ಕೊಳ್ಳೇಗಾಲ: ಮನೆ ಬಿಟ್ಟು ಹೋದ ವೃದ್ಧನೋರ್ವ ಕಾವೇರಿ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ತಾಲೂ ಕಿನ ಶಿವನಸಮುದ್ರದ ಬಳಿ ನಡೆದಿದೆ. ತಾಲೂಕಿನ ಸಿದ್ದಯ್ಯನಪುರ ಗ್ರಾಮದ ಮಾದೇಗೌಡ (74) ಶವವಾಗಿ ಪತ್ತೆಯಾದವರು. ಈತ ಆಗಾಗ್ಗೆ ಮನೆಯಿಂದ ಹೊರ ಹೋಗಿ ಮತ್ತೆ ವಾಪಸ್ ಬರುತ್ತಿದ್ದ ಎನ್ನಲಾಗಿದೆ. ಕೆಲ ವರ್ಷಗಳಿಂದ ಪಿಡ್ಸ್ ಕಾಯಿಲೆ ಹಾಗೂ ಬಿಪಿ, ಷುಗರ್ಗೆ ಸಂಬಂಧಿಸಿದ ಮಾತ್ರೆಯನ್ನು ತೆಗೆದುಕೊಳ್ಳುತ್ತಿದ್ದು, ತೀವ್ರ ಅನಾರೋಗ್ಯದಿಂದ ಬೇಸತ್ತು ಮೇ 12ರಂದು ಮನೆಯಿಂದ ಹೋದವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪುತ್ರ…
ಗೋಪುರ ಶಂಕುಸ್ಥಾಪನೆಗೆ ಬಂದವರು ಸ್ಮಶಾನ ಸೇರಿದರು…!
December 15, 2018ಹನೂರು: ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಸುಳ ವಾಡಿ ಕುಚ್ಗುತ್ ಮಾರಮ್ಮನ ದೇವಸ್ಥಾನದ ಗೋಪುರ ಶಂಕುಸ್ಥಾಪನೆ ಸಮಾರಂಭದಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ಪ್ರಸಾದ ಸೇವಿಸಿದವರಲ್ಲಿ 13ಕ್ಕೂ ಹೆಚ್ಚು ಮಂದಿ ಸಾವ ನ್ನಪ್ಪಿ, 70ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಸುಳವಾಡಿ ಕಿಚ್ಗುತ್ ದೇವಸ್ಥಾನವು ಮಾರ್ಟಳ್ಳಿ ಸಮೀಪ ಕಾಡಂಚಿನಲ್ಲಿದ್ದು, ಸುತ್ತಮುತ್ತಲಿನ ಅನೇಕ ಗ್ರಾಮಸ್ಥರು ಈ ದೇವಸ್ಥಾನಕ್ಕೆ ಆಗಮಿಸುತ್ತಾರೆ. ದೇವಸ್ಥಾನ ನಿರ್ವಹಣೆಗೆ ಟ್ರಸ್ಟ್ವೊಂದನ್ನೂ ಕೂಡ ರಚಿಸಿಕೊಳ್ಳಲಾಗಿದ್ದು, ದೇವಾಲಯವು ಅಭಿವೃದ್ಧಿ ಹೊಂದುತ್ತಿದೆ. ಈ ದೇವಸ್ಥಾನಕ್ಕೆ ಗೋಪುರ ನಿರ್ಮಿಸ ಬೇಕೆಂಬ ಉದ್ದೇಶದಿಂದ…
ಪರಿಸರ ರಕ್ಷಣೆ ಎಲ್ಲರ ಕರ್ತವ್ಯ
December 2, 2018ಕೊಳ್ಳೇಗಾಲ: ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ವಾಗಿದೆ ಎಂದು ವನ್ಯಜೀವಿ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಟಿ.ಜಾನ್ಪೀಟರ್ ಹೇಳಿದರು. ಪಟ್ಟಣದ ಸರ್ಕಾರಿ ಎಂಜಿಎಸ್ವಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಇಕೋ ಕ್ಲಬ್ ವತಿಯಿಂದ ‘ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ’ ಕುರಿತು ನಡೆದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ದಿಸೆಯಿಂದಲೇ ಪರಿಸರ ರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು. ಎಂದ ಅವರು, ವನ್ಯಜೀವಿಗಳ ರಕ್ಷಣೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಬಿ.ಮಹದೇವ, ಇಕೋ ಕ್ಲಬ್…
ಸಾಲಬಾಧೆಯಿಂದ ರೈತರ ಆತ್ಮಹತ್ಯೆ ಪ್ರಕರಣ: 5 ಲಕ್ಷ ರೂ. ನೀಡಲು ರೈತ ಆತ್ಮಹತ್ಯಾ ಸಮಿತಿ ಸಭೆಯಲ್ಲಿ ನಿರ್ಣಯ
November 14, 2018ಕೊಳ್ಳೇಗಾಲ: ಆತ್ಮಹತ್ಯೆಗೆ ಶರಣಾದ ಇಬ್ಬರು ರೈತರ ಕುಟುಂಬಗಳಿಗೂ ತಲಾ 5 ಲಕ್ಷ ರೂ. ಪರಿಹಾರ ನೀಡಲು ರೈತ ಆತ್ಮಹತ್ಯಾ ಪರಿ ಹಾರ ಸಮಿತಿಯು ಮಂಗಳವಾರ ನಡೆದ ಸಭೆಯಲ್ಲಿ ತೀರ್ಮಾನಿಸಿದೆ. ಸೆಪ್ಟಂಬರ್ 19ರಲ್ಲಿ ತೇರಂಬಳ್ಳಿ ಗ್ರಾಮದ ತಮ್ಮ ಮನೆಯಲ್ಲೆ ರೈತ ಲೋಕೇಶ್ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಅದೇ ರೀತಿಯಲ್ಲಿ ಕೆಂಪನಪಾಳ್ಯ ಗ್ರಾಮ ದಲ್ಲಿ ಸೆಪ್ಟಂಬರ್ 25ರಂದು ರೈತ ಗುರು ಸ್ವಾಮಿ ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆ ಎರಡು ರೈತ ಕುಟುಂಬ ಗಳಿಗೂ…
ಅನ್ನಭಾಗ್ಯ ಅಕ್ಕಿ ಸಾಗಣೆ: ಇಬ್ಬರ ಬಂಧನ, 160ಮೂಟೆ ಅಕ್ಕಿ ವಶ
November 3, 2018ಕೊಳ್ಳೇಗಾಲ: ಅಕ್ರಮವಾಗಿ ಹೊರ ರಾಜ್ಯಕ್ಕೆ ಸಾಗಿಸಲಾಗುತ್ತಿದ್ದ 160 ಮೂಟೆ ಅನ್ನಭಾಗ್ಯ ಅಕ್ಕಿಯನ್ನು ವಶಪಡಿಸಿಕೊಂಡು, ಇಬ್ಬರು ಆರೋಪಿಗಳನ್ನು ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಡ್ಯದ ಇಂದಿರಾ ನಗರ ನಿವಾಸಿ ನವೀದ್ ಪಾಷ ಹಾಗೂ ಟಿ.ನರಸೀಪುರ ತಾಲೂಕಿನ ಬನ್ನೂರು ಗ್ರಾಮದ ತೌಸಿಫ್ ಬಂಧಿತ ಆರೋಪಿಗಳು. ಘಟನೆ ವಿವರ: ನವೀದ್ ಪಾಷ ಹಾಗೂ ತೌಸಿಫ್ ಟಾಟಾ ಎಸ್ 407 ಹಾಗೂ ಮಹೇಂದ್ರ ಜೀನೊ ವಾಹನದಲ್ಲಿ ಅಕ್ರಮವಾಗಿ ಬಡವರ ಪಾಲಿನ ಅನ್ನಭಾಗ್ಯ ಅಕ್ಕಿಯನ್ನು ಸಾಗಿಸುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ…
ನದಿಗೆ ಹಾರಿ, ತಾಯಿ ಮಗಳು ಆತ್ಮಹತ್ಯೆ
November 3, 2018ಕೊಳ್ಳೇಗಾಲ: ಕಾವೇರಿ ನದಿಗೆ ಹಾರಿ ತಾಯಿ, ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಶಿವನಸಮುದ್ರದಿಂದ ವರದಿಯಾಗಿದೆ.ತಾಲೂಕಿನ ಶಿವನಸಮುದ್ರದ ಮಾರಮ್ಮ ದೇಗುಲದ ಬಳಿ ಯರಿಯೂರು ಗ್ರಾಮದ ಮಹದೇವಸ್ವಾಮಿ ಅವರ ಪತ್ನಿ ಮಮತ (35) ಹಾಗೂ ಮಗಳು ದರ್ಶಿನಿ(16) ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಿವನಸಮುದ್ರ ದೇವಸ್ಥಾನಕ್ಕೆ ತೆರಳಿ ವಾಪಸ್ಸಾಗುವುದಾಗಿ ತೆರಳಿದ್ದ ನನ್ನ ಪತ್ನಿ ಹಾಗೂ ಮಗಳು ಕಾಲು ಜಾರಿ ನದಿಗೆÉ ಬಿದ್ದು ಸಾವಿಗೀಡಾಗಿರಬಹುದು. ಇವರ ಸಾವಿನ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ…
ಕೊಳ್ಳೇಗಾಲ 9ನೇ ವಾರ್ಡ್ನಲ್ಲಿ ಬಿಜೆಪಿಗೆ ಜಯ
November 1, 2018ಕೊಳ್ಳೇಗಾಲ: ಕೊಳ್ಳೇ ಗಾಲ ನಗರಸಭೆಯ 9ನೇ ವಾರ್ಡ್ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ನಾಗೇಂದ್ರ 71 ಮತಗಳ ಅಂತ ರದಲ್ಲಿ ಗೆಲುವು ಸಾಧಿಸಿದ್ದಾರೆ. ಇಂದು ನಡೆದ ಎಣಿಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹದೇವ ಅವರಿಗೆ 506 ಹಾಗೂ ಬಿಜೆಪಿ ಅಭ್ಯರ್ಥಿಗೆ 577, ಸ್ವತಂತ್ರ ಅಭ್ಯರ್ಥಿ ಗಿರೀಶ್ಗೆ 5 ಮತ್ತು 5 ನೋಟಾ ಮತಗಳು ಚಲಾವಣೆ ಗೊಂಡವು. ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಬಿಜೆಪಿ ಅಭ್ಯರ್ಥಿ 71 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಈ ವಾರ್ಡ್ ಚುನಾವಣೆ…
ಕೊಳ್ಳೇಗಾಲ: 9ನೇ ವಾರ್ಡ್ನಲ್ಲಿ ಶೇ.80.96ರಷ್ಟು ಮತದಾನ
October 29, 2018ಯುವಕನಿಂದ ಮತದಾನದ ಫೋಟೋ ವೈರಲ್ ಕೊಳ್ಳೇಗಾಲ: ಪಟ್ಟಣದ ನಗರಸಭೆ 9ನೇ ವಾರ್ಡ್ನಲ್ಲಿ ನಡೆದ ಚುನಾವಣೆಯಲ್ಲಿ ಶೇ.80.96ರಷ್ಟು ಮತದಾನವಾಗಿದೆ. ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಟೌನ್ ಶಾಲೆ ಆವರಣದಲ್ಲಿ ಭಾನುವಾರ ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾರರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಬಿಎಸ್ಪಿ ಅಭ್ಯರ್ಥಿ ನಿಧನದಿಂದ ಈ ಚುನಾವಣೆ ನಡೆದಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರಾ ಹಣಾಹಣಿ ಏರ್ಪಟ್ಟಿದ್ದು, ಒಟ್ಟು 1,350 ಮತದಾರರ ಪೈಕಿ 544ಮಂದಿ ಪುರುಷರು, 549 ಮಹಿಳೆಯರು ಸರದಿ…
ಲಯನ್ಸ್ ಸಂಸ್ಥೆಗೆ ಉತ್ತಮ ಸೇವಾ ಸಂಸ್ಥೆ ಅವಾರ್ಡ್
October 27, 2018ಕೊಳ್ಳೇಗಾಲ: ಕೊಳ್ಳೇಗಾಲ ಲಯನ್ಸ್ ಸಂಸ್ಥೆ ಉತ್ತಮ ರೀತಿಯಲ್ಲಿ ಸೇವೆ ನಿರ್ವಹಿಸಿದ್ದಕ್ಕಾಗಿ ಉತ್ತಮ ಸೇವಾ ಸಂಸ್ಥೆ ಎಂದು ಪರಿಗಣಿಸಿ ಲಯನ್ಸ್ 317ಎ ಜಿಲ್ಲೆ ಗುರು ತಿಸಿ ಅವಾರ್ಡ್ ನೀಡಿ ಗೌರವಿಸಿದೆ. ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಅವಾರ್ಡ್ ಲಭಿಸಿದೆ ಎಂದು ಕಾರ್ಯದರ್ಶಿ ವೆಂಕಟೇಶ್ ತಿಳಿಸಿದ್ದಾರೆ. ಲಯನ್ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಒಗ್ಗೂಡಿ ಅಕ್ಟೋಬರ್ ತಿಂಗ ಳಲ್ಲಿ ಹಲವು ಸೇವಾ ಕಾರ್ಯಕ್ರಮಗಳನ್ನು ಕೈಗೊಂಡು ಪ್ರಶಂಸೆಗೆ ಭಾಜನರಾಗಿದ್ದರು. ಅ.1ರಂದು ರಕ್ತದಾನ ಶಿಬಿರ ನಡೆಸಿ 53 ಬಾಟಲ್ಗೂ ಅಧಿಕ ರಕ್ತ ಸಂಗ್ರಹಿಸಿ ಗಮನ…
ಕೊಳ್ಳೇಗಾಲ ನಗರಸಭೆ, ಗುಂಡ್ಲುಪೇಟೆ ತಾಪಂ ಉಪಚುನಾವಣೆ: ಸಂತೆ, ಜಾತ್ರೆ ನಿಷೇಧ
October 26, 2018ಚಾಮರಾಜನಗರ: ಕೊಳ್ಳೇ ಗಾಲ ನಗರಸಭೆಯ ವಾರ್ಡ್ 9 ಹಾಗೂ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ತಾಪಂ ಕ್ಷೇತ್ರದ ಉಪ ಚುನಾವಣೆಗೆ ಮತದಾನ ಅಕ್ಟೋಬರ್ 28ರಂದು ನಡೆ ಯಲಿರುವ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಸಂಬಂಧಪಟ್ಟ ವಾರ್ಡ್ ಹಾಗೂ ಕ್ಷೇತ್ರ ವ್ಯಾಪ್ತಿಯೊಳಗೆ ಸಂತೆ ಹಾಗೂ ಎಲ್ಲ ತರಹದ ಜಾತ್ರೆ ನಿಷೇಧಿಸಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಆದೇಶ ಹೊರಡಿಸಿದ್ದಾರೆ. ಮತದಾನದಂದು ಬೆಳಿಗ್ಗೆ 5 ಗಂಟೆ ಯಿಂದ ಸಂಜೆ 6 ಗಂಟೆಯವರೆಗೆ ಈ ಎರಡೂ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಂತೆ…