ಮೈಸೂರು, ಮೇ 10(ಎಸ್ಪಿಎನ್)- ಕೊರೊನಾ ಸೊಂಕಿನಿಂದ ಪ್ರವಾಸಿಗರನ್ನು ರಕ್ಷಿಸಿ, ಸುರಕ್ಷಿತವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಕರೆದುಕೊಂಡು ಹೋಗುವುದರ ಬಗ್ಗೆ ಮೈಸೂರಿನ ಸೇಫ್ವ್ಹೀಲ್ ಟ್ರಾವೆಲ್ ಸಂಸ್ಥೆ ಹೊಸ ಪ್ಲಾನ್ ಮಾಡಿದೆ. ಕಾರಿನಲ್ಲಿ ಪ್ರವಾಸಿಗರು ಮತ್ತು ಚಾಲಕರ ನಡುವೆ ಸೋಂಕು ಹರಡದಂತೆ ತಡೆಗಟ್ಟಲು ಫೈಬರ್ ಗ್ಲಾಸ್ ಅಳವಡಿಸಲಾಗಿದೆ. ನಮ್ಮ ಸಂಸ್ಥೆಯ ಕಾರು ಚಾಲಕರು ಬದುಕು ಕಟ್ಟಿಕೊಳ್ಳಲು ಯಾರ ಮೇಲೂ ಅವಲಂಬಿತವಾಗದಿರುವಂತೆ ಹೊಸ ಆಲೋಚನೆಯೊಂದಿಗೆ ಕಾರುಗಳ ಸೇವೆಯನ್ನು ಪ್ರವಾಸಿಗÀರಿಗೆ ಒದಗಿಸಲಿದ್ದೇವೆ ಎನ್ನುತ್ತಾರೆ ಸೇಫ್ವ್ಹೀಲ್ ಟ್ರಾವೆಲ್ ಸಂಸ್ಥೆ ಮುಖ್ಯಸ್ಥ ಬಿ.ಎಸ್.ಪ್ರಶಾಂತ್. ಮೈಸೂರಿಗೆ…
ಮಳೆಗಾಲಕ್ಕೂ ಮುನ್ನ ರಾಜಕಾಲುವೆ ಸ್ವಚ್ಛತೆಗೆ ಮುಂದಾದ ಪಾಲಿಕೆ
May 11, 2020ಮೈಸೂರು ಮೇ 10(ವೈಡಿಎಸ್)- ಮಳೆ ಗಾಲ ಆರಂಭಕ್ಕೂ ಮುನ್ನವೇ ನಗರ ಪಾಲಿಕೆ ರಾಜಕಾಲುವೆಯನ್ನು ಸ್ವಚ್ಛಗೊಳಿ ಸುವ ಕಾರ್ಯಕ್ಕೆ ಮುಂದಾಗಿದೆ. ರಾಜಕಾಲುವೆಯಲ್ಲಿ ಗಿಡಗಂಟಿ ಬೆಳೆದು, ಮಣ್ಣು ತುಂಬಿಕೊಂಡು ಪ್ರತಿ ಬಾರಿ ಮಳೆ ಬಿದ್ದಾಗಲೂ ಈ ರಾಜಕಾಲುವೆ ನೀರು ಸರಾಗ ವಾಗಿ ಹರಿಯಲು ಸಾಧ್ಯವಾಗದೆ ಅಕ್ಕಪಕ್ಕದ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿ ಜನರು ತೊಂದರೆ ಅನುಭವಿಸುತ್ತಿದ್ದರು. ಇದನ್ನು ಮನಗಂಡ ವಲಯ ಕಚೇರಿ-3ರ ಅಭಿವೃದ್ಧಿ ಅಧಿಕಾರಿ ಸತ್ಯಮೂರ್ತಿ, ಮಳೆಗಾಲಕ್ಕೂ ಮುನ್ನವೇ ತಮ್ಮ ವಲಯ ವ್ಯಾಪ್ತಿಯ 13 ಕಿ.ಮೀ. ರಾಜಕಾಲುವೆ ಸ್ವಚ್ಛತಾ ಕಾರ್ಯ…
ಮೈಸೂರಲ್ಲಿ 107 ಪತ್ರಕರ್ತರ ಸ್ವ್ಯಾಬ್ ಟೆಸ್ಟ್ ನೆಗೆಟಿವ್
May 11, 2020ಮೈಸೂರು, ಮೇ 10(ಎಂಟಿವೈ)- ಲಾಕ್ಡೌನ್ ವೇಳೆ ಕರ್ತವ್ಯ ನಿರ್ವಹಿಸಿದ ಮೈಸೂರಿನ 107 ಪತ್ರಕರ್ತರ ಸ್ವ್ಯಾಬ್ ಸ್ಯಾಂಪಲ್ ಅನ್ನು 2 ದಿನದ ಹಿಂದೆ ಸಂಗ್ರಹಿಸಿ ಪರೀಕ್ಷಿಸಲಾಗಿದ್ದು, ಎಲ್ಲಾ ಸ್ಯಾಂಪಲ್ಗಳ ವರದಿ ನೆಗೆಟಿವ್ ಬಂದಿದೆ. ಪತ್ರ ಕರ್ತರು ಹಾಗೂ ಕುಟುಂಬ ಸದಸ್ಯರು ನಿರಾಳರಾಗಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಲಾಕ್ಡೌನ್ನ ಮೊದಲ ದಿನ ದಿಂದಲೂ ಮುದ್ರಣ ಹಾಗೂ ಸುದ್ದಿವಾಹಿನಿಗಳ ವರದಿಗಾರರು, ಛಾಯಾಗ್ರಾಹಕರು ಹಾಗೂ ವಿಡಿಯೋಗ್ರಾಫರ್ಗಳು ಕಾರ್ಯ ನಿರ್ವಹಿಸಿದ್ದರು. ಬೆಂಗಳೂರು ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಸುದ್ದಿಗಾಗಿ ತೆರಳಿದ್ದ ಪತ್ರಕರ್ತರಲ್ಲಿ ಕೊರೊನಾ ಸೋಂಕು ದೃಢಪಟ್ಟ…
ಕೊರೊನಾ ವಾರಿಯರ್ಸ್ ಪೊಲೀಸರಿಗೆ ಬೆಳ್ಳಿ ನಾಣ್ಯ ನೀಡಿ ಕೃತಜ್ಞತೆ ಅರ್ಪಿಸಿದ ನಟಿ ಶ್ರುತಿ ನಾಯ್ಡು
May 11, 2020ಮೈಸೂರು, ಮೇ10(ಆರ್ಕೆಬಿ)-ವಿಶ್ವಾದ್ಯಂತ ಕಾಡುತ್ತಿರುವ ಕೊರೊನಾ ಮಹಾಮಾರಿ ತಡೆಗಟ್ಟಲು ಹಗಲು ರಾತ್ರಿ ಜೀವದ ಹಂಗು ತೊರೆದು ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು ತಲಾ 20 ಗ್ರಾಂ ಬೆಳ್ಳಿಯ ನಾಣ್ಯ ನೀಡಿ ಕೃತಜ್ಞತೆ ಸಲ್ಲಿಸಿದ್ದಾರೆ. ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣೆಯ 90 ಸಿಬ್ಬಂದಿಗೆ ಬೆಳ್ಳಿ ನಾಣ್ಯವಿರುವ ವಿಭಿನ್ನ ವಿನ್ಯಾಸದ `ಕೃತಜ್ಞತಾ ಬಾಕ್ಸ್’ಗಳನ್ನು ಭಾನುವಾರ ವಿತರಿಸಿ ದರು. ಲಾಕ್ಡೌನ್ ವೇಳೆ ನಾವೆಲ್ಲರೂ ಮನೆಯಲ್ಲಿ ಆರಾಮವಾಗಿ ಇರುವಂತೆ ಮಾಡಿದ ಪೊಲೀಸ್ ಸಿಬ್ಬಂದಿ, ರಜೆ ತೆಗೆದುಕೊಳ್ಳದೇ ಕೆಲಸ ಮಾಡಿದ್ದಾರೆ. ಅಪಾಯಕಾರಿ…
ವಿಶೇಷಚೇತನರಿಗೆ ಎಂಕೆಎಸ್ ದಿನಸಿ ಪದಾರ್ಥಗಳ ಕಿಟ್ ವಿತರಣೆ
May 11, 2020ಮೈಸೂರು, ಮೇ 10(ಆರ್ಕೆಬಿ)- ಮೈಸೂ ರಿನ ವಿವಿಧ ಬಡಾವಣೆಗಳ ಬಡವರು, ನಿರಾ ಶ್ರಿತರು, ವಿಶೇಷಚೇತನರಿಗೆ ಕುವೆಂಪು ನಗ ರದ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪ ದಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ದಿನಸಿ ಕಿಟ್ ವಿತರಿಸಿದರು. ಈ ಸಂದರ್ಭ ಮೈಸೂರು ಜಿಲ್ಲಾ ವಿಶೇಷಚೇತನರ ಸಂಘದ ಅಧ್ಯಕ್ಷ ಪ್ರಭು, ಪಾಲಿಕೆ ಮಾಜಿ ಸದಸ್ಯ ಎಂ. ಸುನಿಲ್, ರೈಲ್ವೆ ಸಹಕಾರ ಸಂಘದ ನಿರ್ದೇ ಶಕ ಚಂದ್ರು, ಮುಖಂಡರಾದ ಗುಣಶೇಖರ್, ವಿಶ್ವ, ನಿರಾಲ್ ಶಾ, ತ್ಯಾಗರಾಜ್ ಇದ್ದರು. ಲಾಕ್ಡೌನ್ ವೇಳೆ ಸತತ 47ನೇ ದಿನದಿಂದ…
ನೌಕರರ ವರ್ಗಾವರ್ಗಿಗೂ ಕುತ್ತಾದ ಕೊರೊನಾ ಮಾರಿ
May 10, 2020ಬೆಂಗಳೂರು,ಮೇ 9(ಕೆಎಂಶಿ)- ಕೊರೊನಾ ಸಾಂಕ್ರಾ ಮಿಕ ರೋಗ ಸಾರ್ವತ್ರಿಕ ವರ್ಗಾವರ್ಗಿಗೂ ಕುತ್ತು ತಂದಿದೆ. ಪ್ರಸಕ್ತ ಸಾಲಿನಲ್ಲಿ ಸರ್ಕಾರಿ ನೌಕರರ ವರ್ಗಾವರ್ಗಿ ಮಾಡದಿರಲು ಸರ್ಕಾರ ತೀರ್ಮಾನಿಸಿದೆ. ಪ್ರಸಕ್ತ ಸಾಲಿನ ವರ್ಗಾವಣೆಗಳನ್ನು ಈ ತಿಂಗಳಲ್ಲೇ ಆರಂಭಿಸಿ, ಜೂನ್ ಮೊದಲ ವಾರದಲ್ಲಿ ಅಂತ್ಯಗೊಳಿಸಬೇಕಿತ್ತು. ಆದರೆ ಸಾಂಕ್ರಾ ಮಿಕ ರೋಗ ಮುಂದಿಟ್ಟುಕೊಂಡು ವರ್ಗಾವಣೆಯಲ್ಲಿ ತೊಡಗಿಸಿಕೊಳ್ಳುವುದು ಬೇಡ ಎಂದು ಅಧಿಕಾರಿಗಳು ನೀಡಿರುವ ಸಲಹೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಸಹಮತ ವ್ಯಕ್ತಪಡಿಸಿದ್ದಾರೆ. ರಾಜ್ಯ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಇಂತಹ ಸನ್ನಿ ವೇಶದಲ್ಲಿ ವರ್ಗಾವಣೆ ಮಾಡಿ, ಹೆಚ್ಚಿನ…
ರಾಜ್ಯದಲ್ಲಿ ಒಂದೇ ದಿನ 42 ಮಂದಿಗೆ ಸೋಂಕು ಪತ್ತೆ
May 10, 2020ಬೆಂಗಳೂರು, ಮೇ 9-ರಾಜ್ಯದಲ್ಲಿ ಕಳೆದ 5 ದಿನಗಳಿಂದಲೂ ಕೊರೊನಾ ಸೋಂಕಿ ತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಶನಿವಾರ 19 ಮಹಿಳೆಯರು, ಇಬ್ಬರು ಮಕ್ಕಳು ಸೇರಿ 42 ಮಂದಿಗೆ ಸೋಂಕು ಪತ್ತೆಯಾಗಿದೆ. 2 ದಿನಗಳ ಹಿಂದೆ ಬೆಂಗಳೂರಿನ ಆಸ್ಪತ್ರೆ ಯಲ್ಲಿ ಕೊರೊನಾ ಸೊಂಕಿತ ಮಹಿಳೆ ಸಾವ ನ್ನಪ್ಪಿರುವುದು ಇಂದು ಬೆಳಕಿಗೆ ಬಂದಿದೆ. ಸೋಂಕಿತರ ಸಂಖ್ಯೆ 795ಕ್ಕೆ ಏರಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 3 ದಿನಗಳಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲಿದ್ದು, ಇಂದು ಒಂದೂವರೆ ವರ್ಷದ ಬಾಲಕ ಹಾಗೂ ಎರಡೂವರೆ…
ನಾಲ್ಕು ಜನ ಚೇತರಿಸಿಕೊಂಡರೆ ಮೈಸೂರು ಕೊರೊನಾ ಮುಕ್ತ
May 10, 2020ಸತತ 9 ದಿನದಿಂದ ಒಂದೂ ಹೊಸ ಸೋಂಕು ದಾಖಲಾಗಿಲ್ಲ ಮೈಸೂರು, ಮೇ 9-ಮೈಸೂರು ಜಿಲ್ಲೆಯಲ್ಲಿ 9ನೇ ದಿನವಾದ ಶನಿವಾರವೂ ಯಾವುದೇ ಹೊಸ ಕೊರೊನಾ ಸೋಂಕು ಪತ್ತೆಯಾಗಿಲ್ಲ. ಅದೇ ವೇಳೆ ಓರ್ವ ಸೋಂಕಿತ ವ್ಯಕ್ತಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಕೇವಲ ನಾಲ್ವರು ಮಾತ್ರ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೆಡ್ ಜೋನ್ನಲ್ಲಿರುವ ಮೈಸೂರು ಜಿಲ್ಲೆ ಆರೇಂಜ್ ಜೋನ್ನತ್ತ ಮುಖ ಮಾಡುವ ದಿನಗಳು ಸಮೀಪಿಸುತ್ತಿರುವುದು ಮೈಸೂರಿಗರಿಗೆ ಸಮಾಧಾನ ತಂದಿದೆ. ಜಿಲ್ಲೆಯಲ್ಲಿ ಒಟ್ಟು 90 ಸೋಂಕಿತರ ಪೈಕಿ 86 ಮಂದಿ ಗುಣಮುಖರಾಗಿ…
ಕೊರೊನಾ ಓಡಿಸಲು ದೇವರ ಮೊರೆ ಹೋಗೋಣ ಬನ್ನಿ…!
May 10, 2020ಬೆಂಗಳೂರು, ಮೇ 9(ಕೆಎಂಶಿ)-ದೇಶಕ್ಕೆ ವಕ್ಕರಿಸಿರುವ ಕೊರೊನಾ ವೈರಸ್ ತೊಲಗಿಸಲು ಮನುಷ್ಯರ ಕೈಯ್ಯಲ್ಲಿ ಆಗುವುದಿಲ್ಲ. ನಾವು ದೇವರ ಮೊರೆ ಹೋಗಬೇಕು ಎಂದು ಅರ್ಚಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಜನರೂ ಕೂಡ ದೇವರ ಮೊರೆ ಹೋಗಬೇಕಾ ಗಿದೆ. ಕಳೆದ 45-50 ದಿನಗಳಿಂದ ದೇವಾಲಯಗಳು ಬಾಗಿಲು ಮುಚ್ಚಿವೆ. ರಾಜ್ಯದಲ್ಲಿ ಧಾರ್ಮಿಕ ಕಾರ್ಯಗಳೇ ಸ್ಥಗಿತಗೊಂಡಿವೆ. ರಾಜ್ಯದಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿ ನೆಲೆಸಬೇಕೆಂದರೆ, ದೇವರ ಧ್ಯಾನ ಮಾಡುವುದು ಅವಶ್ಯಕ. ಇದಕ್ಕಾಗಿ ದೇವಸ್ಥಾನ ಗಳನ್ನು ತೆಗೆದು, ಪೂಜಾ ಕಾರ್ಯಕ್ರಮಗಳನ್ನು ನಡೆಸಲು ಅವ ಕಾಶ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ….
ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತೆ ಸಾವು ಆಸ್ಪತ್ರೆ ಸೀಲ್ ಡೌನ್, 7 ಸಿಬ್ಬಂದಿ ಕ್ವಾರಂಟೈನ್ಗೆ
May 10, 2020ಬೆಂಗಳೂರು, ಮೇ 9-ಬೆಂಗಳೂ ರಿನ ಖಾಸಗಿ ಆಸ್ಪತ್ರೆಯೊಂದರ ಕೊರೊನಾ ಸೋಂಕಿತ ಮಹಿಳೆ ಮೃತಪಟ್ಟಿರುವುದು ತಡವಾಗಿ ವರದಿಯಾಗಿದೆ. ಮೇ 7ರಂದು ಈ ಮಹಿಳೆ ಸಾವನ್ನಪ್ಪಿದ್ದು, ಆಕೆಗೆ ಸೋಂಕು ಇತ್ತು ಎಂಬುದು ಇಂದು ಸಂಜೆ ಆರೋಗ್ಯ ಇಲಾಖೆ ಗಮನಕ್ಕೆ ಬರುತ್ತಿ ದ್ದಂತೆಯೇ ಆಕೆ ಮೃತಪಟ್ಟ ಖಾಸಗಿ ಆಸ್ಪತ್ರೆಯಲ್ಲಿ ಸೀಲ್ ಡೌನ್ ಮಾಡ ಲಾಗಿದೆ. ಹೆಣ್ಣೂರು ಬಾಣಸವಾಡಿಯ 57 ವರ್ಷದ ಮಹಿಳೆ ಹೆಚ್ಬಿಆರ್ ಬಡಾವಣೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಉಸಿರಾಟದ ಸಮಸ್ಯೆಯಿಂದಾಗಿ ಮೇ 6ರಂದು ದಾಖಲಾಗಿದ್ದಳು. ಆಕೆ ಮರು ದಿನವೇ ಚಿಕಿತ್ಸೆ ಫಲಕಾರಿಯಾಗದೇ…









