ಮನೆಯಲ್ಲಿ ಸಂಗ್ರಹಿಸಿದ್ದ ಗಾಂಜಾ ವಶ; ಓರ್ವನ ಬಂಧನ
ಕೊಡಗು

ಮನೆಯಲ್ಲಿ ಸಂಗ್ರಹಿಸಿದ್ದ ಗಾಂಜಾ ವಶ; ಓರ್ವನ ಬಂಧನ

August 27, 2021

ಕುಶಾಲನಗರ, ಆ.೨೬- ಅಬಕಾರಿ ಇಲಾಖೆ ಅಧಿಕಾರಿಗಳು ಕುಶಾಲನಗರ ತಾಲೂಕಿನ ಹೆಬ್ಬಾಲೆ, ತೊರೆನೂರು ಗ್ರಾಮ ವ್ಯಾಪ್ತಿಯಲ್ಲಿ ಸಿಬ್ಬಂದಿಗಳೊAದಿಗೆ ಗಸ್ತು ನಡೆಸುತ್ತಿದ ಸಂದರ್ಭದಲ್ಲಿ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ತೊರೆನೂರು ಗ್ರಾಮದಲ್ಲಿ ಗಾಂಜಾ ಶೇಖರಿಸಿದ್ದ ವ್ಯಕ್ತಿಯನ್ನು ದಸ್ತಗಿರಿ ಮಾಡಿ ಮಾಲನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ತೊರೆನೂರು ಗ್ರಾಮದ ಟಿ.ಕೆ ಲಕ್ಷ÷್ಮಪ್ಪ ಬಂಧಿತ ಆರೋಪಿ. ಈತನ ಮನೆಯಲ್ಲಿ ಸಂಗ್ರಹಿಸಿದ್ದ ೭೫೦ ಗ್ರಾಂ ಒಣ ಗಾಂಜಾ ಹಾಗೂ ಗಾಂಜಾವನ್ನು ಮಾರಾಟ ಮಾಡಲು ಉಪಯೋಗಿಸುತ್ತಿದ್ದ ೬೦ ಪ್ಲಾಸ್ಟಿಕ್ ಕವರ್‌ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸ ಲಾಗಿದೆ. ಸದರಿ ಕಾರ್ಯಾಚರಣೆಯಲ್ಲಿ ಸೋಮವಾರಪೇಟೆ ವಲಯ ಅಬಕಾರಿ ನಿರೀಕ್ಷಕಿ ಆರ್.ಎಂ.ಚೈತ್ರಾ, ಉಪ ವಿಭಾಗದ ಅಬಕಾರಿ ನಿರೀಕ್ಷಕ ಎಂ.ಪಿ.ಸAಪತ್ ಕುಮಾರ್, ಅಬಕಾರಿ ಪೇದೆಗಳಾದ ವೀರೇಶ್ ಕುಮಾರ್, ಮಹಾಂತೇಶ್ ಸುಣಗಾರ, ಕರಿಯಪ್ಪ ಹಿರೇಕುರುಬರ, ಮಹಾದೇವ ಗಡ್ಡಿ, ಕಾಂತರಾಜ್ ಮತ್ತು ಹಿರೇಣ್ಣ ಮ್ಯಾಕೇರಿ ಹಾಗೂ ವಾಹನ ಚಾಲಕರಾದ ಜಿತೇಂದ್ರ ಮತ್ತು ತ್ಯಾಗರಾಜ್ ಪಾಲ್ಗೊಂಡಿದ್ದರು.

Translate »