ಕೊಡಗು

ಕೊಡಗಿನಲ್ಲಿ ಕಾಡಾನೆಗಳ ಅಟ್ಟಹಾಸ..!
ಕೊಡಗು

ಕೊಡಗಿನಲ್ಲಿ ಕಾಡಾನೆಗಳ ಅಟ್ಟಹಾಸ..!

January 7, 2020

ಕಾಫಿ ತೋಟಗಳಲ್ಲೇ ಕಾಡಾನೆಗಳ ವಾಸ ಸಂಕಷ್ಟದಲ್ಲಿ ಕಾರ್ಮಿಕರು, ಬೆಳೆಗಾರರು ಕಾಡಾನೆ ಹಾವಳಿ ತಡೆಗೆ ಅರಣ್ಯ ಇಲಾಖೆ ವಿಫಲಕಾಫಿ ಕೊಯ್ಲು, ಭತ್ತ ಕಟಾವಿಗೆ ಕಂಟಕ ಮಡಿಕೇರಿ, ಜ.6- ಕೊಡಗು ಜಿಲ್ಲೆ ಯಾದ್ಯಂತ ಕಾಡಾನೆಗಳ ಅಟ್ಟಹಾಸ ಮುಂದುವರೆದಿದೆ. ವೀರಾಜಪೇಟೆ ಮತ್ತು ಸೋಮವಾರಪೇಟೆ ಸೇರಿದಂತೆ ಜಿಲ್ಲೆಯ ಬಹುತೇಕ ಪ್ರದೇಶದಲ್ಲಿ ಈಗ ಕಾಡಾನೆ-ಮಾನವ ಸಂಘರ್ಷ ಸಾಮಾನ್ಯ ಎಂಬಂತಾ ಗಿದ್ದು, ಆತಂಕ ಸೃಷ್ಟಿ ಮಾಡಿದೆ. ಜಿಲ್ಲೆಯ ಜನತೆಗೆ ವರ್ಷದ ಕೂಳು ನೀಡುವ ಕಾಫಿ ಮತ್ತು ಭತ್ತ ಕೊಯ್ಲು ಸಂದರ್ಭದಲ್ಲಿ ಹಾಡಹಗಲೇ ಜನವಸತಿ ಪ್ರದೇಶಗಳಿಗೆ ಕಾಡಾನೆಗಳು…

ಕುಶಾಲನಗರ: ಶ್ರದ್ಧಾಭಕ್ತಿಯ ವೈಕುಂಠ ಏಕಾದಶಿ
ಕೊಡಗು

ಕುಶಾಲನಗರ: ಶ್ರದ್ಧಾಭಕ್ತಿಯ ವೈಕುಂಠ ಏಕಾದಶಿ

January 7, 2020

ಕುಶಾಲನಗರ, ಜ.6- ನಗರದ ರಥ ಬೀದಿಯಲ್ಲಿರುವ ಶ್ರೀಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವೈಕುಂಠ ಏಕಾದಶಿ ವಿಶೇಷ ಪೂಜಾ ಕಾರ್ಯಕ್ರಮ ಶ್ರದ್ಧಾ-ಭಕ್ತಿಯಿಂದ ನೆರವೇರಿತು. ಆರ್ಯವೈಶ್ಯ ಮಂಡಳಿಯಿಂದ ನಡೆದ ಪೂಜಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ಭಕ್ತರು ಪಾಲ್ಗೊಂಡು ಶ್ರೀನಿವಾಸನ ದರ್ಶನ ಪಡೆದು ಪುನೀತರಾದರು. ಬೆಳಿಗ್ಗೆ 7.30ಕ್ಕೆ ಮಹಾಸಂಕಲ್ಪದೊಂ ದಿಗೆ ಪೂಜಾ ಕೈಂಕರ್ಯಗಳು ಆರಂಭ ಗೊಂಡವರು. ಅರ್ಚಕ ಪ್ರಮೋದ್ ಭಟ್ ನೇತೃತ್ವದ ತಂಡದಿಂದ ಪೂಜಾ ವಿಧಿಗಳು ನೆರವೇರಿದವು. ಪಂಚಾಮೃತ ಅಭಿಷೇಕ, ಮಹಾಮಂಗಳಾರತಿಯೊಂದಿಗೆ ಮಧ್ಯಾಹ್ನ 12.30ಕ್ಕೆ ಸ್ವರ್ಗದ ಬಾಗಿಲು ಅನಾವರಣ ಗೊಳಿಸಲಾಯಿತು. ದೇವಾಲಯ…

ಪೌರತ್ವ ತಿದ್ದುಪಡಿ ಕಾಯ್ದೆಯ ಸಮಗ್ರ ಮಾಹಿತಿ ನೀಡಲು ಕರೆ
ಕೊಡಗು

ಪೌರತ್ವ ತಿದ್ದುಪಡಿ ಕಾಯ್ದೆಯ ಸಮಗ್ರ ಮಾಹಿತಿ ನೀಡಲು ಕರೆ

January 7, 2020

ಸೋಮವಾರಪೇಟೆ, ಜ.6- ಪೌರತ್ವ ತಿದ್ದು ಪಡಿ ಕಾಯ್ದೆಯ ಬಗ್ಗೆ ಕಾಂಗ್ರೆಸ್ ಸೇರಿ ದಂತೆ ಇತರೆ ಪಕ್ಷಗಳು ಮುಸ್ಲಿಂ ಸಮು ದಾಯಕ್ಕೆ ತಪ್ಪು ಸಂದೇಶ ರವಾನಿಸಿ ಸರ್ಕಾ ರದ ವಿರುದ್ಧ ಎತ್ತಿಕಟ್ಟುತ್ತಿದ್ದು, ಈ ಬಗ್ಗೆ ಪ್ರತಿ ಮನೆಗೆ ಬಿಜೆಪಿ ಕಾರ್ಯಕರ್ತರು ತೆರಳಿ ಕಾಯ್ದೆಯ ಬಗ್ಗೆ ಸಮಗ್ರ ಮಾಹಿತಿ ಒದಗಿಸಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಕರೆ ನೀಡಿದರು. ಇಲ್ಲಿನ ಕೊಡವ ಸಮಾಜದಲ್ಲಿ ಸೋಮ ವಾರಪೇಟೆಯ ಬಿಜೆಪಿ ಮಂಡಲ ವತಿ ಯಿಂದ ಆಯೋಜಿಸಿದ್ದ ಜನಜಾಗೃತಿ ಅಭಿ ಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ…

ರಸ್ತೆ ವಿಸ್ತರಣೆಗೆ ಸ್ಥಳೀಯರು ಸಹಕರಿಸಿ: ಶಾಸಕ ಕೆ.ಜಿ.ಬೋಪಯ್ಯ ಮನವಿ
ಕೊಡಗು

ರಸ್ತೆ ವಿಸ್ತರಣೆಗೆ ಸ್ಥಳೀಯರು ಸಹಕರಿಸಿ: ಶಾಸಕ ಕೆ.ಜಿ.ಬೋಪಯ್ಯ ಮನವಿ

January 7, 2020

ವೀರಾಜಪೇಟೆ, ಜ.6- ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ ನಿರ್ಮಾಣ ಸೇರಿದಂತೆ ಇತರ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಸ್ಥಳೀಯ ನಿವಾಸಿಗಳು ರಸ್ತೆ ವಿಸ್ತರಣೆಗೆ ಸಹಕಾರ ನೀಡಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಸ್‍ಬಿಐ ಬ್ಯಾಂಕ್ ಮುಂಭಾಗದ ರಸ್ತೆ ಡಾಂಬರೀ ಕರಣ, ಮಠದ ಗದ್ದೆ ಬಳಿಯಿಂದ ಚರ್ಚ್‍ಗೆ ಸಂಪರ್ಕ ಕಲ್ಪಿಸುವ ರಸ್ತೆ ಮೇಲ್ದರ್ಜೆ ಮತ್ತು ಶಿವಕೇರಿಯಲ್ಲಿರುವ ನೀರಿನ ಶುದ್ಧೀಕರಣ ಟ್ಯಾಂಕ್ ಬಳಿ ಪಂಚಾಯಿತಿ ಸಿಬ್ಬಂದಿ, ಅಧಿ ಕಾರಿಗಳಿಗೆ ನೂತನ ವಸತಿ ಗೃಹ ನಿರ್ಮಾಣ…

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸಲ್ಮಾನರಿಗೆ ತೊಂದರೆಯಿಲ್ಲ ಜಾಗೃತಿ ಅಭಿಯಾನದಲ್ಲಿ ಶಾಸಕ ಕೆ.ಜಿ.ಬೋಪಯ್ಯ ಸ್ಪಷ್ಟನೆ
ಕೊಡಗು

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸಲ್ಮಾನರಿಗೆ ತೊಂದರೆಯಿಲ್ಲ ಜಾಗೃತಿ ಅಭಿಯಾನದಲ್ಲಿ ಶಾಸಕ ಕೆ.ಜಿ.ಬೋಪಯ್ಯ ಸ್ಪಷ್ಟನೆ

January 6, 2020

ಮಡಿಕೇರಿ, ಜ.5- ಮುಸಲ್ಮಾನರು ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಯಾವುದೇ ಆತಂಕ ಮತ್ತು ಗೊಂದಲಪಡುವ ಅಗತ್ಯವಿಲ್ಲ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. ಮಡಿಕೇರಿ ನಗರ ಬಿಜೆಪಿ ಘಟಕದಿಂದ ಪೌರತ್ವ ಕಾಯ್ದೆ ಬೆಂಬಲಿಸಿ ಜಾಗೃತಿ ಅಭಿಯಾನಕ್ಕೆ ನಗರದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ವಿನಾಕಾರಣ ನಡೆಯುತ್ತಿ ರುವ ಅಪಪ್ರಚಾರಗಳಿಗೆ ಕಿವಿಗೊಡದೆ ಪೌರತ್ವ ತಿದ್ದುಪಡಿ ವಿಧೇಯಕದ ಬಗ್ಗೆ ಸಮಗ್ರ ಮಾಹಿತಿಯನ್ನು ಅರ್ಥ ಮಾಡಿಕೊಂಡಾಗ ಇದು ಮುಸ್ಲಿಂ ವಿರೋಧಿ ಅಲ್ಲ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು. ಬಾಂಗ್ಲಾ, ಅಫ್ಘಾನಿಸ್ತಾನ, ಪಾಕಿಸ್ತಾನದಲ್ಲಿ ಧಾರ್ಮಿಕ…

ಗುಣಮಟ್ಟದ ಶಿಕ್ಷಣ ನೀಡುವುದೇ ಮೊರಾರ್ಜಿ ಶಾಲೆಯ ಆದ್ಯತೆ
ಕೊಡಗು

ಗುಣಮಟ್ಟದ ಶಿಕ್ಷಣ ನೀಡುವುದೇ ಮೊರಾರ್ಜಿ ಶಾಲೆಯ ಆದ್ಯತೆ

January 6, 2020

ಕುಶಾಲನಗರ, ಜ.5- ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡುವುದೇ ಮೊರಾರ್ಜಿ ದೇಸಾಯಿ ಶಾಲೆಯ ಮೊದಲ ಆದ್ಯತೆ ಯಾಗಿದೆ ಎಂದು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಮಹದೇವ್ ಪ್ರಕಾಶ್ ಹೇಳಿದರು. ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿಯ ಲ್ಲಿರುವ ಮೊರಾರ್ಜಿ ದೇಸಾಯಿ ಸರ್ಕಾರಿ ವಸತಿ ಶಾಲೆ ಹಾಗೂ ವಿಜ್ಞಾನ ಪಿಯು ಕಾಲೇಜಿನಲ್ಲಿ ಶನಿವಾರ ಸಂಜೆ ಏರ್ಪಡಿ ಸಿದ್ದ ಶಾಲಾ ವಾರ್ಷಿಕೋತ್ಸವ ಮತ್ತು ಸಂಚಿಕೆ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ಮೊದಲು ಕಲಿಸಬೇಕಾಗಿರು ವುದು…

ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪಗೆ ಅದ್ಧೂರಿ ಸ್ವಾಗತ
ಕೊಡಗು

ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪಗೆ ಅದ್ಧೂರಿ ಸ್ವಾಗತ

January 6, 2020

ಗೋಣಿಕೊಪ್ಪಲು, ಜ.5- ರಂಗಾಯಣದ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪೊನ್ನಂಪೇಟೆಗೆ ಮೊದಲ ಬಾರಿಗೆ ಆಗಮಿಸಿದ ರಂಗಭೂಮಿ ಕಲಾವಿದ ಪೊನ್ನ ಪೇಟೆಯ ಅಡ್ಡಂಡ ಕಾರ್ಯಪ್ಪ ಅವರನ್ನು ಪೊನ್ನಂಪೇಟೆಯ ನಾಗರಿಕರು, ನಿಸರ್ಗ ಯುವತಿ ಮಂಡಳಿ, ಹಿರಿಯ ನಾಗರಿಕ ಸಮಿತಿ ಯಿಂದ ಅದ್ಧೂರಿಯಾಗಿ ಸ್ವಾಗÀತಿಸಲಾಯಿತು. ಮೊದಲಿಗೆ ಅಡ್ಡಂಡ ಕಾರ್ಯಪ್ಪ ಅವರು ಪೊನ್ನಂಪೇಟೆಯ ಬಸ್ ನಿಲ್ದಾಣ ದಲ್ಲಿರುವ ಬಸವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಟೌನ್ ಬ್ಯಾಂಕ್ ಸಹಕಾರ ಸಂಘದ ಸಭಾಂಗಣ ದಲ್ಲಿ ಹಿರಿಯ ವೈದ್ಯ ಡಾ.ಶಿವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ…

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನೆ
ಕೊಡಗು

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನೆ

January 6, 2020

ಸಿದ್ದಾಪುರ, ಜ.5- ಕೇಂದ್ರ ಸರಕಾರ ಜಾರಿಗೆ ತಂದಿರುವ ಸಿಎಎ, ಎನ್‍ಆರ್‍ಸಿ ಹಾಗೂ ಎನ್‍ಪಿಆರ್ ವಿರೋಧಿಸಿ ಸಿದ್ದಾ ಪುರದ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ವತಿಯಿಂದ ಇಲ್ಲಿಯ ಚರ್ಚ್ ಮೈದಾನದಲ್ಲಿ ಸಮಿತಿಯ ಅಧ್ಯಕ್ಷ ಕೆ.ಯು ಅಬ್ದುಲ್ ಮಜೀದ್ ಅಧ್ಯಕ್ಷತೆಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು. ಇದೇ ಸಂದರ್ಭದಲ್ಲಿ ಹೋರಾಟದಲ್ಲಿ ಹುತಾತ್ಮರಾದವರಿಗೆ ಮೌನಾಚರಣೆ ಮಾಡಿ ಗೌರವ ಸಲ್ಲಿಸಿದರು. ಮಹಾತ್ಮಾಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಕುವೆಂಪು ಭಾವ ಚಿತ್ರ ಹಾಗೂ ರಾಷ್ಟ್ರಧ್ವಜ ಹಿಡಿದುಕೊಂಡು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದರು. ಸಮಾವೇಶದಲ್ಲಿ ಸಂವಿಧಾನ ವಿರೋಧಿ ಕಾಯ್ದೆಯನ್ನು ಸರಕಾರ…

ಪೆಟ್ರೋಲ್ ಬಂಕ್‍ನಲ್ಲಿ ನೂಕು-ನುಗ್ಗಲು ನಿಯಂತ್ರಿಸಲು ಪೊಲೀಸರ ಹರಸಾಹಸ
ಕೊಡಗು

ಪೆಟ್ರೋಲ್ ಬಂಕ್‍ನಲ್ಲಿ ನೂಕು-ನುಗ್ಗಲು ನಿಯಂತ್ರಿಸಲು ಪೊಲೀಸರ ಹರಸಾಹಸ

January 2, 2020

ಮೈಸೂರು,ಜ.1(ಆರ್‍ಕೆ)- ವಾಹನ ಗಳಿಗೆ ಇಂಧನ ತುಂಬಿಸಿಕೊಳ್ಳಲು ಉಂಟಾದ ನೂಕು-ನುಗ್ಗಲು ನಿಯಂತ್ರಿಸಲು ಪೊಲೀ ಸರು ಹರಸಾಹಸ ಪಡಬೇಕಾಗಿ ಬಂದ ಘಟನೆ ಮೈಸೂರಿನ ಮೆಟ್ರೊಪೋಲ್ ಸರ್ಕಲ್ ಬಳಿ ಮಂಗಳವಾರ ಮಧ್ಯರಾತ್ರಿ ನಡೆಯಿತು. ದಿನದ 24 ಗಂಟೆಯೂ ತೆರೆದಿರುವ ಮೆಟ್ರೊಪೋಲ್ ಸರ್ಕಲ್ (ಕೆ.ಎಂ. ಕಾರ್ಯಪ್ಪ ವೃತ್ತ)ನಲ್ಲಿರುವ ಪೆಟ್ರೋಲ್ ಬಂಕ್‍ನಲ್ಲಿ ಮಧ್ಯರಾತ್ರಿಯಾದರೂ ಯುವಕರು ಇಂಧನ ತುಂಬಿಸಿಕೊಳ್ಳಲು ಮುಗಿ ಬೀಳುತ್ತಿದ್ದರು. ಹೊಸ ವರ್ಷಾಚರಣೆ ಪಾರ್ಟಿ ಮುಗಿಸಿ ಹೋಗುವಾಗ ನೂರಾರು ವಾಹನಗಳು ಜಮಾಯಿಸಿದ್ದರಿಂದ ಪೆಟ್ರೋಲ್ ಹಾಕಿಸಿ ಕೊಳ್ಳಲು ಯುವಕರು ನುಗ್ಗುತ್ತಿದ್ದರು. ವಾಹನಗಳು ಸಾಲುಗಟ್ಟಿ ನಿಂತಿದ್ದರೂ, ಕೆಲವರು…

ಶ್ರೀಮಂಗಲದಲ್ಲಿ ಒಣ ಕಸ ನಿರ್ವಹಣಾ ಘಟಕಕ್ಕೆ ಚಾಲನೆ
ಕೊಡಗು

ಶ್ರೀಮಂಗಲದಲ್ಲಿ ಒಣ ಕಸ ನಿರ್ವಹಣಾ ಘಟಕಕ್ಕೆ ಚಾಲನೆ

January 2, 2020

ಗೋಣಿಕೊಪ್ಪಲು, ಜ.1- ಶ್ರೀಮಂಗಲ ಗ್ರಾಪಂ ಪರಿಸರವನ್ನು ಸಂಪೂರ್ಣ ಕಸ ಮುಕ್ತ ಗ್ರಾಮವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಸುಮಾರು ರೂ.12.72 ಲಕ್ಷ ಯೋಜನೆಗೆ ಚಾಲನೆ ನೀಡಿದರು. 14ನೇ ಹಣಕಾಸು ಯೋಜನೆಯ ಅನುದಾನ ದಲ್ಲಿ ರೂ.2 ಲಕ್ಷ ವೆಚ್ಚದಲ್ಲಿ ಅಲ್ಲಿನ ಗ್ರಾಪಂ ಸಮೀಪವೇ ಒಣ ಕಸ ಘಟಕವನ್ನು ಶಾಸಕ ಬೋಪಯ್ಯ ಉದ್ಘಾಟಿಸಿದರು. ಇದೇ ಸಂದರ್ಭ ಸುಮಾರು ರೂ.3.70 ಲಕ್ಷ ವೆಚ್ಚದ ‘ಜೀತೋ ಗೂಡ್ಸ್ ಆಟೋ’ ಕಸ ಸಂಗ್ರಹದ ವಾಹನದ ಕೀಲಿಯನ್ನು ಗ್ರಾಪಂ ಅಧ್ಯಕ್ಷೆ ಚೋಕಿರ ಕಲ್ಪನಾಗೆ…

1 36 37 38 39 40 187
Translate »