ಮೈಸೂರು

ಪಿಹೆಚ್.ಡಿ ಪದವಿ
ಮೈಸೂರು

ಪಿಹೆಚ್.ಡಿ ಪದವಿ

June 1, 2018

ಮೈಸೂರು: ಡಾ. ಸೆಬಾಷ್ಟಿಯನ್ ಜೋಸೆಫ್ ಅವರ ಮಾರ್ಗದರ್ಶನದಲ್ಲಿ ಎಂ.ಎಲ್. ರೇವಣ್ಣ ಅವರು ಇತಿಹಾಸ ವಿಷಯದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ ಮಹಾಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯ ಪಿಹೆಚ್.ಡಿ ಪದವಿಗೆ ಅಂಗೀಕರಿಸಿದೆ.

ಪ್ರತಿಭಾ ಪುರಸ್ಕಾರ
ಮೈಸೂರು

ಪ್ರತಿಭಾ ಪುರಸ್ಕಾರ

June 1, 2018

ಮೈಸೂರು: ಪ್ರಗತಿ ಸೇವಾ ಟ್ರಸ್ಟ್‍ನ 14ನೇ ವಾರ್ಷಿಕೋತ್ಸವದ ಪ್ರಯುಕ್ತ ಕಳೆದ ಸಾಲಿನ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಹಾಗೂ ಐಟಿಐ ಮತ್ತು ಡಿಪ್ಲೋಮಾ ತಾಂತ್ರಿಕ ಕೋರ್ಸ್‍ಗಳನ್ನು ಪೂರ್ಣಗೊಳಿಸಿ, ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಮೈಸೂರು ನಗರ ಹಾಗೂ ಜಿಲ್ಲೆಯಲ್ಲಿನ ಪೌರಕಾರ್ಮಿಕ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ನಿಗದಿತ ಅರ್ಜಿಯನ್ನು ಭರ್ತಿ ಪಡೆದು, ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್‍ನ ಜೆರಾಕ್ಸ್ ಪ್ರತಿಗಳನ್ನು ತಲುಪಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ. 8618630629,…

ಬೆಳೆ ಸಾಲ ಪೂರ್ಣ ಮನ್ನಾ ಮಾಡಿ ಋಣಮುಕ್ತ ಪತ್ರ ನಿಮ್ಮ ಮನೆ ಬಾಗಿಲಿಗೆ ತಲುಪಿಸಲು 15 ದಿನ ಕಾಲಾವಕಾಶ ನೀಡಿ
ಮೈಸೂರು

ಬೆಳೆ ಸಾಲ ಪೂರ್ಣ ಮನ್ನಾ ಮಾಡಿ ಋಣಮುಕ್ತ ಪತ್ರ ನಿಮ್ಮ ಮನೆ ಬಾಗಿಲಿಗೆ ತಲುಪಿಸಲು 15 ದಿನ ಕಾಲಾವಕಾಶ ನೀಡಿ

May 31, 2018

ಬೆಂಗಳೂರು:  ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡಿ ರೈತರ ಮನೆ ಬಾಗಿಲಿಗೆ ಋಣಮುಕ್ತ ಪತ್ರ ತಲುಪಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಘೋಷಣೆ ಮಾಡಿದ್ದಾರೆ. ಅಲ್ಲದೆ ಹೀಗೆ ಋಣಮುಕ್ತ ಪತ್ರ ನಿಮ್ಮ ಮನೆ ಬಾಗಿಲಿಗೆ ತಲುಪಿಸಲು ನನಗೆ 15 ದಿನ ಕಾಲಾವಕಾಶ ನೀಡಿ ಎಂದು ರೈತರಿಗೆ ಮನವಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಪ್ರಧಾನಿ ಡಾ. ಮನಮೋಹನ್ ಸಿಂಗ್ ಸರ್ಕಾರ ಸಂಪೂರ್ಣವಾಗಿ ಕೃಷಿ ಸಾಲ ಮನ್ನಾಮಾಡಿದ ನಂತರ, ಏಪ್ರಿಲ್ 1, 2009 ರಿಂದ ಡಿಸೆಂಬರ್ 31,…

ಸಾಲ ಮನ್ನಾ ಸಂಬಂಧ ಭಿನ್ನ ಅಭಿಪ್ರಾಯಗಳು
ಮೈಸೂರು

ಸಾಲ ಮನ್ನಾ ಸಂಬಂಧ ಭಿನ್ನ ಅಭಿಪ್ರಾಯಗಳು

May 31, 2018

ಬೆಂಗಳೂರು:  ರೈತರ ಸಂಪೂರ್ಣ ಕೃಷಿ ಸಾಲ ಮನ್ನಾಕ್ಕೆ ಇಂದು ವಿಧಾನಸೌಧದಲ್ಲಿ ಕರೆದಿದ್ದ ರೈತರ ಸಭೆಯಲ್ಲಿ ವಿಭಿನ್ನ ಅಭಿಪ್ರಾಯ ವ್ಯಕ್ತವಾಯಿತು. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮಾತನಾಡಿ, ಸಾಲ ಮನ್ನಾಕ್ಕೆ ನಮ್ಮ ವಿರೋಧವಿಲ್ಲ ಎಂದು ಸಭೆಗೆ ಸ್ಪಷ್ಟ ಪಡಿಸಿದರು. ಕೊಳವೆಬಾವಿ, ಟ್ರ್ಯಾಕ್ಟರ್ ಸೇರಿದಂತೆ ಇತರ ಸಾಲಗಳ ಬಗ್ಗೆ ಇನ್ನೆರಡು ಮೂರು ದಿನಗಳಲ್ಲಿ ಚರ್ಚಿಸಿ 2ನೇ ಫೇಸ್‍ನಲ್ಲಿ ಮನ್ನಾ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.ಸರ್ಕಾರ ರೈತರ ಸಮಸ್ಯೆ ಪರಿಹಾರಕ್ಕೆ ಬದ್ಧವಾಗಿದೆ, ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು….

ನದಿ ಮೂಲದಿಂದಲೇ ಹಳ್ಳಿಗಳಿಗೆ ಕುಡಿಯುವ ನೀರು ಕಲ್ಪಿಸಲು ತೀರ್ಮಾನ
ಮೈಸೂರು

ನದಿ ಮೂಲದಿಂದಲೇ ಹಳ್ಳಿಗಳಿಗೆ ಕುಡಿಯುವ ನೀರು ಕಲ್ಪಿಸಲು ತೀರ್ಮಾನ

May 31, 2018

ಬೆಂಗಳೂರು: ರಾಜ್ಯದ ಎಲ್ಲಾ ಹಳ್ಳಿಗಳಿಗೆ ನದಿ ಪಾತ್ರದಿಂದ ನೀರು ಹರಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಘೋಷಣೆ ಮಾಡಿದ್ದಾರೆ. ಕೃಷಿ ಸಾಲ ಮನ್ನಾ ಸಂಬಂಧ ರೈತರ ಅಭಿಪ್ರಾಯ ಸಭೆ ನಂತರ ಮಾತನಾಡಿದ ಅವರು, ಈ ಯೋಜನೆಗೆ 30 ರಿಂದ 40 ಸಾವಿರ ಕೋಟಿ ರೂ. ವೆಚ್ಚ ತಗುಲಲಿದೆ ಎಂದರು. ಈ ನಿರ್ಧಾರವನ್ನು ಏಕಾಏಕಿ ಪ್ರಕಟಿಸುತ್ತಿರುವುದಕ್ಕೆ ಪಕ್ಕದಲ್ಲೇ ಕುಳಿತಿದ್ದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಕ್ಷಮೆ ಯಾಚಿಸಿ, ಗ್ರಾಮೀಣ ಭಾಗದ ಜನತೆಗೆ ಶುದ್ಧ ಕುಡಿಯುವ ನೀರು ಕಲ್ಪಿಸಲು…

‘ಯಶಸ್ವಿನಿ’ ಮುಂದುವರಿಕೆ
ಮೈಸೂರು

‘ಯಶಸ್ವಿನಿ’ ಮುಂದುವರಿಕೆ

May 31, 2018

ಬೆಂಗಳೂರು:  ಗ್ರಾಮೀಣ ಕೃಷಿಕರ ಆರೋಗ್ಯ ರಕ್ಷಾ ಕವಚವಾದ ಯಶಸ್ವಿನಿ ಯೋಜನೆ ಮುಂದುವರಿಸಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಇಂದಿಲ್ಲಿ ತುರ್ತು ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿರುವುದಲ್ಲದೆ, ಮೇ 31 ಕ್ಕೆ ಕೊನೆಗೊಳ್ಳಲಿದ್ದ ಯೋಜನೆಯನ್ನು ಮುಂದುವರಿಸಲು ನಿರ್ಧರಿಸಲಾಗಿದೆ. ರೈತರು ಮತ್ತು ಗ್ರಾಮೀಣ ಜನತೆಯ ಒತ್ತಾಯಕ್ಕೆ ಮಣ ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ. ಯಶಸ್ವಿನಿ ಯೋಜನೆಯನ್ನು ಆರೋಗ್ಯ ಖಾತರಿ ಯೋಜನೆಯಲ್ಲಿ ವಿಲೀನಗೊಳಿಸದಿರಲು ತೀರ್ಮಾನ ಕೈಗೊಂಡಿದ್ದಾರೆ. ಆರೋಗ್ಯ ಯೋಜನೆ ಜತೆ ಯಶಸ್ವಿನಿ ಯೋಜನೆ ಮುಂದುವರೆಸುವ ತೀರ್ಮಾನ ಮಾಡಿ…

ವೇತನ ಪರಿಷ್ಕರಣೆಗೆ ಆಗ್ರಹಿಸಿ: ದೇಶವ್ಯಾಪಿ ಬ್ಯಾಂಕ್ ನೌಕರರ ಎರಡು ದಿನಗಳ ಮುಷ್ಕರ ಆರಂಭ
ಮೈಸೂರು

ವೇತನ ಪರಿಷ್ಕರಣೆಗೆ ಆಗ್ರಹಿಸಿ: ದೇಶವ್ಯಾಪಿ ಬ್ಯಾಂಕ್ ನೌಕರರ ಎರಡು ದಿನಗಳ ಮುಷ್ಕರ ಆರಂಭ

May 31, 2018

ಮೈಸೂರು:  ವೇತನ ಪರಿಷ್ಕರಣೆಯೂ ಸೇರಿದಂತೆ ಹಲವು ಬಾಕಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬ್ಯಾಂಕ್ ನೌಕರರು ಇಂದಿನಿಂದ ಎರಡು ದಿನಗಳ ಕಾಲದ ಮುಷ್ಕರವನ್ನು ದೇಶಾದ್ಯಂತ ಆರಂಭಿಸಿದ್ದಾರೆ. ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಗಳ ಒಕ್ಕೂಟ ಕರೆ ನೀಡಿರುವ ಮುಷ್ಕರಕ್ಕೆ ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ರಾಷ್ಟ್ರೀಕೃತ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಪರಿಣಾಮ ಬ್ಯಾಂಕ್ ಶಾಖೆಗಳು ಬಂದ್ ಆಗಿರುವುದರಿಂದ ಆರ್ಥಿಕ ಹಾಗೂ ವಾಣ ಜ್ಯ ವ್ಯವಹಾರಗಳು ಸಂಪೂರ್ಣ ಸ್ಥಗಿತಗೊಂಡಿವೆ. ಮೈಸೂರಿನ ಟಿಕೆ ಬಡಾವಣೆಯ ಶ್ರೀಕೃಷ್ಣಧಾಮದ…

ಗ್ರಾಹಕರ ತೀವ್ರ ಅಸಮಾಧಾನ
ಮೈಸೂರು

ಗ್ರಾಹಕರ ತೀವ್ರ ಅಸಮಾಧಾನ

May 31, 2018

ಮೈಸೂರು: ದೇಶವ್ಯಾಪಿ 2 ದಿನ ಬ್ಯಾಂಕ್ ನೌಕರರು ಮುಷ್ಕರದಲ್ಲಿ ನಿರತರಾಗಿರುವುದ ರಿಂದ ಬ್ಯಾಂಕ್ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದ್ದು, ಗ್ರಾಹಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ದಿನ ನಿತ್ಯದ ವ್ಯಾಪಾರ- ವಹಿವಾಟಿಗೆ ತೊಂದರೆಯಾಗುವುದಲ್ಲದೆ, ಸಗಟು ವ್ಯಾಪಾರಸ್ಥರಿಂದ ತರಿಸಿದ ಸರಕಿಗೆ ಬ್ಯಾಂಕ್ ಮೂಲಕ ಹಣ ವರ್ಗಾವಣೆ ಮಾಡಲು ಸಾಧ್ಯವಾಗುತ್ತಿಲ್ಲ. ಮುಷ್ಕರ ಇಡೀ ಆರ್ಥಿಕ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಹೆಬ್ಬಾಳಿನ ಲೇಖನ ಸಾಮಗ್ರಿ ಹಾಗೂ ತಾರಸಿ ಮೌಲ್ಡಿಂಗ್ ಚಾಪೆ ವ್ಯಾಪಾರಿ ಕೆ.ಕಾಂತರಾಜು ಅಭಿಪ್ರಾಯಪಟ್ಟಿದ್ದಾರೆ. ಇಟ್ಟಿಗೆ ಕಾರ್ಖಾನೆ ಮತ್ತು…

ವಿಧಾನಸಭೆಯಿಂದ ಪರಿಷತ್‍ಗೆ ಚುನಾವಣೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿ ಪ್ರಕಟ
ಮೈಸೂರು

ವಿಧಾನಸಭೆಯಿಂದ ಪರಿಷತ್‍ಗೆ ಚುನಾವಣೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿ ಪ್ರಕಟ

May 31, 2018

ಬೆಂಗಳೂರು: ವಿಧಾನಸಭೆ ಯಿಂದ ವಿಧಾನ ಪರಿಷತ್‍ನ 11 ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ತಮ್ಮ ಅಭ್ಯರ್ಥಿ ಗಳನ್ನು ಪ್ರಕಟಿಸಿದೆ. ಕಾಂಗ್ರೆಸ್ ತನ್ನ ಪಾಲಿನ ನಾಲ್ಕು ಸ್ಥಾನಗಳಿಗೆ ಸಿ.ಎಂ.ಇಬ್ರಾಹಿಂ, ಕೆ.ಗೋವಿಂದರಾಜ್, ಅರವಿಂದ ಕುಮಾರ್ ಎಸ್.ಅರಳಿ ಮತ್ತು ಕೆ.ಹರೀಶ್ ಕುಮಾರ್ ಅಭ್ಯರ್ಥಿಗಳನ್ನಾಗಿ ಘೋಷಿಸಿದೆ. ಇನ್ನು ಬಿಜೆಪಿ ತನ್ನ ಪಾಲಿಗೆ ಬರುವ 5 ಸ್ಥಾನಕ್ಕೆ ಕೆ.ಪಿ.ನಂಜುಂಡಿ, ತೇಜಸ್ವಿನಿಗೌಡ, ಎಸ್.ರುದ್ರೇ ಗೌಡ, ಎನ್.ರವಿಕುಮಾರ್ ಹಾಗೂ ರಘುನಾಥ್ ಮಲ್ಕಾಪುರೆ ಅವರನ್ನು ಆಯ್ಕೆ ಮಾಡಿದೆ. ಜೆಡಿಎಸ್ ತನ್ನ ಪಾಲಿಗೆ ದಕ್ಕುವ ಎರಡು…

ರೈತರಿಂದಲೇ ಗದ್ದಲ: ಸಿಎಂ ಎಚ್ಚರಿಕೆ…
ಮೈಸೂರು

ರೈತರಿಂದಲೇ ಗದ್ದಲ: ಸಿಎಂ ಎಚ್ಚರಿಕೆ…

May 31, 2018

ಬೆಂಗಳೂರು: ರೈತರ ಸಾಲ ಮನ್ನಾಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ಕರೆದಿದ್ದ ರೈತ ಮುಖಂಡರ ಸಭೆಯಲ್ಲಿ ಗದ್ದಲ, ಆರೋಪ, ಪ್ರತ್ಯಾ ರೋಪ, ವಾಕ್ಸಮರವೇ ನಡೆಯಿತು. ರೈತ ಮುಖಂಡರೇ ಗದ್ದಲ ಎಬ್ಬಿಸಿ ಕೆಲ ಕಾಲ ಗೊಂದಲದ ವಾತಾವರ ಣಕ್ಕೆ ಕಾರಣರಾದರು. ಇದರಿಂದ ಸಿಟ್ಟಿಗೆದ್ದ ಮುಖ್ಯ ಮಂತ್ರಿ ಕುಮಾರ ಸ್ವಾಮಿ, ಇಲ್ಲೇನು ಜಾತ್ರೆ ಮಾಡೋದಕ್ಕೆ ಕರೆಸಿದ್ದೀನಾ ನಿಮ್ಮನ್ನಾ? ಕಿತಾಪತಿ ಮಾಡೋಕೆ ಬಂದಿದ್ದೀರಾ, ರಾಜಕೀಯ ಮಾಡೋಕ್ಕೆ ಬಂದಿದ್ದೀರಾ, ಗದ್ದಲ ಮಾಡುವುದಾದರೆ ಕಬ್ಬನ್ ಪಾರ್ಕ್ ಮುಂದೆ ಹೋಗಿ ಕುಳಿತುಕೊಳ್ಳಿ ಎಂದು ಗದರಿಸಿದರು….

1 1,577 1,578 1,579 1,580 1,581 1,611
Translate »