ಕೊಡಗು

ವಿ.ಪೇಟೆಯಲ್ಲಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ
ಕೊಡಗು

ವಿ.ಪೇಟೆಯಲ್ಲಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

November 12, 2020

ವಿರಾಜಪೇಟೆ, ನ.11- ಕೋವಿಡ್-19ರ ಸಮಸ್ಯೆಯಿಂದಾಗಿ ಶಾಲೆಗಳು ಮುಚ್ಚಿ ರುವ ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆಯಿಂದ ಆಸಕ್ತ ಗ್ರಾಮೀಣ ವಿದ್ಯಾರ್ಥಿಗಳಿಗೆ 5ನೇ ತರಗತಿ ಯಿಂದ 10 ನೇ ತರಗತಿವರೆಗೆ ಇಂಗ್ಲೀಷ್, ವಿಜ್ಞಾನ, ಗಣಿತದ ವಾರ್ಷಿಕ ಪಾಠ್ಯಗಳನ್ನು ಟ್ಯಾಬ್‍ಗಳಲ್ಲಿ ಜೋಡಿಸಿ ಮಕ್ಕಳ ಉಪ ಯೋಗಕ್ಕಾಗಿ ನೀಡಲಾಗುತ್ತಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಿರಾಜಪೇಟೆ ಪುರಭವನದಲ್ಲಿ ಹಮ್ಮಿಕೊಂಡಿದ್ದ ”ಗ್ರಾಮೀಣ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ದಲ್ಲಿ ಅಂತರ್ಜಾಲ ಶಿಕ್ಷಣ ವ್ಯವಸ್ಥೆ [ಜ್ಞಾನತಾಣ] ಕಾರ್ಯಕ್ರಮ”ವನ್ನು…

ಕೊಡಗಿನ ಮೂವರಿಗೆ ಏಕಲವ್ಯ ಪ್ರಶಸ್ತಿ
ಕೊಡಗು

ಕೊಡಗಿನ ಮೂವರಿಗೆ ಏಕಲವ್ಯ ಪ್ರಶಸ್ತಿ

November 3, 2020

ಮಡಿಕೇರಿ,ನ.2-ರಾಜ್ಯ ಸರ್ಕಾರ ದಿಂದ ನೀಡಲಾದ ಪ್ರತಿಷ್ಟಿತ ಕ್ರೀಡಾ ಪ್ರಶಸ್ತಿಗಳಲ್ಲಿ ಕೊಡಗಿನವರಿಗೆ ಸಿಂಹ ಪಾಲು ಲಭಿಸಿದೆ. ರಾಜ್ಯ ಕ್ರೀಡಾ ಇಲಾಖೆ ಸಚಿವ ಸಿ.ಟಿ.ರವಿ ಅವರು ಪ್ರಕಟಿಸಿದ 2017, 2018 ಹಾಗೂ 2019ನೇ ಸಾಲಿನ ಕ್ರೀಡಾ ಪ್ರಶಸ್ತಿಗಳಲ್ಲಿ ಕೊಡಗಿನ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರಶಸ್ತಿಗಳು ಲಭಿಸುವ ಮೂಲಕ ಜಿಲ್ಲೆಯ ಕೀರ್ತಿ ಪತಾಕೆ ಮತ್ತೊಮ್ಮೆ ರಾರಾಜಿಸಿದೆ. ಅದ ರಲ್ಲೂ ಹಾಕಿ ಕ್ರೀಡೆಯ ಕ್ರೀಡಾ ಸಾಧಕರಿಗೆ ಹೆಚ್ಚಿನ ಪ್ರಶಸ್ತಿ ಒಲಿದಿರುವುದು ವಿಶೇಷವಾಗಿದೆ. ಹಾಕಿ ಕ್ರೀಡೆಗಾಗಿಯೇ ಮೂರು ಏಕಲವ್ಯ ಪ್ರಶಸ್ತಿ, ಒಂದು ಜೀವಮಾನ ಸಾಧನೆ ಪ್ರಶಸ್ತಿ…

ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಬೇಕು: ಸಚಿವ ಸೋಮಣ್ಣ
ಕೊಡಗು

ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಬೇಕು: ಸಚಿವ ಸೋಮಣ್ಣ

November 3, 2020

ಮಡಿಕೇರಿ,ನ.2-ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ 65ನೇ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಧ್ವಜಾ ರೋಹಣ ನೆರವೇರಿಸಿದರು. ಈ ವೇಳೆ ಕೊಡಗು ಜಿಲ್ಲಾ ಸಶಸ್ತ್ರ ಪೊಲೀಸ್, ಸಿವಿಲ್ ಪೊಲೀಸ್, ಗೃಹ ರಕ್ಷಕ ದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಪಥ ಸಂಚಲನದ ಮೂಲಕ ಸಚಿವರಿಗೆ ಗೌರವ ವಂದನೆ ಸಲ್ಲಿಸಿದರು. ಗೌರವ ವಂದನೆ ಸ್ವೀಕರಿಸಿದ ಬಳಿಕ ಮಾತನಾಡಿದ ಸಚಿವ ವಿ.ಸೋಮಣ್ಣ,…

ಫೋಟೋ ಕ್ಲಿಕ್ಕಿಸಿದ ಸವಾರರ ಮೇಲೆ ದಾಳಿಗೆ ಮುಂದಾದ `ಭೀಮ’; ಬೈಕ್ ಜಖಂ, ವೀಡಿಯೋ ವೈರಲ್
ಕೊಡಗು

ಫೋಟೋ ಕ್ಲಿಕ್ಕಿಸಿದ ಸವಾರರ ಮೇಲೆ ದಾಳಿಗೆ ಮುಂದಾದ `ಭೀಮ’; ಬೈಕ್ ಜಖಂ, ವೀಡಿಯೋ ವೈರಲ್

November 3, 2020

ಮಡಿಕೇರಿ,ನ.2-ಫೋಟೋ ತೆಗೆಯಲು ಮುಗಿಬಿದ್ದ ಸವಾರರ ಮೇಲೆ ದಾಳಿಗೆ ಮುಂದಾದ ಸಾಕಾನೆ, ಬೈಕ್ ಜಖಂಗೊಳಿಸಿರುವ ಘಟನೆ ನಡೆದಿದೆ. ಗೋಣಿಕೊಪ್ಪಲು ಸಮೀಪದ ಮತ್ತಿ ಗೋಡು ಸಾಕಾನೆ ಶಿಬಿರ ಬಳಿಯ ರಾಜ್ಯ ಹೆದ್ದಾರಿ ಯಲ್ಲಿ ಭಾನುವಾರ ಸಂಜೆ ಘಟನೆ ಸಂಭವಿಸಿದ್ದು, ಸಾಕಾನೆ ಫೆÇೀಟೊ ತೆಗೆಯಲು ಹೋಗಿದ್ದ ಸವಾರರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮತ್ತಿಗೋಡು ಶಿಬಿರದ ಸಾಕಾನೆ `ಭೀಮ’ ನನ್ನು ಮಾವುತರು ಹೆದ್ದಾರಿ ಬದಿಯ ಕಾಡಂಚಲ್ಲಿ ಮೇಯಲು ಬಿಟ್ಟಿದ್ದರು. ಭೀಮ ತನ್ನ ಪಾಡಿಗೆ ಮೇಯುತ್ತಿತ್ತು. ಬೈಕ್‍ನಲ್ಲಿ ತಿತಿಮತಿ ಕಡೆಯಿಂದ ಆನೆಚೌಕೂರಿನತ್ತ ತೆರಳುತ್ತಿದ್ದ ಸವಾರರಿಬ್ಬರು ಆನೆಯನ್ನು…

ಕೂಟಿಯಾಲ ರಸ್ತೆ ಯೋಜನೆಗಾಗಿ ಕಾನೂನಾತ್ಮಕ ಹೋರಾಟ
ಕೊಡಗು

ಕೂಟಿಯಾಲ ರಸ್ತೆ ಯೋಜನೆಗಾಗಿ ಕಾನೂನಾತ್ಮಕ ಹೋರಾಟ

October 28, 2020

ಮಡಿಕೇರಿ,ಅ.27-ದಕ್ಷಿಣ ಕೊಡಗಿನ ಬಿರುನಾಣಿ-ಬಿ.ಶೆಟ್ಟಿಗೇರಿ ಗ್ರಾಪಂ ನಡುವೆ ಸಂಪರ್ಕ ಕಲ್ಪಿಸುವ ಮಹಾತ್ವಾಕಾಂಕ್ಷೆ ಕೂಟಿ ಯಾಲ ಸಂಪರ್ಕ ರಸ್ತೆ ಯೋಜನೆಯನ್ನು ಪೂರ್ಣ ಗೊಳಿಸಲು ಕಾನೂನಾತ್ಮಕ ಹೋರಾ ಟದ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕೆಪಿಸಿಸಿ ವಕ್ತಾರ ಅಜ್ಜಿ ಕುಟ್ಟೀರ ಎಸ್.ಪೆÇನ್ನಣ್ಣ ಭರವಸೆ ನೀಡಿದ್ದಾರೆ. ಯೋಜನೆಯ ಸ್ಥಳಕ್ಕೆ ಭೇಟಿ ನೀಡಿದ್ದ ಅವರು, ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಿದ್ದರೂ ಸಂಚಾರಕ್ಕೆ ಅವಕಾಶವಿಲ್ಲದೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಇದರ ಬಗ್ಗೆ ಅಧ್ಯಯನ ನಡೆಸಿ ಕಾನೂನಿನ ಮೂಲಕ ನ್ಯಾಯ ದೊರಕಿಸಿ ಕೊಡುವುದಾಗಿ…

ಭ್ರಷ್ಟಾಚಾರದ ನಿಗ್ರಹಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ
ಕೊಡಗು

ಭ್ರಷ್ಟಾಚಾರದ ನಿಗ್ರಹಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ

October 28, 2020

ಸೋಮವಾರಪೇಟೆ, ಅ.27-ಭ್ರಷ್ಟಾ ಚಾರದ ನಿಗ್ರಹಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಸಿಪಿಐ ಶ್ರೀಧರ್ ತಿಳಿಸಿದರು. ಕೊಡಗು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದಿಂದ ಪತ್ರಿಕಾಭವನದಲ್ಲಿ ಮಂಗಳ ವಾರ ಏರ್ಪಡಿಸಿದ್ದ ಭ್ರಷ್ಟಾಚಾರ ವಿರುದ್ಧ ಜಾಗೃತ ಅರಿವು ಸಪ್ತಾಹ-2020 ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಸರ್ಕಾರಿ ನೌಕರ ತನ್ನ ದಿನನಿತ್ಯದ ಕೆಲಸಗಳನ್ನು ನಿರ್ವಹಿಸಲು ಅನಗತ್ಯ ವಿಳಂಬ, ನಿರ್ಲಕ್ಷ್ಯತೆ ತೋರಿದ್ದಲ್ಲಿ ಅಥವಾ ಲಂಚದ ಬೇಡಿಕೆ ಇಟ್ಟಲ್ಲಿ ಕೂಡಲೇ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಠಾಣೆ ಅಥವಾ…

ಗೋಣಿಕೊಪ್ಪ ದಸರಾ ಧಾರ್ಮಿಕ ಕೈಂಕರ್ಯದೊಂದಿಗೆ ಸಮಾಪ್ತಿ
ಕೊಡಗು

ಗೋಣಿಕೊಪ್ಪ ದಸರಾ ಧಾರ್ಮಿಕ ಕೈಂಕರ್ಯದೊಂದಿಗೆ ಸಮಾಪ್ತಿ

October 28, 2020

ಗೋಣಿಕೊಪ್ಪ, ಅ.27-ಗೋಣಿಕೊಪ್ಪ 42ನೇ ವರ್ಷದ ದಸರಾ ಆಚರಣೆ ಧಾರ್ಮಿಕ ಚಟುವಟಿಕೆಗೆ ಸೀಮಿತಗೊಂಡು, ಚಾಮುಂಡೇಶ್ವರಿ ದೇವಿ ಮೂರ್ತಿ ಸಿಸರ್ಜನೆಯೊಂದಿಗೆ ಸಮಾಪ್ತಿಯಾಯಿತು. ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ಪ್ರತಿಷ್ಠಾಪಿಸಿದ್ದ ಮೂರ್ತಿ ಯನ್ನು ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಹೊರತೆಂದು ವಾಹನದಲ್ಲಿ ರಿಸಲಾಯಿತು. ಬಳಿಕ ಸರಳವಾಗಿ ನಾಗಸ್ವರ ವಾದನದ ಮೂಲಕ ಸೀಗೆ ತೋಡು ನದಿಗೆ ಕೊಂಡೊಯ್ದು ಮೂರ್ತಿ ವಿಸರ್ಜಿಸಲಾಯಿತು. ಈ ವೇಳೆ ಕಾವೇರಿ ದಸರಾ ಸಮಿತಿ ಅಧ್ಯಕ್ಷ ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ಜಿಮ್ಮ ಸುಬ್ಬಯ್ಯ, ಪೂಜಾ ಸಮಿತಿ ಪ್ರಮುಖರಾದ ಡಾ.ಕಾಳಿಮಾಡ…

ಬಿಜೆಪಿ ಕೃಷಿ ಮೋರ್ಚಾದಿಂದ ಚೆಸ್ಕಾಂ ಅಧಿಕಾರಿ ಭೇಟಿ ವಿದ್ಯುತ್ ಸಂಪರ್ಕ ಕಡಿತಗೊಳಿಸದಂತೆ ಮನವಿ
ಕೊಡಗು

ಬಿಜೆಪಿ ಕೃಷಿ ಮೋರ್ಚಾದಿಂದ ಚೆಸ್ಕಾಂ ಅಧಿಕಾರಿ ಭೇಟಿ ವಿದ್ಯುತ್ ಸಂಪರ್ಕ ಕಡಿತಗೊಳಿಸದಂತೆ ಮನವಿ

October 27, 2020

ಮಡಿಕೇರಿ, ಅ.27-ಬಿಲ್ ಬಾಕಿ ಪಾವತಿ ಸಿಲ್ಲ ಎಂಬ ನೆಪವೊಡ್ಡಿ ಪರಮಾರ್ಶೆ ಮಾಡದೆ ರೈತರ ಪಂಪ್‍ಸೆಟ್‍ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸದಂತೆ ಬಿಜೆಪಿ ಕೃಷಿ ಮೋರ್ಚಾ ಪದಾಧಿಕಾರಿಗಳು ಗೋಣಿ ಕೊಪ್ಪ ಚೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರು. ವಿರಾಜಪೇಟೆ ತಾಲೂಕು ಬಿಜೆಪಿ ಕೃಷಿ ಮೋರ್ಚಾ ಅಧ್ಯಕ್ಷ ಕಟ್ಟೇರ ಈಶ್ವರ್ ಮುಂದಾಳತ್ವದಲ್ಲಿ ಗೋಣಿಕೊಪ್ಪಲಿನ ಚೆಸ್ಕಾಂ ಅಧಿಕಾರಿಗಳನ್ನು ಭೇಟಿ ಮಾಡಿದ ಪಕ್ಷದ ಮುಖಂಡರು ಹಾಗೂ ಕಾರ್ಯ ಕರ್ತರು, ಅಧಿಕಾರಿಗಳೊಂದಿಗೆ ಸುಧೀರ್ಘ ಚರ್ಚೆ ನಡೆಸಿದರಲ್ಲದೆ, ರೈತರು ಎದುರಿ ಸುತ್ತಿರುವ ಸಂಕಷ್ಟ ಮನವರಿಕೆ ಮಾಡಿಕೊಟ್ಟರು. ಚೆಸ್ಕಾಂ ಅಧಿಕಾರಿಗಳು…

ಸರಳ ದಶಮಂಟಪ ಶೋಭಾಯಾತ್ರೆ ಮಡಿಕೇರಿ ದಸರಾಗೆ ತೆರೆ
ಕೊಡಗು

ಸರಳ ದಶಮಂಟಪ ಶೋಭಾಯಾತ್ರೆ ಮಡಿಕೇರಿ ದಸರಾಗೆ ತೆರೆ

October 27, 2020

ಮಡಿಕೇರಿ, ಅ. 26- ಮಡಿಕೇರಿ ದಸರಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಶಮಂಟಪಗಳ ಶೋಭಾಯಾತ್ರೆ ಅತ್ಯಂತ ಸರಳವಾಗಿ ನಡೆಯಿತು. ಮೈಸೂರು ದಸರಾಗೆ ಜಂಬೂಸವಾರಿ ಕಳಸಪ್ರಾಯ ವಾಗಿದ್ದರೆ, ಮಡಿಕೇರಿ ದಸರಾಗೆ ವರ್ಣರಂಜಿತ ದಶಮಂಟ ಪಗಳ ಶೋಭಾಯಾತ್ರೆ ಮೆರಗು ನೀಡುತ್ತಿತ್ತು. 10 ದೇವಾಲಯಗಳ ಮಂಟಪಗಳನ್ನು ಅತ್ಯಂತ ಆಕರ್ಷಣೀಯವಾಗಿ ಸಿದ್ಧಗೊಳಿಸ ಲಾಗುತ್ತಿತ್ತು. ಅದಕ್ಕಾಗಿ ತಮಿಳುನಾಡಿನ ಕಲಾವಿದರನ್ನು ಕರೆತರಲಾಗುತ್ತಿತ್ತು. ದಶ ಮಂಟಪಗಳ ಮಧ್ಯೆ ಸ್ಪರ್ಧೆಯನ್ನೇ ರ್ಪಡಿಸಿ, ಬಹುಮಾನ ವಿತರಿಸಲಾಗುತ್ತಿತ್ತು. ದಶಮಂಟಪಗಳ ಶೋಭಾಯಾತ್ರೆಯ ಸೊಬಗನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧೆಡೆಯಿಂದ ಪ್ರವಾಸಿಗರು ಆಗಮಿ ಸುತ್ತಿದ್ದರು. ಅನೇಕರು…

ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಪ.ಜಾತಿ-ಪಂಗಡದ ಹಿತರಕ್ಷಣಾ ಸಮಿತಿ ಸಭೆ
ಕೊಡಗು

ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಪ.ಜಾತಿ-ಪಂಗಡದ ಹಿತರಕ್ಷಣಾ ಸಮಿತಿ ಸಭೆ

October 27, 2020

ಮೂಲ ಸೌಕರ್ಯಕ್ಕೆ ಸಮಿತಿ ಸದಸ್ಯರ ಆಗ್ರಹ ಸೋಮವಾರಪೇಟೆ, ಅ.26-ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ತಹ ಸೀಲ್ದಾರ್ ಗೋವಿಂದರಾಜು ಅಧ್ಯಕ್ಷತೆ ಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಹಿತರಕ್ಷಣಾ ಸಮಿತಿ ಸಭೆ ನಡೆಯಿತು. ಪರಿಶಿಷ್ಟ ಪಂಗಡದ ಹಾಡಿಗಳಲ್ಲಿ ಇಂದಿಗೂ ತಮ್ಮ ಕೃಷಿ ಭೂಮಿಗೆ ಸೂಕ್ತ ದಾಖಲಾತಿ ಹೊಂದಿಲ್ಲದ ಕಾರಣ, ರೈತರು ಸರ್ಕಾರದ ಯೋಜನೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಪರಿಶಿಷ್ಟ ಜಾತಿ ಮತ್ತು ಪಂಗಡದ ಹಿತರಕ್ಷಣಾ ಸಮಿತಿ ಸದಸ್ಯ ಸುಬ್ರಮಣಿ ಸಭೆಯ ಆರಂಭದಲ್ಲೇ ದೂರಿದರು. ಕೂಡಲೇ ದಾಖಲಾತಿ ದುರಸ್ತಿ ಮಾಡಿಕೊಡುವ…

1 19 20 21 22 23 187
Translate »