ಕೊಳ್ಳೇಗಾಲ: ನನ್ನ ಹಾಗೂ ನನ್ನ ಪತ್ನಿ ಮೇಲೆ ಮಾರ ಣಾಂತಿಕ ಹಲ್ಲೆ ನಡೆಸಿ, ನನ್ನ ತಂದೆ ಕೊಲೆ ಗೈದ 7 ಮಂದಿ ಆರೋಪಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪಳನಿ ಮೇಡು ಗ್ರಾಮದ ಆರ್ಮುಗಂ ಒತ್ತಾಯಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೇ ಈ ಸಂಬಂಧ ವೀರಶೈವ ಮುಖಂಡರೂ, ಮಾಜಿ ಅಧ್ಯಕ್ಷರೂ ಆದ ಬಸವರಾಜು ಸಮ್ಮುಖದಲ್ಲಿ ಡಿವೈಎಸ್ಪಿ ಅವರಿಗೆ ದೂರು ನೀಡಲಾಗಿದೆ. ಸೆಪ್ಟೆಂಬರ್ 6ರಲ್ಲಿ ಏಕಾಏಕಿ ನಮ್ಮ ತೋಟದ ಮನೆಗೆ…
ಕಾಣೆಯಾಗಿದ್ದ ಬಾಲಕ ಶವವಾಗಿ ಪತ್ತೆ: ಕೊಲೆ ಶಂಕೆ
October 11, 2018ಕೊಳ್ಳೇಗಾಲ: 4 ದಿನದ ಹಿಂದೆ ಕಾಣೆಯಾಗಿದ್ದ ಬಾಲಕ ಶವವಾಗಿ ಪತ್ತೆ ಯಾಗಿರುವ ಘಟನೆ ತಾಲೂಕಿನ ಸಿಲಕಲ್ ಪುರದಲ್ಲಿ ನಡೆದಿದೆ. ಗ್ರಾಮದ ಪ್ರೀತಂ(7) ಮೃತಪಟ್ಟ ಬಾಲಕ. ಗ್ರಾಮದ ನಂಜುಂಡ ಮತ್ತು ಸವಿತಾ ಎಂಬ ದಂಪತಿ ಪುತ್ರನಾಗಿದ್ದು, ಕಳೆದ ಅ.6 ರಂದು ಕಾಣೆಯಾಗಿದ್ದ. ಆತಂಕಗೊಂಡ ಪೆÇೀಷಕರು ದೂರು ನೀಡಿದ್ದರು. ಇಂದು ಮಧ್ಯಾಹ್ನ ಗ್ರಾಮದ ಸಮೀಪದ ಕೆರೆಯಲ್ಲಿ ಬಾಲಕನ ಶವ ಪತ್ತೆ ಯಾಗಿದೆ. ಪೆÇೀಷಕರು ಕೊಲೆ ಶಂಕೆ ವ್ಯಕ್ತಪಡಿಸಿದ್ದು, ಕೊಳ್ಳೇಗಾಲ ಗ್ರಾಮಾಂತರ ಪೆÇಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.
ಹಲ್ಲೆ ಖಂಡಿಸಿ ರೈತ ಸಂಘ ಪ್ರತಿಭಟನೆ
October 5, 2018ಕೊಳ್ಳೇಗಾಲ: – ದೆಹ ಲಿಯ ಉತ್ತರಪ್ರದೇಶದ ಗಡಿ ಭಾಗದ ರೈತರ ಮೇಲೆ ಕೇಂದ್ರ ಸರ್ಕಾರ ಗಾಂಧಿ ಜಯಂತಿಯಂದು ನಡೆಸಿದ ದೌರ್ಜನ್ಯ ಖಂಡಿಸಿ ಕೊಳ್ಳೇಗಾಲ ತಾಲೂಕು ರೈತರ ಸಂಘದ ಪದಾಧಿಕಾರಿಗಳು ಕೆಲ ಕಾಲ ರಸ್ತೆ ತಡೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಕಿಸಾನ್ ಕ್ರಾಂತಿ ಯಾತ್ರೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಸರ್ಕಾರ ಗಾಂಧಿ ಜಯಂತಿಯಂದೇ ಏಕಾಏಕಿ ಪೆÇಲೀಸರ ಬಿಟ್ಟು ಲಾಠಿ ಚಾರ್ಜ್ ಮೂಲಕ ದೌರ್ಜನ್ಯ ನಡೆಸಿದೆ. ತಪ್ಪಿತಸ್ಥರ ಮೇಲೆ ಕ್ರಮ ವಹಿಸ ಬೇಕು. ರೈತರ ಮೇಲೆ…
ಕೊಳ್ಳೇಗಾಲ ಟಿಎಪಿಸಿಎಂಎಸ್ಗೆ ಬೀಗ
September 27, 2018ಕೊಳ್ಳೇಗಾಲ: ಅಂತೂ ಕೊಳ್ಳೇಗಾಲದ ಟಿಎಪಿಸಿಎಂಎಸ್ನಿಂದ ಬಡವರಿಗೆ ವಿತರಿಸಬೇಕಾದ ಅನ್ನಭಾಗ್ಯದ ಅಕ್ಕಿ ವಿತರಣೆಯಲ್ಲಿ ವ್ಯಾಪಕ ಗೋಲ್ ಮಾಲ್ ನಡೆದ ಹಿನ್ನೆಲೆ ಮಂಗಳವಾರ ರಾತ್ರಿ ಆಹಾರ ಇಲಾಖೆಯ ಅಧಿಕಾರಿಗಳು ಜಿಲ್ಲಾಧಿಕಾರಿ ಕಾವೇರಿ ಅವರ ನಿರ್ದೇಶನದ ಮೇರೆಗೆ ಬೀಗ ಹಾಕಿದ್ದಾರೆ. 2.265 ಕ್ವಿಂಟಾಲ್ ಅಕ್ಕಿ ಹಾಗೂ 236 ಕ್ವಿಂಟಾಲ್ ಬೆಳೆ ವಿತರಿಸದೆ ಗೋಲ್ ಮಾಲ್ ಎಸಗಿರುವುದು ಆಹಾರ ಇಲಾಖೆಯ ಉಪ ನಿರ್ದೇಶಕ ರಾಚಪ್ಪ ಭೇಟಿ ವೇಳೆ ಪತ್ತೆಯಾಗಿದೆ. ಇದೇ ವೇಳೆ 535 ಕ್ವಿಂಟಾಲ್ ಸಕ್ಕರೆ ಸಹ ನಾಪತ್ತೆಯಾಗಿದೆ. ಕಳೆದ 2016 ರಲ್ಲಿ…
ಕ್ರಿಮಿನಲ್ ಮೊಕದ್ದಮೆ ದಾಖಲು
September 27, 2018ಕೊಳ್ಳೇಗಾಲ: ಮಂಗಳವಾರ ಕೊಳ್ಳೇಗಾಲ ಟಿಎಪಿಸಿಎಂಎಸ್ ಗೋದಾಮಿಗೆ ಭೇೀಟಿ ನೀಡಿದ ವೇಳೆ 2261.58 ಕ್ವಿಂಟಾಲ್ ಅಕ್ಕಿ. 234.57ಕ್ವಿಂಟಾಲ್ ಬೇಳೆ, 530 ಕ್ವಿಂಟಾಲ್ ಸಕ್ಕರೆ, 15.813 ಲೀ. ತಾಳೆ ಎಣ್ಣೆ ವ್ಯತ್ಯಾಸವಾಗಿದ್ದು, ಟಿಎಪಿಸಿಎಂಎಸ್ ಪ್ರಭಾರ ವ್ಯವಸ್ಥಾಪಕ ಸಿದ್ದರಾಜು ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಆಹಾರ ಇಲಾಖೆಯ ಉಪನಿರ್ದೇಶಕ ರಾಚಪ್ಪ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆ ವೇಳೆ ಐನೂರು ಮೂವ ತ್ತೈದು ಕ್ವಿಂಟಾಲ್ ಸಕ್ಕರೆ ಹಾಳಾಗಿರುವ ಕುರಿತು ಮಾಹಿತಿ ಬಂದಿದೆ. ಈ ಕುರಿತು ಅಲ್ಲಿನ ಸಿಬ್ಬಂದಿ ಸಕ್ಕರೆ ಹಳೆಯದಾಗಿದ್ದು…
ಜಿಲ್ಲೆಗೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ತರುವಲ್ಲಿ ಸಂಸದರ ಕೊಡುಗೆ ಅಪಾರ
September 24, 2018ಕೊಳ್ಳೇಗಾಲ: ಏಕಲವ್ಯ, ಆದರ್ಶ ವಿದ್ಯಾಲಯ ಸೇರಿದಂತೆ ಹಲವಾರು ಪ್ರತಿ ಷ್ಠಿತ ಶಿಕ್ಷಣ ಕೇಂದ್ರಗಳನ್ನು ಜಿಲ್ಲೆಗೆ ತರು ವಲ್ಲಿ ಸಂಸದ ಆರ್. ಧ್ರುವನಾರಾಯಣ್ ರವರಿಗೆ ಶಿಕ್ಷಣದ ಬಗ್ಗೆ ಇರುವ ಕಾಳಜಿ ಮತ್ತು ಪರಿಶ್ರಮ ಕಾರಣ ಎಂದು ಪ್ರಾಥ ಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ಹೇಳಿದರು. ಪಟ್ಟಣದ ಮುಡಿಗುಂಡ ಬಳಿ 4.5 ಕೋಟಿ ರೂ. ಅಂದಾಜಿನಲ್ಲಿ ನಿರ್ಮಾಣ ವಾಗಿರುವ ಆದರ್ಶ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಅಧ್ಯ ಕ್ಷತೆ ವಹಿಸಿ ಮಾತನಾಡಿದರು. ಸಂಸದ ಆರ್….
4,000 ಕ್ವಿಂಟಾಲ್ ಅಕ್ಕಿ ಗೋಡೌನ್ ಸೇರಿಲ್ವಂತೆ!
September 23, 2018ಕೊಳ್ಳೇಗಾಲ: ಆಹಾರ ಇಲಾಖೆಯಿಂದ ಕೊಳ್ಳೇಗಾಲ ಟಿಎಪಿಸಿಎಂಎಸ್ಗೆ ಕಳುಹಿಸಲಾಗಿದ್ದ 4,000 ಕ್ವಿಂಟಾಲ್ ಅಕ್ಕಿಯು ಗೋಡೌನ್ ತಲುಪಿಲ್ಲ. ಈ ಸಂಬಂಧ ಕೊಳ್ಳೇಗಾಲ ಟಿಎಪಿಸಿಎಂಎಸ್ನಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದಿದ್ದು, ಇದರಲ್ಲಿ ಹಿರಿಯ ಹಾಗೂ ಕಿರಿಯ ಅಧಿಕಾರಿ ಗಳು ಭಾಗಿಯಾಗಿದ್ದಾರೆ ಎಂಬುದು ತನಿಖಾಧಿಕಾರಿಗಳ ತನಿಖೆ ವೇಳೆಯಲ್ಲಿ ಬೆಳಕಿಗೆ ಬಂದಿದೆ. ನಾಲ್ವರು ತಹಶೀಲ್ದಾರ್ರು ಹಾಗೂ ಉಪವಿಭಾಗಾಧಿಕಾರಿ ಫೌಜಿಯ್ ತರನ್ನಮ್ ಅವರ ನೇತೃತ್ವದಲ್ಲಿ ಗುರುವಾರ ಕೊಳ್ಳೇಗಾಲ ಟಿಎಪಿಸಿಎಂಎಸ್ಗೆ ತೆರಳಿದ ತನಿಖಾಧಿಕಾರಿಗಳ ತಂಡ ಪರಿಶೀಲನೆ ನಡೆ ಸಿದಾಗ ಅವ್ಯವಹಾರ ನಡೆದಿರುವ ಬಗ್ಗೆ ತಿಳಿದು ಬಂದಿದೆ. ಚಾಮರಾಜನಗರದಿಂದ…
ಚಾಮರಾಜನಗರ, ಕೊಳ್ಳೇಗಾಲ ನಗರಸಭೆ ‘ಅತಂತ್ರ’ ಮಾಜ್ಯಿಕ್ ಸಂಖ್ಯೆ 17 ತಲುಪದ ಪಕ್ಷಗಳು
September 4, 2018ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದಿದ್ದು, ಈ ಎರಡು ನಗರಸಭೆಗಳಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದೆ ‘ಅತಂತ್ರ’ ಸ್ಥಿತಿ ನಿರ್ಮಾಣವಾಗಿದೆ. ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆಯ ತಲಾ 31 ವಾರ್ಡ್ಗಳನ್ನು ಒಳಗೊಂಡಿದೆ. ಸ್ಥಳೀಯ ಸಂಸದರು ಹಾಗೂ ಶಾಸಕರು, ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಮಯದಲ್ಲಿ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಹೀಗಾಗಿ ಯಾವುದೇ ಪಕ್ಷ ಅಧಿಕಾರದ ಗದ್ದುಗೆ ಹೇರಲು 17 ಸದಸ್ಯರ ಬಲವನ್ನು ಹೊಂದಲೇಬೇಕು. ಆದರೆ, ಈ…
ಚುನಾವಣಾ ಬಹಿಷ್ಕಾರ ಕೈಬಿಟ್ಟ ನಿವಾಸಿಗಳು
September 1, 2018ಕೊಳ್ಳೇಗಾಲ: ರಸ್ತೆ ವ್ಯವಸ್ಥೆ ಕಲ್ಪಿಸುವ ನಿಮ್ಮ ಮನವಿಗೆ ನಾವು ಸ್ಪಂದಿಸುತ್ತೇವೆ. ನೀವೆಲ್ಲರೂ ಚುನಾವಣಾ ಬಹಿಷ್ಕಾರ ನಿರ್ಣಯ ಕೈಬಿಟ್ಟು ಪ್ರತಿಯೊಬ್ಬರು ಮತದಾನಕ್ಕೆ ಮುಂದಾಗಬೇಕು ಎಂದು ಚುನಾವಣಾ ರಿಟರ್ನಿಂಗ್ ಅಧಿಕಾರಿ ಪಾಂಡೆ ಹೇಳಿಕೆ ಸ್ಪಂದಿಸಿ ಇಲ್ಲಿನ ರಾಜೀವನಗರ ನಿವಾಸಿಗಳು ನಗರಸಭಾ ಚುನಾವಣಾ ಬಹಿಷ್ಕಾರ ಕೈಬಿಟ್ಟಿತು. ಇಲ್ಲಿನ ರಾಜೀವ್ ನಗರದ(ಬಸವೇಶ್ವರನಗರ) 5ನೇ ಕ್ರಾಸ್ ನಿವಾಸಿಗಳು ಇತ್ತೀಚೆಗೆ ಚುನಾವಣಾ ಅಯೋಗಕ್ಕೆ ತಮಗೆ ರಸ್ತೆ ವ್ಯವಸ್ಥೆ ಇಲ್ಲ. ಹಾಗಾಗಿ ರಸ್ತೆ ವ್ಯವಸ್ಥೆಗೆ ಸರ್ಕಾರ ಹಾಗೂ ಚುನಾವಣಾ ಅಯೋಗ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಆ.31ರಂದು ನಡೆಯುವ ನಗರಸಭೆ…
ಚಾಮರಾಜನಗರ, ಕೊಳ್ಳೇಗಾಲ ನಗರಸಭೆ ಚುನಾವಣೆ ಅಖಾಡಕ್ಕಿಳಿದ ಕಾಂಗ್ರೆಸ್, ಬಿಜೆಪಿ ನಾಯಕರು
August 27, 2018ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆಯ ಸದಸ್ಯ ಸ್ಥಾನಕ್ಕೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಪ್ರಚಾರದ ಕಾವು ಮತ್ತಷ್ಟು ಬಿರುಸುಗೊಂಡಿದೆ. ಇದು ನಗರಸಭೆಯ ಚುನಾವಣಾ ಪ್ರಚಾರ… ಪ್ರಚಾರದ ವಿಚಾರ ಏನೆಂದರೆ, ಇದೇ ತಿಂಗಳ 31ರಂದು ನಡೆಯಲಿರುವ ನಗರ ಸಭಾ ಚುನಾವಣೆ…. ವಾರ್ಡ್ನಿಂದ…. ಪಕ್ಷದಿಂದ (ಪಕ್ಷೇತರ) ಸ್ಪರ್ಧಿಸಿರುವ …….ಅಭ್ಯರ್ಥಿಗೆ ತಮ್ಮ ಅತ್ಯಮೂಲ್ಯವಾದ ಮತಗಳನ್ನು ನೀಡಿ ಅವರನ್ನ ಜಯ ಶೀಲರನ್ನಾಗಿ ಮಾಡಿ ತಮ್ಮಗಳ ಸೇವೆ ಮಾಡಲು ಅವಕಾಶ ಕಲ್ಪಿಸುವಂತೆ ವಿನಂತಿ ಎಂಬ ಧ್ವನಿವರ್ಧಕದ ಕೂಗು ಎಲ್ಲಾ ವಾರ್ಡ್ಗಳಲ್ಲಿ ಕೇಳಿ ಬರುತ್ತಿದೆ. ಧ್ವನಿವ…