ಮಂಡ್ಯ

ಗ್ರಾಪಂ ಸದಸ್ಯನ ಬರ್ಬರ ಹತ್ಯೆ
ಮಂಡ್ಯ, ಮೈಸೂರು

ಗ್ರಾಪಂ ಸದಸ್ಯನ ಬರ್ಬರ ಹತ್ಯೆ

February 20, 2019

ಪಾಂಡವಪುರ: ಹಳೇ ದ್ವೇಷದ ಹಿನ್ನೆಲೆ ಯಲ್ಲಿ ಗ್ರಾಪಂ ಸದಸ್ಯನೋರ್ವನನ್ನು ಸಾವಿರಾರು ಜನರೆ ದುರೇ ಮಾರಕಾಸ್ತ್ರ ಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತಾಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಸೋಮವಾರ ಮಧ್ಯರಾತ್ರಿ ದೇವಿರಮ್ಮನ ಜಾತ್ರೆ ವೇಳೆ ನಡೆದಿದೆ. ಚಿಕ್ಕಾಡೆ ಗ್ರಾಪಂ ಸದಸ್ಯ ತಿಮ್ಮೇಗೌಡ (50) ಹತ್ಯೆಗೊಳಗಾಗಿದ್ದು, ಘಟನೆಯಲ್ಲಿ ಎಪಿಎಂಸಿ ಸದಸ್ಯ ಸ್ವಾಮಿಗೌಡ, ಹತ್ಯೆ ಗೀಡಾದ ತಿಮ್ಮೇಗೌಡರ ಪುತ್ರ ವಿನಾಯಕ್, ಸಂಬಂಧಿಗಳಾದ ಗೌತಮ್, ಮಹೇಶ್ ಅವರಿಗೆ ಗಂಭೀರ ಗಾಯವಾಗಿದೆ. ಅದೇ ಗ್ರಾಮದ ನಿವಾಸಿಗಳಾದ ಯೋಗೇಗೌಡ, ಪುತ್ರ ಮದನ್, ಸೋದರ ಆನಂದ್ ಆಲಿ…

ರಕ್ಷಕರಿಗೇ ರಕ್ಷಣೆ ಇಲ್ಲಾಂದ್ರೆ ಇನ್ಯಾರಿಗೆ ರಕ್ಷಣೆ ಇದೆ..!
ಮಂಡ್ಯ, ಮೈಸೂರು

ರಕ್ಷಕರಿಗೇ ರಕ್ಷಣೆ ಇಲ್ಲಾಂದ್ರೆ ಇನ್ಯಾರಿಗೆ ರಕ್ಷಣೆ ಇದೆ..!

February 16, 2019

ಮಂಡ್ಯ: ದೇಶ ಕಾಯೋ ರಕ್ಷಕರಿಗೇ ರಕ್ಷಣೆ ಇಲ್ಲಾಂದ್ರೆ ಇನ್ಯಾರಿಗೆ ರಕ್ಷಣೆ ಇದೆ, ನನ್ನ ಗಂಡನನ್ನು ಕೊಂದವರನ್ನು ಬ್ಲಾಸ್ಟ್ ಮಾಡಿ, ಯಾವುದೇ ಕಾರಣಕ್ಕೂ ಬಿಡಬೇಡಿ..! ಜಮ್ಮು-ಕಾಶ್ಮೀರದ ಪುಲ್ವಾಮಾದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧ ಹೆಚ್.ಗುರು ಅವರ ಪತ್ನಿ ಕಲಾವತಿ ಅವರ ಆಕ್ರೋಶದ ನುಡಿಗಳಿವು. ಪತಿಯನ್ನು ಕಳೆದುಕೊಂಡ ದುಃಖದ ನಡುವೆಯೇ ತನ್ನ ಪತಿ ಸಾವಿಗೆ ಪ್ರತೀಕಾರ ಸಾರಿದರು. ನಾನು ಪ್ರತಿದಿನ ಅವರ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದೆ. ಅವರು ನಿನ್ನೆ ಬೆಳಿಗ್ಗೆ 11 ಗಂಟೆಗೆ ಫೋನ್ ಮಾಡಿದ್ದರು. ನಾನು ಕೆಲಸ ಮಾಡು…

ಮಂಡ್ಯ ಯೋಧ ಹುತಾತ್ಮ
ಮಂಡ್ಯ, ಮೈಸೂರು

ಮಂಡ್ಯ ಯೋಧ ಹುತಾತ್ಮ

February 15, 2019

ಭಾರತೀನಗರ: ಜಮ್ಮು-ಕಾಶ್ಮೀರದಲ್ಲಿ ಇಂದು ಮಧ್ಯಾಹ್ನ ನಡೆದ ಉಗ್ರರ ದಾಳಿಗೆ ಮಂಡ್ಯ ಜಿಲ್ಲೆಯ ಯೋಧ ನೋರ್ವ ಹುತಾತ್ಮನಾಗಿದ್ದಾನೆ ಎಂದು ವರದಿಯಾಗಿದೆ. ಮದ್ದೂರು ತಾಲೂಕು ಭಾರತೀ ನಗರ ಸಮೀಪದ ಗುಡಿಗೆರೆ ಗ್ರಾಮದ ಪೊನ್ನಯ್ಯ ಮತ್ತು ಚಿಕ್ಕೋಳಮ್ಮ ದಂಪತಿ ಪುತ್ರ ಹೆಚ್. ಗುರು (33) ಹುತಾತ್ಮರಾದ ಯೋಧರಾಗಿದ್ದು, ಇವರು ರಜೆಗಾಗಿ ಗ್ರಾಮಕ್ಕೆ ಬಂದಿದ್ದು, ಕಳೆದ ವಾರವಷ್ಟೇ ಕರ್ತವ್ಯಕ್ಕೆ ಹಿಂತಿರುಗಿದ್ದರು ಎಂದು ಹೇಳಲಾಗಿದೆ. ಹುತಾತ್ಮ ಗುರು ಕಳೆದ ಆರು ತಿಂಗಳ ಹಿಂದೆಯಷ್ಟೇ ಸಾತನೂರು ಬಳಿಯ ಸಾಸಲಪುರ ಗ್ರಾಮದ ಯುವತಿಯನ್ನು ವಿವಾಹವಾಗಿದ್ದರು. ಮಂಡ್ಯ ಜಿಲ್ಲೆಯ…

ರೈತ ಸಂಘದ ಬಣಗಳಿಂದ ಪ್ರತ್ಯೇಕ ಪ್ರತಿಭಟನೆ
ಮಂಡ್ಯ

ರೈತ ಸಂಘದ ಬಣಗಳಿಂದ ಪ್ರತ್ಯೇಕ ಪ್ರತಿಭಟನೆ

February 14, 2019

ಮಂಡ್ಯ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದ ಬಣಗಳು ನಗರದಲ್ಲಿಂದು ಪ್ರತ್ಯೇಕ ಪ್ರತಿಭಟನೆ ನಡೆಸಿದವು.ಅಖಂಡ ಕರ್ನಾಟಕ ರೈತ ಸಂಘ (ಪಕ್ಷಾತೀತ)ದ ಕಾರ್ಯಕರ್ತರು ನಗರದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟಿಸಿ ದರೆ, ಕರ್ನಾಟಕ ರಾಜ್ಯ ರೈತ(ಮೂಲ) ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು. ಪ್ರತಿಭಟನೆ: ಕಬ್ಬಿನ ಬಾಕಿ ಪಾವತಿ, ಬೆಳೆಗೆ ನೀರು ಹರಿಸುವಿಕೆ ಹಾಗೂ ಭತ್ತ ಖರೀದಿ ಕೇಂದ್ರ ಆರಂಭ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ (ಪಕ್ಷಾತೀತ)ದ…

ನಾಲ್ವರು ಖದೀಮರ ಬಂಧನ
ಮಂಡ್ಯ

ನಾಲ್ವರು ಖದೀಮರ ಬಂಧನ

February 14, 2019

ಮಂಡ್ಯ: ಮದ್ದೂರು ತಾಲೂಕಿನ ತೊಪ್ಪನಹಳ್ಳಿ ಗ್ರಾಮದ ಶ್ರೀ ಮುತ್ತುರಾಯಸ್ವಾಮಿ ದೇವಸ್ಥಾನದಲ್ಲಿ ಕಾವಲುಗಾರನನ್ನು ಕೊಲೆ ಮಾಡಿ, ದರೋಡೆ ನಡೆಸಿ ಪರಾರಿಯಾಗಿದ್ದ ನಾಲ್ವರು ಕಳ್ಳರ ತಂಡವನ್ನು ಬಂಧಿಸುವಲ್ಲಿ ಮದ್ದೂರು ಪೆÇಲೀಸರು ಯಶಸ್ವಿಯಾಗಿದ್ದಾರೆ. ಮದ್ದೂರು ತಾಲೂಕು ದೊಡ್ಡಹೊಸ ಗಾವಿ ಗ್ರಾಮದ ಉಮೇಶ(24), ಮಾಗಡಿ ತಾಲೂಕಿನ ಅಗಲುಕೋಟೆ ಹ್ಯಾಂಡ್ ಪೆÇೀಸ್ಟ್‍ನ ಸುರೇಶ(22), ಗಿರೀಶ್ (34) ಹಾಗೂ ರವಿ (20) ಬಂಧಿತರು. ತಮ್ಮ ಕಚೇರಿಯಲ್ಲಿಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಈ ನಾಲ್ವರು ಆರೋಪಿಗಳು ಜ.14ರ ಬೆಳಗಿನ ಜಾವ…

ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ, ಹೆದ್ದಾರಿ ತಡೆ
ಮಂಡ್ಯ

ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ, ಹೆದ್ದಾರಿ ತಡೆ

February 14, 2019

ಮಂಡ್ಯ: ಹಾಸನ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಮ್‍ಗೌಡ ಅವರ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿರುವ ದುಷ್ಕರ್ಮಿಗಳ ವಿರುದ್ಧ ಮಂಡ್ಯ ನಗರದಲ್ಲಿ ಬಿಜೆಪಿ ಕಾರ್ಯ ಕರ್ತರು ಪ್ರತಿಭಟನೆ ನಡೆÀಸಿ, ಮೈಸೂರು ಬೆಂಗಳೂರು ಹೆದ್ದಾರಿ ತಡೆ ನಡೆಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯ ಕಾವೇರಿ ವನದ ಮೈಸೂರು ಬೆಂಗಳೂರು ಹೆದ್ದಾರಿ ಸಮೀಪ ಬುಧವಾರ ಸಂಜೆ ದಿಢೀರನೇ ಜಮಾವಣೆಗೊಂಡ ಬಿಜೆಪಿ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರಲ್ಲದೆ, ಕೆಲಕಾಲ ಧರಣಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು. ಇದೇ…

ಚೆಲುವನಿಗೆ ವೈಭವದ ಸೂರ್ಯ ಮಂಡಲೋತ್ಸವ
ಮಂಡ್ಯ

ಚೆಲುವನಿಗೆ ವೈಭವದ ಸೂರ್ಯ ಮಂಡಲೋತ್ಸವ

February 13, 2019

ಮೇಲುಕೋಟೆ: ಪ್ರಖ್ಯಾತ ಧಾರ್ಮಿಕ ಕ್ಷೇತ್ರ ಮೇಲುಕೋಟೆಯಲ್ಲಿ ಚೆಲುವನಾರಾಯಣಸ್ವಾಮಿಗೆ ಮಂಗಳವಾರ ಮುಂಜಾನೆ ಜಾನಪದ ಕಲಾರಾಧನೆ ಯೊಂದಿಗೆ ರಥಸಪ್ತಮಿಯ ಸೂರ್ಯ ಮಂಡಲ ವಾಹನೋತ್ಸವ ವೈಭವದಿಂದ ನೆರವೇರಿತು. ಸಾವಿರಾರು ಭಕ್ತರು ಮಹೋ ತ್ಸವದಲ್ಲಿ ಭಾಗಿಯಾಗಿ ಕಲಾರಾಧನೆ ಸವಿ ಯೊಂದಿಗೆ ಸ್ವಾಮಿ ದರ್ಶನ ಪಡೆದರು. ಯತಿರಾಜ ದಾಸರ್ ಸ್ಥಾನೀಕಂ ನಾಗ ರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆ ನಡೆಸಿದ 20ನೇ ವರ್ಷದ ರಾಜ್ಯಮಟ್ಟದ ಜಾನಪದ ಕಲಾಮೇಳದಲ್ಲಿ ಕರ್ನಾಟಕದ ಪ್ರಮುಖ ಜಾನಪದ ಕಲಾ ಪ್ರಕಾರಗಳ ಜೊತೆಗೆ ಕೇರಳ, ತಮಿಳುನಾಡು, ಪಾಂಡಿ ಚೇರಿ, ಆಂಧ್ರಪ್ರದೇಶ, ತೆಲಂಗಾಣಗಳ ಪ್ರಖ್ಯಾತ…

ಕಲ್ಯಾಣ ವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವ
ಮಂಡ್ಯ

ಕಲ್ಯಾಣ ವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವ

February 13, 2019

ಕೆ.ಆರ್.ಪೇಟೆ: ತಾಲೂಕಿನ ಜೀವನದಿ ಹೇಮಾವತಿ ನದಿ ತಪ್ಪಲಿನಲ್ಲಿ ಪ್ರಸಿದ್ಧ ಹೇಮಗಿರಿ ದನಗಳ ಜಾತ್ರೆ ಹಾಗೂ ಪವಿತ್ರ ರಥಸಪ್ತಮಿ ಅಂಗವಾಗಿ ನಡೆದ ಶ್ರೀಕಲ್ಯಾಣ ವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ 8.30ಕ್ಕೆ ತಹಶೀಲ್ದಾರ್ ಎಂ.ಶಿವಮೂರ್ತಿ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ನಾಡಿನ ವಿವಿಧ ಭಾಗ ಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಉಘೇ.. ಗೋವಿಂದ, ಉಘೇ.. ವೆಂಕಟ ರಮಣ ಎಂಬ ಜಯಘೋಷ ಕೂಗುತ್ತಾ ಶ್ರೀರಥದಲ್ಲಿ ವಿರಾಜಮಾನವಾಗಿದ್ದ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ಉತ್ಸವ ಮೂರ್ತಿ ಗೆ ಕೈಮುಗಿದು…

ಮಾಸಿಕ ವೇತನ ಹೆಚ್ಚಳಕ್ಕೆ ಆಗ್ರಹಿಸಿ ವಿಕಲಚೇತನರ ಪ್ರತಿಭಟನೆ
ಮಂಡ್ಯ

ಮಾಸಿಕ ವೇತನ ಹೆಚ್ಚಳಕ್ಕೆ ಆಗ್ರಹಿಸಿ ವಿಕಲಚೇತನರ ಪ್ರತಿಭಟನೆ

February 13, 2019

ಮಂಡ್ಯ: ವಿಕಲಚೇತನರನ್ನು ನಿರ್ಲಕ್ಷ್ಯ ಮಾಡಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಹಾಗೂ ಮಾಸಿಕ ವೇತನ ಹೆಚ್ಚಳಕ್ಕೆ ಆಗ್ರಹಿಸಿ ವಿಕಲ ಚೇತನರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ, ಮಂಡ್ಯ ಜಿಲ್ಲಾ ಕಿವುಡರ ಸಂಘದ ನೇತೃತ್ವದಲ್ಲಿ ನಗರದ ಸರ್‍ಎಂವಿ ಪ್ರತಿಮೆ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಧರಣಿ ನಡೆಸಿ ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಕರ್ನಾಟಕ ರಾಜ್ಯ ಹಾಗೂ ಪಾಲಕರ ಒಕ್ಕೂಟದ ಅಧ್ಯಕ್ಷ ಕುಮಾರ್ ಮಾತನಾಡಿ, ವಿಕಲಚೇತನರು…

ಸಮುದಾಯಗಳ ಅಭಿವೃದ್ಧಿ ಸಂವಿಧಾನದ ಆಶಯ ಪ್ರಭಾರ ಅಪರ ಜಿಲ್ಲಾಧಿಕಾರಿ ಎಂ.ಆರ್.ರಾಜೇಶ್
ಮಂಡ್ಯ

ಸಮುದಾಯಗಳ ಅಭಿವೃದ್ಧಿ ಸಂವಿಧಾನದ ಆಶಯ ಪ್ರಭಾರ ಅಪರ ಜಿಲ್ಲಾಧಿಕಾರಿ ಎಂ.ಆರ್.ರಾಜೇಶ್

February 13, 2019

ಮಂಡ್ಯ: ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ನೆರವಾಗಲು ಇಂತಹ ವ್ಯಕ್ತಿಗಳ ಜಯಂತಿ ಉತ್ತಮ ವೇದಿಕೆಯಾಗಿದ್ದು, ಸಮುದಾಯಗಳ ಅಭಿವೃದ್ಧಿ ಸಂವಿಧಾನದ ಆಶಯ ವಾಗಿದೆ ಎಂದು ಪ್ರಭಾರ ಅಪರ ಜಿಲ್ಲಾಧಿಕಾರಿ ಎಂ.ಆರ್. ರಾಜೇಶ್ ತಿಳಿಸಿದರು. ಮಂಗಳವಾರ ಜಿಲ್ಲಾಡಳಿತ, ಜಿಪಂ ಮತ್ತು ಕನ್ನಡ ಸಂಸ್ಕøತಿ ಇಲಾಖೆ ವತಿಯಿಂದ ನಗರದ ಕಲಾಮಂದಿರ ದಲ್ಲಿ ನಡೆÀದ ಸವಿತಾ ಮಹರ್ಷಿ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು ಒಗ್ಗಟ್ಟಾಗಬೇಕು. ಎಲ್ಲಾ ವೃತ್ತಿಗಳನ್ನು ಸಮಾನವಾಗಿ ಗೌರವಿಸಬೇಕು ಎಂದರು….

1 52 53 54 55 56 108
Translate »