ಪ್ರಾಣಿ ಬಲಿ ನಿರ್ಬಂಧಿಸಿದ್ದ ಒಡಿಶಾ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ
ಮೈಸೂರು

ಪ್ರಾಣಿ ಬಲಿ ನಿರ್ಬಂಧಿಸಿದ್ದ ಒಡಿಶಾ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

October 20, 2020

ನವದೆಹಲಿ, ಅ.19- ಒಡಿಶಾದಲ್ಲಿ ವಾರ್ಷಿಕವಾಗಿ ನಡೆಯುವ ಚತಾರ್ ಯಾತ್ರದಲ್ಲಿ ಪ್ರಾಣಿಬಲಿಯನ್ನು ನಿರ್ಬಂ ಧಿಸಿ ಒಡಿಶಾ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಕಾಳಹಂಡಿ ಜಿಲ್ಲೆಯಲ್ಲಿ ಚತಾರ್ ಯಾತ್ರಾ ಹಬ್ಬದ ಭಾಗವಾಗಿ ಪ್ರಾಣಿ ಬಲಿ ಪದ್ಧತಿ ಇದೆ. ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಹಾಗೂ ನ್ಯಾ. ಎ.ಎಸ್.ಬೋಪಣ್ಣ ಹಾಗೂ ರಾಮಸುಬ್ರಹ್ಮಣಿಯನ್ ಅವರಿದ್ದ ಪೀಠ ಒಡಿಶಾ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಮಧ್ಯಂತರ ತಡೆ ನೀಡಿದೆ. ಹೈಕೋರ್ಟ್ ಆದೇಶವನ್ನು ಭವಾನಿ ಶಂಕರ್ ನೈಲ್ ಅವರು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಪ್ರಾಣಿಬಲಿಯನ್ನು ಖಂಡಿ ಸಿದ್ದ ಹೈಕೋರ್ಟ್, ಮೌಢ್ಯದ ಆಚರಣೆಯಾಗಿರುವ ಪ್ರಾಣಿಬಲಿ ನಡೆಯದಂತೆ ಜಿಲ್ಲಾಡಳಿತ ಜನಜಾಗೃತಿ ಮೂಡಿಸ ಬೇಕೆಂದು ಹೇಳಿತ್ತು. ಮಣಿಕೇಶ್ವರಿ ದೇವರನ್ನು ಸಂಪ್ರೀತ ಗೊಳಿಸಲು ಪ್ರಾಣಿ ಬಲಿ ನಡೆಯುತ್ತಿದ್ದು, ಮಕ್ಕಳ ರಕ್ತವನ್ನು ನೋಡಲು ಹೇಗೆ ಪೆÇೀಷಕರು ಬಯಸುವುದಿಲ್ಲವೋ ಅದೇ ರೀತಿಯಲ್ಲಿ ದೇವರೂ ಸಹ ತನ್ನ ಮಕ್ಕಳಂತೆ ಇರುವ ಪ್ರಾಣಿಗಳ ಬಲಿಯನ್ನು ಬಯಸುವುದಿಲ್ಲ ಎಂದು ಹೇಳಿತ್ತು.

Translate »