ಆಲೂರು: ಕೆಲವು ವ್ಯಕ್ತಿಗಳು ಬೇರೆಯವರ ಸಾಹಿತ್ಯವನ್ನು ಕಾಪಿ ಹೊಡೆದು ಸಾಹಿತ್ಯವನ್ನು ರಾಜಕೀಯಕರಣಗೊಳಿ ಸುತ್ತಿದ್ದಾರೆ. ಇಂತಹ ಢೋಂಗಿ ಸಾಹಿತಿಗಳ ಬಗ್ಗೆ ಎಚ್ಚರದಿಂದಿರಬೇಕು ಎಂದು ಸಾಹಿತಿ ಹೆತ್ತೂರು ನಾಗರಾಜು ಹೇಳಿದರು. ಪಟ್ಟಣದ ಬಿಲಿವರ್ಸ್ ಚರ್ಚ್ನಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ವತಿ ಯಿಂದ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಪದಗ್ರಹಣ ಹಾಗೂ ಜಿಲ್ಲಾ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲೆಮರೆ ಕಾಯಿಯಂತಿರುವ ಯುವ ಕವಿಗಳನ್ನು ಹೊರ ತೆಗೆಯುವ ಕೆಲಸ ವನ್ನು ಕೊಟ್ರೇಶ್ ಎಸ್.ಉಪ್ಪಾರ್ ಹಾಗೂ ವಾಸು ಸಮುದ್ರವಳ್ಳಿಯವರ ನಾಯಕತ್ವ…
ರಾಷ್ಟ್ರ ನಿರ್ಮಾಣದಲ್ಲಿ ಯುವಶಕ್ತಿ ಪಾತ್ರ ಅಮೂಲ್ಯ
March 18, 2019ಜಿಲ್ಲಾ ಪಂಚಾಯಿತಿ ಸಿಇಓ ಡಾ.ಕೆ.ಎನ್.ವಿಜಯಪ್ರಕಾಶ್ ಅಭಿಪ್ರಾಯ ಹಾಸನ: ಯುವ ಸಮು ದಾಯ ದೇಶದ ಆಸ್ತಿ ಹಾಗೂ ಅತ್ಯಂತ ಬಲಾಢ್ಯ ಶಕ್ತಿಯಾಗಿದ್ದು, ಇದು ಪ್ರಜಾ ಪ್ರಭುತ್ವ ವ್ಯವಸ್ಥ್ತೆಯಲ್ಲಿ ಸಕ್ರಿಯವಾಗಿ ತೊಡಗಬೇಕಿದೆ ಎಂದು ಜಿಲ್ಲಾ ಪಂಚಾ ಯಿತಿ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಹೇಳಿದರು. ನಗರದ ಕಲಾಭವನದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ವಿವೇಕಾ ಬ್ಯೂರೋಯಿಂದ ಆಯೋಜಿಸಲಾದ ಮತದಾನದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾ ಪ್ರಭುತ್ವ ಯಶಸ್ವಿಯಾಗಬೇಕಾದರೆ ಯುವ ಪೀಳಿಗೆಯ…
ಮಹಿಳೆಯರನ್ನು ಒಂದು ಚೌಕಟ್ಟಿಗೆ ಸೀಮಿತಗೊಳಿಸಬೇಡಿ: ಭಾರತೀದೇವಿ
March 18, 2019ಹಾಸನ: ಮಹಿಳೆಯರನ್ನು ಒಂದು ಚೌಕಟ್ಟಿಗೆ ಒಳಪಡಿಸುವ ಮೂಲಕ ಅವರನ್ನು ಸೀಮಿತಗೊಳಿಸಲಾಗುತ್ತಿದ್ದು ಹೊಸ ತಲೆಮಾರು ಕೂಡ ಇದನ್ನು ಮುಂದು ವರೆಸುತ್ತಿರುವುದು ದುರಂತ ಎಂದು ಸರ್ಕಾರಿ ಗೃಹ ಕಾಲೇಜಿನ ಉಪನ್ಯಾಸಕಿ ಡಾ.ಭಾರತೀದೇವಿ ವಿಷಾದಿಸಿದರು. ನಗರದ ಸಂಸ್ಕೃತ ಭವನದಲ್ಲಿ ಪ್ರಕೃತಿ ಮಹಿಳಾ ಸಂಘ, ಸಾವಿತ್ರಿ ಬಾಯಿ ಸಾಂಸ್ಕೃತಿಕ ಮಹಿಳಾ ಸಂಘ ಹಾಗೂ ಹಾಸನಾಂಬ ಮಹಿಳಾ ಸಂಘದಿಂದ ನಡೆದ ಅಂತಾರಾ ಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು. ಸಾವಿರಾರು ವರ್ಷಗಳಿಂದಲೂ ಮಹಿಳೆ ಯರನ್ನು ಎರಡನೇ ದರ್ಜೆಯ ಮನುಷ್ಯ ರಂತೆ ನೋಡಲಾಗುತ್ತಿದೆ….
ಉತ್ತಮ ಕವನ ರಚನೆಗೆ ಭಾವನಾತ್ಮಕತೆ ಅಗತ್ಯ
March 18, 2019ಆಲೂರು: ಕಾವ್ಯ ರಚನೆಯಲ್ಲಿ ಮುಖ್ಯವಾಗಿ ಬೇಕಾದುದು ವಸ್ತುವಿನ ಆಯ್ಕೆ. ಅದು ಸದಾಕಾಲ ಉಳಿದರೆ ಕವನವೂ ಎಲ್ಲ್ಲಾ ಕಾಲಘಟ್ಟದಲ್ಲೂ ಗಟ್ಟಿಯಾಗಿ ನಿಲ್ಲುತ್ತದೆ. ನಮ್ಮ ಸುತ್ತಲಿನ ವಿಷಯಗಳೇ ಕವನಕ್ಕೆ ವಸ್ತುವಾಗಬಲ್ಲವು. ಪ್ರಕೃತಿಯಲ್ಲಿನ ಎಲ್ಲ ವಿಷಯಗಳೂ ಕವಿಯ ಭಾವನೆಗಳನ್ನು ಪ್ರೇರೇಪಿಸುವಂತಿವೆ. ಉತ್ತಮವಾದ ಕವನ ರಚಿಸಲು ಕವಿಗೆ ಭಾವನಾತ್ಮಕತೆ ಇರ ಬೇಕು. ಇಲ್ಲವಾದಲ್ಲಿ ಶುಷ್ಕತೆ ಕವನದಲ್ಲಿ ಎದ್ದು ಕಾಣುತ್ತದೆ ಎಂದು ಹಿರಿಯ ಕವ ಯಿತ್ರಿ ಎಸ್.ಲಲಿತಾ ಹೇಳಿದರು. ಪಟ್ಟಣದ ಸಂತ ಬಿಲಿವಿಯರ್ಸ್ ಚರ್ಚ್ನಲ್ಲಿ ತಾಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಯಿಂದ ಹಮ್ಮಿಕೊಂಡಿದ್ದ…
ಕಾಂಗ್ರೆಸ್ ಮುಖಂಡರ ಮನೆಗಳಿಗೆ ಪ್ರಜ್ವಲ್ ಭೇಟಿ
March 17, 2019ಹಾಸನ: ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮೈತ್ರಿ ಪಕ್ಷದ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣ, ಕಾಂಗ್ರೆಸ್ ಮುಖಂಡರು ಗಳ ಮನೆಗೆ ದಿಢೀರ್ ಭೇಟಿ ನೀಡಿ ಚುನಾವಣೆಯಲ್ಲಿ ಸಹಕರಿಸುವಂತೆ ಮನವಿ ಮಾಡುವ ಮೂಲಕ ರಾಜಕೀಯದಲ್ಲಿ ಸಂಚಲನ ಮೂಡಿಸಿದರು. ಮೊದಲು ನೂತನ ನಗರಸಭೆ ಸದಸ್ಯರಾಗಿರುವ ಹೆಚ್.ಸಿ.ಮಂಜುನಾಥ್ ಮನೆಗೆ ತೆರಳಿದರು. ನಂತರ ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಎಸ್.ಅನೀಲ್ ಕುಮಾರ್ ಮನೆಗೆ ತೆರಳಿ ಸಭೆ ನಡೆಸಿದರು. ಇದಾದ ಬಳಿಕ ಕಾಂಗ್ರೆಸ್ ಮುಖಂಡ ಹೆಚ್.ಪಿ. ಮೋಹನ್, ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್.ಮುದ್ದೇಗೌಡ, ಆಡುವಳ್ಳಿ ರವಿ,…
‘ಕೈ’ಗೆ ಶಾಕ್ ನೀಡಲಿದ್ದಾರಾ ಎ.ಮಂಜು?
March 17, 2019ನೂರಾರು ಬೆಂಬಲಿಗರೊಂದಿಗೆ ‘ಕಮಲ’ ಹಿಡಿಯಲು ಮಂಜು ರೆಡಿ, ಜಿಲ್ಲೆಯಲ್ಲಿ ‘ಕೈ’ ಭವಿಷ್ಯ ಅಂತ್ಯವಾಗುವ ಭೀತಿ ಹಾಸನ: ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾ ಗಿದ್ದು, ಜಿಲ್ಲೆಯಲ್ಲಿ ರಾಜಕೀಯ ಬೆಳವಣಿಗೆಗಳು ಸಂಚಲನ ಮೂಡಿಸಿದೆ. ಈಗಾ ಗಲೇ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾಗಿ ಪ್ರಜ್ವಲ್ ಕಣಕ್ಕಿಳಿದಿದ್ದು, ಚುನಾ ವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಇವರಿಗೆ ಸವಾಲೊಡ್ಡಲು ಮತ್ತೊಂದೆಡೆ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಎ.ಮಂಜು ‘ಕೈ’ ತೊರೆದು ಬಿಜೆಪಿ ಸೇರು ತ್ತಾರೆಂಬ ಚರ್ಚೆ ಶುರುವಾಗಿದೆ. ಮಾಜಿ ಸಚಿವ ಎ.ಮಂಜು…
ಶಾಸಕ ಪ್ರೀತಮ್ ಜೆ.ಗೌಡ ಮನೆಗೆ ಎ.ಮಂಜು ಭೇಟಿ
March 17, 2019ಹಾಸನ: ಶಾಸಕ ಪ್ರೀತಮ್ ಜೆ.ಗೌಡ ಮನೆಗೆ ಮಾಜಿ ಸಚಿವ ಎ. ಮಂಜು ಭೇಟಿ ನೀಡಿ ಸುದೀರ್ಘ ಮಾತುಕತೆ ನಡೆಸಿದರು. ಈ ಮೂಲಕ ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದೆ. ನಗರದ ವಿದ್ಯಾನಗರದಲ್ಲಿರುವ ಪ್ರೀತಮ್ ಮನೆಗೆ ಶನಿವಾರ ಬೆಳಿಗ್ಗೆ ತೆರಳಿ ಉಪಹಾರ ಸೇವಿಸುವ ಮೂಲಕ ರಾಜಕೀಯ ಬೆಳವಣಿಗೆಯಲ್ಲಿ ಸಂಚಲನ ಮೂಡಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರೀತಂ ಗೌಡ ನನ್ನ ಸ್ನೇಹಿತ. ತಿಂಡಿಗೆ ಕರೆದಿ ದ್ದರು ಬಂದಿದ್ದೇನೆ. ನಿನ್ನೆ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಬಂದಿದ್ದೇನೆ. ಎಲ್ಲಾ ತಾಲೂಕಿನಲ್ಲಿ ಬೆಂಬಲಿಗರ…
ಪಿಂಚಣಿ ಕೊಡದಿದ್ದರೆ ಬ್ಯಾಂಕ್ ಮುಂದೆ ದೇಹತ್ಯಾಗ
March 17, 2019ಹಾಸನ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನ ನಿವೃತ್ತ ನೌಕರರ ಎಚ್ಚರಿಕೆ ಹಾಸನ: ಪಿಂಚಣಿಗಾಗಿ ಆಗ್ರ ಹಿಸುತ್ತಿರುವ ಹಾಸನ ಜಿಲ್ಲಾ ಸಹಕಾರ ಬ್ಯಾಂಕ್ನ ನಿವೃತ್ತ ನೌಕರರು, ಒಂದೊಮ್ಮೆ ನಿವೃತ್ತಿ ವೇತನ ಕೊಡದೇ ಇದ್ದರೆ ಬ್ಯಾಂಕ್ ಮುಂದೆಯೇ ದೇಹತ್ಯಾಗ ಮಾಡುತ್ತೇವೆ ಎಂದು ಬೆದರಿಕೆ ಒಡ್ಡಿದ್ದಾರೆ. ಅತ್ಯಧಿಕ ಲಾಭದಲ್ಲಿಯೇ ಇದ್ದರೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ತನ್ನ ನಿವೃತ್ತ ನೌಕರರಿಗೆ ಪಿಂಚಣಿ ನೀಡುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್ನ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಟಿ.ಎನ್.ಕಾಳೇಗೌಡ ದೂರಿದರು. ರಾಜ್ಯದಲ್ಲಿ ಲಾಭದಲ್ಲಿರುವ ಎಲ್ಲಾ…
ಸದೃಢ ಸಂಕಲ್ಪದಿಂದ ಹೊಸ ಬದುಕು ರೂಪಿಸಿಕೊಳ್ಳಲು ಸಲಹೆ
March 17, 2019ಹೊಸಬೆಳಕು ಸಮಾವೇಶದಲ್ಲಿ 150 ಜೋಡಿ ಭಾಗಿ, 30 ಜೋಡಿ ಸಂಗಾತಿ ಆಯ್ಕೆ ಹಳೇಬೀಡು: ಹೆಚ್ಐವಿ ಸೋಂಕಿತರು ನೋವು, ಸಂಕಷ್ಟಗಳಿಂದ ಎದೆಗುಂದದೆ ಸವಾಲಿನ ಸಂಕೋಲೆ ಗಳನ್ನು ದಾಟಿ ದೃಢÀ ಸಂಕಲ್ಪದಿಂದ ಹೊಸ ಬದುಕು ಕಟ್ಟಿಕೊಳ್ಳಬೇಕು. ಆ ಮೂಲಕ ಇತರರಿಗೂ ಮಾದರಿಯಾಗಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಮತ್ತು ಜಿಲ್ಲಾ ಸ್ವಿಪ್ ಸಮಿತಿ ಅಧ್ಯಕ್ಷ ಡಾ.ಕೆ.ಎನ್.ವಿಜಯಪ್ರಕಾಶ್ ಸಲಹೆ ನೀಡಿದರು. ಇಲ್ಲಿನ ಪುಷ್ಪಗಿರಿಯಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗ ಳೂರು, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ…
ಪ್ರಜ್ವಲ್ ಪ್ರಚಾರ ಜೋರು, ಬಿಜೆಪಿ ಅಭ್ಯರ್ಥಿ ಯಾರು?
March 15, 2019ಹಾಸನ: ತಂಬಾಕು, ಕಾಫಿ, ಆಲೂಗಡ್ಡೆ, ಗರ್ಕಿನ್ ಸೌತೆಯ ಕೃಷಿ ಕ್ಷೇತ್ರದಲ್ಲೀಗ `ಮತ’ ಕುಯಿಲಿಗೆ ರಾಜಕೀಯ ಪಕ್ಷಗಳು ಸಜ್ಜಾಗುತ್ತಿವೆ. ಬೇಲೂರು, ಹಳೇಬೀಡಿನ ಚನ್ನಕೇಶವ ದೇವಾಲಯ, ಶ್ರವಣಬೆಳಗೊಳದ ಗೊಮ್ಮಟೇಶ್ವರ, ಗೊರೂರಿನ ಹೇಮಾವತಿ ಅಣೆಕಟ್ಟೆ, ಸಕಲೇಶ ಪುರದ ಮುಂಜರಾಬಾದ್ ಕೋಟೆ ಪ್ರವಾಸಿಗರನ್ನು ಸೆಳೆಯುತ್ತಿದ್ದರೆ, ರಾಜಕಾರಣಿಗಳ ಚಿತ್ತವೆಲ್ಲಾ ಹಳ್ಳಿ-ನಗರಗಳತ್ತ ಕೇಂದ್ರೀಕೃತವಾಗಿರುವುದು ಸದ್ಯ ಗಮನ ಸೆಳೆಯುತ್ತಿರುವ ಸಂಗತಿ. ಅಲ್ಪಾವಧಿಗಾದರೂ ದೇಶಕ್ಕೆ ಪ್ರಧಾನಿಯನ್ನು ನೀಡಿದ ದೇಶದ ಪ್ರತಿಷ್ಠಿತ ಹಾಸನ ಲೋಕಸಭಾ ಕ್ಷೇತ್ರದಲ್ಲೀಗ ರಾಜಕೀಯದ ಕಾವು ಹೆಚ್ಚಲಾರಂ ಭಿಸಿದೆ. ಸದ್ಯ ಮೈತ್ರಿ ಪಕ್ಷಗಳ ಪರವಾಗಿ ಜೆಡಿಎಸ್ ಮಾತ್ರ…