Tag: Madikeri

ನೆರೆಯಲ್ಲಿ ಮರೆಯಾದಮಗಳ ಆತ್ಮಕ್ಕೆ ಮೋಕ್ಷ ಕಾಣಿಸಿದ ಮಾತಾಪಿತೃ!
ಕೊಡಗು

ನೆರೆಯಲ್ಲಿ ಮರೆಯಾದಮಗಳ ಆತ್ಮಕ್ಕೆ ಮೋಕ್ಷ ಕಾಣಿಸಿದ ಮಾತಾಪಿತೃ!

October 11, 2018

ಮಡಿಕೇರಿ:  ಭೂಕುಸಿತ ಮತ್ತು ಪ್ರವಾಹದಿಂದ ಸಂಪೂರ್ಣ ಧ್ವಂಸವಾಗಿರುವ ಜೋಡುಪಾಲ ಗ್ರಾಮ ಬುಧವಾರ ಮನ ಕಲಕುವ ಘಟನೆಗೆ ಸಾಕ್ಷಿಯಾಯಿತು. ಆಗಸ್ಟ್ 16 ಬೆಳಿಗ್ಗೆ 8.30ರ ಸಮಯದಲ್ಲಿ ಭಾರಿ ಕುಸಿದು ನದಿ ಪ್ರವಾಹ ಉಕ್ಕೇರಿ ಭೂ ಸಮಾಧಿಯಾದ ಮಂಜುಳಾ (15) ಮೃತದೇಹ ಇಂದಿಗೂ ಪತ್ತೆಯಾಗಿಲ್ಲ. ಇದರಿಂದ ಮನನೊಂದಿರುವ ಆಕೆಯ ಪೋಷಕರು ಮಂಜುಳಾ ಅವರ ಪ್ರತಿ ರೂಪವನ್ನೇ ತಯಾರಿಸಿ ಅದಕ್ಕೆ ಅಂತ್ಯಕ್ರಿಯೆ ನೆರವೇರಿಸಿ ತಮ್ಮ ವಿಧಿವಿಧಾನ ನೆರವೇರಿಸಿದರು. ಅಡಿಕೆ ಹಾಳೆಯಲ್ಲಿ ಮಂಜುಳಾ ಪ್ರತಿ ರೂಪ ತಯಾರಿಸಿ, ಅದಕ್ಕೆ ರೇಷ್ಮೆ ಸೀರೆ ತೊಡಿಸಿ,…

ಮಡಿಕೇರಿ ವ್ಯಾಪ್ತಿಯಲ್ಲಿ ಮತ್ತೆ ಮಳೆ
ಕೊಡಗು

ಮಡಿಕೇರಿ ವ್ಯಾಪ್ತಿಯಲ್ಲಿ ಮತ್ತೆ ಮಳೆ

October 10, 2018

ಹಾಲೇರಿ-ಹಟ್ಟಿಹೊಳೆ ಸಂಪರ್ಕ ಕಡಿತ, ಆತಂಕದಲ್ಲಿ ಜನತೆ ಮಡಿಕೇರಿ:  ಮಡಿಕೇರಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ಮತ್ತೆ ಮಳೆ ಮುಂದುವರಿದಿದೆ. ಸೋಮವಾರ ರಾತ್ರಿ ಮತ್ತು ಮಂಗಳವಾರ ಮಧ್ಯಾಹ್ನ ಗುಡುಗು ಸಿಡಿಲಿನ ಸಹಿತ ಕೆಲಕಾಲ ಧಾರಾಕಾರ ಮಳೆ ಸುರಿದಿದ್ದು, ಜನರ ಮನದಲ್ಲಿ ಮತ್ತೆ ಆತಂಕ ಮೂಡಿದೆ. ಹಾಲೇರಿ ಹಟ್ಟಿಹೊಳೆ ವ್ಯಾಪ್ತಿ ಯಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ರಸ್ತೆ ಸಂಚಾರ ಸ್ಥಗಿತ ಗೊಂಡಿದೆ. ಇದೀಗ ಮಡಿಕೇರಿ-ಸುಂಟಿಕೊಪ್ಪ-ಮಾದಾಪುರ ಪರ್ಯಾಯ ರಸ್ತೆಯಲ್ಲಿ ವಾಹನÀಗಳು ಸಂಚರಿಸುತ್ತಿವೆ. ಹಾಲೇರಿ ಬಳಿ ಈ ಹಿಂದೆ ದುರಸ್ಥಿ ಪಡಿಸಲಾದ ರಸ್ತೆಯಲ್ಲಿ…

ಸಾಂಪ್ರದಾಯಿಕ, ಸರಳ ದಸರಾಗೆ ನಿರ್ಧಾರ: ಮಡಿಕೇರಿ ದಸರಾಗೆ 50, ಗೋಣಿಕೊಪ್ಪಲು ದಸರಾಗೆ 25 ಲಕ್ಷ ಅನುದಾನ
ಕೊಡಗು

ಸಾಂಪ್ರದಾಯಿಕ, ಸರಳ ದಸರಾಗೆ ನಿರ್ಧಾರ: ಮಡಿಕೇರಿ ದಸರಾಗೆ 50, ಗೋಣಿಕೊಪ್ಪಲು ದಸರಾಗೆ 25 ಲಕ್ಷ ಅನುದಾನ

October 9, 2018

ಮಡಿಕೇರಿ: ಮಡಿಕೇರಿ ದಸರಾಕ್ಕೆ 50 ಲಕ್ಷ ರೂ. ಮತ್ತು ಗೋಣಿಕೊಪ್ಪಲು ದಸರಾಕ್ಕೆ 25 ಲಕ್ಷ ರೂ. ಸೇರಿದಂತೆ ಕೊಡಗು ಜಿಲ್ಲೆಯಲ್ಲಿನ ನಾಡಹಬ್ಬಕ್ಕೆ 75 ಲಕ್ಷ ರೂ.ಗಳನ್ನು ಸರ್ಕಾರ ನೀಡುವುದಾಗಿ ಘೋಷಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ವಿಜೃಂಭಣೆಯ ಬದಲಿಗೆ ಸಾಂಪ್ರದಾಯಿಕವಾಗಿ ದಸರಾ ಆಚರಿಸುವಂತೆ ಸೂಚಿಸಿದ್ದಾರೆ. ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಜರುಗಿದ ಕೊಡಗು ಜಿಲ್ಲಾ ದಸರಾ ಆಚರಣೆ ಸಂಬಂ ಧಿತ ಸಭೆಯಲ್ಲಿ ಮಾತನಾಡಿದ ಅವರು, ಪ್ರಕೃತಿ ವಿಕೋಪದಿಂದಾಗಿ ಮಡಿಕೇರಿ ತಾಲೂಕಿನ 7-8 ಪಂಚಾಯತ್‍ಗಳ ಜನ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ವಿಜೃಂಭಣೆ…

ಪ್ರಕೃತಿ ವಿಕೋಪ ಸಂತ್ರಸ್ತ ಯುವಕರು ಸೇನೆ ಸೇರಲು ಸಜ್ಜು
ಕೊಡಗು

ಪ್ರಕೃತಿ ವಿಕೋಪ ಸಂತ್ರಸ್ತ ಯುವಕರು ಸೇನೆ ಸೇರಲು ಸಜ್ಜು

October 8, 2018

ಮಡಿಕೇರಿ: ಕೊಡಗು ಜಿಲ್ಲೆಯ ಹಲವು ಗ್ರಾಮಗಳಲ್ಲಿ ಸಂಭವಿಸಿದ್ದ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ ಕುಟುಂಬಗಳ ಯುವಕರು ಇದೀಗ ಭಾರತೀಯ ಸೇನೆ ಸೇರಲು ಸಜ್ಜಾಗುತ್ತಿದ್ದಾರೆ.ಸಂತ್ರಸ್ತ  ಕುಟುಂಬಗಳ 50ಕ್ಕೂ ಹೆಚ್ಚು ಯುವಕರು ಅ.14 ರಂದು ಮಂಡ್ಯದಲ್ಲಿ ನಡೆಯಲಿರುವ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಪೂರ್ವ ತಯಾರಿ ನಡೆಸುತ್ತಿದ್ದಾರೆ. ಮಡಿಕೇರಿ ಕೊಡವ ಸಮಾಜ, ಸೇನೆ ಸೇರ್ಪಡೆಗೆ ಒಲವು ತೋರಿರುವ ಯುವ ಕರಿಗೆ 2 ವಾರಗಳ ಉಚಿತ ತರಬೇತಿ ನೀಡಲು ಮುಂದಾಗಿದೆ. ದೈಹಿಕ ಪರೀಕ್ಷೆಯೊಂದಿಗೆ ಸೇನೆ ನಡೆಸುವ ಲಿಖಿತ ಪರೀಕ್ಷೆಗೂ ಕೂಡ ಯುವಕರನ್ನು ತರಬೇತುಗೊಳಿಸಲಾಗುತ್ತಿದ್ದು, ಆ…

ಹ್ಯುಮಾನಿಟಿ ಫಸ್ಟ್‍ನಿಂದ ಸಂತ್ರಸ್ತರ ಮನೆ ದುರಸ್ತಿ
ಕೊಡಗು

ಹ್ಯುಮಾನಿಟಿ ಫಸ್ಟ್‍ನಿಂದ ಸಂತ್ರಸ್ತರ ಮನೆ ದುರಸ್ತಿ

October 8, 2018

ಮಡಿಕೇರಿ: ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಕ್ಕೆ ಸಿಲುಕಿ ಸಂಕಷ್ಟಕ್ಕೊಳಗಾದ ಸಂತ್ರಸ್ತರಿಗೆ ಮಡಿಕೇರಿಯ ಕಮ್ಯುನಿಟಿ ಹಾಲ್‍ನಲ್ಲಿ ಆಶ್ರಯ ನೀಡಿ ಸೇವೆಗೈದ ಹ್ಯುಮ್ಯಾನಿಟಿ ಫಸ್ಟ್ ಇಂಡಿಯಾದ ಸ್ವಯಂಸೇವಕರು ಇದೀಗ ಅತಿವೃಷ್ಟಿಯಿಂದಾಗಿ ತ್ಯಾಗರಾಜ ಕಾಲೋನಿಯಲ್ಲಿ ಹಾನಿಗೀಡಾದ ಗೋಡೆ ಕುಸಿದ ಕೆಲವು ಮನೆಗಳನ್ನು ದುರಸ್ತಿ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ತ್ಯಾಗರಾಜ ಕಾಲೋನಿಯ ಜನಾರ್ದನ, ಗಣೇಶ್, ಅಬ್ಬು, ಆಯಿಷ, ಸರೋಜ ಹಾಗೂ ಕಮರು ಎಂಬುವರ ಮನೆಗಳನ್ನು ದುರಸ್ತಿ ಮಾಡಲಾಗಿದೆ. ಹ್ಯುಮ್ಯಾನಿಟಿ ಫಸ್ಟ್‍ನ ಸುಮಾರು 20 ಸ್ವಯಂಸೇವಕರು ಕಳೆದ 15 ದಿನಗಳಿಂದ ಮನೆಗಳ ದುರಸ್ತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು,…

ಪ್ರಕೃತಿ ವಿಕೋಪದಿಂದ ಕಣ್ಮರೆಯಾದ ‘ಜೋಡುಪಾಲ’
ಕೊಡಗು

ಪ್ರಕೃತಿ ವಿಕೋಪದಿಂದ ಕಣ್ಮರೆಯಾದ ‘ಜೋಡುಪಾಲ’

October 8, 2018

ಮಡಿಕೇರಿ: ಮನೆಯ ಕುರುಹುಗಳನ್ನೇ ಅಳಿಸಿ ಹಾಕಿದ ಭೀಕರ ಪ್ರಕೃತಿ ವಿಕೋಪ. ಭೂ ಸಮಾಧಿಯಾದ ಮನೆಯ ಅವಶೇಷಗಳಡಿಯಲ್ಲಿ ಅಳಿದುಳಿದ ವಸ್ತುಗಳಿಗಾಗಿ ಹುಡುಕುತ್ತಿರುವ ಮನೆಮಂದಿ. ಇಲ್ಲಿ ಮನೆಯೊಂದಿತ್ತು ಎಂಬುದಕ್ಕೆ ಸಾಕ್ಷಿ ಹೇಳುತ್ತಿರುವ ರುಬ್ಬುವ ಕಲ್ಲು. ಸಂಪೂರ್ಣ ಕೆಸರುಮಯವಾಗಿರುವ ಮಕ್ಕಳ ಶಾಲಾ ಪುಸ್ತಕಗಳು. ಗಿಡವೊಂದರಲ್ಲಿ ನೇತಾಡು ತ್ತಿರುವ ಮಕ್ಕಳ ಶಾಲಾ ಗುರುತಿನ ಕಾರ್ಡ್. ಕೆಸರಿನಲ್ಲಿ ಹೂತು ಹೋಗಿರುವ ಟಿವಿಯನ್ನು ಮೇಲಕ್ಕೆತ್ತಲು ಪ್ರಯತ್ನಿಸುತ್ತಿರುವ ಮನೆ ಮಾಲೀಕ. ಇದು ಇತ್ತೀಚೆಗೆ ಕೊಡಗಿನಲ್ಲಿ ಸುರಿದ ಮಹಾಮಳೆಯಿಂದಾಗಿ ಸಂಭವಿಸಿದ ಭೀಕರ ಭೂಕು ಸಿತಕ್ಕೊಳಗಾದ ಜೋಡುಪಾಲ ಗ್ರಾಮದಲ್ಲಿ ಕಂಡುಬಂದ…

ನಿರಾಶ್ರಿತರಿಗೆ ಮನೆ ನಿರ್ಮಾಣ ಸದ್ಯದಲ್ಲೇ ಆರಂಭ: ಜಗದೀಶ್
ಕೊಡಗು

ನಿರಾಶ್ರಿತರಿಗೆ ಮನೆ ನಿರ್ಮಾಣ ಸದ್ಯದಲ್ಲೇ ಆರಂಭ: ಜಗದೀಶ್

October 7, 2018

ಮಡಿಕೇರಿ:  ‘ ಆಗಸ್ಟ್‌ನಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದಾಗಿ ಜಿಲ್ಲೆಯ ಜನಜೀವನ ಅಸ್ತ ವ್ಯಸ್ತವಾಗಿತ್ತು. ಇದರಿಂದ ಹಲವು ಕುಟುಂಬಗಳು ಮನೆ-ಮಠ ಕಳೆದುಕೊಂಡು ನಿರಾಶ್ರಿತರಾದರು. ಪ್ರಕೃತಿ ವಿಕೋಪದಿಂದಾಗಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಯಿತು. ಈ ನಿಟ್ಟಿನಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ವಸತಿ ಸೌಕರ್ಯ ಕಲ್ಪಿಸಲು ಸರ್ಕಾರ ಈಗಾಗಲೇ ಜಾಗ ಗುರುತಿಸಿದ್ದು, ಸಮತಟ್ಟು ಮಾಡುವ ಕಾರ್ಯ ಪೂರ್ಣಗೊಂಡು, ಬಡಾವಣೆ ನಿರ್ಮಾಣ ಸಂಬಂಧ ಅನುಮೋದನೆ ಪಡೆಯುವ ಕಾರ್ಯ ಪ್ರಗತಿಯಲ್ಲಿದೆ ಎಂದು ವಿಶೇಷ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಹೇಳಿದರು. ಮನೆ ನಿರ್ಮಾಣ ಸಂಬಂಧ ನಿರ್ಮಾಣಗೊಳ್ಳುತ್ತಿರುವ…

ಜಿಲ್ಲೆಯಲ್ಲಿ ಮತ್ತೆ ಧಾರಾಕಾರ ಮಳೆ; ಭಯದಲ್ಲಿ ಜನತೆ
ಕೊಡಗು

ಜಿಲ್ಲೆಯಲ್ಲಿ ಮತ್ತೆ ಧಾರಾಕಾರ ಮಳೆ; ಭಯದಲ್ಲಿ ಜನತೆ

October 6, 2018

ಮಡಿಕೇರಿ:  ಕೊಡಗು ಜಿಲ್ಲೆಯಾದ್ಯಂತ ಶುಕ್ರವಾರ ಧಾರಾಕಾರ ಮಳೆ ಸುರಿದಿದೆ. ಗುಡುಗು ಸಿಡಿಲಿನೊಂದಿಗೆ ಬಿರುಗಾಳಿ ಸಹಿತ ಸುರಿದ ಮಳೆಗೆ ಕೆಲಕಾಲ ಕೊಡಗು ಜಿಲ್ಲೆ ತತ್ತರಿಸುವಂತಾಯಿತು. ವಿರಾಜಪೇಟೆ, ಸೋಮವಾರಪೇಟೆಯಲ್ಲಿ ಧಾರಾಕಾರ ಮಳೆ ಸುರಿದ ಬಗ್ಗೆ ವರದಿಯಾಗಿದೆ. ವಿರಾಜಪೇಟೆಯಲ್ಲಿ ಮಳೆಯಿಂದಾಗಿ ವಿದ್ಯುತ್ ಪೂರೈಕೆ ಕೆಲ ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಪ್ರಕೃತಿ ವಿಕೋಪದಿಂದ ತತ್ತರಿಸಿ ಸಹಜ ಸ್ಥಿತಿಯತ್ತ ಮರಳುತ್ತಿರುವ 32 ಗ್ರಾಮಗಳ ನಿವಾಸಿಗಳಿಗೆ ಮಹಾಮಳೆ ಮತ್ತೆ ಆತಂಕವನ್ನು ತಂದೊಡ್ಡಿದೆ. ಸಂಪೂರ್ಣ ಧ್ವಂಸ ಗೊಂಡು ಇದೀಗ ದುರಸ್ಥಿ ಪಡಿಸಲಾದ ಗ್ರಾಮೀಣ ಭಾಗದ ರಸ್ತೆಗಳು ಕೆಸರಿನ…

ಸಂತ್ರಸ್ತರ ಪುನರ್ವಸತಿಗೆ ಆಗ್ರಹಿಸಿ ರೈತರ ಪ್ರತಿಭಟನೆ
ಕೊಡಗು

ಸಂತ್ರಸ್ತರ ಪುನರ್ವಸತಿಗೆ ಆಗ್ರಹಿಸಿ ರೈತರ ಪ್ರತಿಭಟನೆ

October 6, 2018

ಮಡಿಕೇರಿ:  ಮುಂಗಾರಿನ ಭಾರಿ ಮಳೆಯಿಂದ ಜಿಲ್ಲೆಯ ಕೆಲ ಭಾಗಗಳಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಸಂತ್ರಸ್ತರಿಗೆ ಪರ್ಯಾಯ ಜಾಗದೊಂದಿಗೆ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿತು. ಸಂಘದ ರಾಜ್ಯ ಕಾರ್ಯದರ್ಶಿ ಡಿ.ಎಸ್. ನಿರ್ವಾಣಪ್ಪ, ಜಿಲ್ಲಾ ಮುಖಂಡ ಹೆಚ್.ಇ. ಸಣ್ಣಪ್ಪ, ಜಿಲ್ಲಾಧ್ಯಕ್ಷ ಎಸ್.ಆರ್. ಮಂಜು ನಾಥ ಅವರ ನೇತೃತ್ವದಲ್ಲಿ ಘೋಷಣೆಗಳ ಸಹಿತ ಪ್ರತಿಭಟನೆ ನಡೆದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಸಂಘದ ರಾಜ್ಯ…

ಕೂಲಿ ಕಾರ್ಮಿಕರ ನೆರವಿಗೆ ಆಗ್ರಹಿಸಿ ಪ್ರತಿಭಟನೆ
ಕೊಡಗು

ಕೂಲಿ ಕಾರ್ಮಿಕರ ನೆರವಿಗೆ ಆಗ್ರಹಿಸಿ ಪ್ರತಿಭಟನೆ

October 6, 2018

ಮಡಿಕೇರಿ: ಹಣಕಾಸು ಸಂಸ್ಥೆಗಳಲ್ಲಿ ಸ್ವ-ಸಹಾಯ ಸಂಘಗಳ ಮೂಲಕ ಕಾರ್ಮಿಕರು ಮಾಡಿರುವ ಸಾಲವನ್ನು ಮನ್ನಾ ಮಾಡಬೇಕು ಮತ್ತು ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಕೂಲಿಯನ್ನು ಸೃಷ್ಟಿಸಬೇಕೆಂದು ಒತ್ತಾಯಿಸಿ ರೈತ ಕೃಷಿ ಕಾರ್ಮಿಕರ ಸಂಘಟನೆ ಮತ್ತು ಎಐಯುಟಿಯುಸಿ ಸಂಘಟನೆಗಳು ಜಂಟಿಯಾಗಿ ಜಿಲ್ಲಾಡಳಿತ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದವು. ಎಐಯುಟಿಯುಸಿ ಸಂಚಾಲಕ ಬಿ.ರವಿ, ಆರ್.ಕೆ.ಎಸ್‍ನ ರಾಜ್ಯ ಉಪಾಧ್ಯಕ್ಷ ಎಂ. ಶಶಿಧರ್ ನೇತೃತ್ವದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಕಾರ್ಮಿಕರು ಪ್ರತಿಭಟನೆ ನಡೆಸಿ, ಬೇಡಿಕೆಗಳ ಮನವಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು. ಈ ಸಂದರ್ಭ ಎಐಯುಟಿಯುಸಿ ಸಂಚಾಲಕ…

1 9 10 11 12 13 32
Translate »