ಮಡಿಕೇರಿ: ಸಹಿತ ಅವಿ ವಾಹಿತ ಯುವಕನೋರ್ವ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿ ಹೊರವಲಯದ ಕೂಟು ಹೊಳೆಯಲ್ಲಿ ನಡೆದಿದೆ. ಮಡಿಕೇರಿ ರಾಣಿಪೇಟೆ ನಿವಾಸಿ ಸಮೀ ವುಲ್ಲಾ (32) ಆತ್ಮಹತ್ಯೆ ಮಾಡಿಕೊಂಡವ ನಾಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಲಾ ಮಕ್ಕಳನ್ನು ವ್ಯಾನ್ನಲ್ಲಿ ಶಾಲೆಗೆ ಕರೆದೊ ಯ್ಯುವ ಕೆಲಸ ಮಾಡುತ್ತಿದ್ದ ಸಮೀವುಲ್ಲಾ, ಮಂಗಳವಾರ ಬೆಳಗ್ಗೆ 9 ಗಂಟೆ ಸಮಯದಲ್ಲಿ ಮಾರುತಿ ವ್ಯಾನ್ ಅನ್ನು ವೇಗವಾಗಿ ಕೂಟುಹೊಳೆ ಜಲಾ ಶಯದ ಪಂಪ್ಹೌಸ್ ಹಿಂದಿನ ರಸ್ತೆ ಯಲ್ಲಿ ಚಾಲಿಸಿಕೊಂಡು…
ಸಂಪಾಜೆಯಲ್ಲಿ ಹೆಚ್.ಡಿ.ರೇವಣ್ಣಗೆ ಸ್ವಾಗತ
June 20, 2018ಮಡಿಕೇರಿ: ಕೊಡಗಿನಲ್ಲಿ ಸುರಿ ಯುತ್ತಿರುವ ಭಾರಿ ಮಳೆ ಹಾಗೂ ನೆರೆ ಹಾವಳಿಯಿಂದ ಸಾರ್ವಜನಿಕರ ಆಸ್ತಿ ಪಾಸ್ತಿ ನಷ್ಟಗೊಂಡಿರುವ ಬಗ್ಗೆ ಚರ್ಚೆ ನಡೆಸಲು ಆಗಮಿಸಿದ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರನ್ನು ಕೊಡಗಿನ ಗಡಿ ಭಾಗ ಸಂಪಾಜೆಯಲ್ಲಿ ಜೆಡಿಎಸ್ನ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ನೇತೃ ತ್ವದಲ್ಲಿ ಬರಮಾಡಿಕೊಳ್ಳಲಾಯಿತು. ಜಿಲ್ಲೆಯಲ್ಲಿ ಈ ಬಾರಿ ಸುರಿದ ಭಾರಿ ಮಳೆಯಿಂದ ರೈತರಿಗಾಗಿರುವ ಅಪಾರ ನಷ್ಟವನ್ನು ಕೂಡಲೇ ಕೊಡಿಸಿಕೊಡುವಂತೆ, ರೈತರ ಕೃಷಿ ಸಾಲಮನ್ನಾ ವಿಚಾರದಲ್ಲಿ ಸರ್ಕಾರದ ಗಮನ ಸೆಳೆಯಲು ಮನವಿ ಮಾಡಲಾಯಿತು. ಆನೆ-ಮಾನವ ಸಂಘರ್ಷ…
ಸಂಪೂರ್ಣ ಸಾಲ ಮನ್ನಾಕ್ಕೆ ಆಗ್ರಹಿಸಿ ಡಿಸಿ ಕಛೇರಿ ಮುಂದೆ ರೈತರ ಪ್ರತಿಭಟನೆ: ಮನವಿ ಸ್ವೀಕರಿಸಿದ ಕಂದಾಯ ಸಚಿವ ದೇಶಪಾಂಡೆ
June 19, 2018ಮಡಿಕೇರಿ: ಸಂಪೂರ್ಣ ಸಾಲ ಮನ್ನಾದ ವಿಚಾರದಲ್ಲಿ ರಾಜ್ಯ ಸರ್ಕಾರ ಅನುಸರಿಸುತ್ತಿರುವ ವಿಳಂಬ ನೀತಿಯನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಮೇ.30ರಂದು ರೈತ ಸಂಘಟನೆಗಳೊಂ ದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ 15 ದಿನಗಳೊಳಗೆ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡುವ ಮೂಲಕ ರೈತರ ಸಾಲ ಮನ್ನಾ ಮಾಡುವು ದಾಗಿ ಹೇಳಿದ್ದರು. ಆದರೆ ಇದೀಗ…
ಒಂಟಿ ಸಲಗ ದಾಳಿ: ಮಹಿಳೆ ಕೈಮುರಿತ
June 19, 2018ನಾಪೋಕ್ಲು: ಒಂಟಿ ಸಲಗದ ದಾಳಿಗೆ ಸಿಲುಕಿದ ಕಾರ್ಮಿಕ ಮಹಿಳೆ ಯೋರ್ವರ ಕೈ ಮುರಿದಿದ್ದು, ಅದೃಷ್ಟವ ಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಾಪೋಕ್ಲು ಸಮೀಪದ ಅಡಿಯರ ಕಾಲೋನಿಯ ಬೋಳ್ಕ ಎಂಬುವರ ಪತ್ನಿ ಚುಬ್ಬಿ ಗಾಯಗೊಂಡಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚುಬ್ಬಿ ಕಕ್ಕಬ್ಬೆ ಯವಕಪಾಡಿ ಗ್ರಾಮದ ಹೋಂ ಸ್ಟೇಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮನೆ ಹಿಂದಿರುಗುವ ವೇಳೆ ಒಂಟಿಸಲಗ ದಾಳಿ ನಡೆಸಿದೆ. ಆನೆ ದಾಳಿಯಿಂದ ಗಾಬರಿ ಗೊಂಡ ಚುಬ್ಬಿ ಕಿರುಚಿಕೊಂಡು ಓಡಲೆ ತ್ನಿಸುವ ವೇಳೆ ಸೊಂಡಿಲನ್ನು ಬೀಸಿದ ಒಂಟಿ ಸಲಗ ಆಕೆಯ ಕೈಯನ್ನು…
ಪೆರುಂಬಾಡಿ-ಮಾಕುಟ್ಟ ರಸ್ತೆ ಪರಿಶೀಲನೆ
June 19, 2018ವಿರಾಜಪೇಟೆ: ಕಳೆದ ವಾರ ಸುರಿದ ಧಾರಾಕಾರ ಮಳೆಯಿಂದ ಹಾನಿಯಾಗಿ, ಸಾರಿಗೆ ಸಂಪರ್ಕ ಕಡಿತಗೊಂಡಿ ರುವ ಅಂತರರಾಜ್ಯ ಹೆದ್ದಾರಿ ಪೆರುಂಬಾಡಿ-ಮಾಕುಟ್ಟ ರಸ್ತೆಗೆ ಕಂದಾಯ ಸಚಿವರಾದ ಆರ್.ವಿ.ದೇಶಪಾಂಡೆ ಅವರು ಸೋಮ ವಾರ ಭೇಟಿ ನೀಡಿ ಪರಿಶೀಲನೆ ಮಾಡಿದರು. ಅತಿವೃಷ್ಟಿಯಿಂದಾಗಿ ಪೆರುಂಬಾಡಿ-ಮಾಕುಟ್ಟ ಮಾರ್ಗದ ರಸ್ತೆಯಲ್ಲಿ ಸುಮಾರು 30 ಕಡೆಗಳಲ್ಲಿ ಬರೆ ಕುಸಿತ ಹಾಗೂ ಮರಗಳು ಉರುಳಿ ದೊಡ್ಡ ಅನಾಹುತವಾಗಿದ್ದು, ಇದನ್ನು ತುರ್ತಾಗಿ ಸರಿಪಡಿಸಲು ಸಂಬಂಧಪಟ್ಟ ಸಚಿವರ ಜೊತೆ ಚರ್ಚಿಸಲಾಗು ವುದು ಎಂದು ಸಚಿವರು ತಿಳಿಸಿದರು. ಈಗಾಗಲೇ ಜಿಲ್ಲಾಡಳಿತಕ್ಕೆ ಪ್ರಕೃತಿ ವಿಕೋಪಕ್ಕಾಗಿ 10…
ಮಳೆ ಹಾನಿ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ನೀಡಲು ಸೂಚನೆ
June 19, 2018ಮಡಿಕೇರಿ: ಕಾನೂನು ನಿಯಮ ಮಿತಿಯೊಳಗೆ ಮಾನವೀಯತೆ ಕಾಯ್ದುಕೊಂಡು ಮಳೆ ಹಾನಿಯಿಂದ ಸಂತ್ರಸ್ಥರಾದವರಿಗೆ ಸಮರ್ಪಕ ಪರಿಹಾರ ವಿತರಿಸಬೇಕು. ಕಚೇರಿಯೊಳಗೆ ಗಡಿಯಾರ ನೋಡುತ್ತ ಕೆಲಸ ಮಾಡುವ ಬದಲು, ಮಳೆಹಾನಿ ಪ್ರದೇಶಗಳಿಗೆ ತೆರಳಿ, ವಾಸ್ತವಾಂಶ ಅರಿತು ಸರಕಾರಕ್ಕೆ ವರದಿ ನೀಡುವಂತೆ ರಾಜ್ಯ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಮಡಿಕೇರಿಯ ಜಿಲ್ಲಾಡಳಿತ ಭವನದಲ್ಲಿ ಮಳೆಹಾನಿ ಮತ್ತು ಅದಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆ ಗಳ ಪ್ರಗತಿ ಪರಿಶೀಲನೆ ನಡೆಸಿದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ…
ಕೊಡಗಿನಲ್ಲಿ ನಕ್ಸಲ್ ಶಂಕೆ: ಕೊಡಗು ಗಡಿಗ್ರಾಮಗಳಲ್ಲಿ ಪೊಲೀಸರಿಂದ ವ್ಯಾಪಕ ಶೋಧ
June 18, 2018ಮಡಿಕೇರಿ: ಪುಷ್ಪಗಿರಿ ಬೆಟ್ಟ ಶ್ರೇಣಿವ್ಯಾಪ್ತಿಯ ಸುಳ್ಯ-ಕುಕ್ಕೆ ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ ಶಂಕಿತ ನಕ್ಸಲರ ಚಲನ-ವಲನ ಕಂಡು ಬಂದಿದ್ದು, ನಾಗರಿಕರು ಆತಂಕ ಗೊಂಡಿದ್ದಾರೆ. ಈ ಬಗ್ಗೆ ಕೊಡಗು ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಜಿಲ್ಲಾ ಪೊಲೀಸರಿಂದ ಪರಿಶೀಲನೆ ಕಾರ್ಯ ನಡೆದಿದೆ. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ, ಸತೀಶ್ ನೇತೃತ್ವದಲ್ಲಿ ವಿರಾಜಪೇಟೆ ಆರ್ಜಿ ಗ್ರಾಮದ ನಕ್ಸಲ್ ನಿಗ್ರಹ ದಳದ ಸಿಬ್ಬಂದಿಗಳು ಪುಷ್ಪಗಿರಿ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಗ್ರಾಮಸ್ಥರಿಂದ ನಕ್ಸಲ್ ಚಲನ-ವಲನಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಜೂ.14ರ ರಾತ್ರಿ 7.45 ಸಮಯದಲ್ಲಿ ಸುಳ್ಯದ…
ವರದಕ್ಷಿಣೆ ಕಿರುಕುಳ: ಗೃಹಿಣ ಆತ್ಮಹತ್ಯೆ
June 18, 2018ಸೋಮವಾರಪೇಟೆ: ಗಂಡನ ವರದಕ್ಷಿಣೆ ಕಿರುಕುಳದಿಂದ ವಿವಾಹಿತ ಮಹಿಳೆಯೋರ್ವರು ಆತ್ಮಹತ್ಯೆಗೆ ಶರಣಾಗಿ ರುವ ಘಟನೆ ಸಮೀಪದ ಹೊಸತೋಟ ಗ್ರಾಮದಲ್ಲಿ ಸಂಭವಿಸಿದೆ. ಕಾಗಡಿಕಟ್ಟೆ ಗ್ರಾಮದ ಯೂಸೂಫ್ ಎಂಬುವರ ಮಗಳು ರಂಶಿನಾ(22) ಆತ್ಮ ಹತ್ಯೆ ಮಾಡಿಕೊಂಡವರು. ಹೊಸತೋಟ ಗ್ರಾಮದ ಮಹಮ್ಮದ್ ಎಂಬುವರ ಪುತ್ರ ರಶೀದ್(28) ಆರೋಪಿಯಾಗಿದ್ದಾನೆ. 2015ರಲ್ಲಿ ರಂಶಿನಾ ಅವರನ್ನು ರಶೀದ್ಗೆ ಮದುವೆ ಮಾಡಿಕೊಡಲಾಗಿತ್ತು. ನಂತರ ಕುಟುಂಬದಲ್ಲಿ ಒಡಕು ಮೂಡಿದ್ದು, 2016ರ ಮಾರ್ಚ್ನಲ್ಲಿ ಕಾಗಡಿಕಟ್ಟೆ ಹಾಗೂ ಹೊಸತೋಟ ಜಮಾಅತ್ನಲ್ಲಿ ಪ್ರಕರಣವನ್ನು ಸರಿಪಡಿಲಾಗಿತ್ತು. ನಂತರ ಪತಿಯ ಕಿರುಕುಳ ಜಾಸ್ತಿಯಾಗಿ, ಪ್ರಕರಣ ಪಟ್ಟಣದ ಠಾಣೆಯಲ್ಲಿ…
ವಿರಾಜಪೇಟೆ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಇಳಿಮುಖ
June 18, 2018ವಿರಾಜಪೇಟೆ: ವಿರಾಜಪೇಟೆ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಇಳಿ ಮುಖಗೊಂಡಿದ್ದು, ಬೇತ್ರಿ ಗ್ರಾಮದಲ್ಲಿ ಕಾವೇರಿ ಹೊಳೆ ನೀರಿನ ಪ್ರಮಾಣ ಕಡಿಮೆಯಾಗಿದೆ. ಮಳೆ ಕಡಿಮೆಯಾದ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ ಬಿಸಿಲಿನ ವಾತಾವರಣ ಕಂಡು ಬಂತು. ತಾಲೂಕು ತಹಸಿಲ್ದಾರ್ ಆರ್.ಗೋವಿಂದ ರಾಜು ಅವರು ತಾಲೂಕಿನಾದ್ಯಂತ ಪ್ರವಾಸ ಕೈಗೊಂಡಿದ್ದು, ಜಲಾವೃತ ಗೊಂಡ ಗದ್ದೆ, ತೋಡುಗಳಲ್ಲಿಯೂ ನೀರು ಇಳಿಮುಖ ವಾಗುತ್ತಿದೆ. ಕೊಡಗು-ಕೇರಳ ಗಡಿ ಪ್ರದೇಶ ವಾದ ಮಾಕುಟ್ಟ ಅಂತಾರಾಜ್ಯ ಹೆದ್ದಾರಿ ಯು ಹಾನಿಗೊಳಗಾದ ಸಂದರ್ಭ ಉಪ ಆಯುಕ್ತ ರಮೇಶ್ ಕೋನರೆಡ್ಡಿ ಅವ ರೊಂದಿಗೆ ಭೇಟಿ…
ಬೀಟೆ ಮರ ಸಾಗಾಣೆ: ಇಬ್ಬರು ಆರೋಪಿ ಬಂಧನ ಮತ್ತೋರ್ವ ಆರೋಪಿ ಪರಾರಿ
June 18, 2018ಮಡಿಕೇರಿ: ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯಿಂದ ಮಡಿ ಕೇರಿ ಕಡೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಬೀಟೆಮರದ ನಾಟಾಗಳನ್ನು ಕುಶಾಲ ನಗರ ವಲಯ ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕಂಬಿಬಾಣೆ ಅಂದಗೋವೆಯಿಂದ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನದಲ್ಲಿ ಅಂದಾಜು ಎರಡು ಲಕ್ಷ ಮೌಲ್ಯದ ಮೂರು ಬೀಟೆನಾಟಾಗಳನ್ನು ಸಾಗಿಸಲಾಗುತ್ತಿತ್ತು. ಈ ಬಗ್ಗೆ ಗ್ರಾಮಸ್ಥರಿಂದ ಖಚಿತ ಮಾಹಿತಿ ಪಡೆದ ಕುಶಾಲನಗರ ವಲಯ ಅರಣ್ಯಾ ಧಿಕಾರಿಗಳು ಮತ್ತು ಸಿಬ್ಬಂದಿಗಳು, ಸಿನಿ ಮೀಯ ಮಾದರಿಯಲ್ಲಿ ಕಂಬಿಬಾಣೆ ಬಳಿ ಮರ ಸಾಗಿಸುತ್ತಿದ್ದ ವಾಹನ ವನ್ನು ಅಡ್ಡಗಟ್ಟಿದ್ದಾರೆ. ಆದರೆ ಮರಗಳ್ಳರು…