ಮೈಸೂರು

ಬಂಜಾರ ಸಮುದಾಯ ಕಾಂಗ್ರೆಸ್ ಬೆಂಬಲಿಸಲು ಮನವಿ
ಮೈಸೂರು

ಬಂಜಾರ ಸಮುದಾಯ ಕಾಂಗ್ರೆಸ್ ಬೆಂಬಲಿಸಲು ಮನವಿ

April 27, 2018

ಮೈಸೂರು: ಬಂಜಾರ ಸಮುದಾಯವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಬಂಜಾರ ಸಂತ ಸೇವಾಲಾಲ್ ಬಳಗದ ಅಧ್ಯಕ್ಷ ಬಸವರಾಜ ನಾಯ್ಕ್ ಬಂಜಾರ ಸಮುದಾಯಕ್ಕೆ ಮನವಿ ಮಾಡಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ತಾಂಡಾಭಿವೃದ್ಧಿ ನಿಗಮ ಮಂಡಳಿ ರಚಿಸಿ ವರ್ಷಕ್ಕೆ 200 ಕೋಟಿ ರೂ.ಮೀಸಲಿಟ್ಟು, ಸಮುದಾಯದ ಏಳಿಗೆಗಾಗಿ ಸಮುದಾಯ ಭವನ, ಕಾಂಕ್ರೀಟ್ ರಸ್ತೆ, ಚರಂಡಿ, ಬಂಜಾರರ ಮೂಲ ಕಸುಬಾದ ಕಸೂತಿ, ಗುಡಿ ಕೈಗಾರಿಕೆ, ಶುದ್ಧ ಕುಡಿಯುವ ನೀರಿನ ಘಟಕ ಹೀಗೆ ಹಲವಾರು ಯೋಜನೆಗಳನ್ನು ನೀಡಿದರು. ಮೈಸೂರು ವಿಭಾಗಕ್ಕೆ ಸೇರಿದ ಜಿಲ್ಲೆಗಳಿಗೆ…

ರಾಜ್ಯದಲ್ಲಿ 1994ರ ಫಲಿತಾಂಶ ಪುನರಾವರ್ತನೆ ಕಾಂಗ್ರೆಸ್ ಧೂಳೀಪಟ: ಜಾವ್ಡೇಕರ್ ಭವಿಷ್ಯ
ಮೈಸೂರು

ರಾಜ್ಯದಲ್ಲಿ 1994ರ ಫಲಿತಾಂಶ ಪುನರಾವರ್ತನೆ ಕಾಂಗ್ರೆಸ್ ಧೂಳೀಪಟ: ಜಾವ್ಡೇಕರ್ ಭವಿಷ್ಯ

April 27, 2018

ಬೆಂಗಳೂರು: ರಾಜ್ಯದ ಜನತೆ ಕಾಂಗ್ರೆಸ್‍ಗೆ 1994ರ ಫಲಿತಾಂಶ ವನ್ನು ಮರುಕಳಿಸಲಿ ದ್ದಾರೆ ಎಂದು ಕೇಂದ್ರ ಸಚಿವ ಹಾಗೂ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಭವಿಷ್ಯ ನುಡಿದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ಭ್ರಮೆಯಲ್ಲಿದೆ. ಆದರೆ ಆ ಪಕ್ಷದ ಮುಖಂಡರಿಗೆ ರಾಜ್ಯದ ಜನತೆಯ ನಾಡಿ ಮಿಡಿತದ ಅರಿವಿಲ್ಲ. ಸಿದ್ದರಾಮಯ್ಯ ನೇತೃತ್ವದಲ್ಲಿ ಕಳೆದ 5 ವರ್ಷಗಳಿಂದ ನಡೆದ ಆಡಳಿತ ರಾಜ್ಯದ ಜನತೆಗೆ ಬೇಸರ ತರಿಸಿದೆ. ಮತದಾರರು ಎಂದು ಚುನಾವಣೆ ಬರುತ್ತದೆ ಎಂದು…

ಮೈಸೂರು ಬಾಲಭವನದಲ್ಲಿ 15 ದಿನಗಳ ಉಚಿತ ಬೇಸಿಗೆ ಶಿಬಿರಕ್ಕೆ ಚಾಲನೆ
ಮೈಸೂರು

ಮೈಸೂರು ಬಾಲಭವನದಲ್ಲಿ 15 ದಿನಗಳ ಉಚಿತ ಬೇಸಿಗೆ ಶಿಬಿರಕ್ಕೆ ಚಾಲನೆ

April 27, 2018

ಮೈಸೂರು: ಮೈಸೂರಿನ ಬನ್ನಿಮಂಟಪದ ಜಿಲ್ಲಾ ಜವಾಹರ್ ಬಾಲಭವನ, ಶಿಶು ಆಭಿವೃದ್ಧಿ ಯೋಜನೆಯ ಜಂಟಿ ಆಶ್ರಯದಲ್ಲಿ ಬಾಲಭವನದ ಸಭಾಂಗಣದಲ್ಲಿ 15 ದಿನಗಳ ಬೇಸಿಗೆ ಶಿಬಿರಕ್ಕೆ ಗುರುವಾರ ಚಾಲನೆ ದೊರೆಯಿತು. ಮೈಸೂರಿನ ಪ್ರಪ್ರಥಮ ಮಹಿಳಾ ಮಾತನಾಡುವ ಗೊಂಬೆ ಕಲಾ ವಿದೆ, ಬಿಗ್‍ಬಾಸ್ ಖ್ಯಾತಿಯ ಸುಮಾ ರಾಜ್‍ಕುಮಾರ್ ಅವರು ಶಿಬಿರದ ಮಕ್ಕ ಳೊಂದಿಗೆ ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು. ಶಿಬಿರದಲ್ಲಿರುವ ಎಲ್ಲಾ ಮಕ್ಕಳು ಮುಂದೆ ದೊಡ್ಡ ಹುದ್ದೆ ಅಲಂಕರಿಸಿ, ಇತರರಿಗೆ ಆಟೋಗ್ರಾಫ್ ನೀಡುವಂತಾಗ ಬೇಕು ಎಂದು ಶುಭ ಹಾರೈಸಿದರು. ಮಹಿಳಾ ಮತ್ತು…

ಬಿಜೆಪಿ, ಜೆಡಿಎಸ್ ದೂರವಿಟ್ಟು ಕಾಂಗ್ರೆಸ್‍ಗೆ ಮತ ನೀಡಿ
ಮೈಸೂರು

ಬಿಜೆಪಿ, ಜೆಡಿಎಸ್ ದೂರವಿಟ್ಟು ಕಾಂಗ್ರೆಸ್‍ಗೆ ಮತ ನೀಡಿ

April 27, 2018

ತಿ.ನರಸೀಪುರ: ರಾಜ್ಯದಲ್ಲಿ ಜಾತ್ಯಾತೀತ ಜನತಾದಳ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವು ದಿಲ್ಲ. ಜಾತ್ಯಾತೀತತೆಗೆ ಧಕ್ಕೆ ತಂದು ಕೋಮು ಸಾಮರಸ್ಯವನ್ನು ಕದಡುವ ಕೋಮುವಾದಿ ಪಕ್ಷ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕಾಗಿದ್ದರಿಂದ ಈ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿ ಕಾರಕ್ಕೆ ತರಬೇಕೆಂದು ಯುವ ಮುಖಂಡ ಸುನೀಲ್ ಬೋಸ್ ಹೇಳಿದರು. ತಾಲೂಕಿನ ಹೊಸಪುರ ಗ್ರಾಮದಲ್ಲಿ ಗುರುವಾರ ನಾಯಕ ಸಮುದಾಯದ ಮುಖಂಡರು ಹಾಗೂ ಮಹಿಳಾ ಸಂಘಗಳ ಪ್ರತಿನಿಧಿಗಳನ್ನು ಕಾಂಗ್ರೆಸ್‍ಗೆ ಸೇರ್ಪಡೆ ಮಾಡಿಕೊಂಡು ಮಾತನಾಡಿ, ಐದು ವರ್ಷಗಳ ಕಾಲ ಆಡಳಿತವನ್ನು…

ಬಿಜೆಪಿ ಸಭೆಯಲ್ಲಿ ಮಾರಾಮಾರಿ: ತಾಲೂಕು ಪ್ರಧಾನ ಕಾರ್ಯದರ್ಶಿಗೆ ಗಾಯ
ಮೈಸೂರು

ಬಿಜೆಪಿ ಸಭೆಯಲ್ಲಿ ಮಾರಾಮಾರಿ: ತಾಲೂಕು ಪ್ರಧಾನ ಕಾರ್ಯದರ್ಶಿಗೆ ಗಾಯ

April 27, 2018

ಕೆ.ಆರ್.ನಗರ: ಬಿಜೆಪಿಯ ಎರಡು ಬಣಗಳ ನಡುವೆ ನಡೆದ ಮಾರಾಮಾರಿಯಲ್ಲಿ ತಾಲೂಕು ಬಿಜೆಪಿ ಪ್ರಧಾನ ಕಾರ್ಯದಶಿ ಗಾಯಗೊಂಡಿರುವ ಘಟನೆ ನಡೆದಿದೆ. ಗುರುವಾರ ಪಟ್ಟಣದ ಅಕ್ಷತಾ ಹಾಲ್ ನಲ್ಲಿ ಪಕ್ಷದ ವತಿಯಿಂದ ಚುನಾವಣೆ ಹಿನ್ನೆಲೆ ಯಲ್ಲಿ ಕರೆಯಲಾಗಿದ್ದ ಸಮಾಲೋಚನಾ ಸಭೆಯಲ್ಲಿ ಪಕ್ಷದ ವರಿಷ್ಠರ ಮುಂದೆಯೇ ಎರಡು ಬಣದವರು ಹೊಡೆದಾಡಿಕೊಂಡಿದ್ದು, ಈ ಸಂಧರ್ಭದಲ್ಲಿ ಒಂದು ಗುಂಪು ನಡೆಸಿದ ಹಲ್ಲೆಯಿಂದ ಪಕ್ಷದ ತಾಲೂಕು ಪ್ರಧಾನ ಕಾರ್ಯದರ್ಶಿ ಸಿವಿಗುಡಿ ಜಗದೀಶ್ ತಲೆಗೆ ಪೆಟ್ಟುಬಿದ್ದಿದ್ದು, ಅವರು ಪಟ್ಟಣದ ಆಸ್ಪತ್ರೆಗೆ ದಾಖಲಾಗಿದ್ದಾರೆ, ಹೊಡೆದಾಟ ನಡೆಯುವ ಸಂದರ್ಭದಲ್ಲಿ ಜಗದೀಶ್…

ಮತದಾನ ಬಹಿಷ್ಕಾರಕ್ಕೆ ನಂ.ಗೂಡು ತಾಲೂಕು ಹೊರಳವಾಡಿ, ಹೊಸೂರು ಗ್ರಾಮಸ್ಥರ ನಿರ್ಧಾರ
ಮೈಸೂರು

ಮತದಾನ ಬಹಿಷ್ಕಾರಕ್ಕೆ ನಂ.ಗೂಡು ತಾಲೂಕು ಹೊರಳವಾಡಿ, ಹೊಸೂರು ಗ್ರಾಮಸ್ಥರ ನಿರ್ಧಾರ

April 27, 2018

ನಂಜನಗೂಡು: ತಾಲೂಕಿನ ಹೊರಳವಾಡಿ ಹೊಸೂರು ಗ್ರಾಮದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಚುನಾಯಿತ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ, ಸ್ಥಳೀಯ ಗ್ರಾಮಸ್ಥರು ಮೇ 12 ರಂದು ನಡೆಯಲಿ ರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸು ವುದಾಗಿ ನಂಜನಗೂಡು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗೆ ಲಿಖಿತ ಪತ್ರ ನೀಡಿದ್ದಾರೆ. ತಾಲೂಕಿನ ಹೊರಳವಾಡಿ ಹೊಸೂರು ಗ್ರಾಮದಲ್ಲಿ 400ಕ್ಕೂ ಹೆಚ್ಚು ಮತದಾರರಿದ್ದು ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಕಾಂಕ್ರಿಟ್ ರಸ್ತೆ, ಚರಂಡಿ ಸೌಲಭ್ಯ ಹಾಗೂ ಬಸ್ ನಿಲ್ದಾಣದ ಸೌಕರ್ಯಗಳಿಲ್ಲದೇ ಜನರು ಪರದಾಡು ತ್ತಿದ್ದರೂ…

ಪಿಕೆಟಿಬಿ ಆಸ್ಪತ್ರೆ ಗುತ್ತಿಗೆ ನೌಕರರ ಪ್ರತಿಭಟನೆ
ಮೈಸೂರು

ಪಿಕೆಟಿಬಿ ಆಸ್ಪತ್ರೆ ಗುತ್ತಿಗೆ ನೌಕರರ ಪ್ರತಿಭಟನೆ

April 27, 2018

ಮೈಸೂರು: ಸಮಯಕ್ಕೆ ಸರಿಯಾಗಿ ವೇತನ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸದೇ ಗುತ್ತಿಗೆದಾರರು ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೆಆರ್‍ಎಸ್ ರಸ್ತೆಯ ಪಿಕೆಟಿಬಿ ಆಸ್ಪತ್ರೆಯ ಗುತ್ತಿಗೆ ಸ್ವಚ್ಛತಾ ಕೆಲಸಗಾರರು ಹಾಗೂ ಭದ್ರತಾ ಸಿಬ್ಬಂದಿ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ), ಕರ್ನಾಟಕ ರಾಜ್ಯ ಜಿಲ್ಲಾ ಆಸ್ಪತ್ರೆಗಳ ಗುತ್ತಿಗೆ ಪೌರಕಾರ್ಮಿಕರು ಹಾಗೂ ನೌಕರರ ಸಂಘದ ಆಶ್ರಯದಲ್ಲಿ ಗುರುವಾರ ದಿಢೀರ್ ಪ್ರತಿಭಟನೆ ನಡೆಸಿದರು. ಇಂದು ಬೆಳಿಗ್ಗೆ ಕೆಲಸ ಸ್ಥಗಿತಗೊಳಿಸಿ ಆಸ್ಪತ್ರೆಯ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಸಮಯಕ್ಕೆ ಸರಿಯಾಗಿ ವೇತನ ನೀಡಲು ಗುತ್ತಿಗೆದಾರರು…

ಭರವಸೆ ಮೇರೆಗೆ ಪ್ರತಿಭಟನೆ ಕೈಬಿಟ್ಟರು
ಮೈಸೂರು

ಭರವಸೆ ಮೇರೆಗೆ ಪ್ರತಿಭಟನೆ ಕೈಬಿಟ್ಟರು

April 27, 2018

ಮೈಸೂರು: ಬೆಳಿಗ್ಗೆ ಸುಮಾರು 9ಕ್ಕೆ ಕೆಲಸ ಸ್ಥಗಿತಗೊಳಿಸಿ ಆಸ್ಪತ್ರೆಯ ಮುಖ್ಯದ್ವಾರದಲ್ಲಿ ಪ್ರತಿಭಟನೆ ಕುಳಿತ ಪೌರಕಾರ್ಮಿಕರಿಗೆ ಗುತ್ತಿಗೆ ಆಧಾರದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ 10ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ತಮ್ಮ ಬೆಂಬಲ ಸೂಚಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸುಮಾರು 11.20ರ ವೇಳೆಗೆ ಪ್ರತಿಭಟನಾನಿರತರ ಬಳಿ ಬಂದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ವಿರೂಪಾಕ್ಷ, ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ಆದರೂ ಪಟ್ಟು ಬಿಡದೆ ತಮ್ಮ ಪ್ರತಿಭಟನೆ ಮುಂದುವರೆಸಿದರು. ಈ ವೇಳೆ ಪೌರಕಾರ್ಮಿಕರ ಬೇಡಿಕೆಗಳನ್ನು ಆಲಿಸಿದ ಡಾ.ವಿರೂಪಾಕ್ಷ, ಗುತ್ತಿಗೆದಾರರನ್ನು ದೂರವಾಣ ಮೂಲಕ…

ಡೊನೇಷನ್ ಹಾವಳಿ ತಡೆಗೆ ಆಗ್ರಹಿಸಿ ಮೈಸೂರಲ್ಲಿ ಪ್ರತಿಭಟನೆ
ಮೈಸೂರು

ಡೊನೇಷನ್ ಹಾವಳಿ ತಡೆಗೆ ಆಗ್ರಹಿಸಿ ಮೈಸೂರಲ್ಲಿ ಪ್ರತಿಭಟನೆ

April 27, 2018

ಮೈಸೂರು: ಖಾಸಗಿ ಶಾಲೆಗಳಲ್ಲಿನ ಡೊನೇಷನ್ ಮತ್ತು ಹೆಚ್ಚು ಬೋಧನಾ ಶುಲ್ಕದ ಹಾವಳಿಯನ್ನು ತಪ್ಪಿಸಲು ಜಿಲ್ಲಾಡಳಿತ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆಯ ಜಿಲ್ಲಾ ಘಟಕದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಖಾಸಗಿ ಶಾಲೆಗಳು ಡೊನೇಷನ್ ರೂಪದಲ್ಲಿ ಲಕ್ಷಾಂತರ ರೂ.ಗಳನ್ನು ಪೆÇೀಷಕರಿಂದ ವಸೂಲಿ ಮಾಡುವ ಮೂಲಕ ಹಗಲು ದರೋಡೆ ಮಾಡುತ್ತಿವೆ. ಕಟ್ಟಿದ ಹಣಕ್ಕೆ ರಶೀದಿ ಸಹ ನೀಡದೇ ವಂಚಿಸಲಾಗುತ್ತಿದೆ. ಶಿಕ್ಷಣದ ಹೆಸರಿನಲ್ಲಿ…

ಮೇ 2ರಿಂದ ಪಿಯು ತರಗತಿ ಪ್ರಾರಂಭದ ಅವೈಜ್ಞಾನಿಕ ಆದೇಶ ವಾಪಸ್‍ಗೆ ಪರಿಷತ್ ಉಪ ಸಭಾಪತಿ ಒತ್ತಾಯ
ಮೈಸೂರು

ಮೇ 2ರಿಂದ ಪಿಯು ತರಗತಿ ಪ್ರಾರಂಭದ ಅವೈಜ್ಞಾನಿಕ ಆದೇಶ ವಾಪಸ್‍ಗೆ ಪರಿಷತ್ ಉಪ ಸಭಾಪತಿ ಒತ್ತಾಯ

April 27, 2018

ಮೈಸೂರು: ಪದವಿಪೂರ್ವ ಕಾಲೇಜಿನ ತರಗತಿಗಳನ್ನು ಮೇ 2ರಿಂದ ಪ್ರಾರಂಭಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಹೊರಡಿಸಿರುವ ಅವೈಜ್ಞಾನಿಕ ಆದೇಶ ವನ್ನು ವಾಪಸು ಪಡೆಯಬೇಕು. ಎಂದಿನಂತೆ ಜೂ.1ರಿಂದಲೇ ಕಾಲೇಜು ತೆರೆಯಬೇಕು ಎಂದು ವಿಧಾನ ಪರಿಷತ್ ಉಪ ಸಭಾಪತಿ ಮರಿತಿಬ್ಬೇಗೌಡ ಇಂದಿಲ್ಲಿ ಒತ್ತಾಯಿಸಿದರು. ಸಾರ್ವತ್ರಿಕ ಚುನಾವಣೆಯ ಅಧಿಸೂಚನೆ ಜಾರಿಯಲ್ಲಿರುವಾಗಲೇ ಇಂತಹ ಸುತ್ತೋಲೆ ಹೊರಡಿಸುವುದು ನಿಯಮ ಬಾಹಿರವಾಗಿದೆ. ಈ ಕುರಿತಂತೆ ವಿಧಾನ ಪರಿಷತ್ ಸದಸ್ಯರು, ಉಪನ್ಯಾಸಕರ ಸಂಘಟನೆಗಳು, ಉಪನ್ಯಾಸಕರ ಅಭಿಪ್ರಾಯಗಳನ್ನು ಪಡೆಯದೇ ಏಕಪಕ್ಷೀಯ ತೀರ್ಮಾನ ಕೈಗೊಂಡು ಆದೇಶ ಹೊರಡಿಸಲಾಗಿದೆ ಎಂದು ದೂರಿದರು….

1 1,599 1,600 1,601 1,602 1,603 1,611
Translate »