ಕೊಡಗಿನ ಮೂವರಿಗೆ ಏಕಲವ್ಯ ಪ್ರಶಸ್ತಿ
ಕೊಡಗು

ಕೊಡಗಿನ ಮೂವರಿಗೆ ಏಕಲವ್ಯ ಪ್ರಶಸ್ತಿ

November 3, 2020

ಮಡಿಕೇರಿ,ನ.2-ರಾಜ್ಯ ಸರ್ಕಾರ ದಿಂದ ನೀಡಲಾದ ಪ್ರತಿಷ್ಟಿತ ಕ್ರೀಡಾ ಪ್ರಶಸ್ತಿಗಳಲ್ಲಿ ಕೊಡಗಿನವರಿಗೆ ಸಿಂಹ ಪಾಲು ಲಭಿಸಿದೆ. ರಾಜ್ಯ ಕ್ರೀಡಾ ಇಲಾಖೆ ಸಚಿವ ಸಿ.ಟಿ.ರವಿ ಅವರು ಪ್ರಕಟಿಸಿದ 2017, 2018 ಹಾಗೂ 2019ನೇ ಸಾಲಿನ ಕ್ರೀಡಾ ಪ್ರಶಸ್ತಿಗಳಲ್ಲಿ ಕೊಡಗಿನ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರಶಸ್ತಿಗಳು ಲಭಿಸುವ ಮೂಲಕ ಜಿಲ್ಲೆಯ ಕೀರ್ತಿ ಪತಾಕೆ ಮತ್ತೊಮ್ಮೆ ರಾರಾಜಿಸಿದೆ. ಅದ ರಲ್ಲೂ ಹಾಕಿ ಕ್ರೀಡೆಯ ಕ್ರೀಡಾ ಸಾಧಕರಿಗೆ ಹೆಚ್ಚಿನ ಪ್ರಶಸ್ತಿ ಒಲಿದಿರುವುದು ವಿಶೇಷವಾಗಿದೆ.

ಹಾಕಿ ಕ್ರೀಡೆಗಾಗಿಯೇ ಮೂರು ಏಕಲವ್ಯ ಪ್ರಶಸ್ತಿ, ಒಂದು ಜೀವಮಾನ ಸಾಧನೆ ಪ್ರಶಸ್ತಿ ಹಾಗೂ ಬಾಲ್ ಬ್ಯಾಡ್ಮಿಂಟನ್ ಕ್ರೀಡೆಯ ಸಾಧನೆ ಗಾಗಿ ಇಬ್ಬರಿಗೆ ಕ್ರೀಡಾ ರತ್ನ ಪ್ರಶಸ್ತಿಗಳು ಲಭಿಸಿವೆ.

ಏಕಲವ್ಯ ಪ್ರಶಸ್ತಿ: 2017ನೇ ಸಾಲಿನ ಏಕಲವ್ಯ ಪ್ರಶಸ್ತಿಯನ್ನು ಅಂತಾರಾಷ್ಟ್ರೀಯ ಹಾಕಿ ಆಟಗಾರ್ತಿ, ಕೊಡಗು ಜಿಲ್ಲೆಯಿಂದ ಮೊದಲ ಬಾರಿಗೆ ರಾಷ್ಟ್ರವನ್ನು ಪ್ರತಿ ನಿಧಿಸಿದ್ದ ಪೆÇನ್ನಂಪೇಟೆಯ ಕಂಬೀರಂಡ ಪೆÇನ್ನಮ್ಮ(ತಾಮನೆ ಮಲ್ಲಮಾಡ) ಪಡೆದಿದ್ದಾರೆ. 2018ನೇ ಸಾಲಿನ ಪ್ರಶಸ್ತಿ ಹಾಕಿ ಓಲಂಪಿಯನ್ ಚೇಂದಂಡ ನಿಕಿನ್ ತಿಮ್ಮಯ್ಯ, 2019ನೇ ಸಾಲಿನ ಪ್ರಶಸ್ತಿ ಅಂತಾ ರಾಷ್ಟ್ರೀಯ ಹಾಕಿ ಆಟಗಾರ ವಿರಾಜ ಪೇಟೆಯ ಪುಲಿಯಂಡ ಎಲ್.ತಿಮ್ಮಣ್ಣ ಅವರಿಗೆ ಲಭಿಸಿದೆ.

ಜೀವಮಾನ ಸಾಧನೆ: ಇನ್ನು ಜೀವ ಮಾನ ಸಾಧನೆಗಾಗಿನ ಪ್ರಶಸ್ತಿಯು ಹಾಕಿ ಆಟಗಾರ, ಹಿರಿಯ ಕ್ರೀಡಾ ತರಬೇತು ದಾರ ಚನ್ನಪಂಡ ಪ್ರಿನ್ಸ್ ಕರುಂಬಯ್ಯ ಅವರಿಗೆ ಲಭಿಸಿದೆ. ಇವರು ಮಡಿಕೇರಿಯ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಸಿಂಥೆಟಿಕ್ ಟರ್ಫ್ ಮೈದಾನ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕ್ರೀಡಾ ರತ್ನ: 2018ರ ಕ್ರೀಡಾರತ್ನ ಪ್ರಶಸ್ತಿ ಬಾಲ್ ಬ್ಯಾಡ್ಮಿಂಟನ್ ಆಟಗಾರ್ತಿ ಸೋಮವಾರಪೇಟೆ ತಾಲೂಕಿನ ಬಸವನ ಹಳ್ಳಿಯ ಬಿ.ಡಿ.ಲಾವಣ್ಯ ಹಾಗೂ ಕೊಡ್ಲಿ ಪೇಟೆ ಶಿವರಳ್ಳಿ ಗ್ರಾಮದ ಪಲ್ಲವಿ ಅವರು ಗಳಿಗೆ ಲಭಿಸಿದೆ. ಏಕಲವ್ಯ ಪ್ರಶಸ್ತಿಯು ಏಕಲವ್ಯರ ಕಂಚಿನ ಪ್ರತಿಮೆ ಹಾಗೂ 2 ಲಕ್ಷ ರೂ. ನಗದು, ಜೀವಮಾನ ಸಾಧನೆಯ ಪ್ರಶಸ್ತಿಯು ಫಲಕ ಮತ್ತು 1.50 ಲಕ್ಷ ರೂ. ನಗದು, ಕ್ರೀಡಾರತ್ನ ಪ್ರಶಸ್ತಿಯು ಫಲಕ ಹಾಗೂ 1 ಲಕ್ಷ ರೂ. ನಗದು ಬಹುಮಾನ ಹೊಂದಿದೆ.

Translate »