ಮೈಸೂರು

ಜನಾದೇಶ ಧಿಕ್ಕರಿಸುವ ಶಾಸಕರು ಮತ್ತೆ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗದ ಕಾನೂನು ರಚನೆಗೆ ಆಗ್ರಹ
ಮೈಸೂರು

ಜನಾದೇಶ ಧಿಕ್ಕರಿಸುವ ಶಾಸಕರು ಮತ್ತೆ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗದ ಕಾನೂನು ರಚನೆಗೆ ಆಗ್ರಹ

July 31, 2019

ಮೈಸೂರು, ಜು.30(ಪಿಎಂ)- ಜನಾದೇಶ ಧಿಕ್ಕರಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವವರು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಕಾನೂನು ರೂಪಿಸಬೇಕೆಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಾಗರಿಕ ಹಕ್ಕು ರಕ್ಷಣಾ ಸಮಿತಿ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಪುರಭವನ ಆವರಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಜನಾದೇಶ ಧಿಕ್ಕರಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡ ಶಾಸಕರು ಸೇರಿದಂತೆ ಇನ್ನು ಮುಂದೆ ಈ ರೀತಿ ರಾಜೀನಾಮೆ ನೀಡುವವರು ಮತ್ತೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶವಾಗದಂತೆ ಕಾನೂನು ರೂಪಿಸಬೇಕೆಂದು…

ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದ
ಮೈಸೂರು

ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದ

July 30, 2019

ಬೆಂಗಳೂರು, ಜು.29(ಕೆಎಂಶಿ)-ಮುಖ್ಯಮಂತ್ರಿ ಬಿ.ಎಸ್. ಯಡಿಯೂ ರಪ್ಪ ನೇತೃತ್ವದ ಬಿಜೆಪಿ ಸರಕಾರ ವಿಧಾನಸಭೆಯಲ್ಲಿ ಇಂದು ನಡೆದ ವಿಶ್ವಾಸಮತ ಯಾಚನೆಯಲ್ಲಿ ಗೆಲುವು ಸಾಧಿಸಿದೆ. ಅಲ್ಲದೇ ಮಹತ್ವದ ಧನವಿನಿಯೋಗ ವಿಧೇಯಕ ಮಸೂದೆ ಕೂಡ ಅಂಗೀಕಾರಗೊಂಡಿದೆ. ಸದನ ಆರಂಭವಾಗುತ್ತಿದ್ದಂತೆಯೇ ಯಡಿಯೂರಪ್ಪ ವಿಶ್ವಾಸ ಮತ ಯಾಚಿಸಿದರು. ಇದಕ್ಕೆ ಪ್ರತಿಪಕ್ಷ ಕಾಂಗ್ರೆಸ್-ಜೆಡಿಎಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರೂ, ಮತಕ್ಕೆ ಒತ್ತಾಯ ಮಾಡಲಿಲ್ಲ. ಧ್ವನಿಮತದ ಮೂಲಕ ಯಡಿಯೂರಪ್ಪ ವಿಶ್ವಾಸಮತ ಗಳಿಸುತ್ತಿ ದ್ದಂತೆ ಮುಂದಿನ ಆರು ತಿಂಗಳು ಬಿಜೆಪಿ ಸರ್ಕಾರಕ್ಕೆ ಯಾವುದೇ ಗಂಡಾಂತರವಿಲ್ಲ. ಆಡಳಿತ ಪಕ್ಷದ ಜತೆ 106 ಮಂದಿ…

ಸ್ಪೀಕರ್ ಸ್ಥಾನಕ್ಕೆ ರಮೇಶ್‍ಕುಮಾರ್ ಅಂತೂ ರಾಜೀನಾಮೆ ಸಲ್ಲಿಕೆ
ಮೈಸೂರು

ಸ್ಪೀಕರ್ ಸ್ಥಾನಕ್ಕೆ ರಮೇಶ್‍ಕುಮಾರ್ ಅಂತೂ ರಾಜೀನಾಮೆ ಸಲ್ಲಿಕೆ

July 30, 2019

ಬೆಂಗಳೂರು:  ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನ ಗೊಳ್ಳುವ ಸಂದರ್ಭದಲ್ಲಿ ಅತ್ಯಂತ ಕ್ಲಿಷ್ಟ ಪರಿಸ್ಥಿತಿಯನ್ನು ಎದುರಿಸಿದ ಸಭಾಧ್ಯಕ್ಷ ರಮೇಶ್ ಕುಮಾರ್ ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವ ಹಿಸಿದ ಬಗ್ಗೆ ತೃಪ್ತಿ ವ್ಯಕ್ತಪಡಿಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಮೇಶ್‍ಕುಮಾರ್ ಅವರ ಈ ರಾಜೀನಾಮೆ ಯಡಿಯೂರಪ್ಪ ನೇತೃತ್ವದ ಸರ್ಕಾರದಿಂದ ಹೊಸ ಅಧ್ಯಕ್ಷರ ಆಯ್ಕೆಗೆ ಅವಕಾಶ ದೊರೆ ತಿದೆ. ಯಡಿಯೂರಪ್ಪ ಇಂದು ವಿಧಾನಸಭೆಯಲ್ಲಿ ತಮ್ಮ ಸರ್ಕಾರಕ್ಕಿರುವ ಬಹುಮತ ವನ್ನು ಸಾಬೀತುಪಡಿಸಿದ ನಂತರ ಧನವಿನಿಯೋಗ ಮಸೂದೆ ಮತ್ತು ಪೂರಕ ಅಂದಾಜುಗಳ ಪಟ್ಟಿಗೆ ಅಂಗೀಕಾರ…

ಆಪರೇಷನ್ ಕಮಲ ನಿಲ್ಲಿಸಿ, ನಾವಂತೂ ಅಧಿಕಾರ ಕಿತ್ತುಕೊಳ್ಳಲ್ಲ
ಮೈಸೂರು

ಆಪರೇಷನ್ ಕಮಲ ನಿಲ್ಲಿಸಿ, ನಾವಂತೂ ಅಧಿಕಾರ ಕಿತ್ತುಕೊಳ್ಳಲ್ಲ

July 30, 2019

ಬೆಂಗಳೂರು, ಜು.29(ಕೆಎಂಶಿ)- ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್-ಜೆಡಿಎಸ್ ಶಾಸಕರ ರಾಜೀ ನಾಮೆ ಕೊಡಿಸಲು ಮಾಡುತ್ತಿರುವ ಹುನ್ನಾರ ವನ್ನು ಈಗಲಾದರೂ ನಿಲ್ಲಿಸಿ. ಅಧಿಕಾರ ಸಿಕ್ಕಿದೆ, ನಡೆಸಿ ನಾವೇನು ತರಾತುರಿಯಲ್ಲಿ ನಿಮ್ಮ ಸಂಖ್ಯೆ ಯನ್ನು ನೂರಕ್ಕೆ ಮಾಡಿ, ಮತ್ತೆ ನಿಮ್ಮನ್ನು ಸ್ಥಾನಪಲ್ಲಟ ಮಾಡುವುದಿಲ್ಲ ಎಂದು ವಿಧಾನಸಭೆ ಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಯಡಿ ಯೂರಪ್ಪನವರಿಗೆ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿಯ ವರು ವಿಶ್ವಾಸಮತ ಯಾಚಿಸಿದ ನಂತರ ಮಾತನಾಡಿದ ಕುಮಾರ ಸ್ವಾಮಿ ಪ್ರಧಾನಿ ನರೇಂದ್ರ ಮೋದಿ, ಜೆ.ಪಿ. ನಡ್ಡಾ, ಅಥವಾ ದೆಹಲಿಯ ಬಿಜೆಪಿಯ…

ಬಿಎಸ್‍ವೈ ವಿಶ್ವಾಸಮತ ಗೆದ್ದ ಬೆನ್ನಲ್ಲೇ ಮಧ್ಯಂತರ ಚುನಾವಣೆ ಮಾತು-ಕತೆ ಆರಂಭ
ಮೈಸೂರು

ಬಿಎಸ್‍ವೈ ವಿಶ್ವಾಸಮತ ಗೆದ್ದ ಬೆನ್ನಲ್ಲೇ ಮಧ್ಯಂತರ ಚುನಾವಣೆ ಮಾತು-ಕತೆ ಆರಂಭ

July 30, 2019

ಬೆಂಗಳೂರು, ಜು.29(ಕೆಎಂಶಿ)- ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ತನಗಿರುವ ಬಹುಮತವನ್ನು ಸಾಬೀತುಪಡಿಸುತ್ತಿದ್ದಂತೆಯೇ ಮಧ್ಯಂತರ ಚುನಾವಣೆಯ ಜಪ ಆರಂಭವಾಗಿದ್ದು, 2020ರಲ್ಲಿ ಮಧ್ಯಂತರ ಚುನಾವಣೆ ನಡೆಯು ವುದು ಖಚಿತ ಎಂದು ಹಲವು ನಾಯಕರು ಅಭಿಪ್ರಾಯಿಸಿದ್ದಾರೆ. ವಿಧಾನಸಭೆಯ ಮೊಗಸಾಲೆಯಲ್ಲಿಂದು ಕಲಾಪವನ್ನು ವೀಕ್ಷಿಸುತ್ತಾ ಕುಳಿತಿದ್ದ ಹಲವು ನಾಯಕರು ಯಡಿಯೂರಪ್ಪ ತಮ್ಮ ಸರ್ಕಾರಕ್ಕಿದ್ದ ಬಹುಮತವನ್ನು ಸಾಬೀತುಪಡಿಸುತ್ತಿದ್ದಂತೆಯೇ ಅನೌಪಚಾರಿಕವಾಗಿ ಮಾತನಾಡತೊಡಗಿದ ಅವರು, ಮುಂದಿನ ವರ್ಷ ಮಧ್ಯಂತರ ಚುನಾವಣೆ ಖಚಿತ ಎಂದರು. ಸರ್ಕಾರ ಸುದೀರ್ಘ ಕಾಲ ಮುಂದುವರಿದರೆ ಸಹಜ ವಾಗಿಯೇ ಆಡಳಿತ ವಿರೋಧಿ ಅಲೆ ಮೇಲೇಳುತ್ತದೆ. ಅದಕ್ಕೂ…

ಮೈತ್ರಿ ಸರ್ಕಾರ ಬೀಳಲಿಲ್ಲ, ನೀವು ಬೀಳಿಸಿದ್ದೀರಿ: ಸಿದ್ದು
ಮೈಸೂರು

ಮೈತ್ರಿ ಸರ್ಕಾರ ಬೀಳಲಿಲ್ಲ, ನೀವು ಬೀಳಿಸಿದ್ದೀರಿ: ಸಿದ್ದು

July 30, 2019

ಬೆಂಗಳೂರು, ಜು. 29- ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅತ್ಯುತ್ತಮವಾಗಿ ಕೆಲಸ ಮಾಡುತ್ತಿತ್ತು. ಹೀಗಾಗಿ ಅದು ಅಧಿಕಾರದಲ್ಲಿನ ಲೋಪದಿಂದ ಪದ ಚ್ಯುತಗೊಳ್ಳಲಿಲ್ಲ ಎಂದು ಮಾಜಿ ಮುಖ್ಯಮಂತ್ರಿಯೂ ಆದ ಪ್ರತಿಪಕ್ಷದ ನಾಯಕ ಸಿದ್ದ ರಾಮಯ್ಯ ಹೇಳಿದರು. ಆ ಸರ್ಕಾರವನ್ನು ನೀವು ಬೀಳಿಸಿದ್ದೀರಿ. ಅದಕ್ಕಾಗಿ ಯಾವ ಮಾರ್ಗವನ್ನು ಹಿಡಿದಿರಿ ಎಂದು ನಾನು ಇವತ್ತು ಹೇಳಲು ಹೋಗುವುದಿಲ್ಲ. ಬದಲಿಗೆ ಮುಖ್ಯಮಂತ್ರಿಯಾಗಿರುವ ನಿಮಗೆ ಅಭಿನಂದನೆ ಗಳನ್ನು ಸಲ್ಲಿಸುತ್ತೇನೆ ಎಂದರು. ನೀವು ಒಮ್ಮೆಯು ಜನಾದೇಶ ಪಡೆದು ಮುಖ್ಯಮಂತ್ರಿಯಾಗಲಿಲ್ಲ. ಮೊದಲು ಜೆಡಿಎಸ್ ಬೆಂಬಲ ಪಡೆದು, ನಂತರ ಪಕ್ಷೇತರ…

ನಿಗಮ-ಮಂಡಳಿ ಅಧ್ಯಕ್ಷರ ನೇಮಕಾತಿ ರದ್ದು
ಮೈಸೂರು

ನಿಗಮ-ಮಂಡಳಿ ಅಧ್ಯಕ್ಷರ ನೇಮಕಾತಿ ರದ್ದು

July 30, 2019

ಬೆಂಗಳೂರು, ಜು. 29- ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ನೇಮಕಗೊಂಡಿದ್ದ ನಿಗಮ-ಮಂಡಳಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರ ಅಧಿಕಾರಾವಧಿ ಅಂತ್ಯಗೊಂಡಿದೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ನೇಮಕಗೊಂಡಿದ್ದ ಎಲ್ಲಾ ನಿಗಮ-ಮಂಡಳಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರ ನೇಮಕಾತಿಗಳ ರದ್ದುಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರದ ಮುಖ್ಯ ಕಾರ್ಯದರ್ಶಿ ತ.ಮ. ವಿಜಯಭಾಸ್ಕರ್ ಅವರಿಗೆ ಪತ್ರ ಬರೆದಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಮತ್ತು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅರವಿಂದ ಮಾಲಗತ್ತಿ ಅವರು ತಮ್ಮ ಸ್ಥಾನಗಳಿಗೆ…

ರಂಗನತಿಟ್ಟು ಪಕ್ಷಿಧಾಮದ ಬೋಟಿಂಗ್ ಮತ್ತೆ ಸ್ಥಗಿತ
ಮೈಸೂರು

ರಂಗನತಿಟ್ಟು ಪಕ್ಷಿಧಾಮದ ಬೋಟಿಂಗ್ ಮತ್ತೆ ಸ್ಥಗಿತ

July 30, 2019

ಶ್ರೀರಂಗಪಟ್ಟಣ, ಜು.29(ವಿನಯ್ ಕಾರೇಕುರ)- ಕೆಆರ್‍ಎಸ್ ಜಲಾಶಯದ ಹೊರ ಹರಿವಿನ ಪ್ರಮಾಣ ಹೆಚ್ಚಳವಾದ ಹಿನ್ನೆಲೆಯಲ್ಲಿ ತಾಲೂಕಿನ ರಂಗನತಿಟ್ಟು ಪಕ್ಷಿಧಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಮತ್ತೆ ಭಾನುವಾರದಿಂದ ಬೋಟಿಂಗ್ ಸ್ಥಗಿತಗೊಳಿಸಲಾಗಿದೆ. ಈ ಸಂಬಂಧ ಪತ್ರಿಕೆಯೊಂದಿಗೆ ರಂಗನತಿಟ್ಟು ಉಪವಲಯ ಅರಣ್ಯಾಧಿಕಾರಿ ಎಂ.ಪುಟ್ಟಮಾದೇಗೌಡ ಮಾತನಾಡಿ, ಕೆಆರ್‍ಎಸ್ ಜಲಾಶಯದಿಂದ ಹೊರ ಹರಿವು ಹೆಚ್ಚಳವಾಗಿರುವುದರಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್ ಸೂಚನೆ ಮೇರೆಗೆ ಬೋಟಿಂಗ್ ನಿಲ್ಲಿಸಲಾಗಿದೆ ಎಂದರು. ಭಾನುವಾರ ಹಾಗೂ ಸೋಮವಾರ ಧಾಮಕ್ಕೆ…

ಪಾತಕ್ ಡೆವಲಪರ್ಸ್ ಮುಖ್ಯಸ್ಥನ ಬಂಧನ
ಮೈಸೂರು

ಪಾತಕ್ ಡೆವಲಪರ್ಸ್ ಮುಖ್ಯಸ್ಥನ ಬಂಧನ

July 30, 2019

ಮೈಸೂರು, ಜು. 29(ಆರ್‍ಕೆ)- ಅಪಾರ್ಟ್‍ಮೆಂಟ್‍ಗಳಲ್ಲಿ ಫ್ಲಾಟ್‍ಗಳನ್ನು ಮಾರಾಟ ಮಾಡುವಾಗ ಗ್ರಾಹಕರಿಗೆ ವಂಚಿಸಿದ ಆರೋಪದಡಿ ಮೈಸೂರಿನ ಪ್ರತಿಷ್ಠಿತ ಡೆವಲಪರ್ ಮತ್ತು ಕನ್‍ಸ್ಟ್ರಕ್ಷನ್ ಕಂಪನಿಯೊಂದರ ಮುಖ್ಯಸ್ಥನನ್ನು ವಿ.ವಿ. ಪುರಂ ಠಾಣೆ ಪೊಲೀಸರು ಇಂದು ಬಂಧಿಸಿ ದ್ದಾರೆ. ಮೈಸೂರಿನ ಪಾತಕ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇ ಶಕ ಶ್ರೀಹರಿ ಪಾತಕ್ ಬಂಧಿತ ಆರೋಪಿ ಯಾಗಿದ್ದು, ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವಿ.ವಿ. ಪುರಂ ಠಾಣೆ ಪೊಲೀಸರು ತಿಳಿಸಿದ್ದಾರೆ. ಮೈಸೂರಿನ ರಿಂಗ್ ರೋಡ್ ಬಳಿಯ ಆರ್‍ಎಂಪಿ…

ನೋಂದಾಯಿತ 580 ಅಭ್ಯರ್ಥಿಗಳ ಪೈಕಿ 436 ಮಂದಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗದ ಭರವಸೆ
ಮೈಸೂರು

ನೋಂದಾಯಿತ 580 ಅಭ್ಯರ್ಥಿಗಳ ಪೈಕಿ 436 ಮಂದಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗದ ಭರವಸೆ

July 30, 2019

ಮೈಸೂರು,ಜು.29(ಆರ್‍ಕೆಬಿ)- ಪ್ರಧಾನ ಮಂತ್ರಿ ಕೌಶಲ ಕೇಂದ್ರ (ಪಿಎಂಕೆಕೆ)ದ ವತಿಯಿಂದ ಮೈಸೂರಿನ ಇಲವಾಲದಲ್ಲಿ ಸೋಮವಾರ ನಡೆದ 3ನೇ ರೋಜ್ಗಾರ್ ಮೇಳ (ಉದ್ಯೋಗ ಮೇಳ)ದಲ್ಲಿ ನೋಂದಾ ಯಿಸಿಕೊಂಡ 580 ಅಭ್ಯರ್ಥಿಗಳ ಪೈಕಿ 436 ಜನರಿಗೆ ವಿವಿಧ ಕಂಪನಿ ಮತ್ತು ಸಂಸ್ಥೆಗಳಲ್ಲಿ ಉದ್ಯೋಗ ಲಭಿಸಲಿದೆ. ಇಲವಾಲ ಬಸ್ ನಿಲ್ದಾಣದ ಕಟ್ಟಡ ದಲ್ಲಿ ನಿರುದ್ಯೋಗಿಗಳಿಗಾಗಿಯೇ ಸ್ಥಾಪಿಸ ಲಾಗಿರುವ ಪ್ರಧಾನಮಂತ್ರಿ ಕೌಶಲ ಕೇಂದ್ರ ದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಸುಮಾರು 25ಕ್ಕೂ ಹೆಚ್ಚು ಕಂಪನಿಗಳು ಹಾಜರಿದ್ದು, ಅಭ್ಯರ್ಥಿಗಳ ಕೌಶಲಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಂಡರು. ಅಭ್ಯರ್ಥಿಗಳು…

1 874 875 876 877 878 1,611
Translate »