ವಿದ್ಯುತ್ ತಗುಲಿ ರೈತ ಸಾವು
ಮಂಡ್ಯ

ವಿದ್ಯುತ್ ತಗುಲಿ ರೈತ ಸಾವು

October 27, 2020

ಕೆ.ಆರ್.ಪೇಟೆ, ಅ.26- ಆಯುಧ ಪೂಜೆ ಸಿದ್ದತೆಯಲ್ಲಿ ತೊಡಗಿದ್ದ ರೈತರೊಬ್ಬರಿಗೆ ವಿದ್ಯುತ್ ತಗುಲಿ ಮೃತಪಟ್ಟಿರುವ ಘಟನೆ ತಾಲೂಕಿನ ಬೂಕನಕೆರೆ ಹೋಬಳಿಯ ಗಂಜಿಗೆರೆ ಗ್ರಾಮದಲ್ಲಿ ನಡೆದಿದೆ.ಗಂಜಿಗೆರೆ ಗ್ರಾಮದ ಲೋಕೇಶ್ ಅವರ ಹಿರಿಯ ಪುತ್ರ ಜಿ.ಎಲ್.ಸುಖೇಶ್ (34)ಮೃತ ಪಟ್ಟಿರುವ ರೈತ.

ಘಟನೆ ವಿವರ: ಸುಖೇಶ್ ಅವರು ಭಾನುವಾರ ಬೆಳಗ್ಗೆ ತಮ್ಮ ಜಮೀನಿನ ಬಳಿ ಇರುವ ತೋಟದ ಮನೆಯಲ್ಲಿ ಆಯುಧ ಪೂಜೆಗೆ ಸಿದ್ಧತೆ ನಡೆಸುತ್ತಿದ್ದರು. ಈ ವೇಳೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಉಂಟಾಗಿ ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಕೂಡಲೇ ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಮೃತಪಟ್ಟರೆಂದು ತಿಳಿದು ಬಂದಿದೆ.

ಮೃತರು ಪತ್ನಿ ಶೃತಿ, ತಂದೆ ಲೋಕೇಶ್, ತಾಯಿ ಸೌಭಾಗ್ಯಮ್ಮಹಾಗೂ ಸಹೋದರ ಮುಖೇಶ್ ಜಿ ಎಲ್ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಗಂಜಿಗೆರೆ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ನಡೆಯಿತು. ಮೃತರಿಗೆ ತಾಲೂಕಿನ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ.

Translate »