ನಿಯಮಬಾಹಿರವಾಗಿ ಕರಿಮೆಣಸು ಆಮದು: ಬೆಂಗಳೂರಲ್ಲಿ ಬೆಳೆಗಾರರ ಮೌನ ಪ್ರತಿಭಟನೆ
ಕೊಡಗು

ನಿಯಮಬಾಹಿರವಾಗಿ ಕರಿಮೆಣಸು ಆಮದು: ಬೆಂಗಳೂರಲ್ಲಿ ಬೆಳೆಗಾರರ ಮೌನ ಪ್ರತಿಭಟನೆ

June 22, 2018

ಮಡಿಕೇರಿ :  ವಾಣಿಜ್ಯ ಸಚಿವಾಲಯದ ನಿಯಮಗಳನ್ನು ಮೀರಿ ವಿದೇಶದಿಂದ ಕರಿಮೆಣಸು ಆಮದು ವಹಿವಾಟು ಕೈಗೊಳ್ಳುತ್ತಿರುವ ಬೆಂಗಳೂರಿನ ಇಂಡಿಯಾ ಪ್ರಾಡಕ್ಟ್ ಸಂಸ್ಥೆಯ ವಿರುದ್ಧ ಕರಿಮೆಣಸು ಬೆಳೆಗಾರರ ಸಮನ್ವಯ ವೇದಿಕೆ ವತಿಯಿಂದ ಸಾಂಕೇತಿಕ ಪ್ರತಿಭಟನೆ ಕೈಗೊಂಡು ನಿಯಮಬಾಹಿರ ವಹಿವಾಟು ನಡೆಸದಂತೆ ಎಚ್ಚರಿಸಲಾಯಿತು.

ಕರಿಮೆಣಸು ಬೆಳೆಗಾರರ ಸಮನ್ವಯ ಸಮಿತಿ ಆಶ್ರಯದಲ್ಲಿ ಬೆಂಗಳೂರಿನ ಕೊಡವ ಸಮಾಜದಲ್ಲಿ ಜಮಾವಣೆಗೊಂಡ ಬಳಿಕ ದಕ್ಷಿಣ ಭಾರತದ ವಿವಿಧ ಬೆಳೆಗಾರ ಸಂಘಟನೆಗಳಾದ ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್, ಕರ್ನಾಟಕ ಬೆಳೆಗಾರರ ಒಕ್ಕೂಟ, ಹಾಸನ ಜಿಲ್ಲಾ ಬೆಳೆಗಾರರ ಸಂಘ, ಕೊಡಗು ಜಿಲ್ಲಾ ಬೆಳೆಗಾರರ ಸಂಘ, ಬೇಲೂರು ಬೆಳೆಗಾರರ ಸಂಘ, ಮೂಡಿಗೆರೆ ಜಿಲ್ಲಾ ಕಾಫಿ ಬೆಳೆಗಾರರ ಸಂಘ, ಅರೆಹಳ್ಳಿ ಬೆಳೆಗಾರರ ಸಂಘ, ಗೋಣಿ ಬೀಡು ಬೆಳೆ ಗಾರರ ಸಂಘ, ಹಾನ್ಬಲ್ ಬೆಳೆಗಾರರ ಸಂಘ, ಬ್ಲಾಕ್ ಗೋಲ್ಡ್ ಲೀಗ್, ಕೊಡಗು ಜಿಲ್ಲಾ ಬೆಳೆಗಾರರ ಸಂಘ, ಮಲೆನಾಡು ಸಂಘ ಸೇರಿದಂತೆ ಕರಿಮೆಣಸು ಬೆಳೆಯುವ ಕರ್ನಾಟಕದ ವಿವಿಧ ಜಿಲ್ಲೆಗಳ ನೂರಾರು ಬೆಳೆಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂ ಡರು. ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ರವಿ ಉತ್ತಪ್ಪ, ಉಪಾಧ್ಯಕ್ಷ ಮೀರಾ ಜಲಜ ಕುಮಾರ್, ಕಾರ್ಯದರ್ಶಿ ರವಿ ಸುಬ್ಬಯ್ಯ ಸೇರಿದಂತೆ ಪದಾಧಿಕಾರಿಗಳು ಬೆಳೆಗಾರರ ಹೋರಾಟಕ್ಕೆ ಬೆಂಬಲ ನೀಡಿದ್ದರು.

ದೇ ಸಂದರ್ಭ ಇಂಡಿಯಾ ಪ್ರಾಡಕ್ಟ್ ಸಂಸ್ಥೆಗೆ ತೆರಳಿ ಅದರ ನಿರ್ದೇಶಕ ಮಿಲನ್ ಷಾ ಅವರೊಂದಿಗೆ ಮಾತನಾಡಿದ ಕರಿ ಮೆಣಸು ಬೆಳೆಗಾರರ ಸಮನ್ವಯ ಸಮಿತಿ ಪ್ರಮುಖರಾದ ಪ್ರದೀಪ್ ಪೂವಯ್ಯ, ಕೆ.ಕೆ. ವಿಶ್ವನಾಥ್, ಕೈಬುಲೀರ ಹರೀಶ್, ನಂದಾ ಬೆಳ್ಯಪ್ಪ, ಗೋವಿಂದಶೆಟ್ಟಿ, ಹರೀಶ್ ಪೂವಯ್ಯ, ಕೇಶವ ಕೆಂಜಿಗೆ, ನಂದಿನೆರ ವಂಡ ದಿನೇಶ್ ಭಾರತದ ಉತ್ತಮ ದರ್ಜೆಯ ಕರಿಮೆಣಸಿನ ಬೆಲೆ ಕುಸಿತಕ್ಕೆ ಪ್ರಮುಖ ಕಾರಣವಾಗಿರುವ ಕರಿಮೆಣಸು ಆಮದನ್ನು ವಾಣಿಜ್ಯ ಸಚಿವಾಲಯ ಕೆಲ ವೊಂದು ನಿಯಮಗಳ ಮೂಲಕ ತಡೆ ಯೊಡ್ಡಿದ್ದರೂ ತಮ್ಮ ಸಂಸ್ಥೆ ನಿಯಮ ಗಳನ್ನೂ ಮೀರಿ ವಿದೇಶಗಳಿಂದ ಕರಿ ಮೆಣಸು ಆಮದು ಮಾಡಿಕೊಳ್ಳುತ್ತಿದೆ. ಇದರಿಂದ ಕರಿಮೆಣಸು ಬೆಳೆಗೆ ಸೂಕ್ತ ಬೆಲೆ ದೊರಕದಂತಾಗಿ ಬೆಳೆಗಾರರ ಅಸಮಧಾ ನಕ್ಕೆ ಕಾರಣವಾಗಿದೆ. ಇಂಥ ಪ್ರವೃತ್ತಿ ಯನ್ನು ಮುಂದುವರೆಸದಂತೆ ಎಚ್ಚರಿಸಿದರು.

ಈ ಸಂದರ್ಭ ಬೆಳೆಗಾರ ಪ್ರಮುಖರು ಕೇಳಿದ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರ ನೀಡುವಲ್ಲಿ ಮಿಲನ್ ಷಾ ವಿಫಲ ರಾದರು. ತಾವು ಈ ವಿಚಾರವನ್ನು ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿಡುವುದಾಗಿ ಮತ್ತು ಬೆಳೆಗಾರರಿಗೆ ಪೂರಕವಾಗಿ ಸ್ಪಂದಿ ಸುವುದಾಗಿ ಬೆಳೆಗಾರರ ನಿಯೋಗಕ್ಕೆ ಮಿಲನ್ ಷಾ ಭರವಸೆ ನೀಡಿದರು.

ಕರ್ನಾಟಕದ ವಿವಿಧ ಕರಿಮೆಣಸು ಬೆಳೆ ಗಾರ ಜಿಲ್ಲೆಗಳಿಂದ ಬೆಂಗಳೂರಿಗೆ ತೆರಳಿದ್ದ 350 ಕ್ಕೂ ಅಧಿಕ ಬೆಳೆಗಾರರು ಧಿಕ್ಕಾರಗಳ ಬದಲಿಗೆ ಮೌನವಾಗಿ ಕರಿಮೆಣಸು ಆಮದು ದಂಧೆಯ ವಿರುದ್ಧ ತಮ್ಮ ಸಾಂಕೇ ತಿಕ ಪ್ರತಿಭಟನೆ ಕೈಗೊಂಡಿದ್ದು ಗಮನ ಸೆಳೆಯಿತು. ಮುಂದಿನ ದಿನಗಳಲ್ಲಿ ಇಂಥ ಅನಧಿಕೃತ ದಂಧೆ ಮುಂದುವರೆದದ್ದೇ ಆದಲ್ಲಿ ಮತ್ತೆ ಹೋರಾಟಕ್ಕೆ ಮುಂದಾಗುವ ಮೂಲಕ ಕರಿಮೆಣಸು ಬೆಳೆಗಾರರಿಗೆ ನ್ಯಾಯ ನೀಡುವ ನಿಟ್ಟಿನಲ್ಲಿ ಮುಂದಾಗು ವುದಾಗಿ ಕರಿಮೆಣಸು ಬೆಳೆಗಾರರ ಸಮ ನ್ವಯ ಸಮಿತಿ ಸಂಚಾಲಕ ಕೆ.ಕೆ.ವಿಶ್ವನಾಥ್ ಈ ಸಂದರ್ಭ ತಿಳಿಸಿದರು.

Translate »