ಮಡಿಕೇರಿ: ರೈಲು ಮಾರ್ಗ, ರಾಷ್ಟ್ರೀಯ ಹೆದ್ದಾರಿಗಳಂತಹ ಯೋಜನೆ ಕೊಡಗಿನ ಹಿತಾಸಕ್ತಿಗೆ ಪೂರಕವಾಗಿಯೇ ಇರುತ್ತದೆಯೇ ವಿನಾ ಕೊಡಗಿನ ಪರಿಸರಕ್ಕೆ ಖಂಡಿತಾ ಮಾರಕವಾಗಿರುವುದಿಲ್ಲ ಎಂದು ಕೊಡಗು – ಮೈಸೂರು ಸಂಸದ ಪ್ರತಾಪ್ ಸಿಂಹ ಭರವಸೆ ನೀಡಿದ್ದು, ಮೈಸೂರು-ಕೊಡಗು ತಲಚೇರಿ ರೈಲು ಮಾರ್ಗ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ. ಮಡಿಕೇರಿಯಲ್ಲಿ ನಡೆದ ಬಿಜೆಪಿ ಶಾಸಕ ರಿಂದ ಪಕ್ಷದ ಕಾರ್ಯಕರ್ತರಿಗೆ ಅಭಿ ನಂದನೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕೆಲವರು ಫೇಸ್ಬುಕ್ನಲ್ಲಿ ತನ್ನನ್ನು ಅನವಶ್ಯಕವಾಗಿ ಟೀಕಿಸುತ್ತಿದ್ದಾರೆ. ಬೆಂಗಳೂರಿನಲ್ಲಿ…
ವಿದ್ಯುತ್ ತಂತಿ ತುಳಿದು ಎರಡು ಹಸು ಸಾವು
June 16, 2018ಕುಶಾಲನಗರ: ಇಲ್ಲಿನ ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂದಾನಿ ಪುರ ಫಾರಂನಲ್ಲಿ ವಿದ್ಯುತ್ ತಂತಿ ತುಳಿದು ಎರಡು ಹಸುಗಳು ಸ್ಥಳದಲ್ಲಿಯೆ ಮೃತಪಟ್ಟಿ ರುವ ಘಟನೆ ಇತ್ತೀಚೆಗೆ ನಡೆದಿದೆ. ಸಮೀಪದ ಆರನೇ ಹೊಸಕೋಟೆ ಗ್ರಾಮದ ನಿವಾಸಿ ರೈತ ರೇವಣ್ಣ ಎಂಬುವ ವರಿಗೆ ಈ ಹಸುಗಳೇ ವಿದ್ಯುತ್ ಶಾಕ್ ನಿಂದ ಮೃತಪಟ್ಟಿದ್ದು, ಈ ಹಸುಗಳ ಸಾವಿ ನಿಂದ ರೂ. 40 ಸಾವಿರಕ್ಕೂ ಹೆಚ್ಚಿನ ನಷ್ಟ ಉಂಟಾಗಿದೆ. ಅಂದಾನಿಪುರ ಫಾರಂಗೆ ಹಸುಗಳು ಹುಲ್ಲು ಮೇಯಲು ಹೋದ ಸಂದರ್ಭ ಈ ದುರ್ಘಟನೆ ನಡೆದಿದೆ….
ನಿಯಂತ್ರಣ ಕೊಠಡಿ ಪ್ರಾರಂಭ
June 16, 2018ಮಡಿಕೇರಿ: ಅತಿವೃಷ್ಟಿ ಸಂದರ್ಭದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಲು ಹಾಗೂ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಮತ್ತು ತಾಲೂಕು ಕಚೇರಿಗಳು ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ನಿಯಂತ್ರಣ ಕೊಠಡಿ ತೆರೆಯಲಾಗಿದೆ. ನಿಯಂತ್ರಣ ಕೊಠಡಿಯ ದೂರವಾಣಿ ಸಂಖ್ಯೆ ವಿವರ ಇಂತಿದೆ. ಜಿಲ್ಲಾಧಿಕಾರಿ ಕಚೇರಿ-08272-221077, ಜಿಲ್ಲಾ ಅಗ್ನಿಶಾಮಕ ಕಚೇರಿ-101, 08272-229299, ಮಡಿಕೇರಿ ತಾಲ್ಲೂಕು ಕಚೇರಿ-08272-228396, ನಗರಸಭೆ-08272-220111, ಸೋಮವಾರಪೇಟೆ ತಾಲ್ಲೂಕು ಕಚೇರಿ-08276-282045, ವಿರಾಜಪೇಟೆ ತಾಲ್ಲೂಕು ಕಚೇರಿ- 08274-256328 ಈ ದೂರವಾಣಿ ಸಂಖ್ಯೆಗಳಿಗೆ ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಸಮಸ್ಯೆಗಳಿದ್ದಲ್ಲಿ ಕರೆ ಮಾಡಿ ದೂರು ದಾಖಲಿಸಬಹುದು ಎಂದು ಜಿಲ್ಲಾಧಿಕಾರಿ…
ಕೆರೆಯಲ್ಲಿ ಮುಳುಗಿ ಇಬ್ಬರು ಕಾರ್ಮಿಕರ ಸಾವು
June 16, 2018ವೀರಾಜಪೇಟೆ: ಕೆರೆಯ ಬದಿಯಲ್ಲಿರಿಸಿದ್ದ ಬೋಟ್ನಲ್ಲಿ ಆಟ ವಾಡಲು ಹೋದ ಕಾರ್ಮಿಕರಿಬ್ಬರು ನೀರಿನಲ್ಲಿ ಮುಳುಗಿ ದುರ್ಮಣಗೊಂಡಿರುವ ಘಟನೆ ವೀರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವೀರಾಜಪೇಟೆ ಸಮೀಪದ ಚೊಕಂ ಡಳ್ಳಿ ಗ್ರಾಮದ ಡಿ.ಹೆಚ್.ಮೈದು ಎಂಬು ವರ ಹೊಸಕೋಟೆಯ ತೋಟದಲ್ಲಿ ಕೂಲಿ ಕಾರ್ಮಿಕರಾಗಿದ್ದ ಮಹೇಶ್ ಅಲಿಯಾಸ್ ರಾಜು[39] ಎಂಬಾತ ಬೆಳಿಗ್ಗೆ 8-30 ರ ಸಮಯದಲ್ಲಿ ಕೆರೆಯಲ್ಲಿದ್ದ [ಮಕ್ಕಳ] ಬೋಟ್ನಲ್ಲಿ ಕುಳಿತು ತುಂಬಿದ ಕೆರೆಯ ನೀರಿನಲ್ಲಿ ಆಡಲು ಹೊರಟಾಗ ಸ್ವಲ್ಪ ದೂರ ದಲ್ಲಿಯೇ ಬೋಟ್ ಮಗುಚಿಕೊಂಡು ಮಹೇಶ್ ನೀರಲ್ಲಿ ಮುಳುಗಿದ್ದಾನೆ. ಇದನ್ನು…
ಮೈಸೂರು-ಮಡಿಕೇರಿ ರೈಲು ಮಾರ್ಗ ಕುಶಾಲನಗರಕ್ಕೆ ಸೀಮಿತ: ಪರಿಸರವಾದಿಗಳ ಒತ್ತಡದ ಫಲಶ್ರುತಿ
June 15, 2018ಮೈಸೂರು: ಪರಿಸರವಾದಿಗಳು, ಗ್ರೀನ್ ಗ್ರೂಪ್ಸ್ ಮತ್ತು ಜನಪ್ರತಿನಿಧಿಗಳು ಒತ್ತಡಕ್ಕೆ ಮಣಿದ ಭಾರತೀಯ ರೈಲು ಮಂಡಳಿಯು ಮೈಸೂರು-ಮಡಿಕೇರಿ ರೈಲು ಮಾರ್ಗವನ್ನು ಕುಶಾಲನಗರಕ್ಕೆ ಸೀಮಿತಗೊಳಿಸಲು ನಿರ್ಧರಿಸಿದೆ.ಮಡಿಕೇರಿ ಭಾಗದ ದಟ್ಟ ಅರಣ್ಯ ಪ್ರದೇಶದ ಮರಗಳು ನಾಶವಾಗುವುದನ್ನು ಮನಗಂಡು ರೈಲು ಮಾರ್ಗ ಯೋಜನೆಯನ್ನು ಕುಶಾಲನಗರಕ್ಕೆ ಸೀಮಿತಗೊಳಿಸಲು ಮುಂದಾಗಿರುವ ರೈಲ್ವೇ ಇಲಾಖೆಯು, ನೈಸರ್ಗಿಕ ಸಂಪತ್ತು ಉಳಿಸುವ ನಿರ್ಧಾರ ಕೈಗೊಂಡಿದೆ. ಈ ಕುರಿತು ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಕುಶಾಲನಗರ ಈಗಾಗಲೇ ಅಭಿವೃದ್ಧಿಯಾಗಿದೆ. ಇನ್ನೂ ವಿಸ್ತಾರವಾಗಿ ಮಡಿಕೇರಿಯಂತೆಯೇ ಬೆಳೆಯುವ ಎಲ್ಲಾ…
ತಿತಿಮತಿಯಲ್ಲಿ ಸೇತುವೆ ಕುಸಿತ : ಮೈಸೂರು-ಗೋಣಿಕೊಪ್ಪ ಹೆದ್ದಾರಿ ಬಂದ್
June 15, 2018ಗೋಣಿಕೊಪ್ಪಲು: ತಿತಿಮತಿ ಯಲ್ಲಿ ಸೇತುವೆ ಕುಸಿತದಿಂದ ಗೋಣಿಕೊಪ್ಪ – ಮೈಸೂರು ಹೆದ್ದಾರಿ ಸಂಪರ್ಕ ಕಡಿತ ಗೊಂಡು, ಬದಲಿ ಮಾರ್ಗವಾಗಿ ವಾಹ ನಗಳು ಸಂಚರಿಸುವಂತಾಗಿದೆ. ಗುರುವಾರ ಮಧ್ಯಾಹ್ನ ವೇಳೆಗೆ ಘಟನೆ ಸಂಭವಿಸಿದೆ. ಈ ಮಾರ್ಗವಾಗಿ ಸಂಚರಿ ಸಬೇಕಾದ ವಾಹನಗಳು ಗೋಣಿಕೊಪ್ಪ, ಪಾಲಿಬೆಟ್ಟ, ಘಟ್ಟದಳ್ಳ, ಮಾಲ್ದಾರೆ, ಪಿರಿಯಾ ಪಟ್ಟಣ ಮಾರ್ಗವಾಗಿ ಸಂಚರಿಸುತ್ತಿವೆ. ಮತ್ತೊಂದು ಮಾರ್ಗವಾಗಿ ಗೋಣಿಕೊಪ್ಪ, ಮಾಯಮುಡಿ, ಬಾಳೆಲೆ, ಕಾರ್ಮಾಡು, ಮೂರ್ಕಲ್, ನಾಗರಹೊಳೆ ಮಾರ್ಗ ವಾಗಿ ಹುಣಸೂರಿಗೆ ಸಂಚರಿಸುವಂತಾಗಿದೆ. ತಿತಿಮತಿ ಮುಖ್ಯ ರಸ್ತೆಯ ಬಾಳು ಮಾನಿ ತೋಡಿನಿಂದ ಬರುವ ಹೊಳೆಗೆ…
ಭಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಮಳೆ ಮತ್ತೇ ತ್ರಿವೇಣಿ ಸಂಗಮ ಜಲಾವೃತ
June 15, 2018ಮಡಿಕೇರಿ: ಜಿಲ್ಲೆಯಲ್ಲಿ ಕುಂಭದ್ರೋಣ ಮಳೆಯ ಆರ್ಭಟ ಮುಂದುವರಿದಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಗುರುವಾರ ತ್ರಿವೇಣಿ ಸಂಗಮ ಸಂಪೂರ್ಣ ಜಲಾವೃತಗೊಂಡಿತು. ಭಾಗಮಂಡಲ-ಅಯ್ಯಂಗೇರಿ ರಸ್ತೆ ಮೇಲೆ 3 ಅಡಿ ನೀರು ಹರಿದ ಪರಿಣಾಮ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಕೇಶ ಮುಂಡನ ಪ್ರದೇಶ ಕೂಡ ನೀರಿನಿಂದ ಆವೃತವಾಗಿದ್ದು, ಸಂಪೂರ್ಣ ಪ್ರದೇಶ ದ್ವೀಪದಂತಾಗಿದೆ.ಜೂನ್ 2ನೇ ವಾರದಲ್ಲಿ ಭಾಗಮಂಡಲ ತ್ರಿವೇಣಿ ಸಂಗಮ 2ನೇ ಬಾರಿಗೆ ಜಲಾವೃತ ವಾಗುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ. ವಾಹನ ಸಂಚಾರ ಸಂಪೂರ್ಣ ಬಂದ್ ಆದ ಹಿನ್ನಲೆಯಲ್ಲಿ…
ಜಮ್ಮಾಬಾಣೆಗೆ ಜಾಗಕ್ಕೆ ಕಂದಾಯ ನಿಗದಿ ಸರಿಯಲ್ಲ ಕಂದಾಯ ಇಲಾಖೆ ಆಡಿಟ್ ವರದಿಯಲ್ಲಿ ಉಲ್ಲೇಖ
June 15, 2018ಮಡಿಕೇರಿ: ಜಮ್ಮಾ ಜಾಗ ಸಮೀಪವಿರುವ ಜಾಗಗಳನ್ನು ಜಮ್ಮಾ ಬಾಣೆ ಎಂದು ಪರಿಗಣಿಸಿ ಜನತೆಗೆ ನೀಡ ಲಾಗಿದ್ದು, ಅಲ್ಲಿ ಯಾವುದೇ ಕೃಷಿ ಚಟು ವಟಿಕೆಗೆ ಅವಕಾಶವಿಲ್ಲದ್ದರಿಂದ ಅಂತಹ ಜಾಗಗಳಿಗೆ ಕಂದಾಯ ನಿಗದಿ ಮಾಡಿರು ವುದು, ಪರಿವರ್ತನೆಗೆ ಅವಕಾಶ ನೀಡಿರು ವುದು ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸುವುದು ಸರಿಯಲ್ಲವೆಂದು ಜಿಲ್ಲಾ ಕಂದಾಯ ಇಲಾಖೆ ಕುರಿತು ಲೆಕ್ಕ ತಪಾಸಣೆ ಮಾಡಿರುವ ತಂಡ ವರದಿ ಸಲ್ಲಿಸಿದೆ. ಮಾರ್ಚ್ ತಿಂಗಳಲ್ಲಿ ಸ್ಥಳೀಯ ತಿಂಗ ಳಲ್ಲಿ ಸ್ಥಳೀಯ ಲೆಕ್ಕ ಪರಿಶೋಧಕರ ಐವರ ತಂಡ 2012 ರಿಂದ…
ಬಾಣೆಗಾಗಿ ಮತ್ತೇ ಜನಾಂದೋಲನ ನಡೆಯಬೇಕಾಗಿದೆ
June 15, 2018ಮಡಿಕೇರಿ: ಕೊಡಗಿನ ಜಮ್ಮಾ ಜಾಗಕ್ಕೆ ಸಂಬಂಧಿಸಿದಂತೆ ಕಂದಾಯ ನಿಗದಿ ಮಾಡಿರುವುದು, ಪರಿ ವರ್ತನೆಗೆ ಅವಕಾಶ ನೀಡಿರುವುದು ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿ ಸಿರುವುದು ಸರಿಯಲ್ಲವೆಂದು ಜಿಲ್ಲಾ ಕಂದಾಯ ಇಲಾಖೆಯ ಲೆಕ್ಕ ತಪಾಸಣೆ ಮಾಡಿರುವ ಅಧಿಕಾರಿಗಳ ತಂಡ ನೀಡಿರುವ ವರದಿಯ ಕುರಿತು ವಿರಾಜ ಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಕೊಡಗು ಪ್ರೆಸ್ಕ್ಲಬ್ ವತಿಯಿಂದ ಪತ್ರಿಕಾ ಭವನದಲ್ಲಿ ನಡೆದ ಜಿಲ್ಲೆಯ ಶಾಸಕದ್ವಯರೊಂದಿಗಿನ ‘ಸಂವಾದ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭೂ ಕಂದಾಯ ಕಾಯ್ದೆಯ…
ಭೂ ಕುಸಿತ; ಅಪಾಯದ ಅಂಚಿನಲ್ಲಿ ಸೆಸ್ಕ್ ಕಚೇರಿ
June 15, 2018ಸೋಮವಾರಪೇಟೆ: ಭಾರಿ ಮಳೆಯಿಂದ ಭೂ ಕುಸಿತ ಉಂಟಾಗಿದ್ದು, ಸೆಸ್ಕ್ ಕಛೇರಿ ಅಪಾಯದ ಸ್ಥಿತಿಯಲ್ಲಿದೆ. ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ನಿಗಮದ ಕಛೇರಿಯ ಹಿಂಬಾಗದಲ್ಲಿ ಭಾರಿ ಭೂ ಕುಸಿತವಾಗುತ್ತಿದ್ದು, ಕಛೇರಿಯ ಕಟ್ಟಡವೇ ಕುಸಿಯುವ ಹಂತದಲ್ಲಿದೆ. ಕಛೇರಿ ಕಟ್ಟಡದ ಹಿಂಬಾಗದಲ್ಲಿ ತಡೆಗೋಡೆ ನಿರ್ಮಿಸಲೆಂದು ಸ್ವಲ್ಪ ಮಣ್ಣನ್ನು ಅಗೆದು ತೆಗೆಯಲಾಗಿತ್ತು. ಆದರೆ ಮಳೆ ಆರಂಭವಾದ ಹಿನ್ನಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಮಳೆಯ ರಭಸಕ್ಕೆ ಮಣ್ಣು ಕುಸಿಯಲಾರಂಭಿಸಿದ್ದು, ಶೌಚಾಲಯದ ಗುಂಡಿ ಬೀಳಲಾರಂಭಿಸಿದೆ. ಕಛೇರಿ ಕಟ್ಟಡ ಕೇವಲ 2 ಅಡಿ ಅಂತರದಲ್ಲಿದ್ದು ಮುಂದಿನ ಎರಡು ದಿನಗಳಲ್ಲಿ ಧಾರಾಕಾರ…