ವೃದ್ಧೆಯ ಸರ ಕಿತ್ತುಕೊಂಡು ಪರಾರಿಯಾದ ಖದೀಮರು
ಮೈಸೂರು

ವೃದ್ಧೆಯ ಸರ ಕಿತ್ತುಕೊಂಡು ಪರಾರಿಯಾದ ಖದೀಮರು

June 14, 2020

ಮೈಸೂರು, ಜೂ.13(ಆರ್‍ಕೆ)-ಮನೆ ಬಳಿ ಮಹಿಳೆಯೊಬ್ಬರೊಂದಿಗೆ ಮಾತನಾಡುತ್ತಾ ನಿಂತಿದ್ದ ವೃದ್ಧೆಯ ಕೊರಳಿನಿಂದ ಸ್ಕೂಟರ್ ಸವಾರರು ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಮೈಸೂರಿನ ಬಸವೇಶ್ವರ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ. ಮೈಸೂರಿನ ಕೆ.ಆರ್.ಮೊಹ ಲ್ಲಾದ ಬಸವೇಶ್ವರ ರಸ್ತೆ 5ನೇ ಕ್ರಾಸ್ ನಿವಾಸಿ ಅನ್ನ ಪೂರ್ಣಮ್ಮ(60) ಸರ ಕಳೆದುಕೊಂಡವರು. ಮನೆಯಿಂದ ಬೆಕ್ಕಿನ ಮರಿಗಳು ಹೊರಗಡೆ ಬಂದಿ ದ್ದರಿಂದ ಅವುಗಳನ್ನು ಹುಡುಕಿಕೊಂಡು ಬಂದಿದ್ದ ಅವರು, ಪರಿಚಯಸ್ಥ ಮಹಿಳೆಯೊಂದಿಗೆ ಮಾತ ನಾಡುತ್ತಿದ್ದಾಗ ಡಿಯೋ ಸ್ಕೂಟರ್‍ನಲ್ಲಿ ಬಂದ ಇಬ್ಬರ ಪೈಕಿ ಹಿಂಬದಿ ಸವಾರ ಅನ್ನಪೂರ್ಣಮ್ಮ ಅವರ ಕೊರಳಿನಲ್ಲಿದ್ದ 70 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾದರು.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಕೆ.ಆರ್. ಠಾಣೆ ಇನ್ಸ್‍ಪೆಕ್ಟರ್ ಶ್ರೀನಿವಾಸ್ ಹಾಗೂ ಸಿಬ್ಬಂದಿ, ಮಹಜರು ನಡೆಸಿದರು. ಸದಾ ವಾಹನ ದಟ್ಟಣೆ ಇರುವ ಬಸವೇಶ್ವರ ರಸ್ತೆಯ 5ನೇ ಕ್ರಾಸ್‍ನಲ್ಲಿ ಖದೀ ಮರು ಕೈಚಳಕ ತೋರಿರುವುದು ಅಚ್ಚರಿ ಜೊತೆಗೆ ಆತಂಕ ಸೃಷ್ಟಿಸಿದೆ. ಪ್ರಕರಣ ದಾಖಲಿಸಿಕೊಂಡಿ ರುವ ಕೆ.ಆರ್.ಠಾಣೆ ಪೊಲೀಸರು, ಸಿಸಿ ಕ್ಯಾಮರಾ ಫುಟೇಜಸ್ ಪಡೆದು, ಸರ ಅಪಹರಣಕಾರರ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.

Translate »