ಕ್ಷುಲಕ ವಿಚಾರಕ್ಕೆ ಯುವಕನ ಇರಿದು ಹತ್ಯೆ
ಮೈಸೂರು

ಕ್ಷುಲಕ ವಿಚಾರಕ್ಕೆ ಯುವಕನ ಇರಿದು ಹತ್ಯೆ

September 2, 2020

ವಿಜಯನಗರ 2ನೇ ಹಂತದ ಕೃಷ್ಣದೇವರಾಯ ಸರ್ಕಲ್‍ನಲ್ಲಿ ಘಟನೆ
ಮೈಸೂರು, ಸೆ.1(ಎಂಕೆ)- ಚಾಕುವಿನಿಂದ ಇರಿದು ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರಿನ ವಿಜಯನಗರದ ಎರಡನೇ ಹಂತದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ವಿಜಯನಗರ 2ನೇ ಹಂತ, ಕೃಷ್ಣದೇವರಾಯ ವೃತ್ತದ ಬಳಿ ಚಿರಂತ್(19) ಎಂಬ ಯುವಕನನ್ನು ಮಂಚೇಗೌಡನಕೊಪ್ಪಲು ನಿವಾಸಿ ಮನೋಜ್(22) ಹತ್ಯೆ ಮಾಡಿದ್ದಾನೆಂದು ತಿಳಿದು ಬಂದಿದೆ ಎಂದು ವಿಜಯನಗರ ಪೊಲೀಸ್ ಠಾಣೆ ಇನ್ಸ್‍ಸ್ಪೆಕ್ಟರ್ ಬಾಲಕೃಷ್ಣ ತಿಳಿಸಿದ್ದಾರೆ.

ಈತ ಮಂಗಳವಾರ ರಾತ್ರಿ ಕೃಷ್ಣದೇವರಾಯ ವೃತ್ತದಲ್ಲಿ ಅಂಗಡಿಯೊಂದರ ಮುಂದೆ ಟೀ ಕುಡಿಯುತ್ತಿದ್ದಾಗ ಚಿರಂತ್ ಹಾಗೂ ಮನೋಜ್ ನಡುವೆ ಜಗಳವಾಗಿದೆ. ಮಾತಿಗೆ ಮಾತು ಬೆಳೆದು, ಮನೋಜ್ ಚಾಕುವಿನಿಂದ ಚಿರಂತ್‍ಗೆ ಇರಿದು ಪರಾರಿ ಯಾಗಿದ್ದಾನೆ. ಕೂಡಲೇ ಚಿರಂತ್‍ನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ವಾರದ ಹಿಂದೆÉ ಕ್ಷುಲ್ಲಕ ಕಾರಣಕ್ಕೆ ಸುಬ್ರಹ್ಮಣ್ಯನಗರದಲ್ಲಿ ಇವರಿಬ್ಬರೂ ಗಲಾಟೆ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಸಂಬಂಧ ಇನ್ನೂ ಪ್ರಕರಣ ದಾಖಲಾಗಿಲ್ಲ.

Translate »