ಇಂದು ಕುಂಬಾರಕೊಪ್ಪಲಿನಲ್ಲಿ 3.10 ಕೋಟಿ ವೆಚ್ಚದ ಕಾಮಗಾರಿಗೆ ಸಚಿವ ಎಸ್‍ಟಿಎಸ್‍ರಿಂದ ಚಾಲನೆ
ಮೈಸೂರು

ಇಂದು ಕುಂಬಾರಕೊಪ್ಪಲಿನಲ್ಲಿ 3.10 ಕೋಟಿ ವೆಚ್ಚದ ಕಾಮಗಾರಿಗೆ ಸಚಿವ ಎಸ್‍ಟಿಎಸ್‍ರಿಂದ ಚಾಲನೆ

September 18, 2020

ಮೈಸೂರು, ಸೆ.17 (ಆರ್‍ಕೆಬಿ)- ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಂಬಾರಕೊಪ್ಪಲು ಮಾರ್ಗದಲ್ಲಿ 3.10 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಹಮ್ಮಿಕೊಳ್ಳಲಾಗುತ್ತಿದೆ. ಕೆಆರ್‍ಎಸ್ ರಸ್ತೆಯಿಂದ ಸೂರ್ಯ ಬೇಕರಿವರೆಗೆ 2400 ಮೀ. ಉದ್ದದ ಬಾಕ್ಸ್ ಚರಂಡಿ ನಿರ್ಮಾಣ, 1240 ಮೀ. ಉದ್ದ ರಸ್ತೆ ಪುನರ್ ನಿರ್ಮಾಣ ಹಾಗೂ 600 ಮೀ. ಉದ್ದ ಜೋಡಿ ರಸ್ತೆ ಅಗಲೀಕರಣ, ಡಾಂಬರೀಕರಣ ಕಾಮಗಾರಿಗೆ ಶುಕ್ರವಾರ ಚಾಲನೆ ದೊರೆಯಲಿದೆ. ಕುಂಬಾರಕೊಪ್ಪಲು ಆದಿಶಕ್ತಿ ದೇವಸ್ಥಾನದ 1ನೇ ಬಸ್ ನಿಲ್ದಾಣ ಬಳಿ ಬೆಳಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಲಿದ್ದಾರೆ. ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ನಗರ ಪಾಲಿಕೆ ಸದಸ್ಯರಾದ ಉಷಾಕುಮಾರಿ, ಕೆ.ವಿ.ಶ್ರೀಧರ್, ಪೈ.ಶ್ರೀನಿವಾಸ್ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

 

Translate »