ಮಂಡ್ಯ: ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ರೈತ ಸಾಲ ಮನ್ನಾಕ್ಕೆ ಸಂಬಂಧಪಟ್ಟಂತೆ ನ. 1ರಿಂದ ರಾಜ್ಯ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ಸಾಲದ ಹಣವನ್ನು ಭರಿಸಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದರು. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದುವರೆಗೂ ಸಹಕಾರಿ ಬ್ಯಾಂಕ್ ಮತ್ತು ಸಹಕಾರಿ ಸಂಘಗಳ ಸಾಲವನ್ನು ಮಾತ್ರ ಮನ್ನಾ ಘೋಷಣೆ ಮಾಡಿ ಹಣ ಬಿಡುಗಡೆ ಮಾಡುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್ಗಳ ಸಾಲಮನ್ನಾ ವಿಚಾರ ಅತಂತ್ರವಾಗಿದೆ ಎನ್ನುವ ಮಾತು…
ನಾಳೆ ಔಷಧ ಅಂಗಡಿಗಳು ಬಂದ್
September 27, 2018ಮೈಸೂರು: ಆನ್ಲೈನ್ ನಲ್ಲಿ ಔಷಧ ಮಾರಾಟ ವ್ಯವಸ್ಥೆ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿಲುವು ಖಂಡಿಸಿ ಔಷಧ ವ್ಯಾಪಾರಿಗಳ ಸಂಘಟನೆಗಳು ಸೆ.28ರಂದು ಬಂದ್ ನಡೆಸುತ್ತಿದ್ದು, ಅಂದು ಆಸ್ಪತ್ರೆ ಆವರಣದಲ್ಲಿರುವ ಔಷಧ ಮಳಿಗೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಔಷಧ ಅಂಗಡಿಗಳ ಬಾಗಿಲು ಮುಚ್ಚಲಿವೆ. ಆಲ್ ಇಂಡಿಯಾ ಆರ್ಗನೈಜೇಷನ್ ಆಫ್ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ಸ್ ಸಂಸ್ಥೆ (ಎಐಓಸಿಡಿ) ಕರೆ ನೀಡಿರುವ ಔಷಧ ಮಳಿಗೆ ಗಳ ಬಂದ್ಗೆ ಕರ್ನಾಟಕ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಅಸೋಸಿಯೇಷನ್ (ಕೆಸಿಡಿಎ) ಹಾಗೂ ಮೈಸೂರು ಡಿಸ್ಟ್ರಿಕ್ ಕೆಮಿಸ್ಟ್ ಅಂಡ್…
ಜಿಲ್ಲಾ ಉಸ್ತುವಾರಿ ಸಚಿವರಾದ ಜಿಟಿಡಿ, ಸಾರಾರಿಂದ ದಸರಾ ಪೋಸ್ಟರ್ಸ್ ಬಿಡುಗಡೆ
September 27, 2018ಮೈಸೂರು: ಅಕ್ಟೋಬರ್ 10ರಿಂದ 19ರವರೆಗೆ ನಡೆಯಲಿರುವ ಮೈಸೂರು ದಸರಾ ಮಹೋತ್ಸವಕ್ಕೆ ಜಿಲ್ಲಾಡಳಿತವು ಇನ್ನಿಲ್ಲದ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ ಅವರು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರೊಂದಿಗೆ ಇಂದು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಾಡಹಬ್ಬದ ಪೂರ್ವಭಾವಿ ಸಭೆ ನಡೆಸಿದರು. ಇದೇ ವೇಳೆ ಪ್ರವಾಸೋದ್ಯಮ ಇಲಾಖೆಯು ಸೆಪ್ಟೆಂಬರ್ 29 ಮತ್ತು 30 ರಂದು ಲಲಿತ ಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ಆಯೋಜಿಸಿರುವ ದಸರಾ ಗಾಳಿಪಟ ಉತ್ಸವದ ಪ್ರಚಾರ ಪೋಸ್ಟರ್ಗಳನ್ನು ಸಚಿವರಾದ ಜಿ.ಟಿ.ದೇವೇಗೌಡ ಮತ್ತು ಸಾ.ರಾ.ಮಹೇಶ್ ಬಿಡುಗಡೆ…
ಕಾವೇರಿ ಕಲಾ ಗ್ಯಾಲರಿ ಕಾಮಗಾರಿ ಬಹುತೇಕ ಪೂರ್ಣ
September 27, 2018ಮೈಸೂರು: ಕನ್ನಡ ನಾಡಿನ ಜೀವನದಿ ಕಾವೇರಿ ಉಗಮ ಸ್ಥಾನದಿಂದ ಸಮುದ್ರಕ್ಕೆ ಸೇರುವವರೆವಿಗೂ ಸಂಪೂರ್ಣ ಚಿತ್ರಣವಿರುವ ಕಾವೇರಿ ಕಲಾ ಗ್ಯಾಲರಿಯನ್ನು ದಸರಾ ವಸ್ತುಪ್ರದರ್ಶನದ ಆವರಣದಲ್ಲಿ ಪ್ರವಾಸೋದ್ಯಮ ಇಲಾಖೆ ನಿರ್ಮಿಸಲು ಮುಂದಾಗಿದೆ. ಕಾವೇರಿ ನದಿಯ ಬಗ್ಗೆ ಸಂಪೂರ್ಣವಾದ ಮಾಹಿತಿ ಬಹುತೇಕ ಜನರಿಗೆ ತಿಳಿಯದೆ ಇರುವುದನ್ನು ಮನ ಗಂಡಿರುವ ಕರ್ನಾಟಕ ಜ್ಞಾನ ಆಯೋಗವು ಕಾವೇರಿ ಗ್ಯಾಲರಿಯನ್ನು ನಿರ್ಮಿಸಿ ಮೈಸೂರಿನ ಜನತೆಗೆ ಮಾತ್ರವಲ್ಲದೆ, ಪ್ರವಾಸಿಗರಿಗೆ ಮಹತ್ತರವಾದ ಮಾಹಿತಿಯನ್ನು ಒದಗಿಸುವುದಕ್ಕಾಗಿ 2016ರಲ್ಲಿ ಈ ಹಿಂದಿನ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಕಾವೇರಿ ನದಿಯ ಸಂರಕ್ಷಣೆಯ ಹಿತದೃಷ್ಟಿಯಿಂದ…
ಅ. 14ರಂದು ಜಂಬೂ ಸವಾರಿ ಮಾರ್ಗದಲ್ಲಿ ಸಾಂಸ್ಕೃತಿಕ ಕಲಾ ಪ್ರದರ್ಶನ
September 27, 2018ಮೈಸೂರು: ವಿಜಯ ದಶಮಿ ಮೆರವಣಿಗೆಗೂ ಮುನ್ನ, ಅಕ್ಟೋಬರ್ 14 ರಂದು ಜಂಬೂ ಸವಾರಿ ಮಾರ್ಗದಲ್ಲಿ ಜಾನಪದ ಕಲಾ ತಂಡಗಳು, ಯುವ ಕಲಾ ತಂಡಗಳು ಹಾಗೂ ಯುವ ಸಂಭ್ರಮದಲ್ಲಿ ಭಾಗವಹಿಸುವ ಕಾಲೇಜು ವಿದ್ಯಾರ್ಥಿಗಳ ತಂಡದ ವರಿಂದ ಸಾಂಸ್ಕøತಿಕ ಕಲಾ ಪ್ರದರ್ಶನ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡರು ತಿಳಿಸಿದ್ದಾರೆ. ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದಸರಾ ಪೂರ್ವಭಾವಿ ಸಭೆ ನಡೆಸಿದ ಸಚಿವರು, ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಅಕ್ಟೋಬರ್ 19 ರಂದು ವಿಜಯದಶಮಿ ಜಂಬೂ ಸವಾರಿ…
ಅ.7ರಂದು ಮೈಸೂರು ದಸರಾ ಗ್ರಾವೆಲ್ ಉತ್ಸವ
September 27, 2018ಮೈಸೂರು: ಮೈಸೂ ರಿನ ಲಲಿತ ಮಹಲ್ ಹೆಲಿಪ್ಯಾಡ್ ಮೈದಾನ ದಲ್ಲಿ ಅಕ್ಟೋಬರ್ 7ರಂದು ದಸರಾ ಗ್ರಾವೆಲ್ ಉತ್ಸವ ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡರು ತಿಳಿಸಿದ್ದಾರೆ. ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿ ಸಿದ ಅವರು, ದಸರಾ ಅಂಗವಾಗಿ ಜಿಲ್ಲಾ ಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಆಟೋಮೋಟಿವ್ ಸ್ಪೋಟ್ರ್ಸ್ ಕ್ಲಬ್ ಆಫ್ ಮೈಸೂರು (ಂSಅಔಒ) ಸಂಸ್ಥೆಯು ಅಕ್ಟೋಬರ್ 7ರಂದು ಆಟೋಕ್ರಾಸ್ ಕಾರುಗಳ ರೇಸ್ ಅನ್ನು ಆಯೋಜಿಸಿದೆ ಎಂದರು….
ಮನೆಮನೆಯಲ್ಲಿ ಯೋಗದಲ್ಲಿ ಅಂಗವಿಕಲರೂ ಪಾಲ್ಗೊಳ್ಳುವ ಯೋಗ
September 27, 2018ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಅಂಗವಾಗಿ 6 ದಿನಗಳ ಕಾಲ ಯೋಗ ದಸರಾವನ್ನು ಹಮ್ಮಿಕೊಂಡಿದ್ದು, ಮೈಸೂರಿನ ಮನೆ ಮನೆಯಲ್ಲಿ ಯೋಗ ದಸರಾ ಪರಿಕಲ್ಪನೆ ಯೊಂದಿಗೆ ಮೊದಲ ಬಾರಿಗೆ ಅಂಗವಿಕಲ ರಿಗೂ ಅವಕಾಶ ಕಲ್ಪಿಸಲಾಗಿದೆ. ಮೈಸೂರಿನ ಪ್ರಮುಖ ಐದು ಯೋಗ ಸಂಸ್ಥೆಗಳಾದ ಪತಂಜಲಿ ಯೋಗ ಶಿಕ್ಷಣ ಸಮಿತಿ, ಜಿಎಸ್ಎಸ್ ಸಂಸ್ಥೆ, ಯೋಗ ಒಕ್ಕೂಟ, ಮೈಸೂರು ಯೋಗ ಸ್ಪೋರ್ಟ್ ಫೌಂಡೇಷನ್ ಮತ್ತು ಬಾಬಾ ರಾಮ ದೇವ ಪತಂಜಲಿ ಯೋಗ ಸಮಿತಿಗಳ ಸಹಕಾರದೊಂದಿಗೆ ನಗರದ ಹತ್ತು ಕಡೆ ದಸರಾ ಯೋಗ…
ಮೈಸೂರಲ್ಲಿ ಸೆ.29, 30 ದಸರಾ ಗಾಳಿಪಟ ಉತ್ಸವ
September 27, 2018ಮೈಸೂರು: ಸೆಪ್ಟೆಂಬರ್ 29 ಮತ್ತು 30ರಂದು ಮೈಸೂರಿನ ಲಲಿತ ಮಹಲ್ ಹೆಲಿಪ್ಯಾಡ್ನಲ್ಲಿ ದಸರಾ ಗಾಳಿಪಟ ಉತ್ಸವವನ್ನು ಏರ್ಪಡಿಸಲಾಗಿದೆ. ಪ್ರವಾಸೋದ್ಯಮ ಇಲಾಖೆ ವತಿಯಿಂದ ಸೆಪ್ಟೆಂಬರ್ 29ರಂದು ಸಂಜೆ 4ರಿಂದ 7 ಗಂಟೆವರೆಗೆ ಹಾಗೂ ಸೆಪ್ಟೆಂಬರ್ 30ರಂದು ಬೆಳಿಗ್ಗೆ 9ರಿಂದ ಸಂಜೆ 6 ಗಂಟೆವರೆಗೆ ಗಾಳಿಪಟ ಉತ್ಸವ ನಡೆಯಲಿದ್ದು, ವಿಜೇತರಿಗೆ ಬಹುಮಾನವನ್ನು ವಿತರಿಸಲಾಗುವುದು. ನಾಡಕುಸ್ತಿ ಪಂದ್ಯಾವಳಿ: ಮೈಸೂರಿನ ದೊಡ್ಡಕೆರೆ ಮೈದಾ ನದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಅ.10ರಿಂದ 15ರವರೆಗೆ ದಸರಾ ನಾಡಕುಸ್ತಿ ಪಂದ್ಯಾವಳಿಗಳು ನಡೆಯಲಿವೆ. ಪಂದ್ಯಾವಳಿಗಾಗಿ ಸೆ.30ರಂದು ಬೆಳಿಗ್ಗೆ…
ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಬಡಾವಣೆಯಲ್ಲಿ ಕುಡಿಯುವ ನೀರಿನ ಯೋಜನೆಗೆ ಚಾಲನೆ
September 27, 2018ಮೈಸೂರು: ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ಗೊರೂರು ಆಶ್ರಯ ಬಡಾ ವಣೆಯ 4 ಮತ್ತು 5ನೇ ಬ್ಲಾಕ್ನ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ನಗರದಲ್ಲಿ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿ, ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಕೃಷ್ಣರಾಜ ಕ್ಷೇತ್ರದ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಎಸ್.ಎ.ರಾಮದಾಸ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೈಸೂರು ವಿಭಾ ಗದ ಪ್ರಚಾರಕ ರಾಜೇಶ್ ಹಾಗೂ ಮೈಸೂರು ನಗರದ ಬಿಜೆಪಿ ಅಧ್ಯಕ್ಷ ಡಾ.ಬಿ.ಹೆಚ್. ಮಂಜುನಾಥ್ ಅವರು,…
ಪ್ರವಾಸೋದ್ಯಮ ರಾಯಭಾರಿಯಾಗಿ ಮೈಸೂರು ಸೇವೆ: ಯದುವೀರ್
September 27, 2018ಮೈಸೂರು: ಪ್ರವಾಸೋದ್ಯಮ ಇಲಾಖೆಗೆ ರಾಯಭಾರಿ ಆಗಿರುವುದರಿಂದ ಮೈಸೂರು ನಗರಕ್ಕೆ ಮತ್ತಷ್ಟು ಸೇವೆ ಮಾಡುವ ಅವಕಾಶ ಸಿಕ್ಕಿದೆ ಎಂದು ಯುವರಾಜ ಯದುವೀರ್ ಸಂತಸಪಟ್ಟರು. ಬುಧವಾರ ಅರಮನೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲೇ ಮೈಸೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಹಾಗಾಗಿ ದಕ್ಷಿಣ ಭಾರತವನ್ನು ಪ್ರವಾಸಿಗರ ತಾಣವಾನ್ನಾಗಿ ಮಾಡುವ ಗುರಿ ಹೊಂದಿದ್ದೇನೆ ಎಂದರು. ಮೈಸೂರಿನ ಪ್ರವಾಸಿ ತಾಣಗಳನ್ನು ಮತ್ತಷ್ಟು ಅಭಿ ವೃದ್ಧಿಪಡಿಸಿ ಹೆಚ್ಚು ಪ್ರವಾಸಿಗರನ್ನು ಮೈಸೂರಿನತ್ತ ಸೆಳೆಯಲು ಶ್ರಮಿಸಬೇಕಾಗಿದೆ ಎಂದ ಅವರು, ನಾಡಿನ ಜನತೆಗೆ ವಿಶ್ವ ಪ್ರವಾಸೋದ್ಯಮದ ದಿನಾ…