ಮುಸ್ಲಿಂ ಸಮುದಾಯಕ್ಕೂ ಡಿಸಿಎಂ ಹುದ್ದೆ ನೀಡಲು ಒತ್ತಾಯ
ಮೈಸೂರು

ಮುಸ್ಲಿಂ ಸಮುದಾಯಕ್ಕೂ ಡಿಸಿಎಂ ಹುದ್ದೆ ನೀಡಲು ಒತ್ತಾಯ

May 26, 2018

ಮೈಸೂರು:  ಎಲ್ಲಾ ಜಾತಿ, ಧರ್ಮದ ಜನರೊಂದಿಗೆ ಬೆರೆತು ಎಲ್ಲರ ನೋವು, ನಲಿವುಗಳಿಗೆ ಸ್ಪಂದಿಸುತ್ತಿರುವ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಮಂಡ್ಯದ ಜಫ್ರುಲ್ಲಾ ಖಾನ್ ಅವರನ್ನು ವಿಧಾನ ಪರಿಷತ್‍ಗೆ ಆಯ್ಕೆ ಮಾಡಿ, ಉಪ ಮುಖ್ಯಮಂತ್ರಿ ಹುದ್ದೆ ನೀಡುವ ಮೂಲಕ ಮುಸ್ಲಿಂ ಸಮುದಾಯಕ್ಕೂ ಪ್ರಾತಿನಿಧ್ಯ ನೀಡುವಂತೆ ಮೈಸೂರಿನ ಗೌಸಿಯಾನಗರದ ತದ್ರೀಬ್ ಎಜುಕೇಷನ್ ಅಂಡ್ ಚಾರಿಟಬಲ್ ಟ್ರಸ್ಟ್‍ನ ಪದಾಧಿಕಾರಿಗಳು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್‍ನ ಇಮ್ರಾನ್ ಷರೀಫ್, ದಲಿತ ಉಪ ಮುಖ್ಯಮಂತ್ರಿಂಯನೇಮಕ ಆಗಿರುವುದು ಸಂತೋಷಯ ವಿಷಯ. ಅದೇ ರೀತಿ ಮುಸ್ಲಿಂ ಸಮುದಾಯಕ್ಕೂ ಒಂದು ಡಿಸಿಎಂ ಹುದ್ದೆ ರಚಿಸಿ, ಜಫ್ರುಲ್ಲಾ ಖಾನ್‍ರನ್ನು ನೇಮಕ ಮಾಡುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‍ನ ಪ್ರಿನ್ಸಿಪಾಲ್ ಅಫೀಜುರ್ ರೆಹಮಾನ್, ಉಪ ಪ್ರಿನ್ಸಿಪಾಲ್ ಮೊಹಮದ್ ಅಜಂ, ಟ್ರಸ್ಟಿಗಳಾದ ತನ್ಷೀರ್ ಷರೀಫ್, ವಜೀರ್ ಜಾನ್, ಇರ್ಫಾನ್ ಷರೀಫ್ ಉಪಸ್ಥಿತರಿದ್ದರು.

Translate »