ಮೈಸೂರು, ಮೇ 11- ಆಕಾಶವಾಣಿ ಮೈಸೂರು ಕೇಂದ್ರದ ವತಿಯಿಂದ ಮೇ 13 ರಿಂದ `ಲಾಕ್ಡೌನ್ ಕಥೆಗಳು’ ಎಂಬ ವಿನೂತನ ಮಾಲಿಕೆಯನ್ನು ಪ್ರಾರಂಭಿಸಿದ್ದು, ಲಾಕ್ಡೌನ್ ಸಂದರ್ಭದಲ್ಲಿ ಸಾರ್ವಜನಿಕರು ತಾವು ಕಣ್ಣಾರೆ ಕಂಡಂತಹ ಹಾಗೂ ಅನುಭವಿಸಿದಂತಹ ಘಟನೆಗಳ ಕುರಿತಾಗಿ 200 ಪದಗಳಿಗೆ ಮೀರದಂತೆ ಒಂದು ಕಥೆಯನ್ನು ಕಳುಹಿಸಬಹುದು. ಪ್ರಸಾರಕ್ಕೆ ಯೋಗ್ಯವಾದ ಕಥೆಗಳನ್ನು ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರದಂದು ಮಧ್ಯಾಹ್ನ 1.20 ಗಂಟೆಗೆ ಮೈಸೂರು ಆಕಾಶವಾಣಿ ಕೇಂದ್ರ ದಿಂದ ಪ್ರಸ್ತುತಪಡಿಸಲಾಗುವುದು. ಅಲ್ಲದೆ ಈ ಕಥೆಗಳನ್ನು ಎಫ್.ಎಂ.100.6 ಮೈಸೂರು ಯೂಟೂಬ್ ಚಾನೆಲ್ನಲ್ಲಿ…
ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ
May 12, 2020ಮೈಸೂರು, ಮೇ 11- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ಮೇ 13ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಫೀಡರ್ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಯನ್ನು ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಶಿವಾಜಿ ರಸ್ತೆ, ಎನ್.ಆರ್. ಮೊಹಲ್ಲಾ, ಗಣೇಶ್ನಗರ, ನಾರ್ಥ್-ಈಸ್ಟ್ ಆಫ್ ಎನ್.ಆರ್. ಮೊಹಲ್ಲಾ, ಕುರಿಮಂಡಿ, ಕೆಸರೆ 3ನೇ ಹಂತ ಹಾಗೂ ಸುತ್ತುಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಎನ್.ಆರ್. ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅದೇ ರೀತಿ 66/11 ಕೆ.ವಿ….
ಗಿರಿಜನರಿಗೆ ದಿನಸಿ ಕಿಟ್ ವಿತರಿಸಿದ ಮಾಜಿ ಸಂಸದ ಆರ್.ಧ್ರುವನಾರಾಯಣ್
May 12, 2020ಚಾಮರಾಜನಗರ, ಮೇ 11- ಕೊರೊನಾ ಲಾಕ್ಡೌನ್ನಿಂದ ತೊಂದರೆ ಗೊಳಗಾದ ತಾಲೂಕಿನ ಮುರಟಿಪಾಳ್ಯ, ಬೆಲವತ್ತ ಗ್ರಾಮಗಳ ಗಿರಿಜನರಿಗೆ ಮಾಜಿ ಸಂಸದ ಆರ್.ಧ್ರುವನಾರಾಯಣ್ ದಿನಸಿ ಕಿಟ್ ವಿತರಿಸಿದರು. ಬೆಲವತ್ತ ಗ್ರಾಮದಲ್ಲಿ ದಿನಸಿ ಕಿಟ್ ವಿತ ರಿಸಿದ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಯಾದ ಯೋಜನೆಗಳು ಕೊರೊನಾ ಸಂಕಷ್ಟದಲ್ಲಿ ಉಪಯೋಗಕ್ಕೆ ಬರುತ್ತಿರುವುದು ಸಂತಸ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೆಪಿಸಿಸಿ ಆದೇಶದ ಮೇರೆಗೆ ಕಾಂಗ್ರೆಸ್ ಬಡವರಿಗೆ ಸ್ಪಂದಿಸಿ ಕೆಲಸ ಮಾಡುತ್ತಿದೆ. ಚಾ.ನಗರ ಹಾಗೂ ಹನೂರು ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕರಾದ…
ಪರೀಕ್ಷೆ ವಿಧಾನದ ಸಂಬಂಧ ಸಮಿತಿ ರಚಿಸಿ
May 12, 2020ಮೈಸೂರು, ಮೇ 11(ಪಿಎಂ)- ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆ, ಮೌಲ್ಯಮಾಪನ ಹಾಗೂ ಫಲಿತಾಂಶ ಕುರಿತಂತೆ ಉಂಟಾಗಿರುವ ಸಮಸ್ಯೆ ಗಳಿಗೆ ಪರಿಹಾರ ಕಂಡುಕೊಳ್ಳಲು ತಮ್ಮ ಅಧ್ಯ ಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಿ ಸಮಯೋ ಚಿತ ತೀರ್ಮಾನ ಕೈಗೊಳ್ಳುವಂತೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ್ ಅವರಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಮನವಿ ಮಾಡಿದ್ದಾರೆ. ಪ್ರಸ್ತುತದ ಜಟಿಲ ಪರಿಸ್ಥಿತಿ ಕಾರಣಕ್ಕೆ ಪ್ರಥಮ ಹಾಗೂ ದ್ವಿತೀಯ ಪದವಿ ಪರೀಕ್ಷೆ ಮಾಡದೇ ತೇರ್ಗಡೆ ಮಾಡುವುದೂ…
ಜುಬಿಲಂಟ್ ಕಾರ್ಖಾನೆ ಕೊರೊನಾ ಪ್ರಕರಣ; ತನಿಖಾ ವರದಿ ಬಹಿರಂಗಪಡಿಸಲು ಸಿಪಿಐ(ಎಂ) ಆಗ್ರಹ
May 12, 2020ಮೈಸೂರು, ಮೇ 11(ಪಿಎಂ)- ನಂಜನಗೂಡು ಕೈಗಾರಿಕಾ ಪ್ರದೇಶದ ಜುಬಿಲಂಟ್ ಕಾರ್ಖಾನೆಯಲ್ಲಿ ಕೊರೊನಾ ಸೋಂಕು ಹರಡಿದ ಮೂಲದ ಕುರಿತು ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ ಅವರ ತನಿಖಾ ವರದಿಯನ್ನು ರಾಜ್ಯ ಸರ್ಕಾರ ಬಹಿರಂಗಪಡಿಸಬೇಕು ಎಂದು ಸಿಪಿಐ(ಎಂ) ಮೈಸೂರು ಜಿಲ್ಲಾ ಸಮಿತಿ ಒತ್ತಾಯಿಸಿದೆ. ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪಾಸಿಟಿವ್ ಪ್ರಕರಣ ಹೆಚ್ಚು ದಾಖ ಲಾಗಲು ಮುಖ್ಯ ಕಾರಣ ಜುಬಿಲಂಟ್ ಕಾರ್ಖಾನೆ. ಒಟ್ಟು 90 ಪ್ರಕರಣಗಳಲ್ಲಿ 70ಕ್ಕೂ ಹೆಚ್ಚು ಪ್ರಕರಣಗಳು ಈ ಕಾರ್ಖಾನೆಗೆ ಸಂಬಂಧಿಸಿದ್ದೇ ಆಗಿವೆ. ಕಾರ್ಖಾನೆಗೆ ಅಂಟಿದ ವೈರಾಣು…
ಕ್ವಾರಂಟೈನ್ ಒಪ್ಪಿದವರಿಗೆ ರಾಜ್ಯಕ್ಕೆ ಪ್ರವೇಶಾವಕಾಶ
May 11, 2020ಬೆಂಗಳೂರು, ಮೇ 10-ವಿದೇಶ ಹಾಗೂ ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಲು ಸಿದ್ಧತೆ ನಡೆಸಿದೆ. ಕ್ವಾರಂಟೈನ್ ಸೇರಿದಂತೆ ಹಲವು ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವವರಿಗೆ ಮಾತ್ರ ರಾಜ್ಯಕ್ಕೆ ಪ್ರವೇಶವಿದೆ. ಇನ್ನು ಮುಂದೆ ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಮೃತ ದೇಹವನ್ನು ತರುವಂತಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಭಾನುವಾರ ನಡೆದ ಸಚಿವರು ಮತ್ತು ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಚರ್ಚಿಸಲಾಯಿತು. ಹೊರ ರಾಜ್ಯದಿಂದ ಬರುವ ಕನ್ನಡಿಗರು ಕಡ್ಡಾಯವಾಗಿ ಆನ್ಲೈನ್ನಲ್ಲಿ ನೋಂದಣಿ ಮಾಡಿಸಲೇಬೇಕು. ಅವರು ಲಾಕ್ಡೌನ್…
ರಾಜ್ಯದಲ್ಲಿ ಕೊರೊನಾ ಅಬ್ಬರ
May 11, 2020ಒಂದೇ ದಿನ 54 ಮಂದಿಗೆ ಸೋಂಕು ಹಸಿರು ವಲಯ ಶಿವಮೊಗ್ಗಕ್ಕೂ ಅಂಟಿದ ಜಾಡ್ಯ ಬೆಂಗಳೂರು, ಮೇ 10-ರಾಜ್ಯದಲ್ಲಿ ಕೊರೊನಾ ಸೋಂಕಿನ ಅಬ್ಬರ ಹೆಚ್ಚಾಗಿದÀ್ದು, ಭಾನುವಾರ ಒಂದೇ ದಿನ 22 ಮಹಿಳೆಯರೂ ಸೇರಿದಂತೆ ಒಟ್ಟು 54 ಮಂದಿಗೆ ಸೋಂಕು ಪತ್ತೆಯಾಗಿದೆ. ಹಸಿರು ವಲಯದಲ್ಲಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಸೋಂಕು ಪ್ರವೇಶಿಸಿದ್ದು, ಅಲ್ಲಿ 8 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 848ಕ್ಕೆ ಏರಿದೆ. ಗುಜರಾತ್ನ ಅಹಮದಾಬಾದ್ನಿಂದ ಹಿಂತಿರುಗಿದ್ದ ಶಿವಮೊಗ್ಗ ಜಿಲ್ಲೆ ಶಿಕಾರಿಪುರದ 8 ಮಂದಿಗೆ ಸೋಂಕು ಪತ್ತೆಯಾಗಿದೆ….
ಮೈಸೂರು ರೆಡ್ ಜೋನ್ನಿಂದ ಹೊರ ಬರಲು ದಿನಗಣನೆ 10ನೇ ದಿನವೂ ಹೊಸ ಪ್ರಕರಣ ಪತ್ತೆಯಾಗಿಲ್ಲ
May 11, 2020ಮೈಸೂರು, ಮೇ 10(ಎಂಟಿವೈ)- ರೆಡ್ಜೋನ್ ಹಣೆಪಟ್ಟಿಯಿಂದ ಹೊರ ಬರಲು ಮೈಸೂರು ಜಿಲ್ಲೆಗೆ ನಾಲ್ಕೇ ಮೆಟ್ಟಿಲು ಬಾಕಿ ಇದೆ. ಸತತ 2 ವಾರ ಹೊಸ ಪ್ರಕರಣ ಪತ್ತೆ ಯಾಗದಿದ್ದರೆ ನಿಯಮಾನುಸಾರ ರೆಡ್ಜೋನ್ನಿಂದ ಆರೆಂಜ್ಜೋನ್ಗೆ ವರ್ಗಾವಣೆಯಾಗುವುದರಿಂದ ಮೈಸೂರಿನ ಜನತೆ ಕೇವಲ 4 ದಿನಗಳತ್ತ ಗಮನ ಕೇಂದ್ರೀಕರಿಸುವಂತಾಗಿದೆ. ಕೊರೊನಾ ಮುಕ್ತವಾಗುವತ್ತ ಮೈಸೂರು ದಾಪುಗಾಲಿಡುತ್ತಿದ್ದು, ಸತತ 10ನೇ ದಿನವೂ ಕೊರೊನಾ ಸೋಂಕಿತ ಹೊಸ ಪ್ರಕರಣ ಪತ್ತೆಯಾಗಿಲ್ಲ. ಕೋವಿಡ್ ಆಸ್ಪತ್ರೆಯಿಂದ ಸೋಂಕಿತರು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಸಕ್ರಿಯ ಪ್ರಕರಣ ಕೇವಲ 4ಕ್ಕೆ ಕುಸಿದಿದ್ದರೆ, ಬಿಡುಗಡೆ…
ವೈದ್ಯರು, ಆರೋಗ್ಯ ಸಿಬ್ಬಂದಿ, ಜಿಲ್ಲಾಡಳಿತದ ಪರಿಶ್ರಮದಿಂದ ಮೈಸೂರಲ್ಲಿ ಕೊರೊನಾ ಸೋಂಕು ನಿಯಂತ್ರಣ
May 11, 2020ಮೈಸೂರು,ಮೇ 10(ಎಂಟಿವೈ)- ವೈದ್ಯರು, ಆರೋಗ್ಯ ಸಿಬ್ಬಂದಿ ಹಾಗೂ ಜಿಲ್ಲಾಡಳಿತದ ಸತತ ಪರಿಶ್ರಮದಿಂದ ಮೈಸೂರು ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ವೈರಾಣು ಹರಡುವು ದನ್ನು ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳು ವುದರೊಂದಿಗೆ ವೈಯಕ್ತಿಕ ಸುರಕ್ಷತೆಗೆ ಆದ್ಯತೆ ನೀಡು ವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಪತ್ರ ಮುಖೇನ ಮನವಿ ಮಾಡಿದ್ದಾರೆ. ಮೈಸೂರಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿ ಮುಖವಾಗುವುದರೊಂದಿಗೆ ಕಳೆದ 9 ದಿನದಿಂದ ಹೊಸ ಸೋಂಕಿತರ ಪತ್ತೆಯಾಗದೇ ಇರುವುದಕ್ಕೆ ಸಚಿವರು ಹರ್ಷ ವ್ಯಕ್ತಪಡಿಸಿದ್ದು, ಜಿಲ್ಲಾಧಿಕಾರಿಗಳ…
ನಾಳೆ ದೆಹಲಿಯಿಂದ ವಿಶೇಷ ರೈಲು ಸಂಚಾರ
May 11, 2020ಬೆಂಗಳೂರು, ಚೆನ್ನೈ, ತಿರುವನಂತಪುರ ಸೇರಿ ವಿವಿಧ ರಾಜ್ಯಗಳ ರಾಜಧಾನಿಗೆ 15 ವಿಶೇಷ ಶ್ರಮಿಕ್ ರೈಲುಗಳ ಸಂಚಾರ ಇಂದು ಸಂಜೆ 4ರಿಂದ ಆನ್ಲೈನ್ನಲ್ಲೇ ಟಿಕೆಟ್ ಖರೀದಿಗೆ ಅವಕಾಶ, ಪ್ರಯಾಣಕ್ಕೆ ಮುನ್ನ ಸ್ಕ್ರೀನಿಂಗ್ ಮೈಸೂರು, ಮೇ 10- ಭಾರತೀಯ ರೈಲ್ವೆಯು ಮೇ 12ರಿಂದ 15 ವಿಶೇಷ ರೈಲು ಗಳ ಸಂಚಾರ ಆರಂಭಿಸಲಿದ್ದು, ಮೊದಲ ಹಂತದಲ್ಲಿ 15 ರೈಲುಗಳು ದೆಹಲಿಯಿಂದ ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮುಂಬೈ ಸೆಂಟ್ರಲ್, ಭುವನೇಶ್ವರ, ರಾಂಚಿ, ಪಟನಾ, ಹೌರಾ, ದಿಬ್ರೂಗಢ, ಮಷಾಲ್, ಅಗರ್ತಲಾ, ಸಿಕಂದರಾಬಾದ್, ಬಿಲಾಸ್ ಪುರಗೆ…










