ಮೈಸೂರು, ಮಾ.14(ಎಸ್ಪಿಎನ್)- ಮೈಮುಲ್ ಚುನಾವಣೆ ಸೇರಿದಂತೆ ಯಾವುದೇ ಚುನಾವಣೆಯಲ್ಲೂ ಜೆಡಿಎಸ್ನೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವು ದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದರು. ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಮುಲ್ ವಿಚಾರವಾಗಲಿ, ಬೇರೆ ಯಾವುದೇ ರಾಜಕೀಯ ವಿಚಾರ ವಾಗಲಿ ಜೆಡಿಎಸ್ನೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸ್ಥಳೀಯ ಚುನಾವಣೆಗಳು ಯಾವುದೇ ಪಕ್ಷದ ಚಿಹ್ನೆ ಮೇಲೆ ನಡೆಯುವುದಿಲ್ಲ. ಸ್ಥಳೀಯ ಹೊಂದಾಣಿಕೆ ಮೇಲೆ ಈ ಚುನಾವಣೆ ಗಳು ನಡೆಯಲಿವೆ. ಹಾಗಿದ್ದರೂ ನಮ್ಮ ಕಡೆಯಿಂದ ಜೆಡಿಎಸ್ಗೆ ಯಾವುದೇ…
ಮೈಸೂರು ಪಾಲಿಕೆಯಲ್ಲಿ ಕಾಂಗ್ರೆಸ್-ದಳ ಮೈತ್ರಿ ಮುಂದುವರಿಕೆ: ಶಾಸಕ ತನ್ವೀರ್
February 14, 2021ಮೈಸೂರು, ಫೆ.13(ವೈಡಿಎಸ್)- ಮೈಸೂರು ಮಹಾ ನಗರ ಪಾಲಿಕೆಯಲ್ಲಿ ಈ ಬಾರಿಯೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ನಿಶ್ಚಿತ ಎಂದು ಕಾಂಗ್ರೆಸ್ ಶಾಸಕ ತನ್ವೀರ್ಸೇಠ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಉದಯಗಿರಿ ಯಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ಮಾಧ್ಯಮ ದೊಂದಿಗೆ ಮಾತನಾಡಿ ಅವರು, ಶಾಸಕ ಸಾ.ರಾ.ಮಹೇಶ್ ಹಾಗೂ ನನ್ನ ನಡುವೆ ಕಾಂಗ್ರೆಸ್, ಜೆಡಿಎಸ್ ನಗರಾಧ್ಯಕ್ಷರ ಉಪಸ್ಥಿತಿಯಲ್ಲಿ ಒಪ್ಪಂದವಾಗಿದೆ. ಸ್ಥಳೀಯವಾಗಿ ಮೈತ್ರಿ ಮುಂದು ವರೆಯಲಿದೆ. ಶಾಸಕ ಸಾರಾ ಕೂಡ ಶುಕ್ರವಾರ ಸಭೆ ನಡೆಸಿದ್ದಾರೆ. ಅವರ ಜತೆ ಮತ್ತೊಮ್ಮೆ ಮಾತುಕತೆ ನಡೆಸುತ್ತೇನೆ ಎಂದರು. `ಯಾರೊಂದಿಗೂ ಮೈತ್ರಿ…
ಮೈತ್ರಿ ಸರ್ಕಾರ ಪತನ
July 24, 2019ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ನ 20 ಶಾಸಕರಲ್ಲಿ ಐವರ ಗೈರು ಹಾಗೂ 15 ಮಂದಿಯ ರಾಜೀನಾಮೆಯಿಂದ ಅಸ್ಥಿರಗೊಂಡಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಕೊನೆಗೂ ಪತನವಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ್ದ ವಿಶ್ವಾಸಮತದ ನಿರ್ಣಯವನ್ನು ಇಂದು ರಾತ್ರಿ ಏಳು ಇಪ್ಪತ್ತಕ್ಕೆ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಮತಕ್ಕೆ ಹಾಕಿದಾಗ, ಅದರ ಪರವಾಗಿ 99 ಮತಗಳು ಬಿದ್ದರೆ, ಅದರ ವಿರುದ್ಧ 105 ಮತಗಳು ಬಿದ್ದವು. 6 ಮತಗಳಿಂದ 14 ತಿಂಗಳ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡಿತು….
ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ ಜೊತೆ ಬಿರಿಯಾನಿ ತಿಂದಿಲ್ಲ, ಖರ್ಜೂರ ಮಾತ್ರ ತಿಂದೆ
July 23, 2019ಬೆಂಗಳೂರು: ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ ಅವರ ಜತೆ ತಾವು ಬಿರಿಯಾನಿ ತಿಂದಿಲ್ಲ, ಖರ್ಜೂರವನ್ನಷ್ಟೇ ತಿಂದಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿಂದು ಬಿರಿಯಾನಿ ಕಥೆ ಯನ್ನು ಬಿಚ್ಚಿಟ್ಟರು. ಆತನ ಜೊತೆ ಕುಳಿತು ತಾವು ಬಿರಿಯಾನಿ ತಿಂದಿದ್ದಾಗಿ ಮಾಧ್ಯಮ ಗಳಲ್ಲಿ ವರದಿಯಾಗಿದೆ. ಸದನದಲ್ಲೂ ತಮ್ಮನ್ನೇ ಉದ್ದೇಶಿಸಿ ಬಿಜೆಪಿ ಸದಸ್ಯ ಸಿ.ಟಿ. ರವಿ ಟೀಕೆ ಮಾಡಿದ್ದಾರೆ. ಆತ ಐಎಂಎ ಮುಖ್ಯ ಸ್ಥರು ಎಂಬುದೇ ಗೊತ್ತಿರಲಿಲ್ಲ. ರಂಜಾನ್ ಹಬ್ಬದ ಸಂದರ್ಭದಲ್ಲಿ ತಮ್ಮನ್ನು ಬಲ ವಂತ ಮಾಡಿ ಶಾಸಕರೊಬ್ಬರು ಕರೆದೊಯ್ದಿದ್ದರು. ಹೃದಯ…
ಹಸಿವಾಗುತ್ತಿದೆ ಬಿಟ್ಟು ಬಿಡಿ…!
July 23, 2019ಬೆಂಗಳೂರು: ಮೈತ್ರಿ ಸರ್ಕಾರ ಸದನದಲ್ಲಿ ಮಂಡಿಸಿದ್ದ ವಿಶ್ವಾಸ ಮತಯಾಚನೆ ಹಲವು ಹೈಡ್ರಾಮಾಗಳ ನಡುವೆ ಮೈತ್ರಿ ಪಕ್ಷದ ಶಾಸಕರು ಸದನವನ್ನು ಮಂಗಳವಾರಕ್ಕೆ ಮುಂದೂಡಿ ಎಂದು ಮನವಿ ಮಾಡಿದರು. ಇದಕ್ಕೆ ಸ್ಪೀಕರ್ ಒಪ್ಪದ ಸಂದರ್ಭ ದಲ್ಲಿ ಸದನದಲ್ಲಿ ಗದ್ದಲ ಮೂಡಿಸುವ ಪ್ರಯತ್ನ ನಡೆಸಿದರು. ದೋಸ್ತಿ ನಾಯಕರು ಇಂದು ಕೂಡ ಕಲಾಪದಲ್ಲಿ ವಿಶ್ವಾಸಮತ ಯಾಚನೆ ಮಾಡಲು ಅಸಮ್ಮತಿ ಸೂಚಿಸಿದರು. ಚರ್ಚೆ ನಡೆಸಬೇಕು ಎಂದು ಸಮಯಾವಕಾಶ ಪಡೆದ ನಾಯಕರೇ ಅಂತಿಮವಾಗಿ ಸ್ಪೀಕರ್ ಎಷ್ಟೇ ಮನವಿ ಮಾಡಿದರು ಚರ್ಚೆಗೆ ಸಹಕಾರ ನೀಡದೆ ಗದ್ದಲಕ್ಕೆ ಕಾರಣರಾದರು….
ಸರಕಾರ ಉಳಿಯುವುದಾದರೆ ಸಿಎಂ ಹುದ್ದೆ ತೊರೆಯಲು ಸಿದ್ಧ: ಹೆಚ್ಡಿಕೆ
July 18, 2019ಬೆಂಗಳೂರು: ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ಹೊರಬಿದ್ದ ಬಳಿಕವೂ ಸರಕಾರ ಉಳಿಸಿಕೊಳ್ಳುವ ಕಸರತ್ತನ್ನು ದೋಸ್ತಿ ಪಕ್ಷಗಳು ಮುಂದುವರಿಸಿವೆ. ದಿಢೀರ್ ಎಂಬಂತೆ ಮಹತ್ವದ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಅನಿವಾರ್ಯ ಎನಿಸಿದರೆ ನಾಯಕತ್ವ ಬದಲಾ ವಣೆ ಮಾಡಬಹುದು ಎಂಬ ಪ್ರಸ್ತಾವವನ್ನು ಮುಂದಿಟ್ಟಿದ್ದಾರೆ. ದೊಮ್ಮಲೂರು ಬಳಿ ಇರುವ ಸಚಿವ ಕೆ.ಜೆ.ಜಾರ್ಜ್ ಅವರ ನಿವಾಸ ದಲ್ಲಿ ಬುಧವಾರ ತಡರಾತ್ರಿಯವರೆಗೂ ನಡೆದ ದೋಸ್ತಿ ಪಕ್ಷಗಳ ನಾಯಕರ ಸಭೆಯಲ್ಲಿ ಕುಮಾರ ಸ್ವಾಮಿ ಅವರಿಂದ ಈ ಹೇಳಿಕೆ ಹೊರಬಿದ್ದಿದೆ. ಅವರ ಈ ಮಾತಿಗೆ ಸಮನ್ವಯ ಸಮಿತಿ…
ಮತ್ತೆ ಯೆಡಿಯೂರಪ್ಪಗೆ ಸಂತೋಷ್, ಈಶ್ವರಪ್ಪ ಅಡ್ಡಗಾಲು: ಜೆಡಿಎಸ್ ಜೊತೆ ಮೊತ್ತೊಮ್ಮೆ ಕೈಜೋಡಿಸಲು ಪ್ರಸ್ತಾಪ
July 13, 2019ಚುನಾವಣೆಗೆ ಹೋಗಲು ಸಂಘ ಪರಿವಾರ ಸೂಚನೆ ಬೆಂಗಳೂರು: ಮುಖ್ಯಮಂತಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವನ್ನು ಕೆಳಗಿಸಿ, ಅಧಿಕಾರ ಹಿಡಿಯುವ ವಿಷಯದಲ್ಲಿ ರಾಜ್ಯ ಬಿಜೆಪಿ ಯಲ್ಲೇ ಗೊಂದಲ ನಿರ್ಮಾಣವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸರ್ಕಾರ ರಚನೆಗೆ ಮುಂದಾಗಿದ್ದರೆ, ಮತ್ತೊಂದೆಡೆ ಸಂಘಟನಾ ಕಾರ್ಯದರ್ಶಿ ಸಂತೋಷ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ಕ್ಯಾತೆ ತೆಗೆದಿದ್ದಾರೆ. ಸಂಘ ಪರಿವಾರಕ್ಕಂತೂ ವಲಸಿಗರನ್ನು ಕಟ್ಟಿಕೊಂಡು ಸರ್ಕಾರ ಮಾಡುವ ಬದಲು ಮಧ್ಯಂತರ ಚುನಾವಣೆಗೆ ತೆರಳಿ, ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಕಿವಿಮಾತು ಹೇಳಿದ್ದಾರೆ. ಹಠಾತ್ ಬೆಳವಣಿಗೆಯಲ್ಲಿ…
ಅತೃಪ್ತರ ಆಟಕ್ಕೆ ಸದ್ಯಕ್ಕೆ ಸ್ಪೀಕರ್ ಬ್ರೇಕ್
July 10, 2019ಬೆಂಗಳೂರು,ಜು.9-ಜೆಡಿಎಸ್ನ ಹಿರಿಯ ನಾಯಕ ಮಾಜಿ ಸಚಿವ ಹೆಚ್.ವಿಶ್ವನಾಥ್ ಸೇರಿದಂತೆ ಎಂಟು ಶಾಸಕರು ಸಲ್ಲಿಸಿರುವ ರಾಜೀನಾಮೆ ಕ್ರಮಬದ್ಧವಿಲ್ಲ. ಕಾಂಗ್ರೆಸ್-ಜೆಡಿಎಸ್ನ 14 ಶಾಸಕರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಇದನ್ನು ಅಂಗೀ ಕರಿಸುವಂತೆ ವಿಧಾನಸಭಾಧ್ಯಕ್ಷ ರಮೇಶ್ಕುಮಾರ್ ಅವರಲ್ಲಿ ಮನವಿ ಮಾಡಿಕೊಂಡಿದ್ದರು. ರಾಜೀ ನಾಮೆ ಪತ್ರಗಳಿಗೆ ಸಂಬಂಧಿಸಿದಂತೆ ಸಭಾಧ್ಯಕ್ಷರು ನಿನ್ನೆ ಸಂಜೆ ವಿಧಾನಸಭೆಯ ಕಾರ್ಯಾಲಯದ ಅಧಿ ಕಾರಿಗಳು ಮತ್ತು ಕಾನೂನು ತಜ್ಞರೊಟ್ಟಿಗೆ ಸಮಾಲೋಚನೆ ನಡೆಸಿದರು. ಇಂದು ರಾಜೀನಾಮೆ ನೀಡಿದ ಪತ್ರಗಳನ್ನು ಕೂಲಂಕುಶವಾಗಿ ಪರಿಶೀಲನೆ ಮಾಡುವ ಸಂದರ್ಭದಲ್ಲೇ ಕೆಪಿಸಿಸಿ ರಾಜೀ ನಾಮೆ ನೀಡಿ…
ಸರ್ಕಾರ ಉಳಿಸಲು ಮೈತ್ರಿ ಮುಖಂಡರಿಗೆ ದಾರಿ ಕಾಣದಾಗಿದೆ
July 8, 2019ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ನ 14 ಶಾಸಕರು ರಾಜೀನಾಮೆ ನೀಡಿರುವುದರಿಂದ ಮೈತ್ರಿ ಸರ್ಕಾರಕ್ಕೆ ಎದುರಾಗಿರುವ ಕಂಟಕದಿಂದ ಪಾರಾಗುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲು ಉಭಯ ಪಕ್ಷ ಗಳ ಮುಖಂಡರು ಇಂದು ರಾತ್ರಿ ಸುಮಾರು 4 ಗಂಟೆ ಗಳ ಕಾಲ ಚರ್ಚೆ ನಡೆಸಿದರಾದರೂ, ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬರಲಾಗದೇ, ನಾಳೆಗೆ (ಜು.8) ಚರ್ಚೆಯನ್ನು ಮುಂದೂಡಿದ್ದಾರೆ. ವಿದೇಶ ಪ್ರವಾಸದಿಂದ ಇಂದು ಸಂಜೆ ಬೆಂಗಳೂ ರಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗಮಿಸಿದ ನಂತರ ರಾತ್ರಿ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಸರ್ಕಾರ ಉಳಿಸಿಕೊಳ್ಳುವ ಕುರಿತು…
ಸಚಿವ ರಹೀಂ ಖಾನ್, ಶಾಸಕ ರೋಷನ್ ಬೇಗ್ ರಾಜೀನಾಮೆಗೆ ಘೋಷಣೆ
July 8, 2019ಬೆಂಗಳೂರು: ಶಾಸಕಾಂಗ ನಾಯಕ ಸಿದ್ದ ರಾಮಯ್ಯ ಅವರ ನಡವಳಿಕೆಯಿಂದ ಬೇಸರ ಗೊಂಡಿ ರುವ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಮತ್ತು ತಮ್ಮ ಇಲಾಖೆಗೆ ಅನುದಾನ ಕಡಿಮೆ ನೀಡಲಾಗಿದೆ ಎಂದು ಅಸಮಾ ಧಾನಗೊಂಡಿರುವ ಯುವಜನ ಸೇವೆ ಮತ್ತು ಕ್ರೀಡಾ ಸಚಿವ ರಹೀಂ ಖಾನ್ ಸಹ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ತಮ್ಮ ಇಲಾಖೆಗೆ ಕೇವಲ 5 ಕೋಟಿ ಅನುದಾನ ನೀಡಲಾಗಿದೆ. ಈ ಅನು ದಾನದಲ್ಲಿ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿರುವ…