Tag: Chamarajanagar

ಕಾಂಗ್ರೆಸ್ ಮುಖಂಡರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕೆ: ದೂರು ದಾಖಲು
ಚಾಮರಾಜನಗರ

ಕಾಂಗ್ರೆಸ್ ಮುಖಂಡರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕೆ: ದೂರು ದಾಖಲು

August 27, 2018

ಗುಂಡ್ಲುಪೇಟೆ: ಕಾಂಗ್ರೆಸ್ ಮುಖಂಡ ಎಚ್.ಎಂ.ಗಣೇಶ್ ಪ್ರಸಾದ್ ಮತ್ತು ಮುಖಂಡರು ಪತ್ರಿಕಾ ಗೋಷ್ಠಿ ನಡೆಸಿ ಶಾಸಕ ಸಿ.ಎಸ್.ನಿರಂಜನಕುಮಾರ್ ಅಧಿಕಾರಕ್ಕೆ ಬಂದು ನೂರು ದಿನಗು ಕಳೆದಿದ್ದರೂ ಸಹ ಯಾವುದೇ ಅಭಿವೃದ್ದಿ ಕಾರ್ಯಗಳನ್ನು ಮಾಡುತ್ತಿಲ್ಲ ಎಂದು ಟೀಕಿಸಿದ್ದ ಹಿನ್ನೆಲೆಯಲ್ಲಿ ಗಣೇಶ್ ಪ್ರಸಾದ್ ವಿರುದ್ಧ ಅವಾಚ್ಯ ಹಾಗೂ ಅಶ್ಲೀಲ ಪದಬಳಕೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿರುವ ಬಗ್ಗೆ ಪಟ್ಟಣ ಠಾಣೆ ಪೆÇಲೀಸರಿಗೆ ದೂರು ನೀಡಲಾಗಿದೆ. ಕಳೆದ ಆ.24ರಂದು ಪಟ್ಟಣದ ಹೋಟೆಲೊಂದರಲ್ಲಿ ಸುದ್ದಿ ಗೋಷ್ಠಿ ನಡೆಸಿದ ಗಣೇಶ್ ಪ್ರಸಾದ್ ಹಾಗೂ ಮುಖಂಡರು, ನಿರಂಜನಕುಮಾರ್ ಆಯ್ಕೆಯಾಗಿ…

ಶಿವಪುರ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಚಾಮರಾಜನಗರ

ಶಿವಪುರ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

August 27, 2018

ಚಾಮರಾಜನಗರ:  ಶಿವಪುರದ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆÀ್ರಸ್‍ನ ರಮೇಶ್ ಹಾಗೂ ಉಪಾಧ್ಯಕ್ಷರಾಗಿ ಎಂ.ಸಿ.ಮಹದೇವಮ್ಮ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ತೋಟಗಾರಿಕೆ ಇಲಾಖೆ ಅಧಿಕಾರಿ ಗುರುಸ್ವಾಮಿ ಕರ್ತವ್ಯ ನಿರ್ವಹಿಸಿದರು. ಅವಿರೋಧ ಆಯ್ಕೆ ಘೋಷಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಲಕ್ಷ್ಮಿಕಾಂತ, ಎನ್.ಕುಮಾರ್, ನಾಗಮ್ಮ, ಮಾಜಿ ಉಪಾಧ್ಯಕ್ಷರಾದ ಅಂಬಿಕಾ, ಭಾಗ್ಯ, ಸದಸ್ಯರಾದ ಲಕ್ಷ್ಮಿ, ವಸಂತ, ಸುಧಾ, ಮಹದೇವಮ್ಮ, ಮಹದೇವಸ್ವಾಮಿ, ಎಂ.ದುಂಡೇಗೌಡ, ಎಂ.ಶಿವಣ್ಣ, ಶಿವಸ್ವಾಮಿ ಹಾಜರಿದ್ದರು.

ಕೊಡಗಿನ ನೆರೆ ಸಂತ್ರಸ್ತರಿಗೆ ದೇಣಿಗೆ
ಚಾಮರಾಜನಗರ

ಕೊಡಗಿನ ನೆರೆ ಸಂತ್ರಸ್ತರಿಗೆ ದೇಣಿಗೆ

August 27, 2018

ಚಾಮರಾಜನಗರ: ಕೊಡಗಿನ ನೆರೆ ಸಂತ್ರಸ್ತರಿಗೆ ರಾಮಸಮುದ್ರ ಡಾ.ಬಿ.ಆರ್. ಅಂಬೇಡ್ಕರ್ ಯುವಕರ ಸಂಘದ ಪದಾಧಿಕಾರಿಗಳು ನಗರದ ಶಾಲಾ-ಕಾಲೇಜು ಹಾಗೂ ಸಾರ್ವಜನಿಕರಿಂದ ಸಂಗ್ರಹಿಸಿದ 14,962 ರೂ. ದೇಣಿಗೆಯನ್ನು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರ ಮೂಲಕ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎನ್.ಮಹೇಶ್, ಸಹ ಕಾರ್ಯದರ್ಶಿ ವಿ.ರಂಗನಾಥ್, ಖಜಾಂಚಿ ಗೌತಮ್, ಸದಸ್ಯರಾದ ನೂತನ್, ಆರ್.ಸಿ. ರಾಜೇಶ್, ಮಹದೇವಪ್ರಸಾದ್, ಆರ್.ಎನ್. ಭರತ್, ಮನೋಜ್, ಪ್ರಶಾಂತ್, ಕಿರಣ, ಚಂದ್ರು, ಮಹೇಶ್, ಮನೋಹರ್ ಹಾಜರಿದ್ದರು.

ನೇರ ಫೊನ್-ಇನ್: 35 ದೂರು ದಾಖಲು: ಸದ್ದು ಮಾಡಿದ ಅಕ್ರಮ ಮರಳು ದಂಧೆ, ಮೂಲ ಸೌಲಭ್ಯಗಳ ಕೊರತೆ
ಚಾಮರಾಜನಗರ

ನೇರ ಫೊನ್-ಇನ್: 35 ದೂರು ದಾಖಲು: ಸದ್ದು ಮಾಡಿದ ಅಕ್ರಮ ಮರಳು ದಂಧೆ, ಮೂಲ ಸೌಲಭ್ಯಗಳ ಕೊರತೆ

August 26, 2018

ಚಾಮರಾಜನಗರ:  ಜಿಲ್ಲೆಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಶನಿವಾರ ನಡೆದ ನೇರ ಫೋನ್-ಇನ್ ಕಾರ್ಯಕ್ರಮದಲ್ಲಿ ಒಟ್ಟು 35 ದೂರುಗಳು ದಾಖಲಾಗಿವೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸತತವಾಗಿ ಒಂದು ಗಂಟೆಗಳ ಕಾಲ ಜಿಲ್ಲೆಯ ನಾನಾ ಭಾಗದಿಂದ ದೂರುಗಳು, ಸಮಸ್ಯೆಗಳನ್ನು ಕರೆ ಮಾಡಿ ತಿಳಿಸಲಾಯಿತು. ಅಕ್ರಮವಾಗಿ ಮರಳು ತೆಗೆಯುತ್ತಿರುವ ಬಗ್ಗೆ, ನಗರದ ಸಂಚಾರ ವ್ಯವಸ್ಥೆ, ಇ-ಸ್ವತ್ತು, ಸ್ವಚ್ಛತೆ ಸೇರಿದಂತೆ ಇತರೆ ವಿಷಯಗಳನ್ನು ಜಿಲ್ಲೆಯ ವಿವಿಧ…

ಸಂವಿಧಾನ ಪ್ರತಿ ದಹನ ಖಂಡಿಸಿ ಬೃಹತ್ ಪ್ರತಿಭಟನೆ
ಚಾಮರಾಜನಗರ

ಸಂವಿಧಾನ ಪ್ರತಿ ದಹನ ಖಂಡಿಸಿ ಬೃಹತ್ ಪ್ರತಿಭಟನೆ

August 26, 2018

ಸಂವಿಧಾನ ಸಂರಕ್ಷಣಾ ವೇದಿಕೆಯಡಿ ದಲಿತ ಸಂಘಟನೆಗಳ ಆಕ್ರೋಶ ಚಾಮರಾಜನಗರ: ದೆಹಲಿಯ ಜಂತರ್-ಮಂತರ್‍ನಲ್ಲಿ ಸಂವಿಧಾನದ ಪ್ರತಿಯನ್ನು ಸುಟ್ಟುಹಾಕಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿರುದ್ಧ ಘೋಷಣೆಗಳನ್ನು ಕೂಗಿರುವುದನ್ನು ಖಂಡಿಸಿ ನಗರದಲ್ಲಿ ಶನಿವಾರ ಸಂವಿಧಾನ ಸಂರಕ್ಷಣಾ ವೇದಿಕೆಯಡಿ ವಿವಿಧ ದಲಿತಪರ ಸಂಘಟನೆಯಿಂದ ಪ್ರತಿಭಟನೆ ನಡೆಯಿತು. ಕರಿನಂಜನಪುರ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗ ಸಂವಿಧಾನ ಸಂರಕ್ಷಣಾ ವೇದಿಕೆಯ ಕಾರ್ಯಕರ್ತರು ಹಾಗೂ ದಲಿತ ಸಂಘಟನೆಗಳ ಪದಾಧಿಕಾರಿಗಳು ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಮಾವೇಶಗೊಂಡು ಪ್ರತಿಭಟನಾ ಮೆರವಣಿಗೆ ನಡೆಸಿದರು. ‘ಸಂವಿಧಾನ ದೇಶದ ಜೀವಾಳ’…

ನಗರಸಭೆ ಚುನಾವಣೆ: ವೀಕ್ಷಕರ ನೇಮಕ
ಚಾಮರಾಜನಗರ

ನಗರಸಭೆ ಚುನಾವಣೆ: ವೀಕ್ಷಕರ ನೇಮಕ

August 26, 2018

ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ವೀಕ್ಷಕರು ನೇಮಕವಾಗಿದ್ದು, ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ವೀಕ್ಷಕರನ್ನು ಸಂಪರ್ಕಿಸಬಹುದಾಗಿದೆ. ಸಾಮಾನ್ಯ ಚುನಾವಣಾ ವೀಕ್ಷಕರಾಗಿ ಅನಿತಾಲಕ್ಷ್ಮಿ (ಮೊ. 94491 16870), ಮುಖ್ಯ ಆಡಳಿತಧಿಕಾರಿಗಳು, ವಿ.ಜೆ.ಎನ್.ಎಲ್. ಬೆಂಗಳೂರು ಇವರು ನೇಮಕವಾಗಿದ್ದಾರೆ. ಇವರ ಸಂಪರ್ಕ ಅಧಿಕಾರಿಯಾಗಿ ಸರ್ವ ಶಿಕ್ಷಣ ಅಭಿಯಾನದ ಡಿವೈಪಿಸಿ ಸಿ.ಎನ್.ರಾಜು (ಮೊ. 94815 45929) ಕಾರ್ಯ ನಿರ್ವಹಿಸುತ್ತಿದ್ದಾರೆ. ಚುನಾವಣಾ ವೆಚ್ಚ ವೀಕ್ಷಕರಾಗಿ ಅರ್ಥಿಕ ಇಲಾಖೆ(ವಿತ್ತೀಯ ಸುಧಾರಣೆ)ಯ ಉಪನಿಯಂತ್ರಕರು (ಆರ್ಥಿಕ ನಿರ್ವಹಣೆ) ಬೆಂಗಳೂರು (ಮೊ. 90352…

ಮರಳಿನ ದಿಬ್ಬ ಕುಸಿದು ಇಬ್ಬರ ಸಾವು ಸಂತೇಮರಹಳ್ಳಿ ಬಳಿ ದುರಂತ
ಚಾಮರಾಜನಗರ

ಮರಳಿನ ದಿಬ್ಬ ಕುಸಿದು ಇಬ್ಬರ ಸಾವು ಸಂತೇಮರಹಳ್ಳಿ ಬಳಿ ದುರಂತ

August 25, 2018

ಚಾಮರಾಜನಗರ:  ಜಮೀನಿನಲ್ಲಿ ಮರಳು ತೆಗೆಯುತ್ತಿದ್ದ ವೇಳೆ ದಿಬ್ಬ ಕುಸಿದು ಇಬ್ಬರು ಮೃತಪಟ್ಟಿರುವ ದುರಂತ ತಾಲೂಕಿನ ಸಂತೇ ಮರಹಳ್ಳಿ ಹೋಬಳಿಯ ಕೆಂಪನಪುರ ಗ್ರಾಮ ದಲ್ಲಿ ಶುಕ್ರವಾರ ಸಂಭವಿಸಿದೆ. ಗ್ರಾಮದ ನಾಗರಾಜು (33) ಹಾಗೂ ಸಿದ್ದೇಶ್(22) ಮೃತಪಟ್ಟವರು. ಘಟನೆಯ ವಿವರ: ಕೆಂಪನಪುರ ಗ್ರಾಮದಿಂದ ಸುಮಾರು ಒಂದು ಕಿ.ಮೀ. ದೂರವಿರುವ ರಮೇಶ್ ಎಂಬುವವರ ತೋಟದಲ್ಲಿ ಮರಳು ತೆಗೆಯಲಾ ಗುತ್ತಿತ್ತು. ಕಾರ್ಮಿಕರಾದ ನಾಗರಾಜು ಮತ್ತು ಸಿದ್ದೇಶ್ ಮರಳು ತೆಗೆಯಲು ತೋಟಕ್ಕೆ ತೆರಳಿದರು. ಹಳ್ಳಕ್ಕೆ ಇಳಿದು ಮರಳು ತೆಗೆಯುತ್ತಿದ್ದ ವೇಳೆ ಮರಳಿನ ದಿಬ್ಬ ಕುಸಿದಿದೆ….

ಚಾಮರಾಜನಗರ ನಗರಸಭೆ ಚುನಾವಣೆ ವಿಶೇಷತೆಗಳು ಪತಿ ಬದಲು ಪತ್ನಿ, ತಾಯಿ ಬದಲು ಮಗ ಸ್ಪರ್ಧೆ, ಕಾಂಗ್ರೆಸ್-ಬಿಜೆಪಿಗೆ ಬಂಡಾಯ, ಅನ್ಯ ಪಕ್ಷದಿಂದ ಸ್ಪರ್ಧೆ
ಚಾಮರಾಜನಗರ

ಚಾಮರಾಜನಗರ ನಗರಸಭೆ ಚುನಾವಣೆ ವಿಶೇಷತೆಗಳು ಪತಿ ಬದಲು ಪತ್ನಿ, ತಾಯಿ ಬದಲು ಮಗ ಸ್ಪರ್ಧೆ, ಕಾಂಗ್ರೆಸ್-ಬಿಜೆಪಿಗೆ ಬಂಡಾಯ, ಅನ್ಯ ಪಕ್ಷದಿಂದ ಸ್ಪರ್ಧೆ

August 25, 2018

ಚಾಮರಾಜನಗರ:  ಜಿಲ್ಲಾ ಕೇಂದ್ರವಾದ ಚಾಮರಾಜನಗರದ ನಗರ ಸಭೆಯ ಈ ಚುನಾವಣೆ ಹಲವು ವಿಶೇ ಷತೆಗಳಿಗೆ ನಾಂದಿ ಹಾಡಿದೆ.ಹಾಲಿ 31 ಸದಸ್ಯರ ಪೈಕಿ ಮರು ಆಯ್ಕೆ ಬಯಸಿ 11 ಸದಸ್ಯರು ಸ್ಪರ್ಧಿಸಿ ದ್ದಾರೆ. ಇಬ್ಬರು ಮಾಜಿ ಸದಸ್ಯರು ಸ್ಪರ್ಧಿ ಸುವ ಮೂಲಕ ಮತ್ತೊಮ್ಮೆ ಸದಸ್ಯ ರಾಗುವ ಹಂಬಲ ಹೊಂದಿದ್ದಾರೆ. ಬಿಜೆಪಿಗೆ 4 ವಾರ್ಡ್‍ನಲ್ಲಿ, ಕಾಂಗ್ರೆಸ್‍ಗೆ 3 ವಾರ್ಡ್‍ನಲ್ಲಿ ಬಂಡಾಯ ಎದುರಾಗಿದೆ. ಇಬ್ಬರು ಹಾಲಿ ಸದಸ್ಯರು ತಾವು ಈ ಹಿಂದೆ ಗೆದ್ದಿದ್ದ ವಾರ್ಡ್‍ನಿಂದಲೇ ಸ್ಪರ್ಧಿಸುವ ಮೂಲಕ ಗಮನ ಸೆಳೆದಿದ್ದಾರೆ. ಕೆಲವರು…

ಆ.27, ಚಾಮರಾಜನಗರದಲ್ಲಿ ಕೃಷಿ ಕಾಲೇಜು ಆರಂಭ
ಚಾಮರಾಜನಗರ

ಆ.27, ಚಾಮರಾಜನಗರದಲ್ಲಿ ಕೃಷಿ ಕಾಲೇಜು ಆರಂಭ

August 25, 2018

ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ತಾತ್ಕಾಲಿಕವಾಗಿ ತರಗತಿ ಜಿಲ್ಲೆಯ ಅಭಿವೃದ್ಧಿಗೆ ಇದು ಪೂರಕ ಕೃಷಿ ಸಚಿವ ಶಿವಶಂಕರ ರೆಡ್ಡಿ ಭಾಗಿ ಚಾಮರಾಜನಗರ: ಚಾಮರಾಜನಗರದ ನೂತನ ಕೃಷಿ ಮಹಾವಿದ್ಯಾಲಯದ ಪ್ರಾರಂಭೋತ್ಸವವು ಇದೇ ತಿಂಗಳ 27ರಂದು ನೆರವೇರಲಿದೆ ಎಂದು ಸಂಸದ ಆರ್.ಧ್ರುವನಾರಾಯಣ್ ತಿಳಿಸಿದರು.ತಾಲೂಕಿನ ಹರದನಹಳ್ಳಿ ಗ್ರಾಮದ ಬಳಿ ಇರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ಕರೆದಿದ್ದ ಸುದ್ಧಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ತಾತ್ಕಾಲಿಕವಾಗಿ ತರಗತಿಗಳು ಆರಂಭ ವಾಗಲಿದೆ. ಅಂದು ಬೆಳಿಗ್ಗೆ 11 ಗಂಟೆಗೆ…

ಕಾಡುಮೊಲ ಬೇಟೆ; ಓರ್ವನ ಬಂಧನ
ಚಾಮರಾಜನಗರ

ಕಾಡುಮೊಲ ಬೇಟೆ; ಓರ್ವನ ಬಂಧನ

August 25, 2018

ಹನೂರು:  ಅರಣ್ಯದೊಳಗೆ ಅತಿಕ್ರಮ ಪ್ರವೇಶ ಮಾಡಿ ಕಾಡುಮೊಲ ಬೇಟೆಯಾಡಿ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಗೋಪಿನಾಥಂ ಗ್ರಾಮದ ಶಂಕರನ್ ಬಂಧಿತ ಆರೋಪಿ. ಗೋಪಿನಾಥಂ ವನ್ಯಜೀವಿ ವಲಯದಲ್ಲಿ ಎನ್ಸಿಎಫ್ ತಂಡ ಚಿರತೆ ಅಧ್ಯಯನಕ್ಕಾಗಿ ಅಳವಡಿಸಿದ್ದ ಕ್ಯಾಮರಾದಲ್ಲಿ ವ್ಯಕ್ತಿಗಳಿಬ್ಬರು ಎರಡು ಬೇಟೆನಾಯಿಗಳ ಜತೆ ಕಾಡುಮೊಲ ಬೇಟೆಯಾಡಿ ಕೊಂಡೊಯ್ಯುತ್ತಿರುವ ದೃಶ್ಯ ಸೆರೆಯಾಗಿದೆ. ಕೂಡಲೇ ಕಾರ್ಯಾಚರಣೆ ಆರಂಭಿಸಿದ ವಲಯ ಅರಣ್ಯಾಧಿಕಾರಿ ಶಂಕರ್ ಅಂತರಗಟ್ಟಿ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಯಾಮರಾದಲ್ಲಿ ಸೆರೆಯಾಗಿರುವ ವ್ಯಕ್ತಿಗಳು ಗೋಪಿನಾಥಂ…

1 45 46 47 48 49 74
Translate »