ನವದೆಹಲಿ, ಮೇ 11- ಎಲ್ಲಾ ರಾಜ್ಯಗಳು ವಾರದೊಳ ಗಾಗಿ ವಲಯವಾರು ಕೊರೊನಾ ಸಂಬಂಧಪಟ್ಟ ವರದಿ ಯನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕೆಂದು ಸೂಚಿಸಿದ ಪ್ರಧಾನಿ ಮೋದಿಯವರು, ರಾಜ್ಯಗಳಿಂದ ಬರುವ ವರದಿ ಹಾಗೂ ಇಂದು ಸಿಎಂಗಳ ಜೊತೆ ನಡೆದ ಸಂವಾದದಲ್ಲಿ ಬಂದ ಸಲಹೆಗಳನ್ನು ಕ್ರೋಢೀಕರಿಸಿ ಮಾರ್ಗಸೂಚಿ ರಚಿಸಲಾಗುತ್ತದೆ ಎಂದು ತಿಳಿಸಿದರು. ಮೂರನೇ ಹಂತದ ಲಾಕ್ಡೌನ್ ಮುಕ್ತಾಯಕ್ಕೆ ಕೇವಲ 6 ದಿನಗಳು ಮಾತ್ರ ಉಳಿದಿದ್ದು, ಕೊರೊನಾ ನಿಯಂತ್ರ ಣಕ್ಕೆ ಮುಂದಿನ ಕಾರ್ಯಯೋಜನೆ ರೂಪಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರು ಸೋಮವಾರ ಮಧ್ಯಾಹ್ನ ಎಲ್ಲಾ…
ಸೋಮಣ್ಣನವರಿಗಂತೂ ಸಹಕಾರ ಕೊಡಲಿಲ್ಲ, ಕನಿಷ್ಠ ಸೋಮಶೇಖರ್ ಅವರ ಜೊತೆಗಾದರೂ ಕೈಜೋಡಿಸಿ…
May 12, 2020ಮೈಸೂರು, ಮೇ 11(ಎಸ್ಬಿಡಿ)- ವಿ. ಸೋಮಣ್ಣರಂತೆ ಮೈಸೂರಿನ ಅಭಿವೃದ್ಧಿ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಎಸ್.ಟಿ.ಸೋಮಶೇಖರ್ ಅವರಿಗಾದರೂ ಕನಿಷ್ಠ ಸಹಕಾರ ನೀಡಿ ಎಂದು ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ.ರಾಮ ದಾಸ್ ಅವರನ್ನು ಕೋರಿ ಕೊಂಡಿದ್ದಾರೆ. ಮೈಸೂರಿನ ಸೀವೆಜ್ ಫಾರ್ಮ್ಗೆ ಸಂಬಂ ಧಿಸಿದ ಯೋಜನೆ ವಿಚಾರವಾಗಿ ಸಂಸದ ಪ್ರತಾಪ್ಸಿಂಹ ಹಾಗೂ ಶಾಸಕ ಎಸ್.ಎ. ರಾಮದಾಸ್ ನಡುವೆ ಚರ್ಚೆ ಮುಂದು ವರೆದಿದ್ದು, `ನಾನು ಲಭ್ಯವಿಲ್ಲದ ದಿನ ಗಳಲ್ಲೇ ಏಕೆ ಸಭೆ ಮಾಡಿದರೋ ನನಗೆ ಗೊತ್ತಿಲ್ಲ’ ಎಂದಿರುವ ರಾಮದಾಸ್ ಅವರಿಗೆ…
ಸಂಸದರು ಹೇಳಿರುವ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣೆ ಸಭೆ ನಿಯಮಾವಳಿ ಪ್ರಕಾರ ನಡೆದಿಲ್ಲ
May 12, 2020ಮೈಸೂರು, ಮೇ11(ಆರ್ಕೆಬಿ)- ಸೀವೆಜ್ ಫಾರಂಗೆ ಸಂಬಂಧ ಪಟ್ಟಂತೆ ಹಿಂದಿನ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರು ನಡೆ ಸಿದ ಸಭೆಗಳಿಗೆ ತಮಗೆ ಪಾಲಿಕೆಯಿಂದ ಅಧಿಕೃತ ಆಹ್ವಾನ ನೀಡಿರಲಿಲ್ಲ. ಅಲ್ಲದೆ, ಸಂಸದರು ಹೇಳಿರುವ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣೆ ಸಭೆ ನಿಯಮ ದಂತೆ ನಡೆದಿಲ್ಲ ಎಂದು ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿ ರುವ ಅವರು, 2019ರ ಡಿ. 24, 30 ಮತ್ತು 2020ರ ಜ.3ರಂದು ನಡೆಸಲಾಗಿದೆ ಎನ್ನ ಲಾದ ಸಭಾ…
ಲಾಕ್ಡೌನ್ ನಡುವೆ ತೆರಿಗೆ ಸಂಗ್ರಹಿಸಲು ಮೈಸೂರು ನಗರ ಪಾಲಿಕೆ ಹೊಸ ಮಾರ್ಗ
May 12, 2020ಮೈಸೂರು, ಮೇ.11(ಎಂಟಿವೈ)- ಲಾಕ್ಡೌನ್ನಿಂದಾಗಿ ಕಂದಾಯ ಸಂಗ್ರಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಕಳೆದ ಮೂರು ದಿನದಿಂದ ಪ್ರಾಪರ್ಟಿ ಇಂಡೆಕ್ಸ್ ನಂಬರ್ ಮೂಲಕ ಆಸ್ತಿ ತೆರಿಗೆ ಸಂಗ್ರಹಿಸುವ ಹೊಸ ವಿಧಾನಕ್ಕೆ ಚಾಲನೆ ನೀಡಿದೆ. 2020-21ನೇ ಸಾಲಿನಲ್ಲಿ ಕಂದಾಯ ಸಂಗ್ರಹ ಪ್ರಕ್ರಿಯೆ ಏಪ್ರಿಲ್ ತಿಂಗಳಿಂದ ಆರಂಭವಾಗಬೇಕಾಗಿತ್ತು. ಮೈಸೂರು ಮಹಾನಗರ ಪಾಲಿಕೆಯ 9 ವಲಯ ಗಳಲ್ಲೂ ಪ್ರಾಪರ್ಟಿ ಇಂಡೆಕ್ಸ್ ನಂಬರ್ ಮೂಲಕ ಕಂದಾಯ ಸಂಗ್ರಹ ಪ್ರಕ್ರಿಯೆ ಆರಂಭಿಸಿದೆ. ಪ್ರತಿ ವರ್ಷ ಏಪ್ರಿಲ್ ತಿಂಗ ಳಲ್ಲಿ ಶೇ. 5ರಷ್ಟು ರಿಯಾಯಿತಿ ಮೂಲಕ…
ಚೀನಾದಿಂದ ಹೊರ ಬರುವ ಕಂಪನಿಗಳನ್ನು ಸೆಳೆಯಲು ರಾಜ್ಯದಲ್ಲಿ ಕಾರ್ಯಪಡೆ
May 12, 2020ಬೆಂಗಳೂರು: ಚೀನಾ ದೇಶದಿಂದ ಹೊರ ಬರುತ್ತಿರುವ ಕಂಪನಿಗಳನ್ನು ರಾಜ್ಯಕ್ಕೆ ಸೆಳೆಯುವ ದೃಷ್ಟಿಯಿಂದ ರಾಜ್ಯ ಸರಕಾರ ವಿಶೇಷ ಹೂಡಿಕೆ ಪ್ರೋತ್ಸಾಹ ಕಾರ್ಯಪಡೆಯನ್ನು ರಚಿಸಿದೆ. ಕೊರೊನಾ ಜನಕ ಚೀನಾದಿಂದ ಈಗಾಗಲೇ ಹಲವು ಕಂಪೆನಿಗಳು ಹೊರಬರಲು ಮುಂದಾ ಗಿವೆ. ಈ ಸಂಬಂಧ ಹಲವು ಕಂಪೆನಿ ಗಳು ತಮ್ಮ ಇಂಗಿತ ವ್ಯಕ್ತಪಡಿಸಿವೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ರಾಜ್ಯ ಸರ್ಕಾರ ಚೀನಾದಿಂದ ಹೊರ ಬರುವ ಕಂಪೆನಿಗಳನ್ನು ರಾಜ್ಯಕ್ಕೆ ಕರೆ ತರುವ ನಿಟ್ಟಿನಲ್ಲಿ ಕಾರ್ಯಪಡೆಯನ್ನು ರಚಿಸಿದೆ. ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಇತ್ತೀಚೆಗೆ ಈ…
ಕೆ.ಆರ್.ಆಸ್ಪತ್ರೆಯ ವೈರಾಲಜಿ ವಿಭಾಗಕ್ಕೆ ಡಿಎಫ್ಆರ್ಎಲ್ನಿಂದ ಮೊಬೈಲ್ ಪರಕ್ ಯೂನಿಟ್ ಕೊಡುಗೆ
May 12, 2020ಮೈಸೂರು, ಮೇ 11(ಆರ್ಕೆಬಿ)- ಕೊರೊನಾ ಪಿಡುಗು ಹೆಚ್ಚುತ್ತಿರುವ ಸಂದರ್ಭದಲ್ಲಿ ಕೊರೊನಾ ಪ್ರಕರಣಗಳ ಪರೀಕ್ಷೆಗೆ ನೆರವಾಗುವ ಉದ್ದೇಶದಿಂದ ಮೈಸೂರಿನ ಡಿಎಫ್ ಆರ್ಎಲ್ (ರಕ್ಷಣಾ ಆಹಾರ ಸಂಶೋಧನಾ ಪ್ರಯೋ ಗಾಲಯ) ಕೆ.ಆರ್.ಆಸ್ಪತ್ರೆಯ ವೈರಾಲಜಿ (ಮೈಕ್ರೋ ಬಯಾ ಲಜಿ) ವಿಭಾಗಕ್ಕೆ ಮೊಬೈಲ್ ಪರಕ್ ಯೂನಿಟ್ ಕೊಡುಗೆ ನೀಡಿದೆ. ಸುಮಾರು 1 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಈ ಮೊಬೈಲ್ ಪರಕ್ ಯೂನಿಟ್ನಿಂದ ಪ್ರತಿದಿನ 100 ರಿಂದ 150ಕ್ಕೂ ಹೆಚ್ಚಿನ ಕೊರೊನಾ ಪ್ರಕರಣಗಳ ಪರೀಕ್ಷೆ ನಡೆಸಬಹುದಾಗಿದೆ. ಡಿಎಫ್ಆರ್ಎಲ್ ನಿರ್ದೇಶಕ ಡಾ. ಎ.ಡಿ.ಸೇಮ್ವಾಲ್ ಸೋಮವಾರ…
ಶ್ರೀ ಶಿವರಾತ್ರೀಶ್ವರ ಸ್ವಾಮೀಜಿ ಕೃಷಿಗೆ ಪ್ರೋತ್ಸಾಹ ನೀಡುತ್ತಿದ್ದರು
May 12, 2020ಮೈಸೂರು, ಮೇ 11(ಪಿಎಂ)- ಮಂತ್ರ ಮಹರ್ಷಿಗಳೆಂದೇ ಜನಮಾನಸದಲ್ಲಿ ನೆಲೆ ನಿಂತ ಸುತ್ತೂರು ಮಠ 22ನೇ ಪೀಠಾಧಿಪತಿ ಶ್ರೀಶಿವರಾತ್ರೀಶ್ವರ ಸ್ವಾಮೀಜಿಯವರು ಸ್ವತಃ ಕೃಷಿ ಕಾಯಕದಲ್ಲಿ ನಿರತರಾಗುತ್ತಿದ್ದರು. ಜೊತೆಗೆ ರೈತರಿಗೆ ಪ್ರೋತ್ಸಾಹ ನೀಡುತ್ತಿದ್ದರು ಎಂದು ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು. ಮೈಸೂರಿನ ಚಾಮುಂಡಿಬೆಟ್ಟದ ತಪ್ಪ ಲಿನ ಶ್ರೀ ಸುತ್ತೂರು ಮಠದಲ್ಲಿ ಭಾನು ವಾರ ಏರ್ಪಡಿಸಿದ್ದ ಶ್ರೀಮಠದ 22ನೇ ಪೀಠಾಧಿಪತಿ ಮಂತ್ರ ಮಹರ್ಷಿಯವರ (ಶ್ರೀಶಿವರಾತ್ರೀಶ್ವರ ಸ್ವಾಮೀಜಿ) 135ನೇ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಶ್ರೀ…
ಮಂಡ್ಯದಲ್ಲಿ ಇಬ್ಬರು ಡಿಸ್ಚಾರ್ಜ್: 14 ಮಂದಿಗೆ ಚಿಕಿತ್ಸೆ ಮುಂದುವರಿಕೆ
May 12, 2020ಮಂಡ್ಯ, ಮೇ 11- ಜಿಲ್ಲೆಯಲ್ಲಿ ಸೋಮವಾರ ಇಬ್ಬರು ಸೋಂಕಿತರು ಡಿಸ್ಚಾರ್ಜ್ ಆಗಿದ್ದು, 14 ಮಂದಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕ ಟೇಶ್ ತಿಳಿಸಿದರು. ಜಿಲ್ಲೆಯಲ್ಲಿ ಒಟ್ಟು 29 ಪ್ರಕರಣಗಳು ದಾಖಲಾಗಿದ್ದು, ಈ ಹಿಂದೆ 14 ಮಂದಿ ಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಇಂದು ಪಿ.505 ಮತ್ತು ಪಿ.512 ಕೂಡ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು 16ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯ 13 ಮಂದಿ ಹಾಗೂ ಹಾಸನ ಮೂಲದ ಒಬ್ಬರು ಜಿಲ್ಲೆಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು…
ಪಡಿತರ ಅಕ್ಕಿ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ: ಗೋಪಾಲಯ್ಯ
May 12, 2020ಬೆಂಗಳೂರು, ಮೇ 11 (ಕೆಎಂಶಿ)- ರಾಜ್ಯ ಮತ್ತು ಕೇಂದ್ರ ಸರ್ಕಾರ ಗಳು ವಿತರಿಸುವ ಪಡಿತರ ಧಾನ್ಯಗಳನ್ನು ಅಕ್ರಮವಾಗಿ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರಿಗೆ ನೀಡುತ್ತಿರುವ ಪಡಿತರ ವಿತರಣೆಯನ್ನು ಕೆಲವರು ದುರ್ಬ ಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ದೂರು ಬಂದಿವೆ. ಸರ್ಕಾರ ಉಚಿತವಾಗಿ ವಿತರಿಸುವ ಅಕ್ಕಿಯನ್ನು ಕೆಜಿಗೆ 12 ರಿಂದ 15 ರೂ.ಗಳಿಗೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ….
ಪಿಎಂ ಕೇರ್ಸ್ ಫಂಡ್ಗೆ 1 ಲಕ್ಷ ರೂ. ದೇಣಿಗೆ
May 12, 2020ಮೈಸೂರು,ಮೇ11(ಪಿಎಂ)- ಮೈಸೂರಿನ ಸಿದ್ಧಾರ್ಥನಗರದ ಗಾಯತ್ರಿ ಎಜುಕೇಷನ್, ಕಲ್ಚರಲ್ ಮತ್ತು ಚಾರಿಟೆಬಲ್ ಟ್ರಸ್ಟ್ ವತಿಯಿಂದ ಕೊರೊನಾ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಕೇರ್ಸ್ ಫಂಡ್ಗೆ 1 ಲಕ್ಷ ರೂ. ಹಾಗೂ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ 30 ಸಾವಿರ ರೂ. ದೇಣಿಗೆ ನೀಡಲಾಯಿತು. ಮೈಸೂರಿನ ಕಾಡಾ ಕಚೇರಿಯಲ್ಲಿ ಇತ್ತೀಚೆಗೆ ಶಾಸಕ ಎಸ್.ಎ.ರಾಮದಾಸ್ ಅವರಿಗೆ ಸಂಘದ ಪದಾಧಿಕಾರಿಗಳು ಚೆಕ್ಗಳನ್ನು ಹಸ್ತಾಂತರಿಸಿದರು. ಇದೇ ವೇಳೆ ಟ್ರಸ್ಟ್ ಕಾರ್ಯದರ್ಶಿ ವೀಣಾ ಡೋಂಗರೆ ಮಾತನಾಡಿ, ಟ್ರಸ್ಟ್ ಅಧ್ಯಕ್ಷೆ ವನಜಾ ಬಿ.ಪಂಡಿತ್ ನೇತೃತ್ವದಲ್ಲಿ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು…










