ವಿರಾಜಪೇಟೆ: ವಿರಾಜ ಪೇಟೆ ಪಟ್ಟಣದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಅದರೊಂದಿಗೆ ಧನಗಳನ್ನು ಸಾಕಿದವರು ಕೊಟ್ಟಿಗೆಯಲ್ಲಿ ಕಟ್ಟದೆ ಬೀದಿ ಯಲ್ಲಿ ಬಿಡುವುದರಿಂದ ವಾಹನ ಸಂಚಾ ರಕ್ಕೆ ಮತ್ತು ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ರಚನ್ ಮೇದಪ್ಪ ಹೇಳಿದಾಗ ಇದರ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳು ವಂತೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ. ಜೀವನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಪೆರುಂಬಾಡಿ ಘನತ್ಯಾಜ್ಯ ನಿರ್ವಾಹಣೆ ಘಟಕದಲ್ಲಿ ಘನತ್ಯಾಜ್ಯ ನಿರ್ವಾಹಣೆಯ ಕಾಮಾಗಾರಿಯನ್ನು ಪ್ರಾರಂಭಿಸುವ…
ಮಲ್ಲಳ್ಳಿ ಜಲಪಾತದಲ್ಲಿ ಸೆಲ್ಫಿ ಗೀಳಿಗೆ ಯುವಕ ನೀರುಪಾಲು
June 23, 2018ಸೋಮವಾರಪೇಟೆ: ಮಲ್ಲಳ್ಳಿ ಜಲಪಾತಕ್ಕೆ ವಿಹಾರಕ್ಕಾಗಿ ತೆರಳಿದ್ದ ಯುವಕನೋರ್ವ ಸೆಲ್ಫಿ ತೆಗೆದುಕೊಳ್ಳುತ್ತಿ ದ್ದಾಗ ಕಾಲುಜಾರಿ ಪ್ರಪಾತಕ್ಕೆ ಬಿದ್ದು ದುರ್ಮರಣಕ್ಕೀಡಾದ ಘಟನೆ ಶುಕ್ರವಾರ ಸಂಜೆ 5 ಗಂಟೆಗೆ ಸಂಭವಿಸಿದೆ. ಕುಶಾಲನಗರ ಸುಂದರನಗರದ ನಿವಾಸಿ ನಾಗರಾಜು ಎಂಬುವವರ ಪುತ್ರ ಮನೋಜ್ (24) ಸೆಲ್ಫಿ ಗೀಳಿಗೆ ಬಲಿಯಾದ ಯುವಕ ಮೃತ ಮನೋಜ್ ತನ್ನ ಐವರು ಸ್ನೇಹಿತರುಗಳಾದ ಅರುಣ, ಅನಿಲ್ ಕುಮಾರ್, ಮಂಜು, ವಿಜಯಕುಮಾರ್, ಜಾನ್ಸನ್ ಎಂಬುವವರೊಂದಿಗೆ ಶಾಂತಳ್ಳಿಯ ಕುಮಾರಲಿಂಗೇ ಶ್ವರ ಸಮೂದಾಯ ಭವನದಲ್ಲಿ ಶುಕ್ರವಾರ ವಿವಾಹ ಸಮಾರಂಭಕ್ಕೆಂದು ಆಗಮಿಸಿ, ನಂತರದಲ್ಲಿ ಸಂಜೆ ಸುಮಾರು…
ದಕ್ಷಿಣ ಕೊಡಗಿನಲ್ಲಿ ನಿಲ್ಲದ ಹುಲಿ ಆರ್ಭಟ
June 23, 2018ಗೋಣಿಕೊಪ್ಪಲು: ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿ ಮುಂದುವರೆ ದಿದ್ದು ರೈತರ ಜಾನುವಾರುಗಳನ್ನು ಪ್ರತಿ ದಿನ ಕೊಂದು ಹಾಕುತ್ತಿದೆ. ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನೆಮ್ಮಲೆ ಗ್ರಾಮದ ನಿವಾಸಿ ಕುಂಞಂಗಡ ಸಿದ್ದು, ಸಿದ್ದಾರ್ಥ ಎಂಬುವರ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿದ್ದ ಗಬ್ಬ ಹಸುವಿನ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ. ಈ ಹಸು ಇನ್ನು ಮೂರು ದಿನದಲ್ಲಿ ಈ ಹಸುವು ಕರುವನ್ನು ಹಾಕುವ ಸಂಭ ವವಿತ್ತು. ಮುಂಜಾನೆಯ ವೇಳೆಯಲ್ಲಿ ಲಗ್ಗೆ ಯಿಡುವ ಹುಲಿಯು ಹಸುಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಮುಂಜಾನೆ ಕೊಟ್ಟಿಗೆಗೆ…
ಕೊಡವರ ಸಮಗ್ರ ಕುಲಶಾಸ್ತ್ರ ಅಧ್ಯಯನ ಪುನರಾರಂಭಿಸಲು ಸಿಎನ್ಸಿ ಆಗ್ರಹ
June 23, 2018ಮಡಿಕೇರಿ: ಕೊಡವ ಬುಡ ಕಟ್ಟು ಜನಾಂಗವನ್ನು ಸಂವಿಧಾನದ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸುವ ಸಲು ವಾಗಿ, ಕೊಡವರ ಸಮಗ್ರ ಕುಲಶಾಸ್ತ್ರ ಅಧ್ಯ ಯನವನ್ನು ಮುಂದುವರಿಸಲು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ, ಸಿಎನ್ಸಿ ಸಂಘ ಟನೆಯ ಪದಾಧಿಕಾರಿಗಳು ಕೊಡವ ಜನಾಂಗಕ್ಕೆ ಸಂವಿಧಾನ ಭದ್ರತೆ ಒದಗಿಸು ವಂತೆ ಒತ್ತಾಯಿಸಿದರು. ಕೊಡವ ಕುಲ ವನ್ನು ಸಂವಿಧಾನದ ಶೆಡ್ಯೂಲ್ 340-342ರ ಅಡಿಯಲ್ಲಿ ಸೇರ್ಪಡೆ ಮಾಡುವ ಮೂಲಕ ಆಂತರಿಕ ರಾಜಕೀಯದ ಸ್ವಯಂ…
ಮನೆ ಮೇಲೆ ಉರುಳಿ ಬಿದ್ದ ಆಟೋ
June 23, 2018ಮಡಿಕೇರಿ: ಗೂಡ್ಸ್ ಆಟೋವೊಂದು ಬ್ರೇಕ್ ವಿಫಲಗೊಂಡು ಮನೆ ಯೊಂದರ ಮೇಲೆ ಉರುಳಿ ಬಿದ್ದಿದ್ದು, ಮನೆಯೊಳಗಿದ್ದ ತಾಯಿ ಮಗು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಮಡಿಕೇರಿಯಲ್ಲಿ ನಡೆದಿದೆ. ನಗರದ ತ್ಯಾಗರಾಜ್ ಕಾಲೋನಿಯ ಹಫೀಜ್ ಎಂಬವರಿಗೆ ಸೇರಿದ ಮನೆಯ ಮೇಲೆ ಆಟೋ ಉರುಳಿ ಬಿದ್ದ ಪರಿಣಾಮ ಮನೆಗೆ ಹಾನಿಯಾಗಿದೆ. ಹಫೀಜ್ ಅವರ ಮನೆಯಲ್ಲಿ ಕವಿತಾ ಎಂಬವರು ಬಾಡಿಗೆಗೆ ವಾಸವಿದ್ದು, ಗುರು ವಾರ ರಾತ್ರಿ 9.30ರ ಸಮಯ ತನ್ನ ಮಗುವಿನೊಂದಿಗೆ ಗಾಢ ನಿದ್ರೆಯಲ್ಲಿದ್ದರು. ಈ ಸಂದರ್ಭ ಮನೆಯ ಮೇಲೆ ಗೂಡ್ಸ್…
ಕಾಡಾನೆ ದಾಳಿಗೆ ಎತ್ತು ಬಲಿ
June 23, 2018ನಾಪೋಕ್ಲು : ಮನೆ ಸಮೀ ಪದ ಕೊಟ್ಟಿಗೆಯಲ್ಲ್ಲಿ ಕಟ್ಟಿಹಾಕಿದ್ದ ಎತ್ತನ್ನು ಆನೆ ತುಳಿದು ಕೊಂದು ಹಾಕಿ ರುವ ಘಟನೆ ಸಮೀಪದ ಚೇಲಾವರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬಟ್ಟಚೆರುವಂಡ ಚಿಟ್ಟಿಯಪ್ಪ ತಮ್ಮ ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ ಎತ್ತನ್ನು ರಾತ್ರಿ ಕಟ್ಟಿ ಹಾಕಿದ್ದರು. ರಾತ್ರಿ ಅಲ್ಲಿಗೆ ಆಗಮಿಸಿದ ಕಾಡಾನೆಗಳು ಎತ್ತನ್ನು ತುಳಿದು ಕೊಂದು ಹಾಕಿವೆ. ರಾತ್ರಿ ಮೂರು ಗಂಟೆಯ ವೇಳೆಗೆ ಒಂದು ಮರಿಯಾನೆ ಸೇರಿದಂತೆ ಎರಡು ಕಾಡಾನೆಗಳು ಹಸುವನ್ನು ಅನತಿದೂರದವರೆಗೆ ಎಳೆದುಕೊಂಡು ಹೋಗಿ ತುಳಿದು ಸಾಯಿಸಿವೆ. ಸುತ್ತಮುತ್ತ ಲಿನ ಕಾಫಿ…
ಚಿಕ್ಲಿಹೊಳೆ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುವಂತೆ ರೈತರ ಒತ್ತಾಯ
June 23, 2018ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಚಿಕ್ಲಿಹೊಳೆ ಜಲಾಶಯದಿಂದ ಎಡದಂಡೆ,ಬಲದಂಡೆಯ ನಾಲೆಗಳಿಗೆ ನೀರು ಹರಿಸುವಂತೆ ಅಲ್ಲಿನ ಅಚ್ಚುಕಟ್ಟುದಾರರು ಒತ್ತಾಯಿಸಿದ್ದಾರೆ. ಗದ್ದೆಗಳಲ್ಲಿ ಭತ್ತದ ಸಸಿಮಡಿ ತಯಾರಿಸಲು ಸಮಯವಾಗಿದ್ದು ಜಲಾಶಯವು ಭರ್ತಿಯಾಗಿದ್ದು, ಹೆಚ್ಚುವರಿ ನೀರು ಕಾವೇರಿ ನದಿ ಸೇರುತ್ತಿದೆ. ಈ ನೀರನ್ನು ನಾಲೆಗೆ ಬಿಟ್ಟು, ರೈತರ ಜಮೀನುಗಳಿಗೆ ಹರಿಯುವಂತೆ ಮಾಡಬೇಕಾಗಿ ಈ ವಿಭಾಗದ ರೈತರು ಒತ್ತಾಯಿಸಿ ದ್ದಾರೆ. ಅಲ್ಲದೆ ಜೂನ್ ತಿಂಗಳು ಮುಗಿಯಲು ಬಂದರೂ ನಾಲೆಯೊ ಳಗಿನ ಗಿಡಗಂಟಿ ಗಳನ್ನು ಇಲಾಖಾ ವತಿಯಿಂದ ನಡೆಸದಿರುವುದಕ್ಕೆ ಇಲಾಖಾಧಿಕಾರಿಗಳಿಗೂ ಮತ್ತು ಶಾಸಕರಾದ ಅಪ್ಪಚ್ಚು ರಂಜನ್ ಅವರಿಗೆ…
ನಿಯಮಬಾಹಿರವಾಗಿ ಕರಿಮೆಣಸು ಆಮದು: ಬೆಂಗಳೂರಲ್ಲಿ ಬೆಳೆಗಾರರ ಮೌನ ಪ್ರತಿಭಟನೆ
June 22, 2018ಮಡಿಕೇರಿ : ವಾಣಿಜ್ಯ ಸಚಿವಾಲಯದ ನಿಯಮಗಳನ್ನು ಮೀರಿ ವಿದೇಶದಿಂದ ಕರಿಮೆಣಸು ಆಮದು ವಹಿವಾಟು ಕೈಗೊಳ್ಳುತ್ತಿರುವ ಬೆಂಗಳೂರಿನ ಇಂಡಿಯಾ ಪ್ರಾಡಕ್ಟ್ ಸಂಸ್ಥೆಯ ವಿರುದ್ಧ ಕರಿಮೆಣಸು ಬೆಳೆಗಾರರ ಸಮನ್ವಯ ವೇದಿಕೆ ವತಿಯಿಂದ ಸಾಂಕೇತಿಕ ಪ್ರತಿಭಟನೆ ಕೈಗೊಂಡು ನಿಯಮಬಾಹಿರ ವಹಿವಾಟು ನಡೆಸದಂತೆ ಎಚ್ಚರಿಸಲಾಯಿತು. ಕರಿಮೆಣಸು ಬೆಳೆಗಾರರ ಸಮನ್ವಯ ಸಮಿತಿ ಆಶ್ರಯದಲ್ಲಿ ಬೆಂಗಳೂರಿನ ಕೊಡವ ಸಮಾಜದಲ್ಲಿ ಜಮಾವಣೆಗೊಂಡ ಬಳಿಕ ದಕ್ಷಿಣ ಭಾರತದ ವಿವಿಧ ಬೆಳೆಗಾರ ಸಂಘಟನೆಗಳಾದ ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್, ಕರ್ನಾಟಕ ಬೆಳೆಗಾರರ ಒಕ್ಕೂಟ, ಹಾಸನ ಜಿಲ್ಲಾ ಬೆಳೆಗಾರರ ಸಂಘ, ಕೊಡಗು ಜಿಲ್ಲಾ…
ವಿರಾಜಪೇಟೆಯಲ್ಲಿ ವಿಶ್ವ ಯೋಗ ದಿನಾಚರಣೆ
June 22, 2018ವಿರಾಜಪೇಟೆ: ಯೋಗ ಎಂಬುದು ಋಷಿ ಮುನಿಗಳ ಕಾಲದಿಂದಲೂ ನಡೆದುಕೋಂಡು ಬರುತ್ತಿದೆ. ಯೋಗಭ್ಯಾಸಕ್ಕೆ ಜಾತಿ ಭೇದಗಳಿಲ್ಲ. ವಯೋಮಿತಿ ಎಂದು ಅರಮೇರಿ ಕಳಂಚೇರಿ ಮಠಾಧೀಶ ಶಾಮತ ಮಲ್ಲಿಕಾರ್ಜುನಸ್ವಾಮಿ ಹೇಳಿದರು. ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಅಪ್ಪಯ್ಯಸ್ವಾಮಿ ರಸ್ತೆಯಲ್ಲಿರುವ ಕಾವೇರಿ ಆಶ್ರಮದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಂತ ಮಲ್ಲಿ ಕಾರ್ಜುನ ಸ್ವಾಮಿ, ಇಂದಿನ ಒತ್ತಡದ ಬದುಕಿನಲ್ಲಿ ಸಮಸ್ಯೆಗಳೇ ಹೆಚ್ಚಾಗಿದ್ದು, ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯವನ್ನು ವೃದ್ಧಿಸಿಕೊಳುವ ಮೂಲಕ ಯೋಗದಿಂದ ಮಾನಸಿಕ ರೋಗಗಳನ್ನು ನಿವಾರಿಸಿಕೊಳ್ಳಬಹುದಾಗಿದೆ ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆ…
ಮಡಿಕೇರಿಯಲ್ಲಿ ವಿಶ್ವ ಯೋಗ ದಿನಾಚರಣೆ ರೋಗ ಬರದಂತೆ ತಡೆಯಲು ಯೋಗ ಸಹಕಾರಿ: ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅಭಿಮತ
June 22, 2018ಮಡಿಕೇರಿ: ರೋಗ ಬರ ದಂತೆ ಮುನ್ನೆಚ್ಚರಿಕೆ ವಹಿಸಲು ಯೋಗ ಸಹಕಾರಿಯಾಗಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಆಯುಷ್ ಇಲಾಖೆ ವತಿಯಿಂದ, ಎಸ್ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಉಜಿರೆ ಯೋಗ ವಿಜ್ಞಾನಗಳ ಮಹಾವಿದ್ಯಾಲಯ, ಭಾರ ತೀಯ ರೆಡ್ಕ್ರಾಸ್ ಸಂಸ್ಥೆ, ಭಾರತೀಯ ವಿದ್ಯಾಭವನ, ಯೋಗ ಭಾರತಿ, ನೆಹರು ಯುವ ಕೇಂದ್ರ ಇವರ ಸಹಕಾರದಲ್ಲಿ ಗುರುವಾರ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿಶ್ವದ 192 ಕ್ಕೂ ಹೆಚ್ಚು…