀರು ನೀಡಿ…
ಚಾಮರಾಜನಗರ ನಗರಸಭೆ: ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳು
August 18, 2018ಚಾಮರಾಜನಗರ: ಚಾಮರಾಜನಗರ ನಗರಸಭಾ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಲು ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಪ್ರಬಲ ಪೈಪೋಟಿ ಏರ್ಪಟಿದ್ದು, ಜೆಡಿಎಸ್ನಿಂದ ಸ್ಪರ್ಧಿಸಲು ಒಲವು ತೋರದೆ ಇರುವುದು ಕಂಡು ಬಂದಿದೆ. ಹಾಗೆಯೇ ಬಿಎಸ್ಪಿ ಮತ್ತು ಎಸ್ಡಿಪಿಐ ಕೆಲವು ವಾರ್ಡ್ಗಳಿಗೆ ಮಾತ್ರ ಸೀಮಿತ ವಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ 31 ವಾರ್ಡ್ನಿಂದ ಕಣಕ್ಕೆ ಇಳಿಸಿರುವ ಅಭ್ಯರ್ಥಿಗಳ ಪಟ್ಟಿ ‘ಮೈಸೂರು ಮಿತ್ರ’ನಿಗೆ ದೊರಕಿದೆ. ವಾರ್ಡ್ 1-ನೀಲಮ್ಮ (ಕಾಂಗ್ರೆಸ್), ಪುಟ್ಟಲಿಂಗಮ್ಮ (ಬಿಜೆಪಿ), ವಾರ್ಡ್ 2- ನೂರ್ ಆಯುಷಾ (ಕಾಂಗ್ರೆಸ್), ಗೌರಿ (ಬಿಜೆಪಿ), ವಾರ್ಡ್…
ಎ.ಎಸ್.ಪ್ರದೀಪ್ ನೇಮಕ
August 18, 2018ಚಾಮರಾಜನಗರ: ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿಯ ರಾಜ್ಯ ಕಾರ್ಯದರ್ಶಿಯಾಗಿ ಚಾಮರಾಜನಗರ ತಾಲೂಕಿನ ಆಲೂರು ಗ್ರಾಮದ ಎ.ಎಸ್. ಪ್ರದೀಪ್ ಅವರನ್ನು ನೇಮಕ ಮಾಡಿ ಸಮಿ ತಿಯ ರಾಜ್ಯಾಧ್ಯಕ್ಷರು ಆದೇಶ ಹೊರಡಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಅಸಂಘಟಿತ ಕಾರ್ಮಿ ಕರನ್ನು ಒಗ್ಗೂಡಿಸಿ, ಸಂಘಟಿಸಿ ಸದಸ್ಯರನ್ನಾಗಿ ಮಾಡಿ ಅವರ ಕಲ್ಯಾಣಕ್ಕೆ ಶ್ರಮಿಸುವಂತೆ ಆದೇಶದಲ್ಲಿ ರಾಜ್ಯಾಧ್ಯಕ್ಷ ಡಾ.ಶಾಂತ ವೀರನಾಯ್ಕ ತಿಳಿಸಿದ್ದಾರೆ. ಸಮಿತಿಯ ರಾಜ್ಯ ಕಾರ್ಯದರ್ಶಿ ಹುದ್ದೆಯ ಜೊತೆಗೆ ಅಸಂಘಟಿತ ಕಾರ್ಮಿಕರ ವಿಭಾಗದ ಮೈಸೂರು ಜಿಲ್ಲೆಯ ಸಂಘಟನೆಯ ಉಸ್ತುವಾರಿಯನ್ನು ಎ.ಎಸ್. ಪ್ರದೀಪ್ ಅವರಿಗೆ…