ಸೋಮವಾರಪೇಟೆ ಬಳಿ ವ್ಯಕ್ತಿಯ ಸಂಶಯಾಸ್ಪದ ಸಾವು
ಕೊಡಗು

ಸೋಮವಾರಪೇಟೆ ಬಳಿ ವ್ಯಕ್ತಿಯ ಸಂಶಯಾಸ್ಪದ ಸಾವು

April 1, 2020

ಸೋಮವಾರಪೇಟೆ, ಮಾ.31- ಮಂಗಳೂರಿನಿಂದ ಬಂದು ಹತ್ತು ದಿನಗಳ ನಂತರ ಮನೆಯಲ್ಲಿ ಸಂಶಯಾಸ್ಪದವಾಗಿ ವ್ಯಕ್ತಿಯೋ ರ್ವರು ಮೃತಪಟ್ಟಿರುವ ಘಟನೆ ತಾಲೂಕಿನ ಸೋಮವಾರ ಉಂಜಿಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ದಿ.ಸೋಮಯ್ಯ ಎಂಬುವರ ಪುತ್ರ ರೋಷನ್ ಸತ್ಯಸಾಯಿ(41) ಮೃತಪಟ್ಟವರು. ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗು ಎಂ.ಬಿ.ಎ. ಕಲಿತು ಮಂಗಳೂರಿನಲ್ಲಿ ನೌಕರಿಯಲ್ಲಿದ್ದ ರೋಷನ್ ಮಾ.20ರಂದು ಮನೆಗೆ ಬಂದಿದ್ದರು. ನಂತರ ಅನಾರೋಗ್ಯದಿಂದ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಸೋಮವಾರ ಸಂಜೆ ಬಾತ್‍ರೂಂನಲ್ಲಿ ಬಿದ್ದು ಮೃತಪಟ್ಟಿದ್ದಾರೆನ್ನಲಾಗಿದೆ. ಕೋವಿಡ್-19 ವೈರಸ್ ಶಂಕೆ ವ್ಯಕ್ತಪಡಿಸಿ, ಆರೋಗ್ಯ ಇಲಾಖೆಗೆ ಮಾಹಿತಿ ತಲುಪಿದ ನಂತರ, ಎಲ್ಲಾ ತರಹದ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡು, ಶವವನ್ನು ಆಸ್ಪತ್ರೆಯ ಶವಗಾರ ತರಲಾಯಿತು. ಮಂಗಳವಾರ ಮಡಿಕೇರಿ ಮೆಡಿಕಲ್ ಕಾಲೇಜಿನ ತಜ್ಞ ವೈದ್ಯ ಡಾ. ಯೋಗೇಶ್ ಅವರಿಂದ ಶವಪರೀಕ್ಷೆ ನಡೆಸಲಾಗಿದೆ. ಆಸ್ಪತ್ರೆಯ ಸಿಬ್ಬಂದಿಗಳು ಶವವನ್ನು ಅಂಬುಲೆನ್ಸ್‍ನಲ್ಲಿ ಗ್ರಾಮಕ್ಕೆ ಸಾಗಿಸಿ ಸಿಬ್ಬಂದಿಗಳೇ ಸುಟ್ಟಿದ್ದಾರೆ.

ವ್ಯಕ್ತಿ ಮಂಗಳೂರಿನಿಂದ ಬಂದು ಮನೆಯಲ್ಲಿ ಮೃತಪಟ್ಟಿದ್ದಾರೆ. ಮನೆಯವರು ಬಾತ್‍ರೂಮ್‍ನಲ್ಲಿ ಬಿದ್ದಿದ್ದಾರೆ ಎಂದು ಹೇಳಿದ್ದಾರೆ. ತಲೆಯಲ್ಲಿ ಗಾಯವಿದೆ. ಆದರೆ ಬೀಳುವುದಕ್ಕೆ ಕಾರಣವೇನು? ಎಂಬ ಬಗ್ಗೆ ಸಂಶಯ ಮೂಡಿರುವುದರಿಂದ, ಡಿ.ಎಚ್.ಒ. ಅವರ ನಿರ್ದೇಶನದಂತೆ ಕೋವಿಡ್-19 ಪರೀಕ್ಷೆಗೆ ಅವಶ್ಯವಿರುವ ದೇಹದೊಳಗಿನ ಎಲ್ಲಾ ಅಂಗಾಂಶಗಳನ್ನು ತೆಗೆದು ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿಕೊಡಲಾಗುತ್ತದೆ. ಸಂಪೂರ್ಣ ವರದಿ ಬಂದ ನಂತರ, ಸಾವಿಗೆ ಕಾರಣ ತಿಳಿಯಲಿದೆ ಎಂದು ಡಾ.ಯೋಗೇಶ್ ತಿಳಿಸಿದರು.

Translate »