ನಾಲೆಗೆ ಕಾರು ಉರುಳಿ ಓರ್ವ ಸಾವು
ಮಂಡ್ಯ

ನಾಲೆಗೆ ಕಾರು ಉರುಳಿ ಓರ್ವ ಸಾವು

October 27, 2020

ಪಾಂಡವಪುರ, ಅ.26- ವಿಶ್ವೇಶ್ವರಯ್ಯ ನಾಲೆಗೆ ಕಾರು ಬಿದ್ದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟರೆ, ನಾಲ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಘಟನೆ. ತಾಲೂಕಿನ ಬನಘಟ್ಟದ ಶ್ರೀ ಅಂಜನೇಯ ಸ್ವಾಮಿ ದೇವಸ್ಥಾನದ ತಿರುವಿನಲ್ಲಿ ಸಂಭವಿಸಿದೆ.

ನಾಗಮಂಗಲ ತಾಲೂಕಿನ ಅಲ್ಪಹಳ್ಳಿ ಗ್ರಾಮದ ಧರಣೇಂದ್ರ (35) ಎಂಬಾತ ಮೃತ ವ್ಯಕ್ತಿ. ಉಳಿದಂತೆ ಅದೇ ಗ್ರಾಮದವರಾದ ಕಾರು ಚಾಲಕ ಹಾಳೇಗೌಡ,  ದಿಲೀಪ, ವಿಜಯ ಕುಮಾರ್, ನವೀನಕುಮಾರ್ ಅವರು ಪಾಂಡವಪುರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಗಮಂಗಲದ ಅಲ್ಪಹಳ್ಳಿ ಗ್ರಾಮದಿಂದ ಮೈಸೂರಿನ ಸಂಬಂಧಿಕರ ಮನೆಗೆ ಟೋಯೋಟಾ ಇಟಿಎಸ್ ಕಾರಿನಲ್ಲಿ ಆಯುಧಾ ಪೂಜೆ ಹಬ್ಬಕ್ಕೆ ತೆರಳಿದ್ದ ಈ ಐವರು ಊಟ ಮುಗಿಸಿ ಸ್ವಗ್ರಾಮಕ್ಕೆ ತೆರಳುತ್ತಿದ್ದರೆನ್ನಲಾಗಿದೆ. ಈ ವೇಳೆ ಭಾನುವಾರ ಮಧ್ಯರಾತ್ರಿಯಲ್ಲಿ ಈ ಘಟನೆ ಸಂಭವಿಸಿದೆ. ಕಾರು ಚಾಲಕನ ಅಜಾಗರೂಕತೆಯೇ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಕಾರಿನ ಹಿಂಭಾಗ ಕುಳಿತಿದ್ದ ಧರಣೇಂದ್ರ ಉಸಿರುಗಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಸಣ್ಣ ಪುಟ್ಟ ಗಾಯವಾಗಿದ್ದ ನಾಲ್ವರನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಒಂದು ವೇಳೆ ಕಾರು ಮಧ್ಯೆ ಭಾಗದಲ್ಲಿ ಬಿದ್ದಿದ್ದರೆ ಎಲ್ಲರೂ ಮೃತರಾಗುತ್ತಿದ್ದರು ಎನ್ನಲಾಗಿದ್ದು, ಸದ್ಯ ನಾಲೆಯ ಅಂಚಿನಲ್ಲೇ ಕಾರು ಬಿದ್ದಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಘಟನೆ ಸಂಬಂಧ ಪಾಂಡವಪುರ ಪೆÇಲೀಸರು ಪ್ರಕರಣ ದಾಖಲಿಸಿ ಕೊಂಡು ಕ್ರೇನ್ ಮೂಲಕ ನಾಲೆಗೆ ಬಿದ್ದಿದ್ದ ಕಾರನ್ನು ಹೊರತೆಗೆಯಲಾಗಿದೆ. ಘಟನಾ ಸ್ಥಳದಲ್ಲಿ ಭಾರಿ ಜನಸ್ತೋಮವೇ ನೆರೆದಿತ್ತು.

 

 

 

Translate »