Tag: Kollegal

ಇಂದು ಮಾನಸ ಸಂಭ್ರಮ ಸನ್ಮಾನ ಕಾರ್ಯಕ್ರಮ
ಚಾಮರಾಜನಗರ

ಇಂದು ಮಾನಸ ಸಂಭ್ರಮ ಸನ್ಮಾನ ಕಾರ್ಯಕ್ರಮ

July 26, 2018

ಕೊಳ್ಳೇಗಾಲ: ಪಟ್ಟಣದ ಮಾನಸ ಶಿಕ್ಷಣ ಸಂಸ್ಥೆಯಲ್ಲಿ ಮಾನಸ ಸಂಭ್ರಮ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ, ಸನ್ಮಾನ ಮತ್ತು ಅಭಿನಂದನಾ ಸಮಾ ರಂಭವನ್ನು ನಾಳೆ (ಜು.26) ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದ 5ನೇ ರ್ಯಾಂಕ್ ಹಾಗೂ ಜಿಲ್ಲಾ ಮಟ್ಟದ ಪ್ರಥಮ ಸ್ಥಾನ ಪಡೆ ದಿರುವ ಕು.ಹರ್ಷಿತಾ, ಸಚಿವ ಎನ್.ಮಹೇಶ್, ಗೌರವ ಡಾಕ್ಟರೇಟ್ ಪಡೆದ ವಾಟಾಳು ಸೂರ್ಯ ಸಿಂಹಾಸನ ಮಠದ ಡಾ.ಸಿದ್ದಲಿಂಗ ಶಿವಾಚಾರ್ಯಸ್ವಾಮಿ ಅವರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ. ಸಂಸ್ಥೆ ಕಾರ್ಯದರ್ಶಿ ಡಾ.ಎಸ್.ದತ್ತೇಶ್‍ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ…

ಪ್ರತ್ಯೇಕ ಅಪಘಾತ; ಇಬ್ಬರು ಸಾವು
ಚಾಮರಾಜನಗರ

ಪ್ರತ್ಯೇಕ ಅಪಘಾತ; ಇಬ್ಬರು ಸಾವು

July 26, 2018

ಕೊಳ್ಳೇಗಾಲ:  ತಾಲೂಕಿನ ಎರಡು ಕಡೆ ಇಂದು ಪ್ರತ್ಯೇಕ ಅಪಘಾತ ಸಂಭವಿಸಿದ್ದ ಇಬ್ಬರು ಸಾವನ್ನಪ್ಪಿ, ಇಬ್ಬರು ಗಾಯಗೊಂಡಿರುವ ಘಟನೆ ಜರುಗಿದೆ. ಇಂದು ಬೆಳಗ್ಗೆ ತಾಲೂಕಿನ ಕುಂತೂರು ರಾಷ್ಟ್ರೀಯ ಹೆದ್ದಾರಿ 212ರಲ್ಲಿ ಬೈಕ್ ಹಾಗೂ ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ ಒಬ್ಬ ಸಾವನ್ನಪ್ಪಿ ಇಬ್ಬರು ಗಾಯಗೊಂಡಿದ್ದಾರೆ. ಕೆ.ಆರ್. ನಗರ ತಾಲೂಕು ಹನಸೋಗೆ ಗ್ರಾಮದ ಯಶೋಧರ (55) ಮೃತಪಟ್ಟ ದುರ್ದೈವಿ ಯಾಗಿದ್ದು, ಪ್ರಜ್ವಲ್ ಗೌಡ ಹಾಗೂ ಮನು ಗಾಯಗೊಂಡಿದ್ದಾರೆ. ಗಾಯಗೊಂಡ ಇವರನ್ನು ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಇವರು ಪ್ರಸಿದ್ಧ…

ನಾಳೆ ಜಾಗತಿಕ ಲಿಂಗಾಯತ ಮಹಾಸಭಾ ಉದ್ಘಾಟನೆ
ಚಾಮರಾಜನಗರ

ನಾಳೆ ಜಾಗತಿಕ ಲಿಂಗಾಯತ ಮಹಾಸಭಾ ಉದ್ಘಾಟನೆ

July 25, 2018

ಕೊಳ್ಳೇಗಾಲ:  ಚಾಮರಾಜ ನಗರ ಶ್ರೀಶಿವಕುಮಾರಸ್ವಾಮಿ ಭವನದಲ್ಲಿ ಜು.26ರಂದು ಬೆಳಿಗ್ಗೆ 10.30ಕ್ಕೆ ಜಾಗತಿಕ ಲಿಂಗಾಯತ ಮಹಾಸಭಾ(ರಿ) ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಲಿಂಗಾಯತ -ಸ್ವತಂತ್ರಧರ್ಮ ಕುರಿತ ಜಾಗೃತಿ ಸಮಾ ವೇಶ ಕಾರ್ಯಕ್ರಮ ನಡೆಯಲಿದ್ದು, ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯತ ಬಂಧುಗಳು ಹಾಗೂ ಬಸವ ಭಕ್ತರು ಪಾಲ್ಗೊಳ್ಳುವಂತೆ ಜಾಗತಿಕ ಮಹಾಸಭಾ ಅಧ್ಯಕ್ಷ ಸುಂದ್ರಪ್ಪ ಅವರು ಗುರುಮಲ್ಲೇಶ್ವರ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು. 12ನೇ ಶತಮಾನದಲ್ಲಿ ಬಸವಣ್ಣನವ ರಿಂದ ಸ್ಥಾಪಿಸಲ್ಪಟ್ಟ ಲಿಂಗಾಯತ ಧರ್ಮ ಅತ್ಯಂತ ಪ್ರಮುಖ ಹಾಗೂ ಸ್ವತಂತ್ರ…

ಯುವಕನ ವಿರುದ್ಧ ಅತ್ಯಾಚಾರ ಆರೋಪ; ಪ್ರಕರಣ ದಾಖಲು
ಚಾಮರಾಜನಗರ

ಯುವಕನ ವಿರುದ್ಧ ಅತ್ಯಾಚಾರ ಆರೋಪ; ಪ್ರಕರಣ ದಾಖಲು

July 19, 2018

ಕೊಳ್ಳೇಗಾಲ: ಯುವಕನೋರ್ವ ಕಿಡ್ನಾಪ್ ಮಾಡಿ ನಿರಂತರವಾಗಿ ಅತ್ಯಾಚಾರವೆಸಗಿರುವುದಾಗಿ ಯುವತಿಯೋರ್ವಳು ಕೊಳ್ಳೇಗಾಲ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ಯುವತಿ ಅದೇ ಗ್ರಾಮದ ಕೃಷ್ಣಶೆಟ್ಟಿ ಎಂಬುವರ ಮಗ ಹರೀಶ್ ವಿರುದ್ಧ ಅತ್ಯಾಚಾರ ದೂರು ನೀಡಿದ್ದಾರೆ. ಕಳೆದ ಮೇ 10 ರಂದು ತಾನು ಬಹಿರ್ದೆಸೆಗೆ ಹೋಗಿದ್ದ ವೇಳೆ ಆರೋಪಿಯು ವಿಡಿಯೋ ಮಾಡಿಕೊಂಡಿದ್ದಾನೆ. ವಿಡಿಯೋ ಮಾಡಿರುವ ಮೆಮೊರಿ ಕಾರ್ಡ್ ನೀಡಬೇಕಾದರೆ ತಾನು ಹೇಳಿದ ಜಾಗಕ್ಕೆ ಬರಬೇಕೆಂದು ಬೆದರಿಸಿ ತನ್ನನ್ನು ಬೆಂಗಳೂರಿಗೆ ಕರೆದೊಯ್ದು ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು…

ಪ್ರವಾಹದಲ್ಲಿ ಕೊಚ್ಚಿ ಹೋದ ವೆಸ್ಲಿ ಸೇತುವೆ
ಚಾಮರಾಜನಗರ

ಪ್ರವಾಹದಲ್ಲಿ ಕೊಚ್ಚಿ ಹೋದ ವೆಸ್ಲಿ ಸೇತುವೆ

July 17, 2018

ಕೊಳ್ಳೇಗಾಲ:  ತಾಲೂಕಿನ ಶಿವನ ಸಮುದ್ರಕ್ಕೆ ಸಂಪರ್ಕ ಕಲ್ಪಿಸಲು 200 ವರ್ಷಗಳ ಹಿಂದೆ ಬ್ರಿಟೀಷರ ಕಾಲದಲ್ಲಿ ನಿರ್ಮಿಸಲಾಗಿದ್ದ ವೆಸ್ಲಿ ಸೇತುವೆ ಸೋಮವಾರ ನದಿ ನೀರಿನ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಮುಂಗಾರು ಹಂಗಾಮಿನಡಿ ರಾಜ್ಯ ದಲ್ಲಿ ಉತ್ತಮ ಮಳೆಯಾಗುತ್ತಿದ್ದು, ರಾಜ್ಯದ ಬಹುತೇಕ ಎಲ್ಲಾ ಜಲಾಶಯಗಳು ಭರ್ತಿ ಯಾಗುತ್ತಿದೆ. ಜೊತೆಗೆ, ನದಿಗಳು ಮೈದುಂಬಿ ಹರಿಯುತ್ತಿದೆ. ಕೆಆರ್‌ಎಸ್‌ ಜಲಾಶಯ ಈಗಾಗಲೇ ಗರಿಷ್ಠ ಮಟ್ಟ ತಲುಪಿದ್ದು, ಜಲಾ ಶಯದಿಂದ ನೀರು ಬಿಡುಗಡೆ ಮಾಡಲಾಗಿದೆ. ಸೋಮವಾರ ಕೆಆರ್‌ಎಸ್‌ ಜಲಾಶಯ ದಿಂದ ಕಾವೇರಿ ನದಿಗೆ ಅಪಾರ ಪ್ರಮಾಣದ…

ಯುವತಿಗೆ ಅಪಮಾನ ಪ್ರಕರಣ: ಚಾರ್ಜ್‍ಶೀಟ್ ಸಲ್ಲಿಕೆ ವಿಳಂಬ, ಯಳಂದೂರು ಠಾಣೆ ಪೊಲೀಸರ ವಿರುದ್ಧ ಆರೋಪ
ಚಾಮರಾಜನಗರ

ಯುವತಿಗೆ ಅಪಮಾನ ಪ್ರಕರಣ: ಚಾರ್ಜ್‍ಶೀಟ್ ಸಲ್ಲಿಕೆ ವಿಳಂಬ, ಯಳಂದೂರು ಠಾಣೆ ಪೊಲೀಸರ ವಿರುದ್ಧ ಆರೋಪ

July 17, 2018

ಕೊಳ್ಳೇಗಾಲ:  ಯುವತಿಯೊಬ್ಬಳಿಗೆ ಅಪಮಾನಿಸಿದ ಪ್ರಕರಣ ಸಂಬಂಧ ಯಳಂದೂರು ಪಟ್ಟಣ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸದೆ ಬೇಜಾಬ್ದಾರಿ ತನ ಪ್ರದರ್ಶಿಸಿರುವ ಘಟನೆ ಬೆಳಕಿಗೆ ಬಂದಿದೆ. ಪೊಲೀಸ್ ಇಲಾಖೆಯಲ್ಲಿ ಯಾವುದೇ ಪ್ರಕರಣ ದಾಖಲಾದರೂ ಅದರ ಸಂಬಂಧ ಕನಿಷ್ಠ 90ದಿನಗಳೊಳಗೆ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಬೇಕು. ಗಂಭೀರ ಪ್ರಕರಣವಾಗಿದ್ದರೆ 60ದಿನಗಳೊಳಗೆ ದೋಷಾ ರೋಪಣಾ ಪಟ್ಟಿ ಸಲ್ಲಿಸಬೇಕು ಎಂಬ ನಿಯಮವಿದೆ. ಆದರೆ, ಯುವತಿಯೊಬ್ಬಳು ನೀಡಿದ ದೂರಿನ ಪ್ರಕರಣ 8 ತಿಂಗಳು ಕಳೆದರೂ ಯಳಂದೂರು ಪಟ್ಟಣ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ…

ಶಿಕ್ಷಕರು ಚಕ್ಕರ್: ಮುಚ್ಚಿದ ಹಾವಿನಮೂಲೆ ಶಾಲೆ
ಚಾಮರಾಜನಗರ

ಶಿಕ್ಷಕರು ಚಕ್ಕರ್: ಮುಚ್ಚಿದ ಹಾವಿನಮೂಲೆ ಶಾಲೆ

July 15, 2018

ಕೊಳ್ಳೇಗಾಲ: ಹನೂರು ಶೈಕ್ಷಣಿಕ ವಲಯದ ಕಾಡಂಚಿನಲ್ಲಿರುವ ಹಾವಿನ ಮೂಲೆ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಗೆ ಶನಿವಾರ ಶಿಕ್ಷಕರು ಗೈರು ಹಾಜರಾದ ಹಿನ್ನೆಲೆಯಲ್ಲಿ ಶಾಲೆ ಬಂದ್ ಆಗಿ, ಮಕ್ಕಳು ವಾಪಾಸ್ ಮನೆಗೆ ತೆರಳಿದ ಘಟನೆ ನಡೆದಿದೆ. ಪಿಜಿಪಾಳ್ಯ ಗ್ರಾಪಂ ವ್ಯಾಪ್ತಿಯ ಹಾವಿನ ಮೂಲೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 43 ಗಿರಿಜನ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣ ಇಲಾಖೆಯಿಂದ ಪ್ರತಾಪ್ ಹಾಗೂ ಚಿಕ್ಕಸ್ವಾಮಿ ಎಂಬ ಇಬ್ಬರು ಶಿಕ್ಷಕರನ್ನು ನೇಮಿಸಲಾಗಿದ್ದು, ಅವರು ಶನಿವಾರ ಇಲಾಖಾಧಿಕಾರಿಗಳ ಅನುಮತಿ ಪಡೆಯದೇ…

ಕುಂತೂರು ಬಳಿ ಪ್ರೇಮಿಗಳ ಆತ್ಮಹತ್ಯೆ
ಚಾಮರಾಜನಗರ

ಕುಂತೂರು ಬಳಿ ಪ್ರೇಮಿಗಳ ಆತ್ಮಹತ್ಯೆ

July 12, 2018

ಕೊಳ್ಳೇಗಾಲ:  ತಾಲೂಕಿನ ಕುಂತೂರು ಬಳಿ ಇರುವ ಪ್ರಭುಲಿಂಗೇಶ್ವರ ಬೆಟ್ಟದಲ್ಲಿ ಯುವ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ಸಂಜೆ ನಡೆದಿದೆ. ಮೃತ ಪ್ರೇಮಿಗಳನ್ನು ತಾಲೂಕಿನ ಮುಳ್ಳೂರು ಗ್ರಾಮದ ರೋಹಿತ್ ಹಾಗೂ ಪ್ರಕೃತಿ ಎಂದು ಗುರುತಿಸಲಾಗಿದೆ. ರೋಹಿತ್ ಮತ್ತು ಪ್ರಕೃತಿ ಕಳೆದ ಕೆಲವು ತಿಂಗಳಿಂದ ಪ್ರೀತಿಸುತ್ತಿದ್ದರೆನ್ನಲಾಗಿದೆ. ಇಂದು ಬೆಳಿಗ್ಗೆ ಮನೆಯಲ್ಲಿ ಕಾಲೇಜಿಗೆ ತೆರಳುವುದಾಗಿ ಹೇಳಿ ಬಂದಿದ್ದು, ಕಾಲೇಜಿಗೂ ಹೋಗಿರಲಿಲ್ಲ ಎನ್ನಲಾಗಿದೆ. ಇಂದು ಸಂಜೆ ಬೆಟ್ಟದ ಬಂಡೆ ಯೊಂದರ ಬಳಿ ರೋಹಿತ್ ಹಾಗೂ ಪ್ರಕೃತಿ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ….

ಕಾಗದದಲ್ಲೇ ಮುಗಿದ ನವೀಕರಣ ಕಾಮಗಾರಿ
ಚಾಮರಾಜನಗರ

ಕಾಗದದಲ್ಲೇ ಮುಗಿದ ನವೀಕರಣ ಕಾಮಗಾರಿ

July 8, 2018

ಜಿಪಂ ಆಡಳಿತಾತ್ಮಕ ಮಂಜೂರಾತಿಯೂ ಇಲ್ಲ. ಇಓ ಕಚೇರಿ ನವೀಕರಣವೂ ಇಲ್ಲ, ಆದರೂ 2.26ಲಕ್ಷ ಹಣ ಪಾವತಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ, ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಲು ಆಗ್ರಹ ಕೊಳ್ಳೇಗಾಲ: ಬೇಲಿಯೇ ಎದ್ದು ಹೂಲ ಮೇಯ್ದಿ ಹಾಗೇ ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಯಳಂದೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿ ಕಾರಿಗಳ ಕಚೇರಿ ನವೀಕರಣ ಕಾಮಗಾರಿ ಮಾಡದೆ ಗುತ್ತಿಗೆದಾರನಿಗೆ 2,26,375 ರೂ. ಬಿಲ್ ಪಾವತಿ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 2017-18ನೇ ಸಾಲಿನ ಮಾರ್ಚ್…

ಕೊಳ್ಳೇಗಾಲದಲ್ಲಿ ಸಾರಿಗೆ ಬಸ್ ಹರಿದು ಅಪರಿಚಿತ ವ್ಯಕ್ತಿ ಸಾವು
ಚಾಮರಾಜನಗರ

ಕೊಳ್ಳೇಗಾಲದಲ್ಲಿ ಸಾರಿಗೆ ಬಸ್ ಹರಿದು ಅಪರಿಚಿತ ವ್ಯಕ್ತಿ ಸಾವು

July 5, 2018

ಕೊಳ್ಳೆಗಾಲ:  ರಸ್ತೆ ಬದಿಯಲ್ಲಿ ಮಲಗಿದ್ದ ವ್ಯಕ್ತಿ ಯೋರ್ವನ ತಲೆ ಮೇಲೆ ಹಿಂಬದಿ ಯಿಂದ ಬಂದ ಸರ್ಕಾರಿ ಸಾರಿಗೆ ಬಸ್ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತ ಪಟ್ಟ ಘಟನೆ ಬುಧವಾರ ಬೆಳಗ್ಗೆ ಹಳೆ ಬಸ್ ನಿಲ್ದಾಣದ ಬಳಿ ಸಂಭವಿಸಿದೆ. ಮೃತನ ವಿಳಾಸ ಪತ್ತೆಯಾಗಿಲ್ಲ. ಆದರೆ ಮೃತ ವ್ಯಕ್ತಿಯನ್ನು ಅಕ್ಕ-ಪಕ್ಕದ ಗ್ರಾಮದ ವ್ಯಕ್ತಿಯಾಗಿರಬೇಕು ಇಲ್ಲವೇ ಅನ್ಯ ತಾಲೂಕಿನ ವ್ಯಕ್ತಿಯಾಗಿರಬೇಕು ಎಂದು ಪೆÇಲೀಸರು ಶಂಕಿಸಿದ್ದಾರೆ. ಶವವನ್ನು ಪಟ್ಟಣದ ಸರ್ಕಾರಿ ಆಸ್ಪ ತ್ರೆಯ ಶವಗಾರದಲ್ಲಿ ಇಡಲಾಗಿದೆ. ಪಟ್ಟಣದ ಹಳೆಯ ಬಸ್ ನಿಲ್ದಾಣದ…

1 2 3 4 5 6
Translate »