– ಎಸ್.ಟಿ. ರವಿಕುಮಾರ್ ಮೈಸೂರು: ವಿಶ್ವ ಪ್ರಸಿದ್ಧ ಕೃಷ್ಣರಾಜ ಸಾಗರ ಅಣೆಕಟ್ಟೆಯ ಅತೀ ಹಳೆಯ 143 ಕ್ರೆಸ್ಟ್ ಗೇಟ್ಗಳನ್ನು ಬದಲಿ ಸುವ ಕಾಲ ಸನ್ನಿಹಿತವಾಗಿದೆ. ಕಾವೇರಿ ನೀರಾವರಿ ನಿಗಮ (ಅಓಓ)ವು, ಕೆಆರ್ಎಸ್ ಅಣೆಕಟ್ಟೆ ನಿರ್ಮಾಣ ಸಂದರ್ಭ 80 ವರ್ಷಗಳ ಹಿಂದೆ ಅಳವಡಿಸಿದ್ದ 173 ಗೇಟುಗಳ ಪೈಕಿ ಕಾವೇರಿ ನದಿಗೆ ನೀರು ಹರಿಸುವ 143 ಗೇಟ್ (ಸ್ಲೂಸ್ ಗೇಟ್)ಗಳನ್ನು ಬದಲಾಯಿಸಲು ಯೋಜನೆ ರೂಪಿಸಿತ್ತು. 68 ಕೋಟಿ ರೂ. ವೆಚ್ಚದ ಈ ಮಹತ್ತರ ಯೋಜನೆಗೆ ಹಣಕಾಸಿನ ನೆರವು ನೀಡಲು ವಿಶ್ವ…
ಕೆಆರ್ಎಸ್ ಅಣೆಕಟ್ಟೆಗೆ 136 ಹೊಸ ಕ್ರೆಸ್ಟ್ಗೇಟ್ ಅಳವಡಿಕೆ
April 28, 2019ಮೈಸೂರು: ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿ ಮಾಡಲು ಮುಂದಾಗಿ, ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿರುವ ಬೆನ್ನಲ್ಲೇ ಪ್ರಸಿದ್ಧ ಕೃಷ್ಣರಾಜ ಸಾಗರ ಅಣೆಕಟ್ಟೆಯ ಹಳೇ ಕ್ರೆಸ್ಟ್ ಗೇಟ್ (Crest Gates)ಗಳನ್ನು ಬದಲಾಯಿಸಲು ಕಾವೇರಿ ನೀರಾವರಿ ನಿಗಮ (ಅಓಓ) ಮುಂದಾಗಿದೆ. ಕಾವೇರಿ ನದಿಗೆ ಅಡ್ಡಲಾಗಿ ಕನ್ನಂಬಾಡಿ ಗ್ರಾಮದ ಬಳಿ ನಿವಾಸಿಗಳನ್ನು ಸ್ಥಳಾಂತರ ಮಾಡಿ ಪುನರ್ವಸತಿ ಕಲ್ಪಿಸಿದ ನಂತರ ಆ ಸ್ಥಳದಲ್ಲಿ ದಕ್ಷಿಣೋತ್ತರವಾಗಿ 2.62 ಕಿ.ಮೀ. ಉದ್ದದ ಕನ್ನಂಬಾಡಿ ಕಟ್ಟೆಯನ್ನು 1911 ರಿಂದ 1931 ರವರೆಗೆ ಅಂದಿನ ಮೈಸೂರು ಮಹಾರಾಜ…
ಅಣೆಕಟ್ಟೆ, ಪ್ರವಾಸಿ ತಾಣಗಳಲ್ಲಿ ಭಾರೀ ಭದ್ರತೆ
April 28, 2019ಬೆಂಗಳೂರು: ಶ್ರೀಲಂಕಾದಲ್ಲಿ ನಡೆದ ಸರಣಿ ಸ್ಫೋಟದ ಹಿನ್ನೆಲೆಯಲ್ಲಿ ರಾಜ್ಯ ದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಕೇಂದ್ರ ಗುಪ್ತಚಾರ ಇಲಾಖೆ ನೀಡಿರುವ ಸೂಚನೆಯಂತೆ ರಾಜ್ಯದ ಸೂಕ್ಷ್ಮ, ಜನನಿಬಿಡ ಹಾಗೂ ಪ್ರವಾಸಿ ಕೇಂದ್ರಗಳಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಗೆ ಮುಂದಾಗಿದೆ. ಅಷ್ಟೇ ಅಲ್ಲ ಹಿರಿಯ ಪೊಲೀಸ್ ಅಧಿಕಾರಿಗಳು ಒಂದು ಕೋಮಿಗೆ ಸೇರಿದ ಪ್ರಾರ್ಥನಾ ಸಭೆಗಳು ಹಾಗೂ ಪ್ರತ್ಯೇಕವಾಗಿ ಧರ್ಮಗುರುಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸಮುದಾಯದ ಕೆಲವು ಯುವಕರು ಅಡ್ಡ ದಾರಿ ಹಿಡಿದಿರುವುದು, ಇಡೀ ಸಮುದಾಯಕ್ಕೆ ಹಾಗೂ ರಾಷ್ಟ್ರದ ಬದ್ಧತೆಗೆ ಮಾರಕವಾಗಿದೆ. ಇಂತಹ…
ಕೆಆರ್ಎಸ್ ಜಲಾಶಯ ಸುತ್ತಮುತ್ತ 20 ಕಿ.ಮೀ. ವ್ಯಾಪ್ತಿ ಗಣಿಗಾರಿಕೆ ನಿಷಿದ್ಧ
September 28, 2018ಮಂಡ್ಯ: ಕಳೆದ ಎರಡು ದಿನಗಳ ಹಿಂದೆ ಶ್ರೀರಂಗಪಟ್ಟಣ ಹಾಗೂ ಮೈಸೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿದ ವರದಿ ಹಿನ್ನೆಲೆಯಲ್ಲಿ ಕೃಷ್ಣರಾಜ ಸಾಗರ ಭದ್ರತೆಯ ದೃಷ್ಟಿಯಿಂದ ಕೆಆರ್ಎಸ್ ಜಲಾಶಯದ 20 ಕಿ.ಮೀ. ಸುತ್ತಳತೆಯಲ್ಲಿ ಗಣಿಗಾರಿಕೆ ನಿಷೇಧಿಸಿ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅವರು ಇಂದು ಆದೇಶ ಹೊರಡಿಸಿದ್ದಾರೆ. ಕೆಎಸ್ಎನ್ಡಿಎಂ ಎಚ್ಚರಿಕೆ ವರದಿ: ಮೈಸೂರು ಮತ್ತು ಶ್ರೀರಂಗಪಟ್ಟಣ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೆ.25ರಂದು ಮಧ್ಯಾಹ್ನ 2 ಸಲ ಭಾರೀ ಶಬ್ದ ಕೇಳಿ…
ಜಲಾಶಯ ಭರ್ತಿ ಹಿನ್ನೆಲೆ ಜೂನ್, ಜುಲೈನಲ್ಲಿ ಕೆ.ಆರ್.ಎಸ್. ಪ್ರವೇಶದಿಂದ 1,00,52,000 ರೂ. ಆದಾಯ
August 2, 2018ಮೈಸೂರು: ಕಾವೇರಿ ಕಣಿವೆಯಲ್ಲಿ ಅಧಿಕ ಮಳೆಯಾದ ಪರಿಣಾಮ ಕೃಷ್ಣರಾಜಸಾಗರ ಅಣೆಕಟ್ಟೆ ಅತೀ ಬೇಗ ತುಂಬಿದ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆಯೂ ಅಧಿಕವಾಗಿದೆ. ಕಳೆದ ನಾಲ್ಕು ವರ್ಷಗಳ ನಂತರ ಇದೇ ಮೊದಲ ಬಾರಿ ಕೆಆರ್ಎಸ್ ಜಲಾಶಯ ಮೈದುಂಬಿದ ಹಿನ್ನೆಲೆಯಲ್ಲಿ ನೈಸರ್ಗಿಕ ಸೌಂದರ್ಯ ನೋಡಲು ದೇಶ-ವಿದೇಶಗಳಿಂದ ಪ್ರವಾಸಿಗರ ದಂಡೇ ಧಾವಿಸಿದ್ದು, ಅಣೆಕಟ್ಟೆಯಲ್ಲಿ ನೀರು ಗರಿಷ್ಟ ಮಟ್ಟ ತಲುಪಿದ ನಂತರ ಡ್ಯಾಂ ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಕಾವೇರಿ ನದಿಗೆ ಬಿಟ್ಟು ನಂತರವಂತೂ ಬೋರ್ಗರೆಯುವ ಜಲಧಾರೆಯನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಕೆಆರ್ಎಸ್ನತ್ತ ಮುಗಿಬಿದ್ದಿದ್ದರು. ಕ್ರಸ್ಟ್…
ವರ್ಣರಂಜಿತ ಕೆಆರ್ಎಸ್ ಜಲವೈಭವ ಕಣ್ತುಂಬಿಕೊಂಡ ಜನಸಾಗರ
July 23, 2018ಮೈಸೂರು: ಕೃಷ್ಣರಾಜ ಸಾಗರ(ಕೆಆರ್ಎಸ್) ಅಣೆಕಟ್ಟೆ ಕಣ್ತುಂಬಿಕೊಳ್ಳಲು ರಜಾ ದಿನವಾದ ಭಾನುವಾರ ಜನ ಸಾಗರವೇ ಹರಿದು ಬಂದಿತ್ತು.ಇಂದು ಬೆಳಿಗ್ಗೆ ಸುಮಾರು 8.30 ರಿಂದಲೇ ಪ್ರವಾಸಿಗರು ಕೆಆರ್ಎಸ್ಗೆ ಆಗಮಿಸಿ, ಜಲವೈಭವವನ್ನು ಸವಿದರು. ಅಣೆಕಟ್ಟೆಯಿಂದ ಗೇಟ್ಗಳ ಮೂಲಕ ಹರಿಬಿಡುವ ನೀರಿಗೂ ಬಣ್ಣ ಬಣ್ಣದ ಬೆಳಕಿನ ವ್ಯವಸ್ಥೆ ಮಾಡಿರುವ ಹಿನ್ನೆಲೆಯಲ್ಲಿ ಸಂಜೆ ವೇಳೆ ಗಂತೂ ಜನ ಸಾಗರೋಪಾದಿಯಲ್ಲಿ ಹರಿದು ಬಂದರು. 300ಕ್ಕೂ ಹೆಚ್ಚು ಎಲ್ಇಡಿ ಲೈಟ್ ಗಳಿಂದ ರಾಷ್ಟ್ರ ಧ್ವಜದ ತ್ರಿವರ್ಣವನ್ನು ಧುಮ್ಮಿ ಕ್ಕುವ ನೀರಿನಲ್ಲಿ ಸಮ್ಮಿಳಿತಗೊಳಿಸಿರುವ ಸೊಬಗು ಸವಿದು ಸಂಭ್ರಮಿಸಿದರು. ತಮ್ಮ…
ಕಾವೇರಿ ನೀರು ನಿರ್ವಹಣಾ ಮಂಡಳಿ ಬೇಡ
July 23, 2018ಸಿದ್ದರಾಮಯ್ಯ ಆಗಿದ್ರೆ ಕ್ಷಣಾರ್ಧದಲ್ಲೇ ಕೆಲಸ ಮಾಡಿಸುತ್ತಿದ್ದೆ: ವಾಟಾಳ್ ನಾಗರಾಜ್ ಉಚಿತ ಬಸ್ಪಾಸ್ ನೀಡದಿದ್ದರೆ ಆಗಸ್ಟ್ ಮೊದಲ ವಾರದಲ್ಲಿ ಕರ್ನಾಟಕ ಬಂದ್ ಶ್ರೀರಂಗಪಟ್ಟಣ: ಕೇಂದ್ರ ಸರ್ಕಾರ ಕಾವೇರಿ ಪ್ರಾಧಿಕಾರ ರಚನೆ ಮಾಡುವುದು ಸರಿಯಲ್ಲ. ಇದರ ವಿರುದ್ಧ ರಾಜ್ಯದ ಸಂಸದರು ಧ್ವನಿ ಎತ್ತಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯಿಸಿದರು. ತಾಲೂಕಿನ ಕೃಷ್ಣರಾಜಸಾಗರ ಜಲಾಶಯಕ್ಕಿಂದು ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನದಿ ಪ್ರಾಧಿಕಾರ ರಚನೆಯಾದರೆ ರಾಜ್ಯಗಳಲ್ಲಿನ ಜಲಾಶಯದ ಮೇಲೆ ರಾಜ್ಯದ ಹಿಡಿತ ಕೈ ತಪ್ಪಲಿದೆ….
ಕೆಆರ್ಎಸ್ ಜಲಾಶಯಕ್ಕೆ ಸಿಎಂ ಕುಮಾರಸ್ವಾಮಿ ಬಾಗಿನ ಸಮರ್ಪಣೆ
July 21, 2018ಮೈಸೂರು: ನಾಲ್ಕು ವರ್ಷಗಳ ನಂತರ ತುಂಬಿ ತುಳುಕುತ್ತಿರುವ ಕೃಷ್ಣರಾಜ ಸಾಗರ (ಕೆಆರ್ಎಸ್) ಜಲಾಶಯಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಸಂಜೆ ತಮ್ಮ ಸಚಿವ ಸಹೊದ್ಯೋಗಿಗಳು ಹಾಗೂ ಶಾಸಕರೊಂದಿಗೆ ಸಾಂಪ್ರದಾಯಿಕವಾಗಿ ಬಾಗಿನ ಸಮರ್ಪಣೆ ಮಾಡಿದರು. ಕಬಿನಿ ಜಲಾಶಯಕ್ಕೆ ಬಾಗಿನ ಸಮರ್ಪಿಸಿದ ನಂತರ ಸಂಜೆ 4 ಗಂಟೆಗೆ ಹೆಲಿಕಾಪ್ಟರ್ನಲ್ಲಿ ಕೆಆರ್ಎಸ್ ಹೆಲಿಪ್ಯಾಡ್ಗೆ ಬಂದಿಳಿದ ಕುಮಾರಸ್ವಾಮಿ ಅವರು, ಸಂಜೆ 4.30 ಗಂಟೆಗೆ ಗೋಧೂಳಿ ಶುಭಲಗ್ನದಲ್ಲಿ ಪತ್ನಿ ಶ್ರೀಮತಿ ಅನಿತಾ ಅವರೊಂದಿಗೆ ಕೆಆರ್ಎಸ್ನ ಕಾವೇರಿ ಮಾತೆಗೆ ಬಾಗಿನ ಸಮರ್ಪಿಸಿದರು. ಶ್ರೀರಂಗಪಟ್ಟಣದ ಖ್ಯಾತ…
ಕೆಆರ್ಎಸ್ ಭರ್ತಿ
July 15, 2018ಮಂಡ್ಯ: ಜಲಾ ನಯನ ಪ್ರದೇಶದಲ್ಲಿ ಉತ್ತಮ ಮಳೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಕನ್ನಡಿಗರ ಜೀವನದಿ ಕಾವೇರಿ ಮಾತೆ ಮೈದುಂಬಿ ಹರಿಯುತ್ತಿದ್ದು, ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗಿದೆ. ಸದ್ಯಕ್ಕೆ 123.20 ಅಡಿ ನೀರು ತುಂಬಿರುವುದರಿಂದ ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ 17 ಗೇಟ್ಗಳ ಮೂಲಕ ಸುಮಾರು 50ಸಾವಿರ ಕ್ಯೂಸೆಕ್ಸ್ ನೀರನ್ನು ಇಂದು ನದಿಗೆ ಬಿಡಲಾಗುತ್ತಿದೆ. ಸತತ ಮೂರು ವರ್ಷಗಳ ಬರಗಾಲದಿಂದ ನೀರಿನ ಕೊರತೆ ಅನುಭವಿಸಿದ್ದ ಕೆಆರ್ಎಸ್ ಈ ಬಾರಿ ಸಂಪೂರ್ಣ ಭರ್ತಿ ಯಾಗಿದೆ. ದಶಕಗಳ ನಂತರ ಅವಧಿಗೂ ಮುನ್ನವೇ ಕೆಆರ್ಎಸ್ ಭರ್ತಿಯಾಗಿರು ವುದು…
ಕೆಆರ್ಎಸ್ನಲ್ಲಿ ಕಾವೇರಿ ಕಲರವ…
July 10, 2018ಮಂಡ್ಯ: ಕೊಡಗಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೆಆರ್ಎಸ್ ನೀರಿನ ಮಟ್ಟ ಸೋಮವಾರ 111.50 ಅಡಿ ತಲುಪಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ 78.05 ಅಡಿ ನೀರು ಸಂಗ್ರಹವಾಗಿತ್ತು. ಈಗಾಗಲೇ ಹಾರಂಗಿ ಜಲಾಶಯ ತುಂಬಿರುವುದರಿಂದ ಅಲ್ಲಿಂದ ಹೊರ ಬಿಡಲಾದ ನೀರು ಸಹ ಕೆಆರ್ಎಸ್ಗೆ ಹರಿದು ಬರುತ್ತಿದೆ.