ಕಲಾಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ
ಮೈಸೂರು

ಕಲಾಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ

August 30, 2021

ಮೈಸೂರು, ಆ.೨೯(ಎಂಟಿವೈ)- ಮೈಸೂರಿನ ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಯನ್ನು ಆಚರಿಸಲಾಯಿತು. ಕಿರುರಂಗ ಮಂದಿರ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣರ ಭಾವಚಿತ್ರಕ್ಕೆ ಶಾಸಕ ಎಲ್.ನಾಗೇಂದ್ರ ಪುಷ್ಪಾರ್ಚನೆ ಮಾಡಿ ನಮಿಸಿದರು. ಬಳಿಕ ಮಾತನಾಡಿದ ಅವರು, ಪ್ರಪಂಚದಾದ್ಯAತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಿರು ವುದು ಸಂತಸದ ವಿಷಯ. ಶ್ರೀಕೃಷ್ಣನ ಸಂದೇಶವನ್ನು ದೇಶ ಮಾತ್ರವಲ್ಲದೆ, ವಿದೇಶ ದಲ್ಲೂ ಅನುಸರಿಸಲಾಗುತ್ತಿದೆ. ವಿದೇಶಿ ಗರು ಕೃಷ್ಣನ ಆರಾಧಕರಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಇದೇ ಸಂದರ್ಭ ದಲ್ಲಿ ಯಾದವ ಸಂಘದ ವತಿಯಿಂದ ಫೋಟೋ ಗ್ರಫಿಯಲ್ಲಿ ನಾಲ್ಕು ರಾಷ್ಟಿçÃಯ ಪ್ರಶಸ್ತಿ ವಿಜೇತರಾದ ಗೋಪಿನಾಥ್ ಯಾದವ್ ಹಾಗೂ ಪ್ರಸಕ್ತ ಸಾಲಿನಲ್ಲಿ ಪಿಹೆಚ್‌ಡಿ ಪದವಿ ಪಡೆದ ಅರ್ಚನ ಅವ ರನ್ನು ಸನ್ಮಾನಿಸಲಾಯಿತು. ಕಾರ್ಯ ಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಎಸ್. ಮಂಜುನಾಥಸ್ವಾಮಿ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್. ಚೆನ್ನಪ್ಪ, ಶಿವಪ್ಪ, ಯಾದವ ಸಂಘದ ಉಪಾ ಧ್ಯಕ್ಷ ವೆಂಕಟಾಚಲ, ಪದಾಧಿಕಾರಿಗಳಾದ ಯದುರಾಜ್, ಪುಷ್ಪವಲ್ಲಿ, ವಿ.ಸತ್ಯ ನಾರಾಯಣ, ತುಕಾರಾಮ್, ಸ್ವಾಮಿ, ಬಲ ರಾಮ್, ಶ್ರೀಕಾಂತ್, ನಾಗೇಶ್‌ಯಾದವ್ ಹಾಗೂ ಇನ್ನಿತರರು ಭಾಗವಹಿಸಿದ್ದರು.

Translate »