ಕೊಡಗು

ಕೊಡಗಿನಲ್ಲಿ ಕೊರೊನಾ ದೃಢ: ಮಂಡ್ಯ, ಮೈಸೂರಿನಲ್ಲಿ ಆತಂಕ
ಕೊಡಗು

ಕೊಡಗಿನಲ್ಲಿ ಕೊರೊನಾ ದೃಢ: ಮಂಡ್ಯ, ಮೈಸೂರಿನಲ್ಲಿ ಆತಂಕ

March 20, 2020

ಸೋಂಕಿತ ವ್ಯಕ್ತಿ ಓಡಾಡಿದ ಮಾರ್ಗಗಳ ಸಂಪೂರ್ಣ ವಿವರ ಮಡಿಕೇರಿ, ಮಾ.19- ಕೊಡಗು ಜಿಲ್ಲೆಯ ಕೊಂಡಂಗೇರಿಯ 35 ವರ್ಷದ ವ್ಯಕ್ತಿಯೊಬ್ಬ ರಿಗೆ ಕೊರೊನಾ ವೈರಸ್ ತಗುಲಿರುವ ಬಗ್ಗೆ ಮೈಸೂರು ಮೆಡಿಕಲ್ ಕಾಲೇಜಿನ ವರದಿಯಿಂದ ದೃಢಪಟ್ಟಿದೆ. ಇದರಿಂದಾಗಿ ಇಡೀ ಕೊಡಗು ಜಿಲ್ಲೆ ಮಾತ್ರವಲ್ಲದೇ, ಬೆಂಗಳೂರು, ಮಂಡ್ಯ, ಮೈಸೂರು ಬೆಚ್ಚಿ ಬಿದ್ದಿದೆ. ಈ ವ್ಯಕ್ತಿ ದುಬೈನಿಂದ ಬೆಂಗಳೂರಿಗೆ ಬಂದಿಳಿದ್ದು, ಬಳಿಕ ರಾಜಹಂಸ ಬಸ್ ನಲ್ಲಿ ಮಂಡ್ಯ, ಮೈಸೂರಿನ ಹೊಟೇಲ್‍ನಲ್ಲಿ ಊಟೋಪಚಾರವನ್ನೂ ಮಾಡಿದ್ದಾನೆ. ಮಾ.15ರ ಸಂಜೆ 4.30ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ…

ಅಂಗಡಿಗೆ ಆಕಸ್ಮಿಕ ಬೆಂಕಿ
ಕೊಡಗು

ಅಂಗಡಿಗೆ ಆಕಸ್ಮಿಕ ಬೆಂಕಿ

March 20, 2020

ಮಡಿಕೇರಿ, ಮಾ.19- ಮಡಿಕೇರಿ ಭಾಗಮಂಡಲ ರಸ್ತೆಯಲ್ಲಿನ ಬೆಟ್ಟಗೇರಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಸುಡುಬಿಸಿಲಿನ ಹೊತ್ತಿನಲ್ಲಿಯೇ ಅಂಗಡಿ ಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿದೆ. ಅಬ್ದುಲ್ ಖಾದರ್ ಅವರಿಗೆ ಸೇರಿದ ಹಾರ್ಡ್‍ವೇರ್ ಅಂಗಡಿಗೆ ತಗುಲಿದ ಬೆಂಕಿಯಿಂದ ಅಂಗಡಿಯಲ್ಲಿದ್ದ ಸಾವಿ ರಾರು ಮೌಲ್ಯದ ವಸ್ತುಗಳು ಸುಟ್ಟು ಬೂದಿಯಾಗಿ ಅಪಾರ ನಷ್ಟ ಸಂಭವಿಸಿದೆ. ಹಾದಿಹೋಕರು ಮತ್ತು ಬೆಟ್ಟಗೇರಿ ಗ್ರಾಮಸ್ಥರು ಅಂಗಡಿಗೆ ತಗುಲಿದ ಬೆಂಕಿ ನಂದಿಸುವಲ್ಲಿ ಹರಸಾಹಸವನ್ನೇಪಟ್ಟರು. ಮಡಿಕೇರಿಯಿಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವಲ್ಲಿ ಸಫಲರಾದರು.

ಕುಟ್ಟ-ತೋಲ್ಪಟ್ಟಿ ಚೆಕ್‍ಪೆÇೀಸ್ಟ್‍ಗಳಿಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ
ಕೊಡಗು

ಕುಟ್ಟ-ತೋಲ್ಪಟ್ಟಿ ಚೆಕ್‍ಪೆÇೀಸ್ಟ್‍ಗಳಿಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

March 18, 2020

ಮಡಿಕೇರಿ,ಮಾ.17-ಜಿಲ್ಲೆಯ ಗಡಿ ಭಾಗ ಕುಟ್ಟ ಮತ್ತು ತೋಲ್ಪಟ್ಟಿ ಚೆಕ್‍ಪೆÇೀಸ್ಟ್ ಹಾಗೂ ಕುಟ್ಟ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ಹಾಗೆಯೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ತೆರೆಯಲಾಗಿರುವ ಚೆಕ್ ಪೆÇೀಸ್ಟ್‍ಗಳನ್ನು ಪರಿಶೀಲಿಸಿದರು. ಕೊರೊನ ವೈರಸ್ ಹರಡದಂತೆ ಕರ್ನಾಟಕ ಸರ್ಕಾರವು ಮುನ್ನೆಚ್ಚರಿಕಾ ಕ್ರಮ ಗಳನ್ನು ಕೈಗೊಂಡು ಹೂರಡಿಸಿರುವ ಆದೇಶಗಳನ್ನು ಆಧರಿಸಿ ಜಿಲ್ಲಾಡಳಿತದಿಂದ ಮಾರ್ಚ್ 13 ರಂದು ಮರು ಆದೇಶವನ್ನು ಹೊರಡಿಸಿ,…

ಜಿಲ್ಲೆಯ ಧಾರ್ಮಿಕ ಕೇಂದ್ರಗಳಲ್ಲೂ ಭಕ್ತರ ಸಂಖ್ಯೆ ಕ್ಷೀಣ
ಕೊಡಗು

ಜಿಲ್ಲೆಯ ಧಾರ್ಮಿಕ ಕೇಂದ್ರಗಳಲ್ಲೂ ಭಕ್ತರ ಸಂಖ್ಯೆ ಕ್ಷೀಣ

March 18, 2020

ಮಡಿಕೇರಿ,ಮಾ.17-ಕೊರೊನಾ ವೈರಸ್ ಆತಂಕ ಜಿಲ್ಲೆಯ ದೇವಾಲಯ ಗಳಲ್ಲೂ ಮನೆ ಮಾಡಿರುವುದು ಕಂಡು ಬಂದಿದೆ. ಜಿಲ್ಲೆಯ ಪ್ರಸಿದ್ದ ಮತ್ತು ಪ್ರಮುಖ ದೇವಾಲಯ ಎನಿಸಿರುವ ಕಾವೇರಿ ತವರು ತಲಕಾವೇರಿ ಮತ್ತು ಭಾಗಮಂಡಲ ದಲ್ಲೂ ಬೆರಳೆಣಿಕೆ ಭಕ್ತರು ಕಂಡು ಬರುತ್ತಿ ದ್ದಾರೆ. ಸಾಮಾನ್ಯವಾಗಿ ಈ ತಿಂಗಳಲ್ಲಿ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಿ ರುತ್ತಿತ್ತು. ಆದರೆ ದೇಶ ಸೇರಿದಂತೆ ರಾಜ್ಯ ದಲ್ಲೂ ಕೊರೊನಾ ಸೋಂಕಿನ ಭೀತಿ ಆವರಿ ಸಿರುವ ಹಿನ್ನಲೆಯಲ್ಲಿ ಜನರು ಕೂಡ ದೇವಾ ಲಯಗಳಿಗೆ ಹೋಗಲು ಮುಂದಾಗುತ್ತಿಲ್ಲ. ಭಾಗಮಂಡಲ ತಲಕಾವೇರಿಯಲ್ಲಿ…

ಕೊಡಗಿನಲ್ಲಿ ಕಾಡಾನೆ ಹಾವಳಿಗೆ ಅರಣ್ಯ ಒತ್ತುವರಿಯೇ ಕಾರಣ
ಕೊಡಗು

ಕೊಡಗಿನಲ್ಲಿ ಕಾಡಾನೆ ಹಾವಳಿಗೆ ಅರಣ್ಯ ಒತ್ತುವರಿಯೇ ಕಾರಣ

March 18, 2020

ಮಡಿಕೇರಿ,ಮಾ.17-ಮಾನವನ ಹಸ್ತ ಕ್ಷೇಪ ಮತ್ತು ಜೈವಿಕ ಅಡೆತಡೆಗಳಿಂದ ಅರಣ್ಯ ಪ್ರದೇಶಗಳು ಕ್ಷೀಣಿಸುತ್ತಿದ್ದು, ಕಾಡಾನೆಗಳ ಆವಾಸ ಸ್ಥಾನಗಳ ಮೇಲೆ ಒತ್ತಡ ಹೆಚ್ಚಾಗು ತ್ತಿರುವುದೇ ಕೊಡಗಿನಲ್ಲಿ ಕಾಡಾನೆಗಳ ದಾಳಿಗೆ ಕಾರಣವೆಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಖಾತೆ ಸಚಿವ ಆನಂದ ಸಿಂಗ್ ತಿಳಿಸಿದ್ದಾರೆ. ವಿಧಾನ ಪರಿಷತ್ ಸದಸ್ಯೆ ಶಾಂತೆ ಯಂಡ ವೀಣಾ ಅಚ್ಚಯ್ಯ ಅವರು ಕಾಡಾನೆ ದಾಳಿ ತಡೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಕೇಳಿರುವ ಪ್ರಶ್ನೆಗಳಿಗೆ ಅರಣ್ಯ ಸಚಿವರು ನೀಡಿದರು. ಇತ್ತೀಚಿನ ವರ್ಷಗಳಲ್ಲಿ ಜನಸಂಖ್ಯೆ ಹೆಚ್ಚಳ, ನಗರೀಕರಣ ಹಾಗೂ ಅನೇಕ…

ಕೊರೊನಾ ತಡೆಗೆ ರಾಜ್ಯ ಸರ್ಕಾರದಿಂದ ಮುನ್ನೆಚ್ಚರಿಕೆ: ಬೋಪಯ್ಯ
ಕೊಡಗು

ಕೊರೊನಾ ತಡೆಗೆ ರಾಜ್ಯ ಸರ್ಕಾರದಿಂದ ಮುನ್ನೆಚ್ಚರಿಕೆ: ಬೋಪಯ್ಯ

March 17, 2020

ವಿರಾಜಪೇಟೆ,ಮಾ.16-ರಾಜ್ಯದಲ್ಲಿ ಈಗಾಗಲೇ ಕೊರೊನಾ ವೈರಸ್ ಸೋಂ ಕು ತಡೆಗೆ ಸರ್ಕಾರ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದರು. ಇಲ್ಲಿನ ಪಪಂ ಪುರಭವನದಲ್ಲಿ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು ಪಪಂ, ತಾಲೂಕು ಕಚೇರಿ, ಸ್ಥಳೀಯ ಮುಖ್ಯ ವೈದ್ಯರು ಹಾಗೂ ನಾಗರಿಕರ ಸಭೆಯಲ್ಲಿ ಮಾತನಾಡಿದ ಅವರು, ವಿಶ್ವ ದಾದ್ಯಂತ ವ್ಯಾಪಿಸಿರುವ ಈ ಕೊರೊನಾ ವೈರಸ್ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಈಗಾಗಲೇ ರಾಜ್ಯ ಸರ್ಕಾರ ಕೊರೊನಾ ತಡೆಗೆ ಸೂಕ್ತ ಕ್ರಮ…

ಕೊಡಗಿನಲ್ಲಿ ಕೊರೊನಾ  ಸೋಂಕು ತಡೆಗೆ ಕಟ್ಟುನಿಟ್ಟಿನ ಕ್ರಮ
ಕೊಡಗು

ಕೊಡಗಿನಲ್ಲಿ ಕೊರೊನಾ ಸೋಂಕು ತಡೆಗೆ ಕಟ್ಟುನಿಟ್ಟಿನ ಕ್ರಮ

March 17, 2020

ಮಡಿಕೇರಿ,ಮಾ.16-ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಜಿಲ್ಲಾಡಳಿತ ಯುದ್ದೋಪಾದಿಯಾಗಿ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಮುಖ್ಯವಾಗಿ ಕೊರೊನಾ ಸೋಂಕು ಬಾಧಿಸಿರುವ ದೇಶಗಳಿಂದ ಜಿಲ್ಲೆಗೆ ಬಂದಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಇಂದಿನವರೆಗೆ ಮಡಿಕೇರಿ ತಾಲೂಕಿನಲ್ಲಿ 56, ವಿರಾಜಪೇಟೆ ತಾಲೂಕಿನಲ್ಲಿ 31 ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 44 ಜನರನ್ನು ಪತ್ತೆ ಹಚ್ಚಲಾಗಿದೆ. ಈ ಪೈಕಿ 128 ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಅವರ ಮನೆಗಳಲ್ಲೇ ಸಂಪರ್ಕ ತಡೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತದ ಈ ಸೂಚನೆಯನ್ನು ಉಲಂ್ಲಘಿಸಿದ ಓರ್ವ ವ್ಯಕ್ತಿಗೆ…

3 ವರ್ಷದಿಂದ ತಲೆ ಮರೆಸಿಕೊಂಡಿದ್ದ ಮನೆಗಳವು ಆರೋಪಿ ಸೇರಿ ಮೂವರ ಬಂಧನ
ಕೊಡಗು

3 ವರ್ಷದಿಂದ ತಲೆ ಮರೆಸಿಕೊಂಡಿದ್ದ ಮನೆಗಳವು ಆರೋಪಿ ಸೇರಿ ಮೂವರ ಬಂಧನ

March 17, 2020

ಮಡಿಕೇರಿ,ಮಾ.16-ಶನಿವಾರಸಂತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ 3 ವರ್ಷ ಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಮತ್ತು ಕಳವು ಕೃತ್ಯಕ್ಕೆ ಸಹಕರಿಸು ತ್ತಿದ್ದ ಇಬ್ಬರು ಸಹಚರರು ಸೇರಿದಂತೆ ಒಟ್ಟು 3 ಮಂದಿಯನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಶನಿವಾರಸಂತೆ ಪೊಲೀ ಸರು ಯಶಸ್ವಿಯಾಗಿದ್ದಾರೆ. ಕೊಡ್ಲಿಪೇಟೆ ಹೋಬಳಿಯ ಕಣಗಾಲ್ ನಾಕಲಗೋಡು ಗ್ರಾಮದ ನಿವಾಸಿ ಸಣ್ಣಪ್ಪ ಅಲಿಯಾಸ್ ಡೀಲಾಕ್ಷ ಅಲಿಯಾಸ್ ಮಧು (45), ಕೊಡ್ಲಿಪೇಟೆ ಹೋಬಳಿಯ ಅವರೆ ದಾಳು ಗ್ರಾಮದ ನಿವಾಸಿ ಕುಶಾಲ್(47) ಮತ್ತು ಸೋಮವಾರಪೇಟೆ ಕಾರ್ಪೋ ರೇಷನ್…

ಕುಶಾಲನಗರದಲ್ಲಿ ನಡುತೋಪಿಗೆ ಬೆಂಕಿ ; ನೂರಾರು ಗಿಡಗಳ ನಾಶ
ಕೊಡಗು

ಕುಶಾಲನಗರದಲ್ಲಿ ನಡುತೋಪಿಗೆ ಬೆಂಕಿ ; ನೂರಾರು ಗಿಡಗಳ ನಾಶ

March 17, 2020

ಕುಶಾಲನಗರ,ಮಾ.16-ಬೇಸಿಗೆ ಉರಿ ಬಿಸಿಲು ಹೆಚ್ಚಾಗುತ್ತಿದ್ದು ಇದರ ನಡುವೆ ಕುಶಾಲನಗರ ಆರ್‍ಎಂಸಿ ಆವರಣದಲ್ಲಿನ ನಡುತೋಪಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಕಳೆದ 4 ವರ್ಷಗಳ ಹಿಂದೆ ಅರಣ್ಯ ಇಲಾಖೆ ಮತ್ತು ಕುಶಾಲನಗರ ಕಾವೇರಿ ಪರಿಸರ ರಕ್ಷಣಾ ಬಳಗ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನೆಟ್ಟು ಬೆಳೆಸಿದ್ದ ನೂರಾರು ಗಿಡಗಳು ಬೆಂಕಿಯ ಕೆನ್ನಾಲಿಗೆಗೆ ಬೆಂದು, ಸುಟ್ಟುಹೋಗಿರುವ ದೃಶ್ಯ ಮನಕಲಕುತ್ತಿದೆ.ಭಾನುವಾರ ಈ ಘಟನೆ ನಡೆದಿದ್ದು ಬೆಳೆದು ನಿಂತಿದ್ದ ವಿವಿಧ ಜಾತಿಗಳ ಗಿಡ ಮರಗಳು ಬಹುತೇಕ ನಾಶವಾಗಿದೆ. ಅರಣ್ಯ ಇಲಾಖೆಯ ನಡುತೋಪು ಯೋಜನೆಯಡಿಯಲ್ಲಿ ಆರ್‍ಎಂಸಿ…

ಕೊಡಗಿನಲ್ಲಿ ಕೊರೊನಾ ತಂದ ಆರ್ಥಿಕ ಸಂಕಷ್ಟ
ಕೊಡಗು

ಕೊಡಗಿನಲ್ಲಿ ಕೊರೊನಾ ತಂದ ಆರ್ಥಿಕ ಸಂಕಷ್ಟ

March 17, 2020

ಮಡಿಕೇರಿ,ಮಾ.16-ಕೊರೊನಾ ಎಂಬ ಮಹಾಮಾರಿಯಿಂದಾಗಿ ಜಗತ್ತೇ ತಲ್ಲಣ ಗೊಂಡಿದ್ದು, ಅದರ ಪರಿಣಾಮ ಪುಟ್ಟ ಜಿಲ್ಲೆಯಾದ ಕೊಡಗಿಗೂ ತಗುಲಿದೆ. ಸತತ ಎರಡು ವರ್ಷಗಳಿಂದ ಮಹಾಮಳೆಗೆ ಸಿಲುಕಿ ಪ್ರಾಕೃತಿಕ ವಿಕೋಪದಿಂದ ಕಂಗೆ ಟ್ಟಿದ್ದ ಕೊಡಗು ಜಿಲ್ಲೆಯ ಆರ್ಥಿಕತೆ ಈ ವರ್ಷದ ಆರಂಭದಲ್ಲಿ ಒಂದಷ್ಟು ಚೇತರಿಕೆ ಕಾಣುತ್ತಿರುವಂತೆಯೇ ಕೊರೊನಾದಿಂದಾಗಿ ತಲೆದೋರಿರುವ ಆರ್ಥಿಕ ಸಂಕಷ್ಟ ಮತ್ತೊಮ್ಮೆ ಜಿಲ್ಲೆಯ ವ್ಯಾಪಾರೋದ್ಯಮಿ ಗಳನ್ನು ಭಾರೀ ನಷ್ಟದತ್ತ ತಳ್ಳಿದೆ. ಕಳೆದ ಎರಡು ವರ್ಷಗಳಿಂದ ಕೊಡಗಿ ನಲ್ಲಿ ಸಂಭವಿಸಿದ್ದ ಮಹಾಮಳೆ, ಪ್ರವಾಹ ಪರಿಸ್ಥಿತಿಯಿಂದಾಗಿ ರಾಜ್ಯದ ಅತೀ ಪುಟ್ಟ ಜಿಲ್ಲೆಯಾದ ಕೊಡಗು…

1 28 29 30 31 32 187
Translate »