ಖಾಸಗೀಕರಣ ನೀತಿ ವಿರೋಧಿಸಿ ಬೆಮೆಲ್ ನೌಕರರಿಂದ ಪ್ರತಿಭಟನಾ ಸಭೆ
ಮೈಸೂರು

ಖಾಸಗೀಕರಣ ನೀತಿ ವಿರೋಧಿಸಿ ಬೆಮೆಲ್ ನೌಕರರಿಂದ ಪ್ರತಿಭಟನಾ ಸಭೆ

January 19, 2021

ಮೈಸೂರು,ಜ.18(ಎಂಟಿವೈ)- ಕೇಂದ್ರ ಸರ್ಕಾರ ಬೆಮೆಲ್ ಸಂಸ್ಥೆಯನ್ನು ಖಾಸಗೀಕರಣ ಮಾಡಲು ಉದ್ದೇಶಿಸಿರುವು ದನ್ನು ಖಂಡಿಸಿ ಭಾರತ್ ಅರ್ತ್ ಮೂವರ್ಸ್ ಎಂಪ್ಲಾ ಯೀಸ್(ಬೆಮೆಲ್) ಅಸೋಸಿಯೇಷನ್ ನೌಕರರು ಪ್ರತಿ ಭಟನಾ ಸಭೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಬೆಮೆಲ್ ಸಂಸ್ಥೆ ಮುಂದೆ ಸೋಮವಾರ ಬೆಮಲ್ ನೌಕ ರರ ಸಂಘದ ಪದಾಧಿಕಾರಿಗಳೊಂದಿಗೆ ನೌಕರರು ಪ್ರತಿ ಭಟನಾ ಸಭೆಯಲ್ಲಿ ಪಾಲ್ಗೊಂಡು, ಅತ್ಯುತ್ತಮ ಸ್ಥಿತಿಯಲ್ಲಿ ಸಾಗುತ್ತಿರುವ ಬೆಮೆಲ್ ಸಂಸ್ಥೆಯನ್ನು ಯಾವುದೇ ಕಾರಣಕ್ಕೂ ಖಾಸಗಿ ಸಂಸ್ಥೆಗಳಿಗೆ ಒಪ್ಪಿಸದಂತೆ ಒಕ್ಕೊ ರಲಿನಿಂದ ಆಗ್ರಹಿಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಅಸೋಸಿಯೇಷನ್ ಅಧ್ಯಕ್ಷ ಹೆಚ್.ವೈ. ಮುನಿರೆಡ್ಡಿ ಮಾತನಾಡಿ, ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಖಾಸಗೀಕರಣ ಮಾಡದಂತೆ ಮನವಿ ಪತ್ರವನ್ನು ಸಲ್ಲಿಸಲಾಗಿದೆ. ಯಾವುದೇ ಕಾರಣಕ್ಕೂ ಬೆಮೆಲ್ ಸಂಸ್ಥೆಯನ್ನು ಖಾಸಗೀಕರಣ ಮಾಡಲು ಬಿಡುವುದಿಲ್ಲ. ಖಾಸಗೀಕರಣ ಮಾಡಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನಾ ಸಭೆಯಲ್ಲಿ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಎಂ.ಡಿ.ರಾಜಶೇಖರ್ ಮೂರ್ತಿ ಸೇರಿ ದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

 

 

 

 

Translate »